ಸುಳ್ಳಿನ ಕಥೆ ಕಟ್ಟಿರೋದಾಗಿ ಚಿನ್ನಯ್ಯ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿ ಆಗಿದೆ. ತಲೆ ಬುರುಡೆ ತಂದು ದೂರು ಕೊಟ್ಟ ಚಿನ್ನಯ್ಯನಿಗೆ ಆ ಬುರುಡೆ ತಂದು ಕೊಟ್ಟಿದ್ಯಾರು ಎನ್ನುವ ಬಗ್ಗೆ ಇಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಶವಗಳನ್ನ ಹೂತಿಟ್ಟ ಆರೋಪ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ದೂರದಾರನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದೆ. ನಿನ್ನೆ ಭಾನುವಾರವಾದ ಹಿನ್ನೆಲೆ ಇಡಿ ವಿಚಾರಣೆ ನಡೆಸಿಲ್ಲ. ಇಂದು ತನಿಖೆ ಚುರುಕುಗೊಂಡಿದೆ. ಬೆಳ್ತಂಗಡಿ ಎಸ್ ಐ ಟಿ ಕಚೇರಿಗೆ ಎಸ್ ಪಿ ಜಿತೇಂದ್ರ ಕುಮಾರ್ ದಯಾಮ ಆಗಮಿಸಿದ್ದು, ಚಿನ್ನಯ್ಯನ ಬಳಿ ಮತ್ತಷ್ಟು ಸತ್ಯ ಹೊರಹಾಕಿಸಲು ಮುಂದಾಗಿದ್ದಾರೆ. ಇತ್ತ ಬುರುಡೆ ಗ್ಯಾಂಗ್ಗೂ ನೋಟಿಸ್ ನೀಡುವ ಸಾಧ್ಯತೆ ಕೂಡ ಇದೆ ಎನ್ನಲಾಗ್ತಿದೆ.
ಎಸ್ಐಟಿ ಕಚೇರಿಯಲ್ಲಿರುವ ಮಾಸ್ಕ್ ಮ್ಯಾನ್ ಚಿನ್ನಯ್ಯನಿಗೆ ಫುಲ್ ಕ್ಲಾಸ್ ತೆಗೆದುಕೊಳ್ಳಲು ಆಫೀಸರ್ಸ್ ರೆಡಿಯಾಗಿದ್ದಾರೆ. ಸುಳ್ಳಿನ ಕಥೆ ಕಟ್ಟಿರೋದಾಗಿ ಚಿನ್ನಯ್ಯ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿ ಆಗಿದೆ. ತಲೆ ಬುರುಡೆ ತಂದು ದೂರು ಕೊಟ್ಟ ಚಿನ್ನಯ್ಯನಿಗೆ ಆ ಬುರುಡೆ ತಂದು ಕೊಟ್ಟಿದ್ಯಾರು ಎನ್ನುವ ಬಗ್ಗೆ ಇಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಯಾರ್ಯಾರಿಗೆ ನೋಟಿಸ್ ಸಾಧ್ಯತೆ, ಬೆಳ್ತಂಗಡಿ ಎಸ್ ಐ ಟಿ ಕಚೇರಿಯಲ್ಲಿ ಮಾಸ್ಕ್ ಮ್ಯಾನ್ ಚಿನ್ನಯ್ಯನ ತೀವ್ರ ವಿಚಾರಣೆ ನಡೆದಿದೆ. ಇಂದು ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣನವರ್ಗಳಿಗೆ ಎಸ್ ಐ ಟಿ ನೋಟಿಸ್ ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ತಿಮರೋಡಿ ಮತ್ತು ಮಟ್ಟಣ್ಣನವರ್ ಅವರ ಸಂಪರ್ಕದ ಬಗ್ಗೆ ಎಸ್ ಐ ಟಿ ತೀವ್ರ ವಿಚಾರಣೆ ನಡೆಸುತ್ತಿದೆ.





