ಹೊಸ ಟ್ಯಾಟೋ ಮೂಲಕ ನಿತೀಶ್ ರೆಡ್ಡಿ ಸಂದೇಶ..!

ಟೀಮ್​ ಇಂಡಿಯನ್​ ಕ್ರಿಕೆಟರ್​​ಗಳಿಗೂ ಟ್ಯಾಟೂಗಳಿಗೂ ಒಂದು ರೀತಿ ವಿಶೇಷ ನಂಟಿದೆ. ವಿರಾಟ್​ ಕೊಹ್ಲಿ, ಕೆ.ಎಲ್. ರಾಹುಲ್​, ಹಾರ್ದಿಕ್​ ಪಾಂಡ್ಯ, ಸೂರ್ಯಕುಮಾರ್, ಶ್ರೇಯಸ್ ಅಯ್ಯರ್​, ರಿಂಕು ಸಿಂಗ್​, ಹೀಗೆ ಟ್ಯಾಟೂ ಪ್ರಿಯರ ದಂಡೇ ಇದೆ. ಟ್ಯಾಟೊ ಕ್ರೇಜ್​ ಹೊಂದಿರುವ ಕ್ರಿಕೆಟಿಗರು, ತಮ್ಮ ಕೈಗಳ ಮೇಲೆ, ದೇಹದ ಮೇಲೆ ವಿಶೇಷವಾದ ಹಚ್ಚೆ ಹಾಕಿಸಿಕೊಂಡಿದ್ದಿದೆ. ಈ ಪೈಕಿ ನಿತಿಶ್ ಕುಮಾರ್ ರೆಡ್ಡಿಯೂ ಒಬ್ಬರು.

ನಿತೀಶ್ ರೆಡ್ಡಿಗೆ ಟ್ಯಾಟೋ ಕ್ರೇಜ್​ ಇದೆ ಅನ್ನೋದು ಓಪನ್ ಸಿಕ್ರೇಟ್. ಆದ್ರೆ, ಇಂಜುರಿಯಿಂದ ಚೇರಿಸಿಕೊಳ್ಳುತ್ತಿರುವ ನಿತೀಶ್​ ರೆಡ್ಡಿ, ಎರಡು ಹೊಸ ಟ್ಯಾಟೋಗಳನ್ನು ಹಾಕಿಸಿಕೊಂಡಿದ್ದಾರೆ. ಪಕ್ಕೆಲುಬಿನ ಮೇಲೆ ಫಿನಿಕ್ಸ್​ ಹಕ್ಕಿಯ ಟ್ಯಾಟೋ ಹಾಕಿಸಿಕೊಂಡಿರುವ ನಿತೀಶ್ ರೆಡ್ಡಿ, ಬೆನ್ನ ಹಿಂದೆ ಕತ್ತಿಯ ಜೊತೆಗೆ ಹಕ್ಕಿಯ ರೆಕ್ಕೆಯ ಟ್ಯಾಟೋ ಹಾಕಿಸಿಕೊಂಡಿದ್ದಾರೆ. ಇದು ಕ್ರೇಜ್​ಗಾಗಿ ಮಾತ್ರವೇ ಹಾಕಿಸಿಕೊಂಡ ಟ್ಯಾಟೂಗಳು ಇವಲ್ಲ. ಟ್ಯಾಟೋಗಳ ಹಿಂದೆ ಒಂದು ಸಂದೇಶ ಇದೆ.

ಫಿನಿಕ್ಸ್​, ಕತ್ತಿ & ರೆಕ್ಕೆ ಟ್ಯಾಟೋ ಹಿಂದಿದೆ ವಿಶೇಷ ಅರ್ಥ..!

