ಮೀನಿನ ಹೊಟ್ಟೆಯಲ್ಲಿತ್ತು ನಾಗರಹಾವು ! ಸಾರು ಮಾಡಲು ಹೋಗಿ ಶಾಕ್ ಆದ ಮಹಿಳೆ !..

ಕೇರಳದ ಅಲಪ್ಪುಳ ಜಿಲ್ಲೆಯ ಚಾರುಮ್ಮೂಡ್ ಮೂಲದ ಸನೋಜ್​​ಗೆ ಮೀನುಗಾರಿಕೆ ಎಂದರೆ ಬಾಲ್ಯದಿಂದಲೂ ತುಂಬಾನೇ ಇಷ್ಟ. ಮದ್ವೆಯಾದ ನಂತರವೂ ಅವರು ಮೀನುಗಾರಿಕೆ ನಡೆಸಿಕೊಂಡು ಬಂದಿದ್ದಾರೆ. ಕೇರಳದ ಅಲಪ್ಪುಳ ಜಿಲ್ಲೆಯ ಚಾರುಮ್ಮೂಡ್ ಮೂಲದ ಸನೋಜ್​​ಗೆ ಮೀನುಗಾರಿಕೆ ಎಂದರೆ ಬಾಲ್ಯದಿಂದಲೂ ತುಂಬಾನೇ ಇಷ್ಟ. ಮದ್ವೆಯಾದ ನಂತರವೂ ಅವರು ಮೀನುಗಾರಿಕೆ ನಡೆಸಿಕೊಂಡು ಬಂದಿದ್ದಾರೆ.

ಹೊಟ್ಟೆಯಲ್ಲಿ ಏನಿತ್ತು..?
ಅಂತೆಯೇ ಈಗ ಮಳೆಗಾಲ ಬೇರೆ! ಕೆರೆ, ಹೊಳೆಗಳಿಗೆ ಹೋಗಿ ಮೀನು ಹಿಡಿಯುತ್ತಿದ್ದರು. ನಿನ್ನೆ ಸಂಜೆ ಮನೆಯ ಕೆಲಸಗಳನ್ನು ಮುಗಿಸಿ ಕೊಳದಲ್ಲಿ ಮೀನು ಹಿಡಿಯಲು ಹೋಗಿದ್ದರು. ಗಾಳ ಹಾಕಿ ಕೂತಾಗ ಮೀನೊಂದು ಕಚ್ಚಿತ್ತು. ಗಾಳಕ್ಕೆ ಸಿಲುಕಿರೋದು ಪಕ್ಕಾ ಆಗ್ತಿದ್ದಂತೆಯೇ ಎಳೆದಾಗ ಬರೋಬ್ಬರಿ 900 ಗ್ರಾಂ ತೂಕ ಇರುವ ಮುರ್ರೆ ಮೀನು ಬಲೆಗೆ ಬಿದ್ದಿತ್ತು. ಇವತ್ತು ಮೀನು ಊಟ ಮಾಡಬಹುದು ಅಂತಾ ಸನೋಜ್ ಖುಷಿಯಿಂದ​ ಮನೆಗೆ ತಂದಿದ್ದರು.

ಅಂತೆಯೇ ಸನೋಜ್ ಪತ್ನಿ ಸಂಜೆ ಊಟಕ್ಕೆ ಮೀನು ಸ್ವಚ್ಛಗೊಳಿಸಲು ಪ್ರಾರಂಭಿಸಿದ್ದಳು. ಚಾಕುವಿನಿಂದ ಕತ್ತರಿಸುತ್ತಿದ್ದಾಗ ಹೊಟ್ಟೆಯಲ್ಲಿ ಹಾವಿನ ಚರ್ಮದಂಥ ವಸ್ತು ಕಂಡಿದೆ. ಅದು ಏನೆಂದು ನೋಡಲು ಇಡೀ ಹೊಟ್ಟೆ ಬಗೆದಾಗ ಎರಡು ಅಡಿ ಉದ್ದದ ನಾಗರಹಾವು ಸಿಕ್ಕಿದೆ.

ಅದನ್ನು ಹೊರತೆಗೆದು ಎಚ್ಚರಿಕೆಯಿಂದ ನೋಡಿದಾಗ.. ಹಾವಿನ ಚರ್ಮ ಈಗಾಗಲೇ ಕೊಳೆಯುತ್ತಿತ್ತು. ಹಾವಿನ ತಲೆ ಬಹುತೇಕ ಹಾಗೆಯೇ ಇತ್ತು. ತಲೆಯ ಮೇಲಿನ ವಿಶಿಷ್ಟ ಪಟ್ಟೆಗಳನ್ನು ನೋಡಿ.. ಕುಟುಂಬದ ಸದಸ್ಯರು ಅದು ನಾಗರಹಾವು ಎಂದು ಗುರುತಿಸಿದರು. ಈ ದೃಶ್ಯವನ್ನು ನೋಡಿದ ಎಲ್ಲರೂ ಆಘಾತಕ್ಕೊಳಗಾದರು. ಕೊನೆಗೆ ಹೊಲದ ಪಕ್ಕ ಗುಂಡಿ ಅಗೆದು ಹಾವನ್ನು ಹೂಳಿದ್ದಾರೆ. ಮೀನುಗಾರರು ಹೇಳುವಂತೆ, ಮುರ್ರೆ ಮೀನು ಸಣ್ಣ ಹಾವುಗಳನ್ನು ನುಂಗುತ್ತವೆ. ಆದರೆ ನಾಗರಹಾವನ್ನು ತಿಂದಿದ್ದನ್ನು ಇದೇ ಮೊದಲ ಬಾರಿಗೆ ನೋಡಿರೋದು ಎಂದಿದ್ದಾರೆ.

Related Posts

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್ ನೀಡಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ನೇರವಾಗಿ ಭಾರತೀಯರ ಜೇಬಿಗೆ ತಟ್ಟಿದೆ. ನವದೆಹಲಿ: ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ…

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

(ಕೆಎಂಶಿ)-ಉನ್ನತ ‘ಶಿಕ್ಷಣ ವಲಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿ ಸಲು, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯಲು ರೋಹಿತ್ ವೇಮುಲ ಕಾಯಿದೆ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ…

You Missed

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!