ಬಾಲ್ಯವಿವಾಹವಾಯ್ತು, ಈಗ ಆರೋಗ್ಯ-ಕುಟುಂಬ ಅಭಿವೃದ್ಧಿ ಇಲಾಖೆಗೆ ಮತ್ತೊಂದು ಸಮಸ್ಯೆ..ಬಾಲ ಗರ್ಭಿಣಿಯರು!

ಮೈಸೂರು :- ಬಾಲ್ಯವಿವಾಹ ಕಾನೂನುಬಾಹಿರ, ಬಾಲ್ಯವಿವಾಹ ಮಾಡಿದ ಬಾಲಕಿಯ ಪೋಷಕರು, ಬಾಲಕಿಯನ್ನು ವಿವಾಹವಾದ ವ್ಯಕ್ತಿ, ಆತನ ಪೋಷಕರು ಹಾಗೂ ಸಹಕರಿಸಿದ ಎಲ್ಲರಿಗೂ ಈಗ ಜೈಲು ಶಿಕ್ಷೆ ಗ್ಯಾರಂಟಿ.

ಬಾಲ್ಯವಿವಾಹ ತಡೆಯಲು ಸರ್ಕಾ ರವು ಇಂತಹ ಕಟ್ಟುನಿಟ್ಟಿನ ಕಾನೂನನ್ನು ಜಾರಿಗೊಳಿಸಿದೆ. ಅಲ್ಲದೆ ಬಾಲ್ಯವಿವಾಹ ತಡೆ ಬಗ್ಗೆ ಸತತವಾಗಿ ಜಾಗೃತಿ ಕಾರ್ಯ ಕ್ರಮಗಳನ್ನು ನಡೆಸುತ್ತಿದೆ. ಆದರೂ ಬಾಲ್ಯವಿವಾಹಗಳ ಸಂಖ್ಯೆಯಂತೂ ಕಡಿ ‘ ಗರ್ಭಿಣಿ’ ಪ್ರಕರಣಗಳೇ ಸಾಕ್ಷಿ.
ಮೈಸೂರು ಜಿಲ್ಲೆಯಲ್ಲಿ 1603 ಬಾಲ ಗರ್ಭಿಣಿಯರು ಪತ್ತೆಯಾಗಿರುವುದು ತೀವ್ರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

 

 

 

 

 

 

 

 

 

ಮೈಸೂರು ಜಿಲ್ಲೆಯಲ್ಲಿ 14ರಿಂದ 15 ವರ್ಷಕ್ಕೊಳಪಟ್ಟ ಐವರು. 15ರಿಂದ 16 ವರ್ಷಕ್ಕೊಳಪಟ್ಟ 15, 16ರಿಂದ 17 ವರ್ಷಕ್ಕೊಳಪಟ್ಟ 23, 17ರಿಂದ 18 ವರ್ಷಕ್ಕೊಳಪಟ್ಟ 124 ಮತ್ತು 18 ರಿಂದ 19 ವರ್ಷಕ್ಕೊಳಪಟ್ಟ 1436 ಸೇರಿ ದಂತೆ ಒಟ್ಟು 1603 ಬಾಲಗರ್ಭಿಣಿ ಯರು ಇರುವುದು ಸಂತಾನೋತ್ಪತ್ತಿ ಹಾಗೂ ಮಕ್ಕಳ ಆರೋಗ್ಯ ಅಂಕಿ-ಅಂಶ ತಿಳಿಸಿದೆ.

ಹಾಸನ ಜಿಲ್ಲೆಯಲ್ಲಿ 14ರಿಂದ 15, ವರ್ಷಕ್ಕೊಳಪಟ್ಟ ಇಬ್ಬರು, 15ರಿಂದ 16 ವರ್ಷಕ್ಕೊಳಪಟ್ಟ 7, 16ರಿಂದ 17 ವರ್ಷ ಕ್ಕೊಳಪಟ್ಟ 18, 17ರಿಂದ 18 ವರ್ಷಕ್ಕೊಳ ಪಟ್ಟ 136, 18ರಿಂದ 19 ವರ್ಷಕ್ಕೊಳಪಟ್ಟ 924 ಸೇರಿದಂತೆ 1087 ಬಾಲಗರ್ಭಿಣಿ ಯರಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ 15ರಿಂದ 16 ವರ್ಷಕ್ಕೊಳಪಟ್ಟ ನಾಲ್ವರು, 16ರಿಂದ 17 ವರ್ಷಕ್ಕೊಳ ಪಟ್ಟ 23, 17ರಿಂದ 18 ವರ್ಷಕ್ಕೊಳಪಟ್ಟ 107, 18ರಿಂದ 19 ವರ್ಷಕ್ಕೊಳಪಟ್ಟ 814 ಸೇರಿದಂತೆ 948 ಬಾಲಗರ್ಭಿಣಿಯರಿದ್ದಾರೆ.

