ದಸರಾ ಗಜಪಡೆ ಟನ್‌ಗಟ್ಟಲೆ ಆಹಾರ ಪೂರೈಕೆ ! ಆನೆಗಳಿಗೆ ನೀಡೋ ಆಹಾರದ ಪ್ರಮಾಣ ಕೇಳುದ್ರೆ ಶಾಕ್ ಆಗ್ತೀರಾ !

ಮೈಸೂರು: ಈ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಗಜಪಡೆಯ ಆರೋಗ್ಯ ಮತ್ತು ಬಲವನ್ನು ಕಾಪಾಡುವುದು ಅರಣ್ಯ ಇಲಾಖೆಗೆ ದೊಡ್ಡ ಹೊಣೆಗಾರಿಕೆ ಆಗಿದ್ದು, ಆನೆಗಳಿಗೆ ಪೌಷ್ಟಿಕ ಆಹಾರ, ನಿರಂತರ ತಪಾಸಣೆ ಮತ್ತು ಸಮರ್ಪಕ ಕಾಳಜಿ ನೀಡಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ.

ಅರಣ್ಯ ಇಲಾಖೆಯ ವಿವಿಧ ಆನೆ ಶಿಬಿರಗಳಿಂದ ಮೈಸೂರಿಗೆ ಬಂದಿರುವ 14 ಆನೆಗಳಲ್ಲಿ 10 ಗಂಡು ಮತ್ತು 4 ಹೆಣ್ಣು ಆನೆಗಳ ತೂಕ ಹಾಗೂ ಆರೋಗ್ಯವನ್ನು ಈಗಾಗಲೇ ಪರಿಶೀಲಿಸಲಾಗಿದೆ. ಮುಂದಿನ 56 ದಿನಗಳವರೆಗೆ ಪೌಷ್ಟಿಕ ಆಹಾರ, ತರಕಾರಿ, ಒಣಹುಲ್ಲು ಮತ್ತು ಹಸಿರುಹುಲ್ಲುಗಳನ್ನು ಸರಬರಾಜು ಮಾಡುವ ಯೋಜನೆ ರೂಪಿಸಲಾಗಿದೆ.

ಅನೆಗಳಿಗೆ ನೀಡಲಾಗುವ ಆಹಾರದ ವಿವರ:

  • ಹಸಿರು ಹುಲ್ಲು: 170 ಟನ್
  • ಆಲದ ಸೊಪ್ಪು: 340 ಟನ್
  • ಭತ್ತದ ಹುಲ್ಲು: 52 ಟನ್
  • ಕಬ್ಬು: 25 ಟನ್
  • ಭತ್ತ: 225 ಕ್ವಿಂಟಾಲ್
  • ಅಕ್ಕಿ: 75 ಕ್ವಿಂಟಾಲ್
  • ಬೆಲ್ಲ: 525 ಕೆಜಿ
  • ಕುಸುಬಲಕ್ಕಿ, ಗೋಧಿ, ಹೆಸರುಕಾಳು, ಉದ್ದಿನಕಾಳು: ತಲಾ ~28-29 ಕ್ವಿಂಟಾಲ್
  • ಕಡಲೆಕಾಯಿ ಹಿಂಡಿ: 35 ಕ್ವಿಂಟಾಲ್
  • ಅವಲಕ್ಕಿ: 3 ಕ್ವಿಂಟಾಲ್
  • ಈರುಳ್ಳಿ: 1,000 ಕೆಜಿ
  • ಬೆಣ್ಣೆ: 175 ಕೆಜಿ
  • ಉಪ್ಪು: 375 ಕೆಜಿ
  • ತೆಂಗಿನಕಾಯಿ: 3,250

ದಿನಪತ್ರಿ ಆಹಾರ – ತರಕಾರಿ ಸೇರಿ ವಿಶೇಷ ಆಹಾರ:

  • ದಿನಕ್ಕೆ 100 ಕೆಜಿ ತರಕಾರಿ ನೀಡಲಾಗುತ್ತದೆ.
  • ಹಾಪ್ಸ್‌ಕಾಮ್ಸ್‌ ಮೂಲಕ ತರಕಾರಿ ಖರೀದಿಸಲಾಗುತ್ತಿದ್ದು, ಗೆಡ್ಡೆಕೋಸ್‌, ಬೀಟ್ರೂಟ್‌, ಕ್ಯಾರೆಟ್‌, ಸೌತೆಕಾಯಿ, ಸೀಮೆಬದನೆಕಾಯಿ ಇತ್ಯಾದಿ ಬೆರೆಸಿ ವಿಶೇಷ ಆಹಾರ ತಯಾರಿಸಲಾಗುತ್ತದೆ.

ಆನೆಗಳಿಗೆ ತಂಪುಗಾಗಿ ಎಣ್ಣೆ ಬಳಕೆ:

ಪ್ರತಿ ದಿನ ಅರಮನೆಯಿಂದ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನಕ್ಕೆ ತಾಲೀಮಿಗೆ ಹೋಗುವ ಆನೆಗಳಿಗೆ ತಲೆ, ಕಾಲು ಹಾಗೂ ಹಣೆ ಭಾಗಕ್ಕೆ ತಂಪು ನೀಡಲು ಎಣ್ಣೆ ಹಚ್ಚಲಾಗುತ್ತದೆ:

  • ಹರಳೆ ಎಣ್ಣೆ: 200 ಲೀಟರ್
  • ಹೊಂಗೆ ಎಣ್ಣೆ: 200 ಲೀಟರ್
  • ಬೇವಿನ ಎಣ್ಣೆ: 200 ಲೀಟರ್

ಹಗ್ಗಗಳಿಂದ ಗಾಯವಾಗದಂತೆ ತಡೆಯಲು ಮತ್ತು ತಂಪು ನೀಡಲು ಈ ಎಣ್ಣೆಗಳನ್ನು ಬಳಸಲಾಗುತ್ತದೆ.

ಗುಣಮಟ್ಟದ ಆಹಾರ, ಆರೋಗ್ಯದ ಮೇಲ್ವಿಚಾರಣೆ:

ಡಾ. ಐ.ಬಿ. ಪ್ರಭುಗೌಡ (DCF, ಮೈಸೂರು ವನ್ಯಜೀವಿ ವಿಭಾಗ) ಮಾಹಿತಿ ನೀಡಿದಂತೆ:

  • ಎಲ್ಲಾ ಆಹಾರ ಪದಾರ್ಥಗಳು ಪಶುವೈದ್ಯರ ಸಲಹೆಯಂತೆ ನಿಗದಿತ ಪ್ರಮಾಣದಲ್ಲಿ ಖರೀದಿಸಲಾಗುತ್ತಿವೆ.
  • ಟೆಂಡರ್‌ ಮೂಲಕ ನಿಖರ ಗುಣಮಟ್ಟದ ಪೂರೈಕೆದಾರರನ್ನು ಆಯ್ಕೆ ಮಾಡಲಾಗಿದೆ.
  • ಪ್ರತಿ ಆನೆಯ ತೂಕ ಮತ್ತು ಅಗತ್ಯ ಆಧಾರದ ಮೇಲೆ ಆಹಾರದ ಪ್ರಮಾಣ ನಿಗದಿಗೊಳಿಸಲಾಗಿದೆ.
  • ಹಂತ ಹಂತವಾಗಿ ವಿಶೇಷ ಆಹಾರ ನೀಡಲಾಗುತ್ತಿದ್ದು, ಆನೆಗಳು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳಲು ಸಹಾಯ ಮಾಡಲಾಗುತ್ತಿದೆ.
  • ಸದ್ಯಕ್ಕೆ ಎಲ್ಲಾ ಆನೆಗಳು ಆರೋಗ್ಯವಾಗಿದ್ದು, ತಾಲೀಮೆಯಲ್ಲಿ ಸಜೀವವಾಗಿ ಭಾಗವಹಿಸುತ್ತಿವೆ ಎಂದರು.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

  ಒಡಿಶಾದ ಶಿಕ್ಷಾ ಓ ಅನುಸಂಧಾನ ವಿಶ್ವವಿದ್ಯಾಲಯವು ಕರ್ನಾಟಕದ ಹೆಮ್ಮೆಯ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಸನ್ಮಾನಿಸಿದೆ. ನ್ಯಾಯಾಂಗ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆ, ನ್ಯಾಯದ ಪರವಾದ ಬದ್ಧತೆ, ವಿದ್ವತ್ತು ಹಾಗೂ ಮಾನವೀಯ ಮೌಲ್ಯಗಳ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!