ದೇಗುಲದ ಕಾಣಿಕೆ ಡಬ್ಬಿ ಮಾಯ! ತಿಂಗಳ ಬಳಿಕ ಅನಿರೀಕ್ಷಿತ ಘಟನೆ, ಇಲ್ಲಿ ಎಲ್ಲವೂ ದೇವಿಯ ಮಹಿಮೆ!

ಕಳ್ಳರ ಗುಂಪೊಂದು ದೇವಸ್ಥಾನ ದೋಚಲು ಪ್ಲಾನ್ ಹಾಕಿಕೊಂಡು ನುಗ್ಗಿತ್ತು. ಆ ಪ್ರಕಾರವೇ ಅವರು ದೇವಾಲಯಕ್ಕೆ ಎಂಟ್ರಿ ನೀಡಿ, ಕಾಣಿಕೆ ಡಬ್ಬಿಯನ್ನೇ ಹೊತ್ತೊಯ್ದರು. ಆಮೇಲೆ ಏನಾಯ್ತು ಅನ್ನೋದೇ ಇಲ್ಲಿ ಇಂಟ್ರೆಸ್ಟಿಂಗ್!

ಕಳ್ಳರ ಗುಂಪೊಂದು ದೇವಸ್ಥಾನ ದೋಚಲು ಪ್ಲಾನ್ ಹಾಕಿಕೊಂಡು ನುಗ್ಗಿತ್ತು. ಆ ಪ್ರಕಾರವೇ ಅವರು ದೇವಾಲಯಕ್ಕೆ ಎಂಟ್ರಿ ನೀಡಿ, ಕಾಣಿಕೆ ಡಬ್ಬಿಯನ್ನೇ ಹೊತ್ತೊಯ್ದರು. ಆಮೇಲೆ ಏನಾಯ್ತು ಅನ್ನೋದೇ ಇಲ್ಲಿ ಇಂಟ್ರೆಸ್ಟಿಂಗ್! ಕದ್ದ ಕಾಣಿಕೆ ಡಬ್ಬಿಯನ್ನ ತುಂಬಾ ಉತ್ಸಾಹದಿಂದಲೇ ಒಡೆದಿದ್ದಾರೆ. ಆದರೆ, ಅದೇನು ಆಯ್ತೋ ಗೊತ್ತಿಲ್ಲ. ಕದ್ದ ಎಲ್ಲಾ ಹಣವನ್ನು ಸ್ವಲ್ಪ ದಿನ ಒಂದು ತಿಂಗಳ ನಂತರ ಅದೇ ದೇವಸ್ಥಾನಕ್ಕೆ ತಂದಿಟ್ಟು ಹೋಗಿದ್ದಾರೆ. ಅಂದ್ಹಾಗೆ ಈ ಘಟನೆ ನಡೆದಿರೋದು ಆಂಧ್ರದ ಅನಂತಪುರ ಜಿಲ್ಲೆಯ ಬುಕ್ಕರಾಯಸಮುದ್ರಂನಲ್ಲಿರುವ ದೇವಸ್ಥಾನವೊಂದರಲ್ಲಿ. ಒಂದು ತಿಂಗಳ ಹಿಂದೆ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

 

ಹಣದ ಜೊತೆಗೆ ಪತ್ರ ಇಟ್ಟು ಹೋದ ಕಳ್ಳರು ಒಂದು ಪತ್ರವನ್ನೂ ದೇವಾಲಯದಲ್ಲಿ ಇಟ್ಟು ಹೋಗಿದ್ದಾರೆ. ಬೆಳಗ್ಗೆ, ಪೂಜಾ ಸೇವೆಗಳಿಗಾಗಿ ದೇವಾಲಯಕ್ಕೆ ಪ್ರವೇಶಿಸಿದ ಅರ್ಚಕರಿಗೆ ಆವರಣದಲ್ಲಿ ಹಣದ ಬ್ಯಾಗ್ ಸಿಕ್ಕಿದೆ. ಅದನ್ನು ನೋಡಿದ ಅರ್ಚಕರಿಗೆ ಶಾಕ್ ಆಗಿದೆ. ಬ್ಯಾಗ್​ ಒಳಗೆ ಹಣ ಮತ್ತು ಒಂದು ಪತ್ರ ಇತ್ತು. ಆ ಪತ್ರದಲ್ಲಿ ಏನಿತ್ತು ಅನ್ನೋದನ್ನ ತೆಗೆದು ನೋಡಿದಾಗ.. ತನ್ನ ಮಕ್ಕಳು ದೇವಾಲಯದ ಹುಂಡಿಯಿಂದ ಹಣ ಕದ್ದು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಬರೆಯಲಾಗಿತ್ತು.ಇನ್ನು ದೇವಸ್ಥಾನದ ಆಡಳಿತಾಧಿಕಾರಿಗಳು ಕಳ್ಳರು ತಂದಿದ್ದ ಹುಂಡಿಯನ್ನು ಎಣಿಸಿದಾಗ ಒಟ್ಟು 1,86,486 ರೂಪಾಯಿ ಇರೋದು ತಿಳಿದುಬಂದಿದೆ. ದೇವಿಯ ಶ್ರೇಷ್ಠತೆಯಿಂದಾಗಿ ಕಳ್ಳರು ಕದ್ದ ಹಣವನ್ನು ವಾಪಸ್ ತಂದಿದ್ದಾರೆ ಎಂದು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

  ಒಡಿಶಾದ ಶಿಕ್ಷಾ ಓ ಅನುಸಂಧಾನ ವಿಶ್ವವಿದ್ಯಾಲಯವು ಕರ್ನಾಟಕದ ಹೆಮ್ಮೆಯ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಸನ್ಮಾನಿಸಿದೆ. ನ್ಯಾಯಾಂಗ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆ, ನ್ಯಾಯದ ಪರವಾದ ಬದ್ಧತೆ, ವಿದ್ವತ್ತು ಹಾಗೂ ಮಾನವೀಯ ಮೌಲ್ಯಗಳ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!