ವಿರಾಟ್ ನಿವೃತ್ತಿಯ ಬಳಿಕ ಕೋಟಿ ಕೋಟಿ ಲಾಸ್…..ಬಿಸಿಸಿಐನ ಮುಂದಿನ ನಡೆ ಏನು..?

ಟೀಂ ಇಂಡಿಯಾದ ಈ ಸಮಸ್ಯೆಗೆ ಪರಿಹಾರ ವಿರಾಟ್ ಕೊಹ್ಲಿ ಒಬ್ಬರೇ.. ಅದು ಏನು ಗೊತ್ತಾ..?
ವಿರಾಟ್​​ ಕೊಹ್ಲಿ ಒನ್​ ಡೇ ಫಾರ್ಮೆಟ್​​ಗೂ ಗುಡ್​ ಬೈ ಹೇಳ್ತಾರೆ ಅನ್ನೋ ಸುದ್ದಿಯ ನಡುವೆ ಹೊಸ ಸೂಪರ್​ ಸ್ಟಾರ್​ನ ಹುಟ್ಟು ಹಾಕೋ ಯತ್ನ ಶುರುವಾಗಿದೆ. ಬಿಸಿಸಿಐ ಬಾಸ್​​ಗಳು, ಕೆಲ ಬಿಗ್ಗೆಸ್ಟ್​​ ಬ್ರ್ಯಾಂಡ್​​ಗಳು ಇದೀಗ ಯುವರಾಜನ ಹಿಂದೆ ಬಿದ್ದಿದೆ. ಕಿಂಗ್​ ಕೊಹ್ಲಿ ಪಟ್ಟ ತ್ಯಜಿಸೋಕೆ ಕೌಂಟ್​​ಡೌನ್​ ಶುರುವಾಗಿರೋ ಸಮಯದಲ್ಲಿ ಪ್ರಿನ್ಸ್​​ ಶುಭ್​ಮನ್​ಗೆ ಪಟ್ಟಾಭಿಷೇಕ ನಡೀತಿದೆ.

ಕ್ರಿಕೆಟ್​​ ಲೋಕದ ಸುಲ್ತಾನ ವಿರಾಟ್​ ಕೊಹ್ಲಿ ನಿಧಾನವಾಗಿ ಕ್ರಿಕೆಟ್​ನಿಂದ ದೂರಾಗ್ತಿದ್ದಾರೆ. ಟೆಸ್ಟ್​​, ಟಿ20ಗೆ ಗುಡ್​ ಬೈ ಹೇಳಿರೋ ಕೊಹ್ಲಿ, ಇದೀಗ ಒನ್​ ಡೇ ಫಾರ್ಮೆಟ್​ಗೂ ನಿವೃತ್ತಿ ಘೋಷಿಸ್ತಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಕೊಹ್ಲಿಯ ವಿದಾಯದ ಸುದ್ದಿ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಬೇಸರ ತರಿಸಿದೆ. ನೆಚ್ಚಿನ ಸೂಪರ್​​ ಸ್ಟಾರ್​​ ಇನ್ಮೇಲೆ ಐಪಿಎಲ್​ಗೆ ಮಾತ್ರ ಸೀಮಿತವಾಗಿ ಬಿಡುತ್ತಾ? ಮುಂದಿನ ವಿಶ್ವಕಪ್​​ನಲ್ಲಿ ಕೊಹ್ಲಿ ಆಡಲ್ವಾ? ಎಂಬ ಬೇಸರದ ಪ್ರಶ್ನೆಗಳು ಫ್ಯಾನ್ಸ್​ ಮನದಲ್ಲಿವೆ.

ಬಿಸಿಸಿಐಗೆ ಕೊಹ್ಲಿ ನಿವೃತ್ತಿಯದ್ದೇ ದೊಡ್ಡ ಟೆನ್ಶನ್​
ಒಂದೆಡೆ ಬಿಸಿಸಿಐ ಬಾಸ್​ಗಳು ವಿರಾಟ್​ ಕೊಹ್ಲಿಯನ್ನ ಸೈಡ್​​ಲೈನ್​ ಮಾಡೋ ಸಿದ್ಧತೆ ಮಾಡ್ತಿದ್ದಾರೆ. ಇನ್ನೊಂದೆಡೆ ಇದೇ ಬಿಸಿಸಿಐ ಬಾಸ್​​ಗಳಿಗೆ ಕೊಹ್ಲಿ ಹೋದ್ರೆ ಮುಂದೆ ಏನಪ್ಪಾ​ ಗತಿ ಎಂಬ ಚಿಂತೆಯೂ ಕಾಡ್ತಿದೆ. ಬಿಸಿಸಿಐ ವಲಯದಲ್ಲಿ ಮಾತ್ರವಲ್ಲ. ಜಾಹೀರಾತು ಲೋಕಕ್ಕೂ ಕ್ರಿಕೆಟ್​ನಿಂದ ಕಿಂಗ್​ ದೂರ ಸರೀತಾರೆ ಎಂಬ ಸುದ್ದಿಯನ್ನ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಕಿಂಗ್​ ಕೊಹ್ಲಿ ಕ್ರಿಕೆಟ್​ ಲೋಕವನ್ನ ಮಾತ್ರ ಆಡಿರಲಿಲ್ಲ. ಜಾಹೀರಾತು ಲೋಕಕ್ಕೂ ವಿರಾಟ್​ ಸುಲ್ತಾನನಾಗಿದ್ರು.

