Who is Mahal Roja Mallikarjuna Mutya?

ಅತಿಚಿಕ್ಕ ವಯಸ್ಸಿಗೆ ಮಠದ ಪೀಠಾಧಿಪತಿ ಆಗಿ ಅಪ್ಪಾಜಿ ಎನಿಸಿಕೊಂಡ 26ರ ಯುವಕ,ಬಾಲಕಿಯ ಜೊತೆಗಿನ ಅನುಚಿತ ವರ್ತನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಲ್ಲಿಕಾರ್ಜುನ ಮುತ್ಯಾ ನಾಪತ್ತೆಯಾಗಿದ್ದಾರೆ. ಉತ್ತರ ಕರ್ನಾಟಕ ಕೆಲ ಜಿಲ್ಲೆಗಳಲ್ಲಿ ದೇವಮಾನವನ ಎನ್ನಿಸಿಕೊಂಡಿರುವ 26 ವರ್ಷದ ಈ ಯುವಕನ ಹಿನ್ನೆಲೆ ಏನು? ಇಷ್ಟು ದೊಡ್ಡಮಟ್ಟಕ್ಕೆ ಬೆಳೆದು ಬಂದಿದ್ದೇಗೆ? ಮಠದಿಂದ ಏನೆಲ್ಲಾ ಚಟುವಟಿಕೆ ನಡೆಸಲಾಗುತ್ತೆ? ಈ ಬಗ್ಗೆ ವಿವರ ಇಲ್ಲಿದೆ.

ಬಾಲಕಿ ಜೊತೆ ಅನುಚಿತ ವರ್ತನೆ ವಿಡಿಯೋ ವೈರಲ್ ಬೆನ್ನಲ್ಲೆ ಮಲ್ಲಿಕಾರ್ಜುನ ಮುತ್ಯಾ ಬಗ್ಗೆ ಭಾರೀ ಟೀಕೆ.ಹನುಮಂತರಾಯ ಮುತ್ಯಾಮ ಕೊನೆಯ ಮಗ ಮಲ್ಲಿಕಾರ್ಜುನ ಮುತ್ಯಾಚಿಕ್ಕವಯಸ್ಸಿಗೆಪೀಠಾಧಿಪತಿಯಾದರು.ಉತ್ತರ ಕರ್ನಾಟಕದ ಭಾಗದ ಜನರು ಮುತ್ಯಾ ಬಗೆಗಿನ ಟೀಕೆಯನ್ನು ಖಂಡಿಸಿದ್ದು, ನಮ್ಮ ಅಪ್ಪಾಜಿ ಎಂದಿದ್ದಾರೆ.ಬಾಲಕಿ ಜೊತೆ ಅನುಚಿತ ವರ್ತನೆ ವಿಡಿಯೋ ವೈರಲ್ ಬೆನ್ನಲ್ಲೆ ಮಲ್ಲಿಕಾರ್ಜುನ ಮುತ್ಯಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅವರ ನಡೆ, ನುಡಿ, ವರ್ತನೆಗಳ ಬಗ್ಗೆ ವಿಡಿಯೋಗಳನ್ನು ಹರಿಬಿಟ್ಟು ಹಲವು ಟೀಕೆ ಮಾಡುತ್ತಿದ್ದಾರೆ. ಇನ್ನೊಂದೆಡೆ ಉತ್ತರ ಕರ್ನಾಟಕದ ಭಾಗದ ಜನರು ಮುತ್ಯಾ ಬಗೆಗಿನ ಟೀಕೆಯನ್ನು ಖಂಡಿಸಿದ್ದು, ನಮ್ಮ ಅಪ್ಪಾಜಿ ಎಂದೆಲ್ಲಾ ಹೇಳುತ್ತಿದ್ದಾರೆ.

 

