ನಟಿ ರಮ್ಯಾ ಬಳಿಕ ಸೋನು ಶೆಟ್ಟಿಗೂ ಬಂತು ಅಶ್ಲೀಲ ಕಮೆಂಟ್ಸ್.

ಅಭಿಮಾನದ ಹೆಸರಲ್ಲಿ ರಮ್ಯಾಗೆ ಚುಚ್ಚಿದ ಅಶ್ಲೀಲ ಮೆಸೆಜ್​ಗಳ ಈಟಿ ಈಗ ಮತ್ತೊಬ್ಬ ಮಾಡೆಲ್ ಒಬ್ಬರತ್ತ ತಿರುಗಿವೆ. ರಮ್ಯಾ ನಂತರ ಮಾಡೆಲ್​​ ಒಬ್ಬರಿಗೆ ಅದೆ ರೀತಿಯ ಕಿರುಕುಳ ಶುರುವಾಗಿದೆ ಅಂತ ಆ ಮಾಡೆಲ್​ ಆರೋಪಿಸಿದ್ದಾರೆ.

ಅಭಿಮಾನದ ಹೆಸರಲ್ಲಿ ರಮ್ಯಾಗೆ ಚುಚ್ಚಿದ ಅಶ್ಲೀಲ ಮೆಸೆಜ್​ಗಳ ಈಟಿ ಈಗ ಮತ್ತೊಬ್ಬ ಮಾಡೆಲ್ ಒಬ್ಬರತ್ತ ತಿರುಗಿವೆ. ಜಾಮೀನು ಸಿಕ್ಕರೆ ಸಾಕು ದೇವರೇ ಅಂತ ದರ್ಶನ್​ ಅಂಡ್ ಗ್ಯಾಂಗ್​ ಕೋರ್ಟ್​ಗಳ ಸುತ್ತಾ ಅಲೆದಾಡ್ತಿದ್ರೆ, ಇತ್ತ ಅಶ್ಲೀಲ ಪದಗಳಿಂದ ಸೋಷಿಯಲ್​ ಮೀಡಿಯಾದಲ್ಲಿ ಕಂಟಕ ಹೆಚ್ಚಾಗ್ತಿದೆ. ರಮ್ಯಾ ನಂತರ ಮಾಡೆಲ್​​ ಒಬ್ಬರಿಗೆ ಅದೆ ರೀತಿಯ ಕಿರುಕುಳ ಶುರುವಾಗಿದೆ ಅಂತ ಆ ಮಾಡೆಲ್​ ಆರೋಪಿಸಿದ್ದಾರೆ.

https://youtu.be/3z6lK4bu4F4?si=WrYgYHV1zerXedbqಪಕ್ಷ ಅಧಿಕಾರಕ್ಕೆ ತರಲು 5 ವರ್ಷ ಕಷ್ಟ ಪಟ್ಟಿದ್ದು ನಾನು, SM ಕೃಷ್ಣ CM ಆದ್ರು : ಮಲ್ಲಿಕಾರ್ಜುನ ಖರ್ಗೆ

ಸೋನು ಶೆಟ್ಟಿ ಇನ್​ಸ್ಟಾಗ್ರಾಮ್​ನಲ್ಲಿ ತನ್ನ ಹಾಟ್​ ಹಾಟ್​ ಲುಕ್ ಮೂಲಕವೇ ಸಾವಿರಾರು ಫಾಲೋವರ್ಸ್​ ಹೊಂದಿರೋ ರೂಪದರ್ಶಿ ಕಮ್ ಡಿಜಿಟಲ್ ಕ್ರಿಯೇಟರ್. ಅಷ್ಟೇ ಅಲ್ಲ, ಸೋನು ಶೆಟ್ಟಿ ಅಪ್ಪಟ ಕಿಚ್ಚ ಸುದೀಪ್ ಅಭಿಮಾನಿ ಅಂತಾ ಹೇಳಿಕೊಳ್ತಾರೆ. ಇಂತಹ ಸೋನು ಶೆಟ್ಟಿಗೆ ಇತ್ತೀಚೆಗೆ ದರ್ಶನ್​ ಅಭಿಮಾನಿಗಳಿಂದ ಅಶ್ಲೀಲ ಸಂದೇಶಗಳು ಹೆಚ್ಚಾಗ್ತಿವೆ ಅಂತಾ ಈಕೆಯೂ ಸಿಡಿದೆದ್ದು ನಿಂತಿದ್ದಾರೆ.

3 ದಿನಗಳಿಂದ ಅಶ್ಲೀಲವಾದ ಕಮೆಂಟ್ಸ್​ ಮಾಡ್ತಿದ್ದಾರೆ. ಅವರ ಪದಗಳಲ್ಲಿ ಅಶ್ಲೀಲತೆ ಅದೆಷ್ಟರ ಮಟ್ಟಿಗಿದೆ ಅಂದ್ರೆ, ಅದನ್ನ ನೋಡೋದಕ್ಕೂ ಆಗ್ತಿಲ್ಲ..ಅಷ್ಟೇ ಅಲ್ಲ…ನಾನು ಕಿಚ್ಚ ಸುದೀಪ್ ಅಭಿಮಾನಿಯಾಗಿರೋದ್ರಿಂದ ನನಗೆ ಈ ಥರಾ ಹಿಂಸೆ ಮಾಡ್ತಿದ್ದಾರೆ ಅನ್ನೋದು ಸೋನು ಶೆಟ್ಟಿಯ ಗಂಭೀರ ಆರೋಪ ಆಗಿದೆ.

