ದಸರಾ ಗಜಪಡೆ ಟನ್‌ಗಟ್ಟಲೆ ಆಹಾರ ಪೂರೈಕೆ ! ಆನೆಗಳಿಗೆ ನೀಡೋ ಆಹಾರದ ಪ್ರಮಾಣ ಕೇಳುದ್ರೆ ಶಾಕ್ ಆಗ್ತೀರಾ !

ಮೈಸೂರು: ಈ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಗಜಪಡೆಯ ಆರೋಗ್ಯ ಮತ್ತು ಬಲವನ್ನು ಕಾಪಾಡುವುದು ಅರಣ್ಯ ಇಲಾಖೆಗೆ ದೊಡ್ಡ ಹೊಣೆಗಾರಿಕೆ ಆಗಿದ್ದು, ಆನೆಗಳಿಗೆ ಪೌಷ್ಟಿಕ ಆಹಾರ, ನಿರಂತರ ತಪಾಸಣೆ ಮತ್ತು ಸಮರ್ಪಕ ಕಾಳಜಿ ನೀಡಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ.

ಅರಣ್ಯ ಇಲಾಖೆಯ ವಿವಿಧ ಆನೆ ಶಿಬಿರಗಳಿಂದ ಮೈಸೂರಿಗೆ ಬಂದಿರುವ 14 ಆನೆಗಳಲ್ಲಿ 10 ಗಂಡು ಮತ್ತು 4 ಹೆಣ್ಣು ಆನೆಗಳ ತೂಕ ಹಾಗೂ ಆರೋಗ್ಯವನ್ನು ಈಗಾಗಲೇ ಪರಿಶೀಲಿಸಲಾಗಿದೆ. ಮುಂದಿನ 56 ದಿನಗಳವರೆಗೆ ಪೌಷ್ಟಿಕ ಆಹಾರ, ತರಕಾರಿ, ಒಣಹುಲ್ಲು ಮತ್ತು ಹಸಿರುಹುಲ್ಲುಗಳನ್ನು ಸರಬರಾಜು ಮಾಡುವ ಯೋಜನೆ ರೂಪಿಸಲಾಗಿದೆ.

ಅನೆಗಳಿಗೆ ನೀಡಲಾಗುವ ಆಹಾರದ ವಿವರ:

  • ಹಸಿರು ಹುಲ್ಲು: 170 ಟನ್
  • ಆಲದ ಸೊಪ್ಪು: 340 ಟನ್
  • ಭತ್ತದ ಹುಲ್ಲು: 52 ಟನ್
  • ಕಬ್ಬು: 25 ಟನ್
  • ಭತ್ತ: 225 ಕ್ವಿಂಟಾಲ್
  • ಅಕ್ಕಿ: 75 ಕ್ವಿಂಟಾಲ್
  • ಬೆಲ್ಲ: 525 ಕೆಜಿ
  • ಕುಸುಬಲಕ್ಕಿ, ಗೋಧಿ, ಹೆಸರುಕಾಳು, ಉದ್ದಿನಕಾಳು: ತಲಾ ~28-29 ಕ್ವಿಂಟಾಲ್
  • ಕಡಲೆಕಾಯಿ ಹಿಂಡಿ: 35 ಕ್ವಿಂಟಾಲ್
  • ಅವಲಕ್ಕಿ: 3 ಕ್ವಿಂಟಾಲ್
  • ಈರುಳ್ಳಿ: 1,000 ಕೆಜಿ
  • ಬೆಣ್ಣೆ: 175 ಕೆಜಿ
  • ಉಪ್ಪು: 375 ಕೆಜಿ
  • ತೆಂಗಿನಕಾಯಿ: 3,250

ದಿನಪತ್ರಿ ಆಹಾರ – ತರಕಾರಿ ಸೇರಿ ವಿಶೇಷ ಆಹಾರ:

  • ದಿನಕ್ಕೆ 100 ಕೆಜಿ ತರಕಾರಿ ನೀಡಲಾಗುತ್ತದೆ.
  • ಹಾಪ್ಸ್‌ಕಾಮ್ಸ್‌ ಮೂಲಕ ತರಕಾರಿ ಖರೀದಿಸಲಾಗುತ್ತಿದ್ದು, ಗೆಡ್ಡೆಕೋಸ್‌, ಬೀಟ್ರೂಟ್‌, ಕ್ಯಾರೆಟ್‌, ಸೌತೆಕಾಯಿ, ಸೀಮೆಬದನೆಕಾಯಿ ಇತ್ಯಾದಿ ಬೆರೆಸಿ ವಿಶೇಷ ಆಹಾರ ತಯಾರಿಸಲಾಗುತ್ತದೆ.

