ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರನ್ನು ಸ್ಟಾರ್ ನಟ ರಾಮ್ ಚರಣ್ ಭೇಟಿಯಾಗಿದ್ದಾರೆ. ಮೈಸೂರಿನಲ್ಲಿ ಸಿದ್ದರಾಮಯ್ಯರನ್ನ ಭೇಟಿಯಾಗಿ ಗೌರವಿಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಕೂಡ ಇದ್ದರು.ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರನ್ನು ಸ್ಟಾರ್ ನಟ ರಾಮ್ ಚರಣ್ ಭೇಟಿಯಾಗಿದ್ದಾರೆ. ಮೈಸೂರಿನಲ್ಲಿ ಸಿದ್ದರಾಮಯ್ಯರನ್ನ ಭೇಟಿಯಾಗಿ ಗೌರವಿಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಕೂಡ ಇದ್ದರು.
ರಾಮ್ ಚರಣ್ ಅವರು ಪೆದ್ದಿ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಶೂಟಿಂಗ್ ನಿಮಿತ್ತ ಮೈಸೂರಿಗೆ ಆಗಮಿಸಿದ್ದು, ಈ ವೇಳೆ ಗಣ್ಯರ ಭೇಟಿ ನಡೆದಿದೆ. ಅಂದ್ಹಾಗೆ ಪೆದ್ದಿ ಸಿನಿಮಾ ಬುಚಿ ಬಾಬು ಸನಾ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ವೆಂಕಟ ಸತೀಶ್ ಕೈಲಾರು ನಿರ್ಮಾಣದ ಈ ಚಿತ್ರಕ್ಕೆ 300 ಕೋಟಿ ಬಜೆಟ್ ಹೂಡಲಾಗಿದೆ. ವಿಶೇಷ ಅಂದ್ರೆ ಕನ್ನಡಿಗ ಶಿವಣ್ಣ ಕೂಡ ಚಿತ್ರದಲ್ಲಿ ನಟೆಸುತ್ತಿದ್ದಾರೆ. ರಾಮ್ ಚರಣ್ ಮುಖ್ಯಭೂಮಿಕೆಯ ಚಿತ್ರದಲ್ಲಿ ಜಾಹ್ನವಿ ಕಪೂರ್, ದಿವ್ಯೇಂದು ಸೋಮ, ಜಗಪತಿ ಬಾಬು ಸೇರಿ ದೊಡ್ಡ ತಾರಬಳಗ ಹೊಂದಿದೆ. 2026, ಮಾರ್ಚ್ 27 ರಂದು ಚಿತ್ರವು ತೆರೆ ಕಾಣಲಿದೆ.