ಪ್ರಿನ್ಸ್​​ಗೆ ಡಿಮ್ಯಾಂಡಪ್ಪೋ.. ಡಿಮ್ಯಾಂಡ್​​
ವಿರಾಟ್​​ ಕೊಹ್ಲಿ ದೂರ ಸರೀತಿದಾರೆ ಎಂದ ಬೆನ್ನಲ್ಲೇ ಜಾಹೀರಾತು ಲೋಕ ಹಾಗೂ ಬಿಸಿಸಿಐ ನೆಕ್ಸ್ಟ್​ ಸೂಪರ್​ ಸ್ಟಾರ್​​ನ ಹುಟ್ಟುಹಾಕೋ ಪ್ರಯತ್ನ ಆರಂಭಿಸಿದೆ. ಕೊಹ್ಲಿ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಯುವರಾಜ ಶುಭ್​ಮನ್​ ಗಿಲ್​ಗೆ ಪಟ್ಟಾಭಿಷೇಕ ಮಾಡೋ ಯತ್ನಗಳು ನಡೀತಿವೆ. ಟೆಸ್ಟ್​ ನಾಯಕತ್ವ ನೀಡಿರೋ ಬಿಸಿಸಿಐ ಬಾಸ್​ಗಳು, ಏಕದಿನ, ಟಿ20ಯ ಕ್ಯಾಪ್ಟನ್ಸಿಯನ್ನೂ ನೀಡಿ ಗಿಲ್​ನ ಪವರ್​ಫುಲ್​ ಮಾಡೋ ಯತ್ನಕ್ಕೆ ಕೈ ಹಾಕಿದ್ದಾರೆ. ಅತ್ತ ಜಾಹೀರಾತು ಲೋಕ ಕೂಡ ಅಷ್ಟೇ ಗಿಲ್​ ಹಿಂದೆ ಬಿದ್ದಿದೆ.

ಬೆಂಝ್​​​ ಶೂಟ್​ನಲ್ಲಿ ಮಿರಮಿರ ಮಿಂಚಿದ ಗಿಲ್​
ಇಂಗ್ಲೆಂಡ್​ ಪ್ರವಾಸ ಮುಗಿಸಿ ಭಾರತಕ್ಕೆ ವಾಪಾಸ್ಸಾಗಿರೋ ಗಿಲ್, 2 ದಿನದ ಹಿಂದೆ ದೆಹಲಿಯಲ್ಲಿ ಮರ್ಸಿಡೀಸ್​​ ಬೆಂಝ್​​​​ನ ಇವೆಂಟ್​ನಲ್ಲಿ ಭಾಗಿಯಾಗಿದ್ರು. ಬೆಂಝ್​​​ ಪ್ರಮೋಶನ್ ಇವೆಂಟ್​​ನಲ್ಲಿ​ ಅಕ್ಷರಶಃ ಮಿರಮಿರ ಮಿಂಚಿದ್ರು.

ಮೊನ್ನೆಯ ಇವೆಂಟ್​ ನೋಡಿದವರಿಗೆಲ್ಲಾ ನೆನಪಾಗಿದ್ದು ಕೊಹ್ಲಿ. ಈ ಹಿಂದೆ ವಿರಾಟ್​ ಕೊಹ್ಲಿ ಬೆಂಜ್​​ನ ಅಂಬಾಸಿಡರ್ ಆಗಿದ್ರು. ಕೊಹ್ಲಿ ಕ್ರಿಕೆಟ್​​ನಿಂದ ದೂರಾಗ್ತಿದ್ದಾರೆ ಎಂದ ಬೆನ್ನಲ್ಲೇ ಬೆಂಜ್​ ಗಿಲ್​ ಹಿಂದೆ ಬಿದ್ದಿದೆ.

ಕೊಹ್ಲಿ ಬಳಿಕ ಗಿಲ್​ಗೆ ಗಾಳ ಹಾಕಿದ MRF
MRF ಸ್ಟಿಕರ್​ ಅಂಟಿಸಿದ ಬ್ಯಾಟ್​ ಹಿಡಿದವರೆಲ್ಲಾ ಕ್ರಿಕೆಟ್​ ಲೋಕವನ್ನ ಆಳಿದವರೆ ಸಚಿನ್​ ತೆಂಡುಲ್ಕರ್​, ಎಬಿ ಡಿವಿಲಿಯರ್ಸ್​​, ಬ್ರಯನ್​ ಲಾರಾ, ಸ್ಟೀವ್​ ವಾ. ಈಗ ವಿರಾಟ್​ ಕೊಹ್ಲಿ ಎಲ್ರೂ ದಿಗ್ಗಜರೇ. ಇದೀಗ ಕೊಹ್ಲಿ ಬಳಿಕ ಶುಭ್​ಮನ್​ ಗಿಲ್​ಗೆ ಎಮ್​ಆರ್​​ಎಫ್​ ಗಾಳ ಹಾಕಿದೆ.

