ದರ್ಶನ್ ಸ್ಥಿತಿ ಕಂಡು ಹಳೆಯ ದಿನ ಮೆಲುಕು ಹಾಕಿ ರಮ್ಯಾ ಬೇಸರ.

ದರ್ಶನ್ ಪರಪ್ಪನ ಅಗ್ರಹಾರದ ಅತಿಥಿಯಾಗಿದ್ದಾರೆ. ಕಂಬಿಯೇ ಕೈಲಾಸ, ನಾಲ್ಕು ಗೋಡೆ ನವರಸ, ಸೊಳ್ಳೆಗಳೇ ಸಹಪಾಠಿ ಅದ್ಕೊಂಡು ಮತ್ತೆ ಜೈಲಿನ ದಿನಚರಿ ಆರಂಭಿಸಿದ್ದಾರೆ. ಇತ್ತ ದರ್ಶನ್ ಫ್ಯಾನ್ಸ್​ ವಿರುದ್ಧ ಸಮರ ಸಾರಿದ್ದ ನಟಿ ರಮ್ಯಾ ಆಡಿರೋ ಮಾತು ಅಚ್ಚರಿ ಮೂಡಿಸಿದೆ.

ಗುರುವಾರ ಅಂದ್ರೆ ಆಗಸ್ಟ್​​ 13.. ನಟ ದರ್ಶನ್​ ಬಾಳಲ್ಲಿ ಮತ್ತೊಂದು ಬಿರುಗಾಳಿ ಬೀಸಿದ ದಿನ. ಸುಪ್ರೀಂ ಕೋರ್ಟ್​ ದರ್ಶನ್​ ಬೇಲ್​ಗೆ ಬ್ರೇಕ್ ಹಾಕ್ತಿದ್ದಂತೆ ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್​ಗೆ​ ಮತ್ತೆ ಪರಪ್ಪನ ಅಗ್ರಹಾರದ ದರ್ಶನ ಮಾಡಿಸಿದ್ರು. ಇಂದಿಗೆ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಭರ್ತಿ ಎರಡು ರಾತ್ರಿ ಕಳೆದಂತಾಗಿದೆ. ಮತ್ತದೇ ಮೌನಗಾನ, ಮನೆಯ ಧ್ಯಾನ ದರ್ಶನ್​ನ ಕಾಡಿದೆ.

ಅಂದು ಡಿ ಫ್ಯಾನ್ಸ್​ ವಿರುದ್ಧ ವಾರ್​.. ಇಂದು ದರ್ಶನ್ ಸ್ಥಿತಿಗೆ ಮರುಕ!  ನಟ ದರ್ಶನ್​ ಮತ್ತೆ ಪರಪ್ಪನ ಅಗ್ರಹಾರ ಪಾಲಾದ ಬಗ್ಗೆ ನಟಿ ರಮ್ಯಾ ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ದರ್ಶನ್​ ಫ್ಯಾನ್ಸ್​​ ವಿರುದ್ಧ ಸಮರ ಸಾರಿದ್ದ ಸ್ಯಾಂಡಲ್​ವುಡ್​ ಕ್ವೀನ್ ದರ್ಶನ್​ ಜೊತೆಗಿನ ಹಳೇ ನೆನಪುಗಳನ್ನ ಮೆಲುಕು ಹಾಕಿ ಅವರಿಗೆ ಈ ಸ್ಥಿತಿ ಬರ್ಬಾದಿತ್ತು ಎಂದಿದ್ದಾರೆ.

ದರ್ಶನ್ ಜೈಲು ಸೇರಿದ್ದು ಬೇಸರ! ಜಡ್ಜ್​ಮೆಂಟ್​ ಕೇಳಿದಾಗ ನನಗೆ ಮಿಕ್ಸ್​ ರಿಯಾಕ್ಷನ್​ ಇತ್ತು. ಒಂದು ಕಡೆ ನನಗೆ ಸ್ವಲ್ಪ ಬೇಜಾರು ಆಯ್ತು.. ದರ್ಶನ್ ಅವರ ಜೊತೆ ನಾನು ಕೆಲಸ ಮಾಡಿದೀನಿ, ಅವರು ಗೊತ್ತಿರೋರು. ಸೋ ಎಲ್ಲೋ ಒಂದು ಕಡೆ ನನಗೆ ಬೇಜಾರು ಏನಂದ್ರೆ ಅವರ ಜೀವನ ಹಾಳು ಮಾಡಿಕೊಂಡ್ರು. ಯಾಕಂದ್ರೆ ನಾವು ಶೂಟ್​ ಮಾಡುವಾಗ ಕೆಲವೊಂದು ವಿಚಾರವನ್ನು ಅವರು ಹಂಚಿಕೊಂಡಿದ್ರು. ತಾವು ಸಿನಿಮಾ ಇಂಡಸ್ಟ್ರಿಗೆ ಹೇಗೆ ಬಂದ್ರು ಅನ್ನೋದ್ರ ಬಗ್ಗೆ ಹೇಳಿದ್ದರು. ಏನು ಇಲ್ಲದವ್ರು ಕಷ್ಟಪಟ್ಟು ಇಂಡಸ್ಟ್ರಿಗೆ ಬಂದು.. ಲೈಟ್​ ಬಾಯ್ ಆಗಿ ಕೆಲಸ ಮಾಡಿ ಈ ಮಟ್ಟಕ್ಕೆ ಬೆಳೆದಿದ್ದಾರೆ ಅಂತ ಎಲ್ಲೋ ಒಂದು ಕಡೆ ಹೆಮ್ಮೆನೂ ಇತ್ತು.
ರಮ್ಯಾ, ನಟಿ ಪರಪ್ಪನ ಅಗ್ರಹಾರದ ಪವಿತ್ರಾ ಬಗ್ಗೆಯೂ ರಮ್ಯಾ ಬೇಸರ

