ದಸರಾ ಗಜಪಡೆ ಟನ್‌ಗಟ್ಟಲೆ ಆಹಾರ ಪೂರೈಕೆ ! ಆನೆಗಳಿಗೆ ನೀಡೋ ಆಹಾರದ ಪ್ರಮಾಣ ಕೇಳುದ್ರೆ ಶಾಕ್ ಆಗ್ತೀರಾ !

ಮೈಸೂರು: ಈ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಗಜಪಡೆಯ ಆರೋಗ್ಯ ಮತ್ತು ಬಲವನ್ನು ಕಾಪಾಡುವುದು ಅರಣ್ಯ ಇಲಾಖೆಗೆ ದೊಡ್ಡ ಹೊಣೆಗಾರಿಕೆ ಆಗಿದ್ದು, ಆನೆಗಳಿಗೆ ಪೌಷ್ಟಿಕ ಆಹಾರ, ನಿರಂತರ ತಪಾಸಣೆ ಮತ್ತು ಸಮರ್ಪಕ ಕಾಳಜಿ ನೀಡಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ.

ಅರಣ್ಯ ಇಲಾಖೆಯ ವಿವಿಧ ಆನೆ ಶಿಬಿರಗಳಿಂದ ಮೈಸೂರಿಗೆ ಬಂದಿರುವ 14 ಆನೆಗಳಲ್ಲಿ 10 ಗಂಡು ಮತ್ತು 4 ಹೆಣ್ಣು ಆನೆಗಳ ತೂಕ ಹಾಗೂ ಆರೋಗ್ಯವನ್ನು ಈಗಾಗಲೇ ಪರಿಶೀಲಿಸಲಾಗಿದೆ. ಮುಂದಿನ 56 ದಿನಗಳವರೆಗೆ ಪೌಷ್ಟಿಕ ಆಹಾರ, ತರಕಾರಿ, ಒಣಹುಲ್ಲು ಮತ್ತು ಹಸಿರುಹುಲ್ಲುಗಳನ್ನು ಸರಬರಾಜು ಮಾಡುವ ಯೋಜನೆ ರೂಪಿಸಲಾಗಿದೆ.

ಅನೆಗಳಿಗೆ ನೀಡಲಾಗುವ ಆಹಾರದ ವಿವರ:

  • ಹಸಿರು ಹುಲ್ಲು: 170 ಟನ್
  • ಆಲದ ಸೊಪ್ಪು: 340 ಟನ್
  • ಭತ್ತದ ಹುಲ್ಲು: 52 ಟನ್
  • ಕಬ್ಬು: 25 ಟನ್
  • ಭತ್ತ: 225 ಕ್ವಿಂಟಾಲ್
  • ಅಕ್ಕಿ: 75 ಕ್ವಿಂಟಾಲ್
  • ಬೆಲ್ಲ: 525 ಕೆಜಿ
  • ಕುಸುಬಲಕ್ಕಿ, ಗೋಧಿ, ಹೆಸರುಕಾಳು, ಉದ್ದಿನಕಾಳು: ತಲಾ ~28-29 ಕ್ವಿಂಟಾಲ್
  • ಕಡಲೆಕಾಯಿ ಹಿಂಡಿ: 35 ಕ್ವಿಂಟಾಲ್
  • ಅವಲಕ್ಕಿ: 3 ಕ್ವಿಂಟಾಲ್
  • ಈರುಳ್ಳಿ: 1,000 ಕೆಜಿ
  • ಬೆಣ್ಣೆ: 175 ಕೆಜಿ
  • ಉಪ್ಪು: 375 ಕೆಜಿ
  • ತೆಂಗಿನಕಾಯಿ: 3,250

ದಿನಪತ್ರಿ ಆಹಾರ – ತರಕಾರಿ ಸೇರಿ ವಿಶೇಷ ಆಹಾರ:

  • ದಿನಕ್ಕೆ 100 ಕೆಜಿ ತರಕಾರಿ ನೀಡಲಾಗುತ್ತದೆ.
  • ಹಾಪ್ಸ್‌ಕಾಮ್ಸ್‌ ಮೂಲಕ ತರಕಾರಿ ಖರೀದಿಸಲಾಗುತ್ತಿದ್ದು, ಗೆಡ್ಡೆಕೋಸ್‌, ಬೀಟ್ರೂಟ್‌, ಕ್ಯಾರೆಟ್‌, ಸೌತೆಕಾಯಿ, ಸೀಮೆಬದನೆಕಾಯಿ ಇತ್ಯಾದಿ ಬೆರೆಸಿ ವಿಶೇಷ ಆಹಾರ ತಯಾರಿಸಲಾಗುತ್ತದೆ.

