ಸಂಜೆ 7.26 ಗಂಟೆಗೆ, ಆರು ಸದಸ್ಯರ ವೈದ್ಯಕೀಯ ತಂಡವು ಅಂಗಾಂಗ ಪೆಟ್ಟಿಗೆಯೊಂದಿಗೆ ರಾಗಿಗುಡ್ಡ ಮೆಟ್ರೋ ನಿಲ್ದಾಣ ತಲುಪಿತು. ಸುರಕ್ಷತಾ ಅಧಿಕಾರಿಗಳು ಮತ್ತು ನಿಲ್ದಾಣ ಸಿಬ್ಬಂದಿ ಅವರನ್ನು ಸ್ವಾಗತಿಸಿದರು. ತಂಡವು ಭದ್ರತಾ ತಪಾಸಣೆ ಮುಗಿಸಿ 19:29ಕ್ಕೆ ಪ್ಲಾಟ್ಫಾರ್ಮ್ ತಲುಪಿತು.ವೈದ್ಯಕೀಯ ತಂಡವು 19:32ಕ್ಕೆ ರೈಲುಗೆ ಹತ್ತಿ, ಸುರಕ್ಷತಾ ಸಿಬ್ಬಂದಿಗಳೊಂದಿಗೆ 19:39ಕ್ಕೆ ಬೊಮ್ಮಸಂದ್ರ ನಿಲ್ದಾಣ ತಲುಪಿತು. ಅಲ್ಲಿನ ASO ಮತ್ತು ಸ್ಟೇಷನ್ ಕಂಟ್ರೋಲರ್ ತಂಡವನ್ನು ನಿಲ್ದಾಣದ ನಿರ್ಗಮನದವರೆಗೆ ಮಾರ್ಗದರ್ಶನ ಮಾಡಿದರು. ಹೃದಯವನ್ನು ತಕ್ಷಣ ಆಂಬ್ಯುಲೆನ್ಸ್ಗೆ ಸ್ಥಳಾಂತರಿಸಲಾಗಿತ್ತು. ಆಂಬ್ಯುಲೆನ್ಸ್ ಹೊರಟು 20:12ಕ್ಕೆ ನಾರಾಯಣ ಹೃದಯಾಲಯ ತಲುಪಿತು.ಇದು ನಮ್ಮ ಮೆಟ್ರೋ ಮೂಲಕ ಸಾಗಿಸಲಾದ ಐದನೇ ಯಶಸ್ವಿ ಮಾನವ ಅಂಗಾಂಗ, ಮತ್ತು ಜೀವನ ರಕ್ಷಣಾ ಕಾರ್ಯಗಳಲ್ಲಿ BMRCL ತನ್ನ ಬದ್ಧತೆಯನ್ನು ಮತ್ತೆ ತೋರಿಸಿದೆ.





