ಸುಜಾತ ಭಟ್ ಬಗ್ಗೆ ಚಿಕ್ಕಲ್ಲಸಂದ್ರದ ಜನರ ಶಾಕಿಂಗ್ ಮಾತುಗಳು

ಸುಜಾತ ಭಟ್ ಎಂಬ ವೃದ್ಧ ಮಹಿಳೆಯು ಧರ್ಮಸ್ಥಳದಲ್ಲಿ ತನ್ನ ಮಗಳು ಅನನ್ಯ ಭಟ್ ನಾಪತ್ತೆಯಾಗಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ದೂರು ನೀಡಿ ಸುದ್ದಿಯಲ್ಲಿದ್ದಾರೆ. ಸುಜಾತ ಭಟ್ ನೀಡುತ್ತಿರುವ ಹೇಳಿಕೆಗಳು ಗೊಂದಲಕಾರಿಯಾಗಿವೆ. ಅಸಲಿಗೆ ಅನನ್ಯ ಭಟ್ ಎಂಬ ಮಗಳನ್ನು ಯಾರೂ ನೋಡಿಯೂ ಇಲ್ಲ. ಸುಜಾತ ಭಟ್‌ಗೆ ಅನನ್ಯ ಭಟ್ ಎಂಬ ಮಗಳು ಇದ್ದಿದ್ದಕ್ಕೆ ಯಾವುದೇ ಸಾಕ್ಷಿ, ಆಧಾರ, ದಾಖಲೆಗಳೂ ಇಲ್ಲ. ಈಗ ಸುಜಾತ ಭಟ್‌ ಎಲ್ಲೆಲ್ಲಿ ವಾಸ ಇದ್ದರು ಅಲ್ಲೆಲ್ಲಾ ಸುಜಾತ ಭಟ್ ಬಗ್ಗೆ ಜನರು ಆಡುತ್ತಿರುವ ಮಾತುಗಳು ಅಚ್ಚರಿಗೆ ಕಾರಣವಾಗಿವೆ.

ಸುಜಾತ ಭಟ್ ಕುರಿತು ಮತ್ತಷ್ಟು ವಿಚಾರ ಬಯಲಾಗಿದೆ. ಮೂರು ವರ್ಷಗಳ‌ ಹಿಂದೆ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಬನಶಂಕರಿ ಬಳಿಯ ಚಿಕ್ಕಲ್ಲಸಂದ್ರದಲ್ಲಿ ಸುಜಾತ ಬಾಡಿಗೆ ಮನೆಯಲ್ಲಿ ವಾಸ ಇದ್ದರು. ಚಿಕ್ಕಕಲ್ಲಸಂದ್ರದ ಅಶ್ವಥ್ ಕಟ್ಟೆಯಲ್ಲಿ ಸುಜಾತ ವಾಸ ಇದ್ದರು. ಆ ವೇಳೆ ಸ್ಥಳೀಯರ ಬಳಿ ₹100-₹200 ದುಡ್ಡು ಅನ್ನು ಸುಜಾತ ಪಡೆಯುತ್ತಿದ್ದರು. ದುಡ್ಡಿಲ್ಲದಕ್ಕೆ ಚುನಾವಣಾ ಪ್ರಚಾರವನ್ನು ಕೂಡ ಸುಜಾತ ಮಾಡಿದ್ದರು. 2019,2024 ರ ಲೋಕಸಭಾ ಚುನಾವಣೆ ವೇಳೆ ಚುನಾವಣಾ ಪ್ರಚಾರವನ್ನು ರಾಜಕೀಯ ಪಕ್ಷಗಳ ಪರವಾಗಿ ಮಾಡಿದ್ದರು. ಎಲೆಕ್ಷನ್ ಕ್ಯಾಂಪೇನ್ ಗೆ ಹೋದ್ರೆ ದುಡ್ಡು ಸಿಗುತ್ತೆಂದು ನಾನೇ ಕರ್ಕೊಂಡು ಹೋಗಿದ್ದೆ ಎಂದು ಚಿಕ್ಕ ಕಲ್ಲಸಂದ್ರದ ಸ್ಥಳೀಯರಾದ ಸಣ್ಣಪ್ಪ ಹೇಳಿದ್ದಾರೆ.