ಆನೆಗಳಿಗೆ ತಂಪುಗಾಗಿ ಎಣ್ಣೆ ಬಳಕೆ:

ಪ್ರತಿ ದಿನ ಅರಮನೆಯಿಂದ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನಕ್ಕೆ ತಾಲೀಮಿಗೆ ಹೋಗುವ ಆನೆಗಳಿಗೆ ತಲೆ, ಕಾಲು ಹಾಗೂ ಹಣೆ ಭಾಗಕ್ಕೆ ತಂಪು ನೀಡಲು ಎಣ್ಣೆ ಹಚ್ಚಲಾಗುತ್ತದೆ:

  • ಹರಳೆ ಎಣ್ಣೆ: 200 ಲೀಟರ್
  • ಹೊಂಗೆ ಎಣ್ಣೆ: 200 ಲೀಟರ್
  • ಬೇವಿನ ಎಣ್ಣೆ: 200 ಲೀಟರ್

ಹಗ್ಗಗಳಿಂದ ಗಾಯವಾಗದಂತೆ ತಡೆಯಲು ಮತ್ತು ತಂಪು ನೀಡಲು ಈ ಎಣ್ಣೆಗಳನ್ನು ಬಳಸಲಾಗುತ್ತದೆ.

ಗುಣಮಟ್ಟದ ಆಹಾರ, ಆರೋಗ್ಯದ ಮೇಲ್ವಿಚಾರಣೆ:

ಡಾ. ಐ.ಬಿ. ಪ್ರಭುಗೌಡ (DCF, ಮೈಸೂರು ವನ್ಯಜೀವಿ ವಿಭಾಗ) ಮಾಹಿತಿ ನೀಡಿದಂತೆ:

  • ಎಲ್ಲಾ ಆಹಾರ ಪದಾರ್ಥಗಳು ಪಶುವೈದ್ಯರ ಸಲಹೆಯಂತೆ ನಿಗದಿತ ಪ್ರಮಾಣದಲ್ಲಿ ಖರೀದಿಸಲಾಗುತ್ತಿವೆ.
  • ಟೆಂಡರ್‌ ಮೂಲಕ ನಿಖರ ಗುಣಮಟ್ಟದ ಪೂರೈಕೆದಾರರನ್ನು ಆಯ್ಕೆ ಮಾಡಲಾಗಿದೆ.
  • ಪ್ರತಿ ಆನೆಯ ತೂಕ ಮತ್ತು ಅಗತ್ಯ ಆಧಾರದ ಮೇಲೆ ಆಹಾರದ ಪ್ರಮಾಣ ನಿಗದಿಗೊಳಿಸಲಾಗಿದೆ.
  • ಹಂತ ಹಂತವಾಗಿ ವಿಶೇಷ ಆಹಾರ ನೀಡಲಾಗುತ್ತಿದ್ದು, ಆನೆಗಳು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳಲು ಸಹಾಯ ಮಾಡಲಾಗುತ್ತಿದೆ.
  • ಸದ್ಯಕ್ಕೆ ಎಲ್ಲಾ ಆನೆಗಳು ಆರೋಗ್ಯವಾಗಿದ್ದು, ತಾಲೀಮೆಯಲ್ಲಿ ಸಜೀವವಾಗಿ ಭಾಗವಹಿಸುತ್ತಿವೆ ಎಂದರು.

Related Posts

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಕ್ರೀಡೆ ಅಂದಾಗ ಅಲ್ಲಿ ಎದುರಾಳಿಗಳ ವಿರುದ್ಧ ಗೆಲ್ಲಲೇಬೇಕು ಎನ್ನುವ ಹಠ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಮ್ಯಾರಾಥಾನ್‌ನಲ್ಲಿ ಸೋಲು-ಗೆಲುವುಗಿಂತಲೂ ಮಾನವೀಯತೆ ಮುಖ್ಯ ಅನ್ನೋದನ್ನು ಇಬ್ಬರು ಯುವ ಕ್ರೀಡಾಪಟುಗಳು ತೋರಿಸಿಕೊಟ್ಟಿದ್ದಾರೆ‌. ತಮ್ಮ ವೈಯಕ್ತಿಕ ದಾಖಲೆಯನ್ನು ಬದಿಗಿಟ್ಟು ಸಂಕಷ್ಟದಲ್ಲಿದ್ದ ಸಹ ಕ್ರೀಡಾಪಟುವಿಗೆ ಸಹಾಯ ಮಾಡುವ…

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 25 ರಿಂದ 28 ರೂಪಾಯಿಗಳಷ್ಟು ಹೆಚ್ಚಾಗಲಿದೆ ಎಂಬ ವದಂತಿಗಳು ಹರಡಿವೆ. ಆದರೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವರದಿಗಳನ್ನು ಅಧಿಕೃತವಾಗಿ…

You Missed

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು