ಮೀನಿನ ಹೊಟ್ಟೆಯಲ್ಲಿತ್ತು ನಾಗರಹಾವು ! ಸಾರು ಮಾಡಲು ಹೋಗಿ ಶಾಕ್ ಆದ ಮಹಿಳೆ !..

ಕೇರಳದ ಅಲಪ್ಪುಳ ಜಿಲ್ಲೆಯ ಚಾರುಮ್ಮೂಡ್ ಮೂಲದ ಸನೋಜ್​​ಗೆ ಮೀನುಗಾರಿಕೆ ಎಂದರೆ ಬಾಲ್ಯದಿಂದಲೂ ತುಂಬಾನೇ ಇಷ್ಟ. ಮದ್ವೆಯಾದ ನಂತರವೂ ಅವರು ಮೀನುಗಾರಿಕೆ ನಡೆಸಿಕೊಂಡು ಬಂದಿದ್ದಾರೆ. ಕೇರಳದ ಅಲಪ್ಪುಳ ಜಿಲ್ಲೆಯ ಚಾರುಮ್ಮೂಡ್ ಮೂಲದ ಸನೋಜ್​​ಗೆ ಮೀನುಗಾರಿಕೆ ಎಂದರೆ ಬಾಲ್ಯದಿಂದಲೂ ತುಂಬಾನೇ ಇಷ್ಟ. ಮದ್ವೆಯಾದ ನಂತರವೂ ಅವರು ಮೀನುಗಾರಿಕೆ ನಡೆಸಿಕೊಂಡು ಬಂದಿದ್ದಾರೆ.

ಹೊಟ್ಟೆಯಲ್ಲಿ ಏನಿತ್ತು..?
ಅಂತೆಯೇ ಈಗ ಮಳೆಗಾಲ ಬೇರೆ! ಕೆರೆ, ಹೊಳೆಗಳಿಗೆ ಹೋಗಿ ಮೀನು ಹಿಡಿಯುತ್ತಿದ್ದರು. ನಿನ್ನೆ ಸಂಜೆ ಮನೆಯ ಕೆಲಸಗಳನ್ನು ಮುಗಿಸಿ ಕೊಳದಲ್ಲಿ ಮೀನು ಹಿಡಿಯಲು ಹೋಗಿದ್ದರು. ಗಾಳ ಹಾಕಿ ಕೂತಾಗ ಮೀನೊಂದು ಕಚ್ಚಿತ್ತು. ಗಾಳಕ್ಕೆ ಸಿಲುಕಿರೋದು ಪಕ್ಕಾ ಆಗ್ತಿದ್ದಂತೆಯೇ ಎಳೆದಾಗ ಬರೋಬ್ಬರಿ 900 ಗ್ರಾಂ ತೂಕ ಇರುವ ಮುರ್ರೆ ಮೀನು ಬಲೆಗೆ ಬಿದ್ದಿತ್ತು. ಇವತ್ತು ಮೀನು ಊಟ ಮಾಡಬಹುದು ಅಂತಾ ಸನೋಜ್ ಖುಷಿಯಿಂದ​ ಮನೆಗೆ ತಂದಿದ್ದರು.

ಅಂತೆಯೇ ಸನೋಜ್ ಪತ್ನಿ ಸಂಜೆ ಊಟಕ್ಕೆ ಮೀನು ಸ್ವಚ್ಛಗೊಳಿಸಲು ಪ್ರಾರಂಭಿಸಿದ್ದಳು. ಚಾಕುವಿನಿಂದ ಕತ್ತರಿಸುತ್ತಿದ್ದಾಗ ಹೊಟ್ಟೆಯಲ್ಲಿ ಹಾವಿನ ಚರ್ಮದಂಥ ವಸ್ತು ಕಂಡಿದೆ. ಅದು ಏನೆಂದು ನೋಡಲು ಇಡೀ ಹೊಟ್ಟೆ ಬಗೆದಾಗ ಎರಡು ಅಡಿ ಉದ್ದದ ನಾಗರಹಾವು ಸಿಕ್ಕಿದೆ.

ಅದನ್ನು ಹೊರತೆಗೆದು ಎಚ್ಚರಿಕೆಯಿಂದ ನೋಡಿದಾಗ.. ಹಾವಿನ ಚರ್ಮ ಈಗಾಗಲೇ ಕೊಳೆಯುತ್ತಿತ್ತು. ಹಾವಿನ ತಲೆ ಬಹುತೇಕ ಹಾಗೆಯೇ ಇತ್ತು. ತಲೆಯ ಮೇಲಿನ ವಿಶಿಷ್ಟ ಪಟ್ಟೆಗಳನ್ನು ನೋಡಿ.. ಕುಟುಂಬದ ಸದಸ್ಯರು ಅದು ನಾಗರಹಾವು ಎಂದು ಗುರುತಿಸಿದರು. ಈ ದೃಶ್ಯವನ್ನು ನೋಡಿದ ಎಲ್ಲರೂ ಆಘಾತಕ್ಕೊಳಗಾದರು. ಕೊನೆಗೆ ಹೊಲದ ಪಕ್ಕ ಗುಂಡಿ ಅಗೆದು ಹಾವನ್ನು ಹೂಳಿದ್ದಾರೆ. ಮೀನುಗಾರರು ಹೇಳುವಂತೆ, ಮುರ್ರೆ ಮೀನು ಸಣ್ಣ ಹಾವುಗಳನ್ನು ನುಂಗುತ್ತವೆ. ಆದರೆ ನಾಗರಹಾವನ್ನು ತಿಂದಿದ್ದನ್ನು ಇದೇ ಮೊದಲ ಬಾರಿಗೆ ನೋಡಿರೋದು ಎಂದಿದ್ದಾರೆ.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

  ಒಡಿಶಾದ ಶಿಕ್ಷಾ ಓ ಅನುಸಂಧಾನ ವಿಶ್ವವಿದ್ಯಾಲಯವು ಕರ್ನಾಟಕದ ಹೆಮ್ಮೆಯ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಸನ್ಮಾನಿಸಿದೆ. ನ್ಯಾಯಾಂಗ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆ, ನ್ಯಾಯದ ಪರವಾದ ಬದ್ಧತೆ, ವಿದ್ವತ್ತು ಹಾಗೂ ಮಾನವೀಯ ಮೌಲ್ಯಗಳ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!