ಕೊಡಗು ಜಿಲ್ಲೆಯಲ್ಲಿ 14ರಿಂದ 15 ವರ್ಷ ಕ್ಕೊಳಪಟ್ಟ ಓರ್ವ, 15ರಿಂದ 16 ವರ್ಷ ಕ್ಕೊಳಪಟ್ಟ 11, 16ರಿಂದ 17 ವರ್ಷಕ್ಕೊಳ ಪಟ್ಟ 10, 17ರಿಂದ 18 ವರ್ಷಕ್ಕೊಳಪಟ್ಟ 79, 18ರಿಂದ 19 ವರ್ಷಕ್ಕೊಳಪಟ್ಟ 318 ಸೇರಿದಂತೆ 424 ಬಾಲಗರ್ಭಿಣಿಯರಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ 14 ರಿಂದ 15 ವರ್ಷಕ್ಕೊಳಪಟ್ಟ ಓರ್ವ, 15ರಿಂದ 16 ವರ್ಷಕ್ಕೊಳಪಟ್ಟ ಓರ್ವ, 16ರಿಂದ 17 ವರ್ಷಕ್ಕೊಳ ಪಟ್ಟ 9, 17ರಿಂದ 18 ವರ್ಷಕ್ಕೊಳಪಟ್ಟ 25, 18ರಿಂದ 19 ವರ್ಷಕ್ಕೊಳಪಟ್ಟ 380 ಸೇರಿದಂತೆ 416 ಬಾಲ ಗರ್ಭಿಣಿಯರಿದ್ದಾರೆ.

 

 

 

 

 

 

 

 

ಬಾಲಕಿಯರು ಗರ್ಭಿಣಿಯಾದಾಗ ಅನ್ಯಮಾರ್ಗವಿಲ್ಲದೆ ಆಸ್ಪತ್ರೆಗಳಿಗೆ ಬರುವು ದರಿಂದ ಆರೋಗ್ಯ ಇಲಾಖೆ ಗಮನಕ್ಕೆ ಈ ಪ್ರಕರಣಗಳು ಸಹಜವಾಗಿ ಬರುತ್ತಿವೆ. ಸದರಿ ಇಲಾಖೆಯು ಬಾಲಗರ್ಭಿಣಿ ಯರ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಮಾಹಿತಿಯನ್ನಷ್ಟೇ ಪೊಲೀಸ್ ಇಲಾಖೆಗೆ ರವಾನಿಸುತ್ತದೆ. ಆದರೆ ಅಪ್ರಾಪ್ತ ವಯಸ್ಸಿ ನಲ್ಲಿ ಗರ್ಭ ಧರಿಸುವ ಬಾಲಕಿಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಆರೋಗ್ಯ ಇಲಾಖೆಯು ಬಾಲಗರ್ಭಿಣಿಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ, ಅವರಿಗೆ ಹೆರಿಗೆಯಾಗುವವರೆಗೂ ಅಗತ್ಯವಿರುವ ಎಲ್ಲಾ ರೀತಿಯ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ. ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲೆಯ ಯಾವುದೇ ಆಸ್ಪತ್ರೆಗೆ ಬಾಲಗರ್ಭಿಣಿಯರು ಬಂದರೆ, ಅವರನ್ನು ಮಕ್ಕಳ ಆಸ್ಪತ್ರೆಯಾದ ಚೆಲುವಾಂಬ ಆಸ್ಪತ್ರೆಗೆ ರವಾನಿಸಲಾಗುತ್ತದೆ. ಜೊತೆಗೆ ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೂ ಮಾಹಿತಿ ನೀಡಲಾಗುತ್ತದೆ.

 

 

 

 

 

 

 

 

 