ಆನೆಗಳಿಗೆ ತಂಪುಗಾಗಿ ಎಣ್ಣೆ ಬಳಕೆ:

ಪ್ರತಿ ದಿನ ಅರಮನೆಯಿಂದ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನಕ್ಕೆ ತಾಲೀಮಿಗೆ ಹೋಗುವ ಆನೆಗಳಿಗೆ ತಲೆ, ಕಾಲು ಹಾಗೂ ಹಣೆ ಭಾಗಕ್ಕೆ ತಂಪು ನೀಡಲು ಎಣ್ಣೆ ಹಚ್ಚಲಾಗುತ್ತದೆ:

  • ಹರಳೆ ಎಣ್ಣೆ: 200 ಲೀಟರ್
  • ಹೊಂಗೆ ಎಣ್ಣೆ: 200 ಲೀಟರ್
  • ಬೇವಿನ ಎಣ್ಣೆ: 200 ಲೀಟರ್

ಹಗ್ಗಗಳಿಂದ ಗಾಯವಾಗದಂತೆ ತಡೆಯಲು ಮತ್ತು ತಂಪು ನೀಡಲು ಈ ಎಣ್ಣೆಗಳನ್ನು ಬಳಸಲಾಗುತ್ತದೆ.

ಗುಣಮಟ್ಟದ ಆಹಾರ, ಆರೋಗ್ಯದ ಮೇಲ್ವಿಚಾರಣೆ:

ಡಾ. ಐ.ಬಿ. ಪ್ರಭುಗೌಡ (DCF, ಮೈಸೂರು ವನ್ಯಜೀವಿ ವಿಭಾಗ) ಮಾಹಿತಿ ನೀಡಿದಂತೆ:

  • ಎಲ್ಲಾ ಆಹಾರ ಪದಾರ್ಥಗಳು ಪಶುವೈದ್ಯರ ಸಲಹೆಯಂತೆ ನಿಗದಿತ ಪ್ರಮಾಣದಲ್ಲಿ ಖರೀದಿಸಲಾಗುತ್ತಿವೆ.
  • ಟೆಂಡರ್‌ ಮೂಲಕ ನಿಖರ ಗುಣಮಟ್ಟದ ಪೂರೈಕೆದಾರರನ್ನು ಆಯ್ಕೆ ಮಾಡಲಾಗಿದೆ.
  • ಪ್ರತಿ ಆನೆಯ ತೂಕ ಮತ್ತು ಅಗತ್ಯ ಆಧಾರದ ಮೇಲೆ ಆಹಾರದ ಪ್ರಮಾಣ ನಿಗದಿಗೊಳಿಸಲಾಗಿದೆ.
  • ಹಂತ ಹಂತವಾಗಿ ವಿಶೇಷ ಆಹಾರ ನೀಡಲಾಗುತ್ತಿದ್ದು, ಆನೆಗಳು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳಲು ಸಹಾಯ ಮಾಡಲಾಗುತ್ತಿದೆ.
  • ಸದ್ಯಕ್ಕೆ ಎಲ್ಲಾ ಆನೆಗಳು ಆರೋಗ್ಯವಾಗಿದ್ದು, ತಾಲೀಮೆಯಲ್ಲಿ ಸಜೀವವಾಗಿ ಭಾಗವಹಿಸುತ್ತಿವೆ ಎಂದರು.

Related Posts

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 3 ದಶಕಗಳೇ ಕಳೆದಿವೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ವಿವಾದ ಮಾತ್ರ ನಟಿ ಬಿಂದಿಯಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ನಡುವೆ ದೊಡ್ಡ…

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ವಿಜಯಪುರ ಜಿಲ್ಲೆಯ ಭೀಮಾ ನದಿ ತೀರದಲ್ಲಿ ಮತ್ತೆ ನೆತ್ತರ ಹರಿದಿದ್ದು, ಭೀಕರ ಸಾಮೂಹಿಕ ಹತ್ಯಾಕಾಂಡ ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದೆ. ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಐವರು ಹಾಗೂ ಅವರ ಸ್ನೇಹಿತ ಸೇರಿದಂತೆ ಒಟ್ಟು ಆರು ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡು…

You Missed

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

3 ದಶಕಗಳ ಬಳಿಕ  ನಟಿ ಬಿಂದ್ಯಾ  ಕ್ಷಮೆ ಕೇಳಿದ್ದೇಕೆ?

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಭೀಮಾ ನದಿ ತೀರದಲ್ಲಿ  ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!