IPL ಹರಾಜಿನ ಕಣದಲ್ಲಿ ಯಾರಿಗೆ ಕೈಹಿಡಿಯಲಿದೆ ಅದೃಷ್ಟ..?

ಐಪಿಎಲ್ ಆಟಗಾರರ ರಿಟೆನ್ಶನ್​​ ಭಾರೀ ಕುತೂಹಲ ಕೆರಳಿಸಿದೆ. ತೆರೆ ಹಿಂದೆ ಆಟಗಾರರ ರೀಟೇನ್ ಮತ್ತು ರಿಲೀಸ್ ಪ್ಲಾನ್ ಮಾಡಿಕೊಳ್ಳುತ್ತಿರುವ ಫ್ರಾಂಚೈಸಿಗಳು, ಸೀಕ್ರೆಟ್ ಆಗೇ ಕೆಲಸ ಮಾಡುತ್ತಿವೆ. ಐಪಿಎಲ್ ಆಟಗಾರರ ರಿಟೆನ್ಶನ್​​ ಭಾರೀ ಕುತೂಹಲ ಕೆರಳಿಸಿದೆ. ತೆರೆ ಹಿಂದೆ ಆಟಗಾರರ ರೀಟೇನ್ ಮತ್ತು ರಿಲೀಸ್ ಪ್ಲಾನ್ ಮಾಡಿಕೊಳ್ಳುತ್ತಿರುವ ಫ್ರಾಂಚೈಸಿಗಳು, ಸೀಕ್ರೆಟ್ ಆಗೇ ಕೆಲಸ ಮಾಡುತ್ತಿವೆ. ಡೆಡ್​​ಲೈನ್​​ಗೆ ಇನ್ನು ಕೇವಲ ನಾಲ್ಕೇ ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿದೆ. ಆದ್ರೂ ಫ್ರಾಂಚೈಸಿಗಳು ಕ್ಲೋಸ್ಡ್ ಡೋರ್ ಹಿಂದೆನೇ ಚಟುವಟಿಕೆಗಳಲ್ಲಿ ಬ್ಯೂಸಿಯಾಗಿವೆ.

ಐಪಿಎಲ್ ಸೀಸನ್-19 ಹರಾಜಿಗೂ ಮುನ್ನ ಪ್ಲೇಯರ್ಸ್ ರಿಟೆನ್ಶನ್,​​​​​​​​​​​​​​​ ಫ್ರಾಂಚೈಸಿಗಳಿಗೆ ಪ್ರತಿಷ್ಟೆಯ ಕಣವಾಗಿದೆ. ಆಟಗಾರರ ರಿಟೆನ್ಶನ್ ಅಥವಾ ರಿಲೀಸ್ ವಿಚಾರದಲ್ಲಿ ಫ್ರಾಂಚೈಸಿ ಒಂದೇ ಒಂದು ಯಡವಟ್ಟು ಮಾಡಿದ್ರೂ ಸೀಸನ್​​​ ಉದ್ದಕ್ಕೂ ಅದು ಇನ್ನಿಲ್ಲದಂತೆ ಕಾಡಲಿದೆ. ಹಾಗಾಗಿ ಹಗಲು ರಾತ್ರಿ ಎನ್ನದೇ ಫ್ರಾಂಚೈಸಿ ಮಾಲೀಕರು, ಆಟಗಾರರನ್ನ ಎಚ್ಚರಿಕೆಯಿಂದಲೇ ರೀಟೇನ್ ಮತ್ತು ರಿಲೀಸ್ ಮಾಡ್ತಿದ್ದಾರೆ. ಹಾಗೆ ಸಾರಥಿಯ ಆಯ್ಕೆಯಲ್ಲೂ, ಜಾಣ್ಮೆಯ ನಡೆ ಅನುಸರಿಸುತ್ತಿದ್ದಾರೆ.

ನಾಯಕ ಯಾರು..?
ರಾಜಸ್ಥಾನ್ ರಾಯಲ್ ತಂಡದ ನಾಯಕ ಸಂಜು ಸ್ಯಾಮ್ಸನ್, ತಂಡವನ್ನ ಬಿಡಲು ಧೃಡ ನಿರ್ಧಾರ ಮಾಡಿದ್ದಾರೆ. ಸದ್ಯ ಟ್ರೇಡ್ ಮೂಲಕ ವ್ಯವಹಾರ ನಡೆಸ್ತಿರುವ ಸಂಜು ಬದಲಿಗೆ ಆರ್​ಆರ್​, ನೂತನ ನಾಯಕನ ಆಯ್ಕೆಯಲ್ಲಿ ಬ್ಯೂಸಿಯಾಗಿದೆ. ರಾಜಸ್ಥಾನ್ ಮುಂದೆ 3 ಆಪ್ಶನ್​ಗಳಿವೆ. ರಿಯಾನ್ ಪರಾಗ್, ಯಶಸ್ವಿ ಜೈಸ್ವಾಲ್ ಮತ್ತು ಧೃವ್ ಜುರೆಲ್, ಈ ಮೂವರು ಯುವ ಕ್ರಿಕೆಟಿಗರಲ್ಲಿ ಒಬ್ಬನನ್ನ ಆರ್​ಆರ್​ ಸಾರಥಿಯಾಗಿ ನೇಮಕ ಮಾಡಬೇಕಿದೆ.