ಮತ್ತೆ ಪರಪ್ಪನ ಅಗ್ರಹಾರದ ಪಾಲಾಗಿರೋ ದರ್ಶನ್​ ಗೆಳತಿ ಪವಿತ್ರಾ ಗೌಡ ಬಗ್ಗೆಯೂ ರಮ್ಯಾ ಬೇಸರ ಹೊರಹಾಕಿದ್ದಾರೆ. ಆಕೆಯೂ ಒಬ್ಬ ತಾಯಿ, ಹೀಗಾಗಬಾರದಿತ್ತು ಎಂದಿದ್ದಾರೆ.ಆ್ಯಕ್ಚುಲಿ ನನಗೆ ಪವಿತ್ರಾ ಗೌಡ ಅಂದ್ರೆ ಯಾರು ಅಂತನೇ ಗೊತ್ತಿರಲಿಲ್ಲ. ಈ ರೇಣುಕಾಸ್ವಾಮಿ ಕೇಸ್ ಆದಮೇಲೆಯೇ ನನಗೆ ಗೊತ್ತಾಗಿದ್ದು. ಒಂದು ಕಡೆ ಬೇಜಾರಾಗುತ್ತೆ ಯಾಕಂದ್ರೆ, ಆಕೆಯೂ ಒಬ್ಬಳು ತಾಯಿ.. ಒಬ್ಬಳು ಮಗಳಿದ್ದಾರೆ. ಈ ರೇಣುಕಾಸ್ವಾಮಿ ಅವರ ಫ್ಯಾಮಿಲಿ.. ಯಾಕಂದ್ರೆ ಅವರು ಬಡವರು.. ಆ ಈಗ ಅವರ ಈ ಅವರ ಪತ್ನಿ ಸಹ ಮಗುವನ್ನ ಹೊಂದಿದ್ದಾರೆ. ಸೋ ಅವರಿಗೆ ಎಲ್ಲೋ ಒಂದು ಕಡೆ ಜಸ್ಟೀಸ್​ ಸಿಕ್ಕಿದೆ ಅಂತ ನಾನು ಅನ್ಕೋತಿನಿ.

ಒಟ್ನಲ್ಲಿ ನೀರಿನ ಮೊರೆತಕ್ಕೆ ಬಂಡೆಯೂ ಕರಗುತ್ತೆ ಅನ್ನೋ ಹಾಗೆ ಬ್ಯಾಕ್​ ಟು ಬ್ಯಾಕ್​ ದರ್ಶನ್​ಗೆ ಸಂಕಷ್ಟ ಎದುರಾಗ್ತಿರೋದು ಸದ್ಯ ನಟಿ ರಮ್ಯಾರಿಗೂ ಬೇಸರ ಬರುವಂತೆ ಮಾಡಿದೆ. ದರ್ಶನ್ ಮತ್ತು ದರ್ಶನ್ ಫ್ಯಾನ್ಸ್​ ವಿರುದ್ಧ ರಣಚಂಡಿಯಾಗಿದ್ದ ರಮ್ಯಾ ಏಕಾಏಕಿ ಇಷ್ಟು ಸಾಫ್ಟ್​ ಆಗಿದ್ದು ಅಚ್ಚರಿಯನ್ನೂ ಮೂಡಿಸಿದೆ.

Related Posts

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು

ನಮ್ಮ ಸಮಾಜದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೊಲೆ, ಆಸ್ತಿ ಕಲಹ ಹಾಗೂ ದಾಂಪತ್ಯ ಕಲಹಗಳಂತಹ ಜಟಿಲ ಪ್ರಕರಣಗಳು ನ್ಯಾಯಾಲಯದ ಕಟಕಟೆಯಲ್ಲಿ ವರ್ಷಗಟ್ಟಲೆ ಧೂಳು ಹಿಡಿಯುತ್ತಿವೆ. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಲಕ್ಷಾಂತರ ಪ್ರಕರಣಗಳು ಇಂದಿಗೂ ವಿಲೇವಾರಿಯಾಗದೆ ಬಾಕಿ…

ಯೋಗೇಶ್‌ ಗೌಡ ಹ*ತ್ಯೆ ಪ್ರಕರಣದಲ್ಲಿ ಕೋರ್ಟ್‌ ಮಹತ್ವದ  ತೀರ್ಪು ನೀಡಿದೆ !

ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೇಶ್‌ ಗೌಡರ ಕೊಲೆ ಪ್ರಕರಣದ ಆರೋಪಿ ಆದ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿ ಅವರನ್ನು ಅಪರಾಧಿ ಎಂದು ಜನಪ್ರತಿನಿಧಿಗಳ ಸೆಷನ್ಸ್‌ ನ್ಯಾಯಾಲಯ ಘೋಷಿಸಿದ್ದು . ಶಿಕ್ಷೆಯ ಪ್ರಮಾಣವನ್ನು…

You Missed

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು