


ಚಾಮುಂಡಿ ಬೆಟ್ಟ, ಕೇರಳದ ಕೊಟ್ಟಿಯೂರು ಅಷ್ಟೇ ಅಲ್ಲದೆ ನಿನ್ನೆ ಸಹ ಬನ್ನಾರಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ . ಆದರೆ ಎಷ್ಟೇ ದೇವಸ್ಥಾನ ಸುತ್ತಿದ್ರು ಸಹ ಫಲಿಸಲಿಲ್ಲ ದರ್ಶನ್ ಪೂಜಾ ಫಲ, ಕೊನೆಗೂ ಜಾಮೀನು ಅರ್ಜಿ ರದ್ದು ಮಾಡೇ ಬಿಡ್ತು ಸುಪ್ರೀಂ ಕೋರ್ಟ್ .
ಹೌದು ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಬಂದ ನಂತರ ಸಾಕಷ್ಟು ದೇವಾಲಯಗಳಿಗೆ ಭೇಟಿ ನೀಡಿ ಶತ್ರು ಸಂಹಾರ ಯಾಗ ಸಹ ಮಾಡ್ಸಿದ್ರು , ಆದ್ರೆ ಯಾವುದೇ ಶತ್ರು ಸಂಹಾರ ಯಾಗವಾಗಲಿ ವಿಶೇಷ ಪೂಜೆಯಾಗಲಿ ದರ್ಶನ್ ಕೈ ಹಿಡಿದಿಲ್ಲ. ಕೊಲೆ ಪ್ರಕರಣದಿಂದ ಪಾರಾಗಲು ದರ್ಶನ್ ಮಾಡಿದಂತಹ ಟೆಂಪಲ್ ರನ್ ವರ್ಕ್ ಔಟ್ ಆಗ್ಲೇ ಇಲ್ಲ.
ಯಾವುದೇ ಮುಲಾಜಿಲ್ಲದೆ ದರ್ಶನ್ ಅವರ ಜಾಮೀನು ಅರ್ಜಿಯನ್ನು ರದ್ದು ಮಾಡಿದೆ ಸುಪ್ರೀಂ ಕೋರ್ಟ್ . ಈ ಹಿನ್ನಲೆ ಮತ್ತೆ ಜೈಲು ಪಾಲಾಗಿದ್ದಾರೆ ದಾಸ. ದರ್ಶನ್ ಅವರ ದೈವಭಕ್ತಿ ಫಲ ನೀಡದೆ ಕಾನೂನು ಎಂಬ ದೇವರ ಮುಂದೆ ಕೊನೆಗೂ ತಲೆಬಾಗಲೇಬೇಕಿದೆ ಡಿ ಬಾಸ್…





