ಮಗುವಿಗೆ ಜನ್ಮ ನೀಡಲಿವೆ ರೋಬೋಟ್ ಗಳು !

ಪುರುಷನ ಸಂಪರ್ಕವಿಲ್ಲದೇ ಐವಿಎಫ್ ಮೂಲಕ ಸಂತಾನೋತ್ಪತ್ತಿ ಸಾಧಿಸಿದ ವಿಜ್ಞಾನಿಗಳಿಗೆ ಈಗ ತಾಯಂದಿರ ಅಗತ್ಯವೇ ಇಲ್ಲದೇ ಮಗು ಹುಟ್ಟಿಸಲು ಮುಂದಾಗಿದ್ದಾರೆ. ಇನ್ನು ಮುಂದೆ ತಾಯಂದಿರಿಂದ ಅಲ್ಲ, ಬದಲಾಗಿ ಯಂತ್ರಗಳಿಂದ ಜನಿಸುವ ಜಗತ್ತು ಕಲ್ಪಿಸಿಕೊಳ್ಳಿ. ಚೀನಿ ವಿಜ್ಞಾನಿಗಳು ಮಹಿಳೆಯ ಸಹಾಯವಿಲ್ಲದೇ ಗರ್ಭಧಾರಣೆಯ ರೋಬೋಟ್ ಆವಿಷ್ಕಾರಕ್ಕೆ ಮುಂದಾಗಿದ್ದಾರೆ.

ಹೊಟ್ಟೆಯೊಳಗೆ ಗರ್ಭಧಾರಣೆಗೆ ತಂತ್ರಜ್ಞಾನ

ವಿಜ್ಞಾನಿ ಡಾ.ಜಾಂಗ್​ ಕಿಫೆಂಗ್ ನೇತೃತ್ವದ ಗುವಾಂಗ್​ಝೌ ಮೂಲದ ಕೈವಾ ಟೆಕ್ನಾಲಜಿ ಇಂಥದ್ದೊಂದು ಯೋಜನೆಗೆ ಕೈ ಹಾಕಿದೆ. ಹುಮನಾಯ್ಡ್ ರೋಬೋಟ್​ನ ಹೊಟ್ಟೆಯೊಳಗೆ ಗರ್ಭಧಾರಣೆಗೆ ತಂತ್ರಜ್ಞಾನ ಸಿದ್ಧವಾಗುತ್ತಿದೆ ಎಂಬ ಮಾಹಿತಿಯನ್ನು ವಿಜ್ಞಾನಿ ಡಾ.ಜಾಂಗ್ ನೀಡಿದ್ದಾರೆ.

ರೊಬೊಟ್​ನ ಕೃತಕ ಗರ್ಭದಲ್ಲಿ ಕೃತಕ ಆಮ್ನಿಯೊಟಿಕ್ ದ್ರವದಲ್ಲಿ ಭ್ರೂಣ ಸಿದ್ಧವಾಗಲಿದೆ. ರೋಬೋಟ್ ನ ಹೊಟ್ಟೆಯಲ್ಲಿ ಗರ್ಭಾಶಯದಂತಹ ವಾತಾವರಣ ಸೃಷ್ಟಿಸಲಾಗುತ್ತಿದೆ. ಇದು ಭ್ರೂಣವನ್ನು ಬಾಹ್ಯ ಆಘಾತಗಳಿಂದ ರಕ್ಷಿಸುವ ದ್ರವವಾಗಿದೆ. ಭ್ರೂಣಕ್ಕೆ ಸ್ಥಿರ ತಾಪಮಾನ ನೀಡಿ, ಅದರ ಬೆಳವಣಿಗೆಗೂ ಸಹಾಯ ಮಾಡುತ್ತದೆ. ರೊಬೊಟ್​​ ಗರ್ಭಾಶಯಕ್ಕೆ ಪೋಷಕಾಂಶ ಮತ್ತು ಆಮ್ಲಜನಕವನ್ನು ಹೊಕ್ಕುಳಬಳ್ಳಿಯಂತೆ ಕೊಳವೆಯ ಮೂಲಕ ಪೂರೈಸಲಾಗುತ್ತದೆ ಅಂತೆ.

ಬೀಜಿಂಗ್​ನಲ್ಲಿ ನಡೆದ ವಿಶ್ವ ರೋಬೋಟ್​ನ​ ಸಮ್ಮೇಳನದಲ್ಲಿ ಮಾಹಿತಿ ನೀಡಿರುವ ವಿಜ್ಞಾನಿ ಡಾ.ಜಾಂಗ್, 2026ರ ವೇಳೆಗೆ ಮೂಲ ಮಾದರಿ ಬಿಡುಗಡೆ ಮಾಡುತ್ತೇವೆ ಅಂತ ಘೋಷಿಸಿದ್ದಾರೆ. ಇದಕ್ಕೆ ಬೆಲೆಯೂ ನಿಗದಿ ಮಾಡಿದ್ದಾರೆ. ಇದರ ಬೆಲೆ 100,000 ಯುವಾನ್ ಅಂದರೆ 12 ಲಕ್ಷ ರೂಪಾಯಿ ಇರಲಿದೆ.

ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಇದೀಗ ಜನಸಂಖ್ಯೆ ಕುಗ್ಗುವ ಆತಂಕವೂ ಎದುರಾಗಿದೆ. ಚೀನಾದಲ್ಲಿ ಇತ್ತೀಚೆಗೆ ಬಂಜೆತನದ ಪ್ರಮಾಣವೂ ಹೆಚ್ಚುತ್ತಿದೆ. ಕೃತಕ ಗರ್ಭಾಶಯ ತಂತ್ರಜ್ಞಾನ ಬಂಜೆತನ ಹೊಂದಿರುವ ದಂಪತಿಗೆ ಭರವಸೆ ಹುಟ್ಟಿಸುತ್ತಿದೆ. ಇದು ಸಂತಾನೋತ್ಪತ್ತಿಗೆ ಸಹಾಯ ಮಾಡಬಹುದಾದರೂ ಈ ತಂತ್ರಜ್ಞಾನ ನೈತಿಕ ಪರಿಣಾಮದ ಕುರಿತು ಚರ್ಚೆ ಹುಟ್ಟು ಹಾಕಿದೆ. ಭ್ರೂಣ-ತಾಯಿಯ ಸಂಬಂಧಗಳು, ಅದರಿಂದ ಜನಿಸುವ ಮಕ್ಕಳ ಮನೋವಿಜ್ಞಾನದ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

  ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ ! ಆದಿಚುಂಚನಗಿರಿ ಮಠದ ಶಿಕ್ಷಣ ಟ್ರಸ್ಟ್‌ಗೆ ಸೇರಿದ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆರು ಎಕರೆ ಭೂಮಿ ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!