ಸುಜಾತ ದೊಡ್ಡ ಫ್ರಾಡ್ ಎಂದು ಬೆಂಗಳೂರಿನ ಚಿಕ್ಕ ಕಲ್ಲಸಂದ್ರದ ಸ್ಥಳೀಯರು ಹೇಳಿದ್ದಾರೆ. ಕುಟುಂಬಗಳ ನಡುವೆ ತಂದಿಟ್ಟು ತಮಾಷೆ ನೋಡ್ತಿದ್ರು. ಸುಜಾತರಿಂದ ಈ ಏರಿಯಾದಲ್ಲಿ ಗಂಡ- ಹೆಂಡ್ತಿ ಗಲಾಟೆ ಮಾಡ್ತಿದ್ರು. ಬೇರೆಯವರ ನಡುವೆ ತಂದಿಡುವ ಕೆಲಸ ಮಾಡುತ್ತಿದ್ದರು ಎಂದು ಸ್ಧಳೀಯರು ವೃದ್ಧೆ ಸುಜಾತ ವಿರುದ್ಧ ಈಗ ದೂರು ಹೇಳಿದ್ದಾರೆ.
ಸುಜಾತ ಮೇಲೆ ಒಮ್ಮೆ ಹಲ್ಲೆಯಾಯಿತು ಎಂದು ಬಿದ್ದಾಗ ನಾನೇ ಆಸ್ಪತ್ರೆ ಸೇರಿಸಿದ್ದೆ. ಆವತ್ತು ನಾನೇ ಆಸ್ಪತ್ರೆ ಬಿಲ್ ₹1500 ಕೊಟ್ಟಿದ್ದೆ . ನಮಗೆ ಅವರು ಸುಜಾತ ಅಂತ ಅಷ್ಟೇ ಗೊತ್ತು. ಸುಜಾತ ಭಟ್ ಅನ್ನೋದು ಗೊತ್ತಿಲ್ಲ . ಈಗ ಮಾಧ್ಯಮದಲ್ಲಿ ನೋಡಿ ಶಾಕ್ ಆಯ್ತು. ಸುಜಾತ ನಾಯಿಗಳನ್ನ ಆರೈಕೆ ಮಾಡ್ತಿದ್ದಳು ಎಂದು ಸ್ಥಳೀಯ ಸಣ್ಣಪ್ಪ ಎಂಬ ವ್ಯಕ್ತಿ ಹೇಳಿದ್ದಾರೆ.
ಇನ್ನೂ ಸುಜಾತ ಮನೆ ಖಾಲಿ ಮಾಡಿದ್ದರ ಬಗ್ಗೆ ಮನೆ ಮಾಲೀಕ ಕೂಡ ಮಾಹಿತಿ ನೀಡಿದ್ದಾರೆ. ಸುಜಾತ ಭಟ್ ನಮ್ಮ ಮನೆಯಲ್ಲಿ ವಾಸ ಇದ್ದರು. ಮೂರು ವರ್ಷಗಳ ಹಿಂದೆ ಖಾಲಿ ಮಾಡಿದ್ದರು. ಲೀಸ್ ಅಗ್ರಿಮೆಂಟ್ ಮುಗಿದಿತ್ತು. ಅದಕ್ಕೆ ಖಾಲಿ‌ಮಾಡಿದ್ದಾರೆ ಎಂದು ಸುಜಾತ ಭಟ್ ವಾಸ ಇದ್ದ ಮನೆ ಮಾಲೀಕ ಪೋನ್ ಮೂಲಕ ನ್ಯೂಸ್ ಫಸ್ಟ್ ಗೆ ಮಾಹಿತಿ ನೀಡಿದ್ದಾರೆ.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!