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜಾ ಎನ್ನುವ ಒಂದು ಚಿಕ್ಕ ಗ್ರಾಮ. ಅಲ್ಲೊಂದು ಚಿಕ್ಕ ಮಠ ಇದೆ. ಆ ಮಠದ ಸ್ವಾಮೀಜಿಯೇ ಮಲ್ಲಿಕಾರ್ಜುನ ಮುತ್ಯಾ. ಅವರ ತಂದೆಯ ಹೆಸರು ಹನುಮಂತರಾಯ ಮುತ್ಯಾ. ಉತ್ತರ ಕರ್ನಾಟಕದ ಭಾಗದಲ್ಲಿ ‘ದೇವರು ಹೇಳೋದು’ ಎನ್ನುವ ಒಂದು ಪದ್ಧತಿ ಇದೆ. ಅಂದರೆ ಕಷ್ಟ ಅಂತ ಬಂದವರಿಗೆ ಪರಿಹಾರ ಹೇಳುವುದು ಅಥವಾ ಸಣ್ಣ ಪುಟ್ಟ ಪವಾಡಗಳನ್ನು ಮಾಡುವುದು. ಈ ಮಲ್ಲಿಕಾರ್ಜುನ ಮುತ್ಯಾನ ತಂದೆ ಕೂಡ ಇದೇ ಕೆಲಸವನ್ನು ಮಾಡುತ್ತಿದ್ದರು. ಕಷ್ಟ ಎಂದು ಬಂದವರಿಗೆ ನಾಲ್ಕು ಸಾಂತ್ವನದ ಮಾತುಗಳನ್ನು ಹೇಳಿ ಕಳಿಸುವುದು, ನೆಮ್ಮದಿ ನೀಡುವುದು, ಚಿಕ್ಕ ಪುಟ್ಟ ಪವಾಡಗಳನ್ನು ಮಾಡುವುದರ ಮೂಲಕ ಆ ಭಾಗದಲ್ಲಿ ತಕ್ಕಮಟ್ಟಿಗೆ ಗೌರವ ಸಂಪಾದಿಸಿದ್ದರು. ಅವರನ್ನು ನಂಬುವ ಒಂದು ದೊಡ್ಡ ಭಕ್ತವೃಂದವೇ ಇತ್ತು.
ಕೊನೆಯ ಮಗನೇ ಮಲ್ಲಿಕಾರ್ಜುನ ಈ ಹನುಮಂತರಾಯ ಮುತ್ಯಾಗೆ ಒಟ್ಟು ನಾಲ್ಕು ಜನ ಮಕ್ಕಳು. ಅದರಲ್ಲಿ ಕೊನೆಯವನೇ ಈ ಮಲ್ಲಿಕಾರ್ಜುನ. ತಂದೆ ತೀರಿಕೊಂಡ ನಂತರ, ಆ ತಂದೆಯ ಪೀಠವನ್ನು, ಪವಾಡ ಮಾಡುವ ಕೆಲಸವನ್ನು, ದೇವರು ಹೇಳುವ ಪದ್ಧತಿಯನ್ನು ಈ ಮಲ್ಲಿಕಾರ್ಜುನ ಮುತ್ಯಾ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಮುಖ ನೋಡಿ ಸಮಸ್ಯೆ ಹೇಳಿ ಅದಕ್ಕೆ ಪರಿಹಾರ ಮಲ್ಲಿಕಾರ್ಜುನ ಮುತ್ಯಾನ ಬಳಿ ಯಾರಾದರೂ ಕಷ್ಟ ಅಂತ ಹೋದರೆ, ಈತ ಅವರ ಬಾಯಿಂದ ಸಮಸ್ಯೆ ಕೇಳುತ್ತಿರಲಿಲ್ಲ. ಬದಲಾಗಿ ಮುಖ ನೋಡಿ, ತಕ್ಷಣಕ್ಕೆ ನಿನಗೆ ಈ ಕಷ್ಟ ಇದೆ ಅಲ್ವಾ? ಅಂತ ಹೇಳಿ ಬಿಡುತ್ತಿದ್ದನಂತೆ, ಮದುವೆ ಆಗಿಲ್ಲ ಎನ್ನುವ ಸಂಕಟವೋ, ಆರ್ಥಿಕ ಸಮಸ್ಯೆಯೋ, ಕೌಟುಂಬಿಕ ಕಲಹವೋ ಮುಖ ನೋಡಿ ಸಮಸ್ಯೆ ಹೇಳಿ ಅದಕ್ಕೆ ಪರಿಹಾರವನ್ನೂ ಸೂಚಿಸುತ್ತಿದ್ದರಂತೆ. ಇದು ಜನರಲ್ಲಿ ಬಾರಿ ಅಚ್ಚರಿ ಮೂಡಿಸಿತು. ಅಲ್ಲಿ ಹೋದರೆ ನಮ್ಮ ಕಷ್ಟ ಏನೆಂದು ಅವರೇ ಹೇಳ್ತಾರೆ, ಪರಿಹಾರ ಸಿಗುತ್ತೆ ಎನ್ನುವ ಮಾತುಗಳು ಒಬ್ಬರ ಬಾಯಿಂದ ಮತ್ತೊಬ್ಬರ ಬಾಯಿಗೆ ಕಾಡ್ಗಿಚ್ಚಿನಂತೆ ಹರಡಿತು. ನಿಧಾನವಾಗಿ ಮಲ್ಲಿಕಾರ್ಜುನ ಮುತ್ಯಾನನ್ನು ಹುಡುಕಿಕೊಂಡು ಬರುವವರ ಸಂಖ್ಯೆ ಹೆಚ್ಚಾಯಿತು. ನೋಡ ನೋಡುತ್ತಿದ್ದಂತೆಯೇ ಆ ಭಾಗದ ಜನ ಈತನಿಗೆ ‘ಉತ್ತರ ಕರ್ನಾಟಕ ಭಾಗದ ನಡೆದಾಡುವ ದೇವರು’ ಎನ್ನುವ ಪಟ್ಟವನ್ನು ಕಟ್ಟಿದರು.

ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮಠ ಕೂಡ ಅಭಿವೃದ್ಧಿ ಹೊಂದುತ್ತಾ ಹೋಯಿತು. ಮುಂಚೆ ಏನೇನೂ ಇರದಿದ್ದ ಆ ಮಹಲ್ ರೋಜಾ ಗ್ರಾಮದ ಮಠದ ಸುತ್ತಮುತ್ತ ಹೋಟೆಲ್, ಬೇಕರಿ, ಕಿರಾಣಿ ಅಂಗಡಿಗಳು ತಲೆ ಎತ್ತಿದವು. ಮಠ ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ, ಈಗ ಅಲ್ಲಿ 24 ಗಂಟೆಗಳ ಕಾಲ ನಿರಂತರ ಅನ್ನ ದಾಸೋಹ ನಡೆಯುತ್ತದೆ. ಯಾವ ಸಮಯಕ್ಕೆ ಹೋದರೂ ಊಟ ಸಿಗುವಂತಹ ವ್ಯವಸ್ಥೆ ನಿರ್ಮಾಣವಾಗಿದೆ. ಪ್ರಸಿದ್ಧಿ ಹೆಚ್ಚಾದಂತೆ ಜನರು ತಮ್ಮ ನವಜಾತ ಶಿಶುಗಳನ್ನು ಮುತ್ಯಾನ ಬಳಿ ತರಲು ಶುರು ಮಾಡಿದರು. ಮುತ್ಯಾನ ಕೈಗೆ ಮಗು ಕೊಟ್ಟರೆ ಆ ಮಗುವಿಗೆ ಒಳ್ಳೆಯದಾಗುತ್ತದೆ, ಮುಂದೊಂದು ದಿನ ದೊಡ್ಡ ವ್ಯಕ್ತಿಯಾಗುತ್ತಾನೆ ಎನ್ನುವ ನಂಬಿಕೆ ಜನರ ತಲೆಯಲ್ಲಿ ಬೇರೂರಿತು. ಮಕ್ಕಳಿಲ್ಲದವರಿಗೆ, ಮದುವೆಯಾಗದವರಿಗೆ ಇಂತಿಷ್ಟು ದಿನದಲ್ಲಿ ಒಳ್ಳೆಯದಾಗುತ್ತದೆ ಎಂದು ಹೇಳುತ್ತಿದ್ದರು. ಮಠದ ಬಳಿ ಬರುವ ಜನರ ಬಳಿ ಇಷ್ಟೇ ಹಣ ಕೊಡಬೇಕು, ಇಷ್ಟೇ ಕಾಣಿಕೆ ನೀಡಬೇಕು ಎಂದು ಡಿಮಾಂಡ್ ಮಾಡುತ್ತಿರಲಿಲ್ಲ. ಬಂದವರು ತಮ್ಮ ಕೈಲಾದಷ್ಟು ಕೊಟ್ಟು ಹೋದರೆ ಸಾಕು ಎನ್ನುವ ರಿವಾಜು ಅಲ್ಲಿತ್ತು. ಇದೂ ಕೂಡ ಜನ ಆತನನ್ನು ಹೆಚ್ಚು ನಂಬಲು ಕಾರಣವಾಯ್ತು.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

  ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ ! ಆದಿಚುಂಚನಗಿರಿ ಮಠದ ಶಿಕ್ಷಣ ಟ್ರಸ್ಟ್‌ಗೆ ಸೇರಿದ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆರು ಎಕರೆ ಭೂಮಿ ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!