ಅಶೋಕ್ ಲೈಲ್ಯಾಂಡ್ ಸರ್ವಿಸ್ ಸೆಂಟರ್ ನಿರ್ಲಕ್ಷ್ಯ! ಲಾರಿ ಮಾಲೀಕನಿಗೆ 27 ಲಕ್ಷ ರೂ. ನಷ್ಟ, ಪರಿಹಾರಕ್ಕೆ ಒತ್ತಾಯ!

ಮೈಸೂರು : ಅಶೋಕ್ ಲೈಲ್ಯಾಂಡ್ ಸರ್ವಿಸ್ ಸೆಂಟರ್‌ನಲ್ಲಿ ಒಂದು ಸಣ್ಣ ರಿಪೇರಿಗೆ ನಿಲ್ಲಿಸಿದ್ದ ಲಾರಿಯನ್ನು 9 ತಿಂಗಳಾದರೂ ರಿಪೇರಿ ಮಾಡಿ ನೀಡದ ಕಾರಣ ಲಾರಿ ಮಾಲೀಕನಿಗೆ 27 ಲಕ್ಷ ರೂ. ನಷ್ಟ ಉಂಟಾಗಿರುವ ಘಟನೆ ನಡೆದಿದ್ದು, ಅಶೋಕ್ ಲೈಲ್ಯಾಂಡ್ ಸರ್ವಿಸ್ ಸೆಂಟರ್‌ನವರು ಪರಿಹಾರ ನೀಡಬೇಕು ಎಂದು ಲಾರಿ ಮಾಲಿಕ ನಂದೀಶ್ ಒತ್ತಾಯಿಸಿದರು.

ನಗರದ ವಿದ್ಯಾರಣ್ಯಪುರಂನಲ್ಲಿರುವ ಅಶೋಕ್ ಲೈಲ್ಯಾಂಡ್ ಸರ್ವಿಸ್ ಸೆಂಟರ್‌ನಲ್ಲಿ ಈ ಘಟನೆ ನಡೆದಿದ್ದು, ಲಾರಿ ಮಾಲೀಕ ನಂದೀಶ್ ಅವರು ಕಳೆದ 9 ತಿಂಗಳ ಹಿಂದೆ ತಮ್ಮ 12ಚಕ್ರದ ಅಶೋಕ್ ಲೇಲ್ಯಾಂಡ್ ಟಿಪ್ಪರ್ ಲಾರಿಯನ್ನು ಸಣ್ಣ ರಿಪೇರಿಗಾಗಿ ಸರ್ವಿಸ್ ಸೆಂಟರ್‌ಗೆ ಬಿಟ್ಟಿದ್ದು, ಅಲ್ಲಿನ ಸರ್ವಿಸ್ ಸೆಂಟರ್‌ನವರು ವಿವಿಧ ಕಾರಣಗಳನ್ನು ನೀಡಿ ೯ ತಿಂಗಳಾದರೂ ತಮ್ಮ ಲಾರಿಯನ್ನು ರಿಪೇರಿ ಮಾಡಿ ಕೊಟ್ಟಿಲ್ಲ, ನಾನು ಹಲವು ಬಾರಿ ಸರ್ವಿಸ್ ಸೆಂಟರ್‌ಗೆ ಬಂದು ವಿಚಾರಣೆ ನಡೆಸಿ ಲಾರಿಯನ್ನು ಕೊಡುವಂತೆ ಕೇಳಿದರೂ ವಿವಿಧ ಸಬೂಬುಗಳನ್ನು ಕೊಟ್ಟು ಇವತ್ತು, ನಾಳೆ ಎಂದು ನನಗೆ ಸಾಗ ಹಾಕಿದರು.