ಫಿನಿಕ್ಸ್​… ಇದು ಜನಪ್ರಿಯ ಪೌರಾಣಿಕ ಹಕ್ಕಿ. ಸತ್ತ ನಂತರವೂ ತನ್ನ ಬೂದಿಯಿಂದಲೇ ಮತ್ತೆ ಹುಟ್ಟಿ ಬರುವುದಕ್ಕೆ ಈ ಹಕ್ಕಿ ಹೆಸರುವಾಸಿ. ಸವಾಲುಗಳನ್ನ ಮೆಟ್ಟಿನಿಲ್ಲುವ ಸಾಮರ್ಥ್ಯ, ಹೋರಾಟದ ಪ್ರತಿರೂಪವೇ ಈ ಹಕ್ಕಿ ಅನ್ನೋದ್ರಲ್ಲಿ ಡೌಟೇ ಇಲ್ಲ. ಸುರ್ಯೋದಯದ ಸಂಕೇತವೂ ಆಗಿದೆ. ಸದ್ಯ ಇಂಜುರಿಯಾಗಿರುವ ನಿತಿಶ್, ಫಿನಿಕ್ಸ್​ ಟ್ಯಾಟೋ ಮೂಲಕ ನೀಡಿರುವ ಸಂದೇಶವೇ ಟೀಮ್ ಇಂಡಿಯಾ ಕಮ್​ಬ್ಯಾಕ್​.

ನಿತೀಶ್ ರೆಡ್ಡಿ ಮೈ ಮೇಲೆ ಮತ್ತೆರೆಡು ಟ್ಯಾಟೋಗಳಿವೆ. ಈ ಪೈಕಿ ಒಂದು ಬಲಗೈ ತೋಳಿನ ಮೇಲ್ಭಾಗದಲ್ಲಿ ಘರ್ಜಿಸ್ತಿರುವ ಹುಲಿ ಇದೆ. ಕೆಳ ಭಾಗದಲ್ಲಿ ಯೋಧನ ಚಿತ್ರವಿದೆ. ಅಷ್ಟೇ ಅಲ್ಲ.! ಈ ಹಚ್ಚೆಯ ಪ್ರಾಮುಖ್ಯತೆ, ಈ ಟ್ಯಾಟೋಗಳು ಪ್ರಭಾವ ಬೀರಿದ ಅಂಶಗಳ ಬಗ್ಗೆ ಸ್ವತಃ ನಿತಿಶ್ ರೆಡ್ಡಿಯೇ ಉಲ್ಲೇಖಿಸಿದ್ದಿದೆ.

 

Related Posts

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಕ್ರೀಡೆ ಅಂದಾಗ ಅಲ್ಲಿ ಎದುರಾಳಿಗಳ ವಿರುದ್ಧ ಗೆಲ್ಲಲೇಬೇಕು ಎನ್ನುವ ಹಠ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಮ್ಯಾರಾಥಾನ್‌ನಲ್ಲಿ ಸೋಲು-ಗೆಲುವುಗಿಂತಲೂ ಮಾನವೀಯತೆ ಮುಖ್ಯ ಅನ್ನೋದನ್ನು ಇಬ್ಬರು ಯುವ ಕ್ರೀಡಾಪಟುಗಳು ತೋರಿಸಿಕೊಟ್ಟಿದ್ದಾರೆ‌. ತಮ್ಮ ವೈಯಕ್ತಿಕ ದಾಖಲೆಯನ್ನು ಬದಿಗಿಟ್ಟು ಸಂಕಷ್ಟದಲ್ಲಿದ್ದ ಸಹ ಕ್ರೀಡಾಪಟುವಿಗೆ ಸಹಾಯ ಮಾಡುವ…

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 25 ರಿಂದ 28 ರೂಪಾಯಿಗಳಷ್ಟು ಹೆಚ್ಚಾಗಲಿದೆ ಎಂಬ ವದಂತಿಗಳು ಹರಡಿವೆ. ಆದರೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವರದಿಗಳನ್ನು ಅಧಿಕೃತವಾಗಿ…

You Missed

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು