


ಮೊಬೈಲ್ ಕಳ್ಳತನ ಆಗಿದೆ ಎನ್ನಬೇಡ ಕಳುವಾಗಿದೆ ಎಂದು ದೂರು ಕೊಡು ಮಗನೇಇಲ್ಲ ಅಂದ್ರೆ ನಿನ್ನ ಮೇಲೆ ಕೇಸ್ ದಾಖಲಿಸುತ್ತೇನೆ ಎಂದು ಅಶ್ಲೀಲ ಪದಗಳಿಂದ ನಿಂದಿಸಿ ನನ್ನ ಕಪಾಲಕ್ಕೆ 10-15 ಬಾರಿ S I ,ಆಕಾಶ್ ಅವರು ಹೊಡೆದರು ಆ ವೇಳೆಯಲ್ಲಿ ಸಬ್ ಇನ್ಸೆಕ್ಟರ್ ಅವರು ಮದ್ಯಪಾನ ಮಾಡಿದ್ದರು ಅವರ ಜೊತೆಯಲ್ಲೇ ಇದ್ದ ಪೊಲೀಸ್ಪೇದೆ ಶಿವಕುಮಾರ್ ಹಾಸನ್ ಅವರು ನನಗೆ ಬೂಟಿಂದ ಹೊಡೆದರೆ ಹೇಗಾಗುತ್ತದೆ ಗೊತ್ತಾ ಮಗನೆ ನಾಟಕ ಆಡಿಕೊಂಡು ಸ್ಟೇಷನ್ ಗೆ ಬಂದಿದ್ದೀರ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಮೊದಲೇ ಕುಡಿದ ನಶೆಯಲ್ಲಿದ್ದ ಆಕಾಶ್ ದೂರುದರರನ್ನೇ ನೀವು ಕುಡಿದುಬಂದಿದ್ದೀರ ಎಂದು ಸರ್ಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್ ಮಾಡಿಸಿದ್ದಾರೆ ಡಾಕ್ಟರ್ ಇವರು ಕುಡಿದಿಲ್ಲ ಎಂಬ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಗಾಬರಿ ಗೊಂಡಿದ್ದ ಶಿವರಾಜುಗೆ ಬಿಪಿ ಜಾಸ್ತಿ ಇದೆ ಎಂದಾಗ ಠಾಣೆಗೆ ಕರೆದುಕೊಂಡು ಬಂದು ಮಧ್ಯರಾತ್ರಿ 1.30 ರ ವೇಳೆಯಲ್ಲಿ ಬೈಕ್ ಕಿತ್ತುಕೊಂಡು ಬಿಟ್ಟು ಕಳಿಸಿದ್ದಾರೆ.
ಇದರಿಂದ ನೋವು ಅನುಭವಿಸಿದ ಶಿವರಾಜು ಕೊಳ್ಳೆಗಾಲದ ಆಸ್ಪತ್ರೆಯಲ್ಲಿ ಮೆಡಿಕಲ್ ಸರ್ಟಿಫಿಕೇಟ್ ಮಾಡಿಸಿ ಆನ್ವೆನ್ ನಲ್ಲಿ ಸಬ್ ಇನ್ಸೆಕ್ಟರ್ ಹಾಗೂ ಪೊಲೀಸ್ ಪೇದೆ ವಿರುದ್ಧ ದೂರು ದಾಖಲಿಸಿದ್ದಾರೆ ನಾನು ಬಡವ ಕೂಲಿ ಮಾಡಿದರೆ ಉಂಟು ಇಲ್ಲ ಅಂದರೆ ಇಲ್ಲ ಹೀಗಿರುವಾಗ ಸಬ್ ಇನ್ನೆ ಕ್ಟರ್ ಅವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ನನಗೆ ಏನಾದರೂ ತೊಂದರೆ ಆದರೆ ಅವರೇ ನೇರ ಹೊಣೆ ಎಂದು ಪತ್ರಿಕೆ ಜೊತೆ ತಮ್ಮ ಅಳಲನ್ನು ತೋಡಿಕೊಂಡರು ತಕ್ಷಣ ಮೇಲಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನೊಂದ ಶಿವರಾಜುಗೆ ನ್ಯಾಯ ಕೊಡಿಸುವರೇ ಕಾದು ನೋಡೋಣ.ರು ನ್ಯಾಯ ರಕ್ಷಕರೇ ಭಕ್ಷಕರಾದರೆ ಜನ ಸಾಮಾನ್ಯಕೇಳುವುದಾದರೂ ಯಾರನ್ನ ಎಂಬ ಪ್ರಶ್ನೆ ಮೂಡುತ್ತದೆ.