ಈ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಗಳು ಬಾಲ ಗರ್ಭಿಣಿಯರಿಂದ ಮಾಹಿತಿ ಪಡೆಯುವು ದಲ್ಲದೇ ಮುಂದಿನ ಕ್ರಮ ವಹಿಸುತ್ತಾರೆ. ಹೆಚ್.ಡಿ.ಕೋಟೆ, ಹುಣಸೂರು ಮುಂತಾದ ತಾಲೂಕುಗಳಲ್ಲಿರುವ ಹಾಡಿಗಳಲ್ಲಿ ಹೆಚ್ಚಿನ ಬಾಲ್ಯವಿವಾಹಗಳು ನಡೆಯುತ್ತವೆ. ಅವರ ಸಂಪ್ರದಾಯದಂತೆ ಚಿಕ್ಕ ವಯಸ್ಸಿನಲ್ಲೇ ರಕ್ತ ಸಂಬಂಧದಲ್ಲೇ ಮದುವೆ ಮಾಡು ವುದು ವಾಡಿಕೆಯಾಗಿ ಬಂದಿದೆ. ಬಾಲ್ಯ ವಿವಾಹ ನಡೆಯುವುದು ಮುಂಚಿತವಾಗಿ ಗೊತ್ತಾದರೆ ಸಂಬಂಧಪಟ್ಟ ಇಲಾಖೆ ಅದನ್ನು ತಡೆಯುತ್ತದೆ. ಆದರೆ ಬಹುತೇಕ ಪ್ರಕರಣಗಳು ಗೊತ್ತಾಗುವುದೇ ಇಲ್ಲ. ಬಾಲಕಿಯರು ಗರ್ಭಿಣಿಯರಾಗಿ ಆಸ್ಪತ್ರೆಗೆ ಬಂದಾಗಲಷ್ಟೇ ಗೊತ್ತಾಗುತ್ತದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

 

 

 

 

 

 

 

 

 

ಆರೋಗ್ಯ ಇಲಾಖೆಯು ಬಾಲ ಗರ್ಭಿಣಿಯರಿಗೆ ಅತ್ಯಾವಶ್ಯಕ ಆರೋಗ್ಯ ಸೇವೆ ನೀಡುವುದರತ್ತ ವಿಶೇಷ ಗಮನ ಹರಿಸುತ್ತದೆ. ಕೆಲವು ಹಳ್ಳಿಗಳಲ್ಲಿ ಬಾಲ್ಯ ವಿವಾಹ ನಡೆಯುವುದು ಗೊತ್ತಾದರೂ ಯಾರೂ ಸಂಬಂಧಪಟ್ಟ ಇಲಾಖೆಗೆ ತಿಳಿಸುವುದಿಲ್ಲ. ಬಾಲಗರ್ಭಿಣಿಯರು ಆಸ್ಪತ್ರೆಗೆ ಬಂದಾಗ ಆರೋಗ್ಯ ಇಲಾಖೆ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸು ವುದೇ ಪ್ರಥಮ ಮಾಹಿತಿಯಾಗಿರುತ್ತದೆ ಎಂದು ತಿಳಿಸಿದ ಈ ಅಧಿಕಾರಿಯು, ಬಾಲ್ಯ ವಿವಾಹವಾಗಿ ಬಾಲಕಿ 20 ವರ್ಷ ಆಗು ವವರೆಗೂ ಗರ್ಭಿಣಿಯಾಗದಿದ್ದರೆ ಆರೋಗ್ಯ ಇಲಾಖೆ ಗಮನಕ್ಕೂ ಕೂಡ ಬಾಲ್ಯ ವಿವಾಹದ ಬಗ್ಗೆ ಮಾಹಿತಿ ಲಭ್ಯವಾಗುವುದಿಲ್ಲ. ಕೆಲವು ವಿದ್ಯಾವಂತ ಹಾಗೂ ಶ್ರೀಮಂತ ಮನೆತನ ಗಳಲ್ಲೇ ಬಾಲ್ಯವಿವಾಹಗಳು ನಡೆಯುತ್ತಿವೆ ಎಂದರು. ಈ ಹಿನ್ನೆಲೆಯಲ್ಲಿ ಬಾಲ್ಯ ವಿವಾಹ ತಡೆಯುವ ಸಲುವಾಗಿ ಆರೋಗ್ಯ ಇಲಾಖೆ ಮಾತ್ರವಲ್ಲದೇ, ಪೊಲೀಸ್ ಇಲಾಖೆ ಹಾಗೂ ನ್ಯಾಯಾಂಗ ಇಲಾಖೆಯೂ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸು ತ್ತಿದ್ದರೂ ಬಾಲ್ಯ ವಿವಾಹ ನಡೆಯುತ್ತಲೇ ಇದೆ ಎಂದು ಅವರು ಹೇಳಿದರು.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

  ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮಅವರು ಉಸಿರಾಟದ ಸಮಸ್ಯೆಯಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರಾಜಕೀಯವಾಗಿ ಸದಾ ಬ್ಯುಸಿಯಾಗಿದ್ದ ದೇವೇಗೌಡರ ಸಂಸಾರದ ಬೆನ್ನೆಲುಬಾಗಿದ್ದ ಗಟ್ಟಿಗಿತ್ತಿ ಇಹಲೋಕ ತ್ಯಜಿಸಿದ್ದಾರೆ. ಕೆಲ ವರ್ಷಗಳಿಂದಲೂ ಉಸಿರಾಟ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಇವರ ಆರೋಗ್ಯದಲ್ಲಿ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!