ಒಂದರ್ಥದಲ್ಲಿ ಕೊಹ್ಲಿ ಬಳಿಕ ಗಿಲ್​ನ ನೆಕ್ಸ್ಟ್​ ಸೂಪರ್​ ಸ್ಟಾರ್​ ಮಾಡೋ ಯತ್ನಕ್ಕೆ ಮೊದಲು ಕೈ ಹಾಕಿದ್ದೇ MRF. ಆಗಿನ್ನೂ ಬಿಸಿಸಿಐ ವಲಯದಲ್ಲಿ ಗಿಲ್​​ಗೆ ಟೆಸ್ಟ್​ ನಾಯಕತ್ವ ಕಟ್ಟೋ ಚರ್ಚೆ ನಡೀತಿತ್ತು. ಆಗಲೇ ಗಿಲ್​ಗೆ ಗಾಳ ಹಾಕಿ ಎಮ್​​ಆರ್​ಎಫ್​ ಅಗ್ರಿಮೆಂಟ್​ ಮಾಡಿಕೊಳ್ತು. ಅದೇನು ಅದೃಷ್ಟವೋ ಏನೋ ಗೊತ್ತಿಲ್ಲ. MRF ಬ್ಯಾಟ್​​ ಕೈ ಬಂದ ಮೊದಲ ಸರಣಿಯಲ್ಲಿ ಗಿಲ್​ ಮೋಡಿ ಮಾಡಿದ್ರು.

ಆನ್​​ ಫೀಲ್ಡ್​ನಲ್ಲಿ ಕೊಹ್ಲಿ ಅಬ್ಬರಿಸ್ತಿದ್ದ ಕೊಹ್ಲಿ ಫ್ಯಾನ್ಸ್​ಗೆ ಜಬರ್ದಸ್ತ್​​​ ಎಂಟರ್​​ಟೈನ್​ಮೆಂಟ್​ ನೀಡುತ್ತಿದ್ದರು. ತಮ್ಮ ಅಮೋಘ ಆಟದಿಂದ ಟೀಮ್​ ಇಂಡಿಯಾದ ಮ್ಯಾಚ್​ ವಿನ್ನರ್​ ಅನಿಸಿದ್ರು. ಬಿಸಿಸಿಐ ಪಾಲಿಗೆ ಅಷ್ಟೇ ಆದಾಯದ ಮೂಲವಾಗಿದ್ರು. ಜಾಹೀರಾತುದಾರರಿಗಂತೂ ನೆಚ್ಚಿನ ಡಾರ್ಲಿಂಗ್​ ಆಗಿದ್ರು. ಇದೀಗ ಕೊಹ್ಲಿ ಕ್ರಿಕೆಟ್​ನಿಂದ ದೂರಾಗ್ತಿರೋದು ಬಿಸಿಸಿಐ ಗಳಿಕೆಗೆ, ಕೆಲ ಬ್ರ್ಯಾಂಡ್​​ಗಳ ಆದಾಯಕ್ಕೆ ಹೊಡೆತ ಕೊಟ್ಟಿದೆ. ಹೀಗಾಗಿ ಇವರೆಲ್ಲರ ಕಣ್ಣು ಗಿಲ್​ ಮೇಲೆ ಬಿದ್ದಿದೆ. ಈ ಹಿಂದೆ ಸಚಿನ್​ ಸ್ಥಾನವನ್ನ ಕೊಹ್ಲಿ ತುಂಬಿದಂತೆ, ಕೊಹ್ಲಿ ಸ್ಥಾನವನ್ನ ಗಿಲ್​ ತುಂಬ್ತಾರಾ? ಕಾದು ನೋಡೋಣ.

Related Posts

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 3 ದಶಕಗಳೇ ಕಳೆದಿವೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ವಿವಾದ ಮಾತ್ರ ನಟಿ ಬಿಂದಿಯಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ನಡುವೆ ದೊಡ್ಡ…

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ವಿಜಯಪುರ ಜಿಲ್ಲೆಯ ಭೀಮಾ ನದಿ ತೀರದಲ್ಲಿ ಮತ್ತೆ ನೆತ್ತರ ಹರಿದಿದ್ದು, ಭೀಕರ ಸಾಮೂಹಿಕ ಹತ್ಯಾಕಾಂಡ ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದೆ. ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಐವರು ಹಾಗೂ ಅವರ ಸ್ನೇಹಿತ ಸೇರಿದಂತೆ ಒಟ್ಟು ಆರು ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡು…

You Missed

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

3 ದಶಕಗಳ ಬಳಿಕ  ನಟಿ ಬಿಂದ್ಯಾ  ಕ್ಷಮೆ ಕೇಳಿದ್ದೇಕೆ?

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಭೀಮಾ ನದಿ ತೀರದಲ್ಲಿ  ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!