ಶಮಿಗೆ ಸಿಎಸ್​​ಕೆ ಗಾಳ?
ಚೆನ್ನೈ ಸೂಪರ್​ಕಿಂಗ್ಸ್​ ಇರೋ ಬರೋ ಆಟಗಾರರನ್ನೆಲ್ಲಾ ತಂಡಕ್ಕೆ ಸೆಳೆಯಲು ಮುಂದಾಗಿದೆ. ಒಂದೆಡೆ ಸಂಜು ಸ್ಯಾಮ್ಸನ್​​​​ಗೆ ಗಾಳ ಹಾಕಿರುವ ಸಿಎಸ್​ಕೆ, ಜೊತೆಯಲ್ಲೇ ಕೆ.ಎಲ್.ರಾಹುಲ್, ಇಶಾನ್ ಕಿಶನ್ ಮತ್ತಿತರೆ ಆಟಗಾರರ ಮೇಲೂ ಕಣ್ಣಿಟ್ಟಿದೆ. ಲೇಟೆಸ್ಟ್ ವಿಚಾರ ಏನಪ್ಪಾ ಅಂದ್ರೆ ಚೆನ್ನೈ, ಹಿರಿಯ ಮತ್ತು ಅನುಭವಿ ವೇಗಿ ಮೊಹಮ್ಮದ್ ಶಮಿಯನ್ನ ತಂಡಕ್ಕೆ ಕರೆತರಲು ಪ್ಲಾನ್ ಮಾಡಿಕೊಂಡಿದಿಯಂತೆ. ಆದ್ರೆ ಇದು ಎಷ್ಟು ನಿಜ ಅನ್ನೋದೇ, ಸದ್ಯಕ್ಕೆ ಎಲ್ಲರಿಗೂ ಕಾಡ್ತಿರೋ ಪ್ರಶ್ನೆ.

ಸನ್​ರೈಸರ್ಸ್ ಹೈದ್ರಾಬಾದ್ ತಂಡ, ಬಿಗ್ ಸ್ಟಾರ್​ಗಳನ್ನ ರಿಲೀಸ್ ಮಾಡುವ ಸುದ್ದಿ ಬಿರುಗಾಳಿಯಂತೆ ಬೀಸಿತ್ತು. ಅದ್ರಲ್ಲೂ ಪ್ರಮುಖವಾಗಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಇಶಾನ್ ಕಿಶನ್ ಮತ್ತು ಬಿಗ್ ಹಿಟ್ಟರ್ ಹೆನ್ರಿಚ್ ಕ್ಲಾಸನ್​ರನ್ನ ಎಸ್​ಆರ್​ಹೆಚ್ ತಂಡದಿಂದ ರಿಲೀಸ್ ಮಾಡ್ತಾರೆ ಅನ್ನೋದು ಎಲ್ಲೆಡೆ ಹಬ್ಬಿತ್ತು. ಆದ್ರೀಗ ಹೈದ್ರಾಬಾದ್ ಫ್ರಾಂಚೈಸಿ, ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸನ್​​ ತಂಡದಲ್ಲೇ ಉಳಿಯಲಿದ್ದಾರೆ ಅನ್ನೋದನ್ನ ಸ್ಪಷ್ಟಪಡಿಸಿದೆ.

 

Related Posts

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಕ್ರೀಡೆ ಅಂದಾಗ ಅಲ್ಲಿ ಎದುರಾಳಿಗಳ ವಿರುದ್ಧ ಗೆಲ್ಲಲೇಬೇಕು ಎನ್ನುವ ಹಠ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಮ್ಯಾರಾಥಾನ್‌ನಲ್ಲಿ ಸೋಲು-ಗೆಲುವುಗಿಂತಲೂ ಮಾನವೀಯತೆ ಮುಖ್ಯ ಅನ್ನೋದನ್ನು ಇಬ್ಬರು ಯುವ ಕ್ರೀಡಾಪಟುಗಳು ತೋರಿಸಿಕೊಟ್ಟಿದ್ದಾರೆ‌. ತಮ್ಮ ವೈಯಕ್ತಿಕ ದಾಖಲೆಯನ್ನು ಬದಿಗಿಟ್ಟು ಸಂಕಷ್ಟದಲ್ಲಿದ್ದ ಸಹ ಕ್ರೀಡಾಪಟುವಿಗೆ ಸಹಾಯ ಮಾಡುವ…

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 25 ರಿಂದ 28 ರೂಪಾಯಿಗಳಷ್ಟು ಹೆಚ್ಚಾಗಲಿದೆ ಎಂಬ ವದಂತಿಗಳು ಹರಡಿವೆ. ಆದರೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವರದಿಗಳನ್ನು ಅಧಿಕೃತವಾಗಿ…

You Missed

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು