ಮೈಸೂರುನಲ್ಲಿ ‘ಅಕ್ಕ ಕೆಫೆ’ ಈ ವಾರದಿಂದಲೇ ಆರಂಭ ।

ಬಡ, ಮಧ್ಯಮ ವರ್ಗದವರಿಗೆ ಗುಣಮಟ್ಟದ ಶುಚಿ-ರುಚಿಯಾದ ಪೌಷ್ಟಿಕ ಆಹಾರವನ್ನು ನೆನೆಟುಕುವ ದರದಲ್ಲಿ ನೀಡುವ ಉದ್ದೇಶದಿಂದ ನಿರ್ಮಾಣಗೊಂಡಿರುವ ‘ಅಕ್ಕ ಕೆಫೆ’ ಮಾರ್ಚ್ ಮೊದಲ ವಾರದಲ್ಲಿ ಪ್ರಾರಂಭವಾಗಲಿದೆ.ಮಹಿಳಾ ಸ್ವಸಹಾಯ ಸಂಘಗಳಿಗೆ ಸಂಪೂರ್ಣ ಹೊಣೆ
ಬಡವರು, ಮಧ್ಯಮ ವರ್ಗದವರಿಗೆ ಹೆಚ್ಚು ಅನುಕೂಲ ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ 6 ಅಕ್ಕ ಕೆಫೆಗಳನ್ನು ಆರಂಭಿಸಲು ಸ್ಥಳ ನಿಗದಿಪಡಿಸಲಾಗಿದ್ದು, ಈ ಪೈಕಿ 3 ಅಕ್ಕ ಕೆಫೆಗಳು ನಗರ ವ್ಯಾಪ್ತಿಯಲ್ಲಿ ಆರಂಭವಾಗುತ್ತಿವೆ. ಸದ್ಯ ಮೈಸೂರಿನ ಜಿಪಂ ಕಚೇರಿ ಹಿಂಭಾಗ ನಿರ್ಮಾಣ ಗೊಂಡಿರುವ ‘ಅಕ್ಕ ಕೆಫೆ’ ಮಾರ್ಚ್ ಮೊದಲ ವಾರದಲ್ಲಿ ಉದ್ಘಾಟನೆಗೊಳ್ಳಲಿದ್ದು, ತಾಲೂಕು ಕಚೇರಿ ಹಿಂಭಾಗ ಹಾಗೂ ಹುಣಸೂರು ತಾಲೂಕಿನಲ್ಲಿ ನಂತರ ಪ್ರಾರಂಭವಾಗಲಿದೆ. ಮುಂದಿನ ದಿನಗಳಲ್ಲಿ ಬೇಡಿಕೆಗೆ ತಕ್ಕಂತೆ ಅಕ್ಕ ಕೆಫೆಯನ್ನು ಆರಂಭಿಸಲು ಚಿಂತಿಸಲಾಗಿದೆ.

ರಾಜ್ಯ ಸರಕಾರದ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ‘ಅಕ್ಕ ಕೆಫೆ’ಯು ಮಹಿಳಾ ಸ್ವಸಹಾಯ ಸಂಘಗಳಿಗೆ ಆಹಾರ ಪೂರೈಕೆ ಕ್ಷೇತ್ರದಲ್ಲಿ ಸುಸ್ಥಿರ ಜೀವನೋಪಾಯಪಡಿಸಿಕೊಂಡು ಚಟುವಟಿಕೆಯನ್ನು ಒದಗಿಸುವುದಾಗಿದೆ. ಮಹಿಳೆಯರೇ ತಮ್ಮ ಜ್ಞಾನ ಮತ್ತು ಕೌಶಲಗಳನ್ನು ಅಭಿವೃದ್ಧಿ ಜೀವನೋಪಾಯದೊಂದಿಗೆ ಸಬಲೀಕರಣದ ಬದುಕನ್ನು ರೂಪಿಸಿಕೊಳ್ಳಲು ನೆರವಾಗುವಂತೆ ಮಹಿಳಾ ಸ್ವಸಹಾಯ ಸಂಘಗಳಿಗೆ ಸಂಪೂರ್ಣ ಹೊಣೆ ನೀಡಲಾಗಿದೆ.
ಅಕ್ಕ ಕೆಫೆಯು ಗ್ರಾಹಕರಿಗೆಬೆಳಗ್ಗೆಯಿಂದ ರಾತ್ರಿ ತನಕ ಗುಣಮಟ್ಟದ ತಿಂಡಿ, ಊಟವನ್ನು ಒದಗಿಸುವ ಜತೆಗೆ ಮಹಿಳಾ ಸದಸ್ಯರೇ ನಿರ್ವಹಿಸಬೇಕು.
ನಗರದ ಜಿಪಂ ಕಚೇರಿ ಹಿಂಭಾಗ ನಿರ್ಮಿಸಿರುವ ಅಕ್ಕ ಕೆಫೆ ಉದ್ಘಾಟನೆಗೆ ಸಜ್ಜಾಗಿದೆ.

ಮೈಸೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಬೀಜಗನಹಳ್ಳಿ ಗ್ರಾಪಂನ ಹಾಲಗೆರೆ ಬಳಿ.
ಬೆಂಗಳೂರು-ಮಂಗಳೂರು ರಸ್ತೆಯ ಕಂಪಲಾಪುರ ಕೆಎಸ್‌ಆರ್‌ಟಿಸಿ ನಿಲ್ದಾಣ ಹತ್ತಿರ.
ಬೆಟ್ಟದಪುರ ಶ್ರೀಶಾಂತವಿರಾಮ ದೇವಸ್ಥಾನದ ಸಮೀಪ.ಅಕ್ಕ ಕೆಫೆ ಉದ್ಘಾಟನೆಗೆ ಸಜ್ಜಾಗಿದೆ.
ಊಟದ ಮೆನು ಏನು?
ಬೆಳಗ್ಗೆ ಇಡ್ಲಿ-ವಡೆ, ಖಾರಾಬಾತ್, ಕೇಸರಿಬಾತ್, ಪೊಂಗಲ್, ಮಧ್ಯಾಹ್ನ ಮಿನಿ ಮಿಲ್ಸ್, ಚಪಾತಿ, ಮುದ್ದೆ ಊಟ ಇರುತ್ತದೆ.ಧರಿಸಿಕೊಂಡು ಅಡುಗೆ ನಿರ್ವಹಣೆ ಮಾಡಬೇಕಿದೆ. ಸಂಘದ ಲೇಬಲ್ ಇರುವ ಉಡುಪನ್ನು ಸಿದ್ಧಪಡಿಸುವುದರೊಂದಿಗೆ ನಿರ್ವಹಣೆ ಮಾಡಬೇಕಿದೆ.

ಸರಕಾರದ ಅನುದಾನ: ಅಕ್ಕ ಕೆಫೆ ಸ್ಥಾಪನೆಗೆಆಯ್ಕೆಯಾಗುವ ಸ್ಥಳದ ಒಡೆತನ ಹಾಗೂ ಸ್ವಸಹಾಯ ಸಂಘಗಳ ನಡುವೆ ಒಡಂಬಡಿಕೆ ಮಾಡಿಕೊಳ್ಳಬೇಕಿದ್ದು, ಸರಕಾರದ ಅನುದಾನದಲ್ಲೇ ಸಂಪೂರ್ಣ ಮೂಲ ಸೌಕರ್ಯವನ್ನು ಒದಗಿಸಲಾಗುತ್ತದೆ. ಪ್ರೀಮಿಯಂ ರೆಸ್ಟೋರೆಂಟ್ಗೆ ಸರಕಾರ 15 ಲಕ್ಷ ರೂ., ಕ್ಲಾಸಿಕ್ ಕಿರು ಅಕ್ಕಸರಕಾರ ‘ಅಕ್ಕ ಕೆಫೆ’ ಆರಂಭ ಮಾಡುವ ಬಗ್ಗೆ ಕಳೆದ ಬಜೆಟ್‌ ನಲ್ಲಿ ಘೋಷಣೆ ಮಾಡಿತ್ತು.ಇದೀಗ ಮೂರು ಕಡೆ ಶುರು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾರ್ವನಿಕರು ಹೆಚ್ಚು ಸೇರುವ ಸ್ಥಳದಲ್ಲಿ ಈ ಕೆಫೆ ಆರಂಭಿಸಲಾಗುವುದು.ಇಂದಿರಾ ಕ್ಯಾಂಟೀನ್‌ಗೂ,ಅಕ್ಕ ಕೆಫೆಗೂ ವ್ಯತ್ಯಾಸ ಇದೆ.ಎಸ್.ಯುಕೇಶ್ ಕುಮಾರ್, ಜಿಪಂ ಸಿಇಒ ಹೇಳಿದ್ದಾರೆ.

ಕೆಫೆಗೆ 7 ಲಕ್ಷ ರೂ. ಅನುದಾನ ನೀಡಲಾಗುತ್ತದೆ. ಕೆಫೆಗೆ ಸಿಲಿಂಡರ್, ಸ್ಟವ್, ಮಿಕ್ಸಿ, ಗೈಂಡರ್, ರೆಫ್ರಿಜರೇಟರ್ ಬೇಕಾದ ವಸ್ತುಗಳಾದ ಪಾತ್ರೆಗಳು, ಓವನ್ಸ್, ಗ್ಯಾಸ್ ಗಳನ್ನು ಸ್ವಸಹಾಯ ಸಂಘದ ಸದಸ್ಯರು ಖರೀದಿಸಬೇಕು.ಉತ್ತಮ ಗುಣಮಟ್ಟದ ತಿಂಡಿ, ಅಕ್ಕ ಕೆಫೆಯು ಗ್ರಾಹಕರಿಗೆ ಬೆಳಿಗ್ಗೆಯಿಂದ ರಾತ್ರಿವರೆಗೆ ಒದಗಿಸಲಿದ್ದು, ಈ ಕೆಫೆಯನ್ನು ಸಂಪೂರ್ಣ ಮಹಿಳಾ ಊಟವನ್ನು ಸದಸ್ಯರೇ ನಿರ್ವಹಣೆ ಮಾಡಬೇಕು. ಸಂಘದ ಲೇಬಲ್ ತಯಾರಿಸುವುದು, ಸಪ್ಲೆಯರ್, ಕ್ಲೀನಿಂಗ್ ಮತ್ತಿತರ ವುಳ್ಳ ಉಡುಪುಗಳನ್ನು ಧರಿಸಿಕೊಂಡು ಅಡುಗೆ ಕಾರ್ಯವನ್ನು ನಿರ್ವಹಿಸಬೇಕು.

  • Related Posts

    ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

      ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

    ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

      ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ ! ಆದಿಚುಂಚನಗಿರಿ ಮಠದ ಶಿಕ್ಷಣ ಟ್ರಸ್ಟ್‌ಗೆ ಸೇರಿದ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆರು ಎಕರೆ ಭೂಮಿ ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ…

    You Missed

    ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

    ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

    ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

    ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

    ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

    ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

    ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

    ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

    ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

    ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

    ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

    ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!