ದರ್ಶನ್​ ಅಭಿಮಾನಿಗಳು ಸುದೀಪ್​ರನ್ನ ಟ್ರೋಲ್​ ಮಾಡ್ತಿದ್ರಂತೆ. ಅದನ್ನ ನೋಡೋದಕ್ಕಾಗದೇ, ಸೋನು ಅವರ ವಿರುದ್ಧ ರಿಯಾಕ್ಟ್​ ಮಾಡಿದ್ದಾರೆ. ಅವ್ರಿಗೆ ತಕ್ಕ ಪಾಠ ಕಲಿಸಲೇಬೇಕು ಅಂತಾ ಒಂದು ವಿಡಿಯೋ ಮಾಡಿ ಹಾಕಿದ್ದಾರೆ. ದರ್ಶನ್​ ಹಾಗೂ ಅವರ ಫ್ಯಾನ್ಸ್ ಇಷ್ಟ ಆಗಲ್ಲ. ಅವರು ರೌಡಿ ಆಗಬೇಕಿತ್ತು. ಅಪ್ಪಿ-ತಪ್ಪಿ ಹೀರೋ ಆಗಿದ್ದಾರೆ. ಅದುವೇ ಪ್ರಾಬ್ಲಂ. ಅವರ ಫ್ಯಾನ್ಸ್ ಕೂಡ ಹಾಗೆಯೇ ಇದ್ದಾರೆ. ಅವರ ಫ್ಯಾನ್ಸ್​ಗೆ ಬುದ್ಧಿ ಕಲಿಸಬೇಕು ಅಂತೆಲ್ಲಾ ಆ ವಿಡಿಯೋದಲ್ಲಿ ಸೋನು ಹೇಳಿದ್ದರು. ಅದ್ಯಾವಾಗ ದರ್ಶನ್​ ಫ್ಯಾನ್ಸ್​ನ ಹಿಯಾಳಿಸಿ ಈಕೆಯೂ ಟ್ರೋಲ್​ ಮಾಡೋದಕ್ಕೆ ಶುರುಮಾಡಿದ್ರೋ, ಈಕೆಯ ವಿರುದ್ಧ ಮತ್ತಷ್ಟು ಅಶ್ಲೀಲ ಪದಗಳ ದಾಳಿ ನಡೆಸಲಾಗಿದೆ. ತಾಯಿ ಬಗ್ಗೆ ಮಾತನಾಡಿದ್ದಾರೆ. ಅದ್ಯಾವಾಗ ತಾಯಿ ಬಗ್ಗೆ ಮಾತನಾಡೋದನ್ನ ಸಹಿಸಿಕೊಳ್ಳೋದಕ್ಕೆ ಸಾಧ್ಯವಾಗ್ಲಿಲ್ವೋ.. ಮತ್ತೆ ಸೋನು ಒಂದು ವಿಡಿಯೋ ಮಾಡಿದ್ದಳು. ನಾನ್​ ನಿಮಗೆ ಠಕ್ಕರ್ ಕೊಡ್ತಾನೆ ಇರ್ತೀನಿ ಏನ್​ ಮಾಡ್ತೀರಾ ಮಾಡ್ಕೊಳ್ಳಿ ಅಂತಾನೇ ಹೇಳಿ ಮತ್ತೊಂದು ವಿಡಿಯೋ ಮಾಡಿ ಹಾಕಿದ್ದಾರೆ.

Related Posts

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 3 ದಶಕಗಳೇ ಕಳೆದಿವೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ವಿವಾದ ಮಾತ್ರ ನಟಿ ಬಿಂದಿಯಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ನಡುವೆ ದೊಡ್ಡ…

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ವಿಜಯಪುರ ಜಿಲ್ಲೆಯ ಭೀಮಾ ನದಿ ತೀರದಲ್ಲಿ ಮತ್ತೆ ನೆತ್ತರ ಹರಿದಿದ್ದು, ಭೀಕರ ಸಾಮೂಹಿಕ ಹತ್ಯಾಕಾಂಡ ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದೆ. ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಐವರು ಹಾಗೂ ಅವರ ಸ್ನೇಹಿತ ಸೇರಿದಂತೆ ಒಟ್ಟು ಆರು ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡು…

You Missed

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

3 ದಶಕಗಳ ಬಳಿಕ  ನಟಿ ಬಿಂದ್ಯಾ  ಕ್ಷಮೆ ಕೇಳಿದ್ದೇಕೆ?

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಭೀಮಾ ನದಿ ತೀರದಲ್ಲಿ  ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!