ಇತ್ತೀಚೆಗೆ ನಿಮ್ಮ ಲಾರಿ ರಿಪೇರಿ ಆಗಿದೆ 34 ಸಾವಿರ ಬಿಲ್ ಕಟ್ಟಿ ಲಾರಿಯನ್ನು ತೆಗೆದುಕೊಂಡು ಹೋಗಿ ಎಂದು ಬಿಲ್ ಕಳಿಸಿದ್ದಾರೆ. ಆದರೇ ನಾನು ಇದೇ ಅಶೋಕ್ ಲೇಲ್ಯಾಂಡ್ ಶೋರೂಂನಿಂದ ಲಾರಿಯನ್ನು ಸಾಲ ಮಾಡಿ ತೆಗೆದುಕೊಂಡಿದ್ದೇನೆ. ತಿಂಗಳಿಗೆ 1.10 ಲಕ್ಷ ರೂ EMI ಕಟ್ಟುತ್ತಿದ್ದೇನೆ. 9 ತಿಂಗಳ ಕಂತು ಪಾವತಿಸಿದೆ. ಲಾರಿಯ ಇನ್ಸುರೆನ್ಸ್, ಟ್ಯಾಕ್ಸ್ ಮುಂತಾದವೂ ಸಹ ಕಟ್ಟಿದ್ದೇನೆ. ನನ್ನ ಲಾರಿಯಿಂದ ದಿನಕ್ಕೆ ಕನಿಷ್ಠ 10 ಸಾವಿರ ರೂ. ಆದಾಯ ಲೆಕ್ಕ ಹಾಕಿದರೂ ನನಗೆ 9 ತಿಂಗಳು, 5 ದಿನಕ್ಕೆ ಬರೋಬ್ಬರಿ 27 ಲಕ್ಷ ರೂ. ಹಣ ಸಂಪಾದನೆ ಆಗುತ್ತಿತ್ತು, ಒಂದು ಸಣ್ಣ ರಿಪೇರಿಗಾಗಿ ನಾನು ಅಶೋಕ್ ಲೇಲ್ಯಾಂಡ್ ಸರ್ವಿಸ್ ಸೆಂಟರ್‌ಗೆ ಲಾರಿ ಬಿಟ್ಟರೆ, 9 ತಿಂಗಳಾದರೂ ನನಗೆ ನನ್ನ ಲಾರಿ ರಿಪೇರಿ ಮಾಡಿ ಕೊಡದ ಕಾರಣ ನನಗಾಗಿರುವ ನಷ್ಟಕ್ಕೆ ಅಶೋಕ್ ಲೇಲ್ಯಾಂಡ್ ಸರ್ವಿಸ್ ಸೆಂಟರ್ ಅವರೇ ಜವಾಬ್ದಾರರು, ಈ ಬಗ್ಗೆ ನಾನು ಪೊಲೀಸರಿಗೂ ಮತ್ತು ಗ್ರಾಹಕರ ನ್ಯಾಯಾಲಯಕ್ಕೂ ದೂರು ನೀಡುತ್ತಿದ್ದೇನೆ. ನನಗೆ ಪರಿಹಾರ ಕೊಡುವ ತನಕ ನನ್ನ ಲಾರಿಯನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ನಂದೀಶ್ ದೂರಿದರು.

ಸರ್ವಿಸ್ ಸೆಂಟರ್ ಎದುರು ಪ್ರತಿಭಟನೆ ಎಚ್ಚರಿಕೆ!


ಲಾರಿ ಮತ್ತು ಟಿಪ್ಪರ್ ಮಾಲೀಕರ ಕಷ್ಟ ಹೇಳತೀರದು, ಚಕ್ರ ಉರುಳಿದರೆ ಮಾತ್ರ ನಮಗೆ ಬದುಕು, ಇಲ್ಲವಾದರೆ ಇಲ್ಲ, ನಂದೀಶ್ ಅವರು ಸಾಲ ಮಾಡಿ ಟಿಪ್ಪರ್ ಖರೀದಿ ಮಾಡಿದ್ದಾರೆ. ಇದು ಶೋಂರೂಂ ವಾಹನ, ಗ್ಯಾರಂಟಿ ಇದೆ, ಅಂತಹದರಲ್ಲಿ ಇಂತಹ ಪ್ರತಿಷ್ಠಿತ ಅಶೋಕ್ ಲೇಲ್ಯಾಂಡ್ ಸರ್ವಿಸ್ ಸೆಂಟರ್‌ನವರೇ ಒಂದು ಸಣ್ಣ ರಿಪೇರಿಗೆ ೯ ತಿಂಗಳು ಮಾಡಿದರೆ ಹೇಗೆ, ಅವರು ಲಾರಿಯ ಸಂಪೂರ್ಣ ನಷ್ಟವನ್ನು ಭರಿಸಬೇಕು. ಇಲ್ಲವಾದಲ್ಲಿ ಸರ್ವಿಸ್ ಸೆಂಟರ್ ಎದುರು ಲಾರಿ ಮಾಲೀಕರ ಸಂಘದವತಿಯಿಂದ ಪ್ರತಿಭಟನೆ ನಡೆಸುತ್ತೇವೆ.

Related Posts

ನೈಸ್ ಯೋಜನೆಯ ವಿರುದ್ಧ ಜೆಡಿಎಸ್ ಸಮರ: ಸರ್ಕಾರದ ಮುಂದೆ 6 ಪ್ರಮುಖ ಬೇಡಿಕೆಗಳು

ವಿಧಾನಮಂಡಲ ಅಧಿವೇಶನದಲ್ಲಿ ನೈಸ್ (NICE) ಯೋಜನೆಯ ಅಕ್ರಮಗಳ ಕುರಿತು ಚರ್ಚಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಜೆಡಿಎಸ್ ಮುಖಂಡರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರ ನೇತೃತ್ವದ ನಿಯೋಗವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ…

ಸನಾತನ ಧರ್ಮದ ಶ್ರೇಷ್ಠತೆ ಮತ್ತು ಪಾರದರ್ಶಕತೆಗೆ ಮಂತ್ರಾಲಯ ಶ್ರೀಗಳ ಕರೆ

ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ಮಠ-ಮಾನ್ಯಗಳು ಮತ್ತು ಸಂಸ್ಥೆಗಳ ಆಡಳಿತದಲ್ಲಿ ಆರ್ಥಿಕ ಪಾರದರ್ಶಕತೆ ಅತ್ಯಗತ್ಯವೆಂದು ಪ್ರತಿಪಾದಿಸಿದ್ದಾರೆ. ಆಯೋಧ್ಯೆಯ ರಾಮಮಂದಿರದ ಹುಂಡಿ ಕಳ್ಳತನದ ಕುರಿತು ಪ್ರತಿಕ್ರಿಯಿಸಿದ ಶ್ರೀಗಳು, ಈ ಪ್ರಕರಣದ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಹಾಗೂ ನ್ಯಾಯಾಲಯದಲ್ಲಿ ತನಿಖೆ…

You Missed

ನೈಸ್ ಯೋಜನೆಯ ವಿರುದ್ಧ ಜೆಡಿಎಸ್ ಸಮರ: ಸರ್ಕಾರದ ಮುಂದೆ 6 ಪ್ರಮುಖ ಬೇಡಿಕೆಗಳು

ನೈಸ್ ಯೋಜನೆಯ ವಿರುದ್ಧ ಜೆಡಿಎಸ್ ಸಮರ: ಸರ್ಕಾರದ ಮುಂದೆ 6 ಪ್ರಮುಖ ಬೇಡಿಕೆಗಳು

ಸನಾತನ ಧರ್ಮದ ಶ್ರೇಷ್ಠತೆ ಮತ್ತು ಪಾರದರ್ಶಕತೆಗೆ ಮಂತ್ರಾಲಯ ಶ್ರೀಗಳ ಕರೆ

ಸನಾತನ ಧರ್ಮದ ಶ್ರೇಷ್ಠತೆ ಮತ್ತು ಪಾರದರ್ಶಕತೆಗೆ ಮಂತ್ರಾಲಯ ಶ್ರೀಗಳ ಕರೆ

ಬಿಸಿಸಿಐಗೆ ಸ್ಪಾನ್ಸರ್ ಶಿಪ್ ಬಿಸಿ: ದುಬಾರಿ ಬೆಲೆಯಿಂದ ಹಿಂದೆ ಸರಿದ ಕಂಪನಿಗಳು!

ಬಿಸಿಸಿಐಗೆ ಸ್ಪಾನ್ಸರ್ ಶಿಪ್ ಬಿಸಿ: ದುಬಾರಿ ಬೆಲೆಯಿಂದ ಹಿಂದೆ ಸರಿದ ಕಂಪನಿಗಳು!

ಕರ್ನಾಟಕದಲ್ಲಿ ನಕಲಿ ‘ಪನೀರ್’ ಮಾರಾಟಕ್ಕೆ ಒಂದು ವರ್ಷ ಬ್ರೇಕ್: ಸರ್ಕಾರದ ದಿಟ್ಟ ಕ್ರಮ

ಕರ್ನಾಟಕದಲ್ಲಿ ನಕಲಿ ‘ಪನೀರ್’ ಮಾರಾಟಕ್ಕೆ ಒಂದು ವರ್ಷ ಬ್ರೇಕ್: ಸರ್ಕಾರದ ದಿಟ್ಟ ಕ್ರಮ

ಚಾಮರಾಜನಗರ ಎನ್‌*ಕೌಂಟರ್ ಪ್ರಕರಣ: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ .

ಚಾಮರಾಜನಗರ ಎನ್‌*ಕೌಂಟರ್ ಪ್ರಕರಣ: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ .

ವಾಹನ ಸವಾರರಿಗೆ ಬಿತ್ತು ಬೆಲೆ ಏರಿಕೆ ಬಿಸಿ: ಕರ್ನಾಟಕದಲ್ಲಿ PUC ಮಾಲಿನ್ಯ ತಪಾಸಣೆ ದರ ಹೆಚ್ಚಳ!

ವಾಹನ ಸವಾರರಿಗೆ ಬಿತ್ತು ಬೆಲೆ ಏರಿಕೆ ಬಿಸಿ: ಕರ್ನಾಟಕದಲ್ಲಿ PUC ಮಾಲಿನ್ಯ ತಪಾಸಣೆ ದರ ಹೆಚ್ಚಳ!