ದಾಸನಿಗಿಲ್ಲ ಜೈಲಿನಲ್ಲಿ ರಾಜಾತಿಥ್ಯ.. ದರ್ಶನ್​ಗೆ ಬೆಡ್​ಶೀಟ್, ಹಾಸಿಗೆ ನೀಡಲು ಹಿಂದೇಟು

ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿರೋ ನಟ ದರ್ಶನ್​​​ ಬಳ್ಳಾರಿ ಜೈಲು ಭವಿಷ್ಯ ಸೆಪ್ಟೆಂಬರ್ 9ಕ್ಕೆ ನಿರ್ಧಾರ ಆಗಲಿದೆ. ಈ ಮಧ್ಯೆ ದಾಸನಿಗೆ ಜೈಲಿನ ಅಸಲಿ ದರ್ಶನ ಆಗ್ತಿದ್ದು ಹೆಚ್ಚುವರಿ ಸೌಲಭ್ಯ ಕೊಡಲು ಜೈಲಾಧಿಕಾರಿಗಳೇ ಹಿಂದೇಟು ಹಾಕ್ತಿದ್ದಾರೆ. ಯಾಕೆ ಗೊತ್ತಾ? ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ನಟ ದರ್ಶನ್​​ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲುವಾಸ ಅನುಭವಿಸ್ತಿದ್ದಾರೆ.. ಕೆಲ ದಿನಗಳಲ್ಲೇ ಟ್ರಯಲ್ ಕೋರ್ಟ್​ನಲ್ಲಿ ವಿಚಾರಣೆ ಆರಂಭ ಆಗಲಿದ್ದು ಬಳ್ಳಾರಿಗೆ ಶಿಫ್ಟ್ ಆಗ್ತಾರಾ ಅಥವಾ ಇಲ್ವಾ

ನಟ ದರ್ಶನ್​ಗೆಗೆ ಪರಪ್ಪನ ಅಗ್ರಹಾರ ಜೈಲು ನರಕವಾಗಿ ಪರಿಣಮಿಸಿದೆ. ಹೀಗಾಗಿ ಹಾಸಿಗೆ, ದಿಂಬು ಹಾಗೂ ಮನೆ ಊಟಕ್ಕೆ ಅನುಮತಿ ಕೋರಿ ನ್ಯಾಯಾಲಯದಲ್ಲಿ ವಿಚಾರಣೆ ನಡೀತಿದ್ದು ಇನ್ನಷ್ಟೇ ತೀರ್ಮಾನ ಆಗ್ಬೇಕಿದೆ.. ಈ ನಡುವೆ ನಟ ದರ್ಶನ್​ಗೆ ರಾಜಾತಿಥ್ಯ ಸಿಗುತ್ತಾ, ಇಲ್ವಾ ಅನುಮಾನ ಮೂಡಿಸಿದೆ.. ಈ ಹಿಂದೆಯೂ ಜೈಲಿನ ನಿಯಮದ ಪ್ರಕಾರ ಸೌಕರ್ಯ ನೀಡಿದ್ರೂ ಕೈದಿಗಳು ಅದನ್ನು ದುರುಪಯೋಗ ಪಡಿಸಿಕೊಂಡಿದ್ದರು. ಮತ್ತೊಂದೆಡೆ ದರ್ಶನ್​ಗೆ ಸೌಲಭ್ಯ ನೀಡಿದ್ದಕ್ಕೆ ಗರಂ ಆಗಿದ್ದ ಸುಪ್ರೀಂಕೋರ್ಟ್ ಅಧಿಕಾರಿಗಳಿಗೆ ಅಮಾನತಿಗೆ ಎಚ್ಚರಿಕೆ ಕೂಡ ನೀಡಿತ್ತು.. ಹೀಗಾಗಿ ನಟ ದರ್ಶನ್​ಗೆ ಜೈಲಾಧಿಕಾರಿಗಳು ಸೌಕರ್ಯ ಕೊಡಲು ಹಿಂದೇಟು ಹಾಕ್ತಿದ್ದಾರೆ.

ದಾಸನಿಗಿಲ್ಲ ರಾಜಾತಿಥ್ಯ!

ದಪ್ಪನೆ ಹಾಸಿಗೆಗಳಲ್ಲಿ ಮೊಬೈಲ್, ಸಿಮ್ ಕಾರ್ಡ್ ಇಡುವ ಸಾಧ್ಯತೆ
ಈ ಹಿಂದೆ ಹಲವರ ಬಳಿ ಮೊಬೈಲ್ ಸಿಮ್ ಪತ್ತೆ ಹಚ್ಚಿ ಪೊಲೀಸರು
ಜೈಲಿನ ಮೇಲೆ ಸಿಸಿಬಿ ದಾಳಿಯ ವೇಳೆಯೂ ಮೊಬೈಲ್​ಗಳು ಪತ್ತೆ
ಹಾಸಿಗೆ, ದಿಂಬುಗಳಲ್ಲಿ ಮೊಬೈಲ್​ಗಳನ್ನು ಅಡಗಿಸಿಡುವ ಆತಂಕ
ಹಳೆಯ ಘಟನೆಗಳಿಂದ ಆರೋಪಿ ದರ್ಶನ್ ಮೇಲೂ ಪರಿಣಾಮ
ಅಲ್ಲದೇ ರಾಜಾತಿಥ್ಯ ವಿಚಾರವಾಗಿ ಸುಪ್ರೀಂಕೋರ್ಟ್ ತರಾಟೆ
ಸೆಲೆಬ್ರಿಟಿ ಅಂತಾ ವಿಶೇಷ ಫೆಸಿಲಿಟಿ ಕೊಡಬಾರದು ಅಂತ ಆದೇಶ
ಅಂತಹ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ
ಆದೇಶದ ಮಧ್ಯೆಯೂ ವ್ಯವಸ್ಥೆ ಮಾಡಿದ್ರೆ ಕುತ್ತು ಬರುವ ಆತಂಕ
ದರ್ಶನ್​ಗೆ ಸವಲತ್ತು ಕೊಟ್ರೆ ಉಳಿದ ಕೈದಿಗಳು ಕೇಳುವ ಸಾಧ್ಯತೆ
ಇದೇ ಕಾರಣ ದರ್ಶನ್​ಗೆ ಬೆಡ್​ಶೀಟ್, ಹಾಸಿಗೆ ನೀಡಲು ಹಿಂದೇಟು

ಒಂದ್ಕಡೆ ಸುಪ್ರೀಂ ಕೋರ್ಟ್ ಭಯ.. ಮತ್ತೊಂದೆಡೆ ಉಳಿದ ಕೈದಿಗಳು ಸೌಲಭ್ಯ ಕೇಳುವ ಪರಿಸ್ಥಿತಿ ಇದೆ, ಬೆನ್ನುನೋವು ಸೇರಿ ಇತರೆ ಆರೋಗ್ಯ ಸಮಸ್ಯೆಗಳಿದ್ದು ಹಾಸಿಗೆ, ತಲೆದಿಂಬು ಇಲ್ಲದೆ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಜೈಲೂಟ ಕೂಡ ದೇಹಕ್ಕೆ ಒಗ್ಗದೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದೇನೆ. ಹೀಗಾಗಿ ಕನಿಷ್ಠ ಸೌಲಭ್ಯ ನೀಡ್ಬೇಕು ಅಂತ ದರ್ಶನ್ ಮನವಿ ಮಾಡಿದ್ದಾರೆ.. ಸದ್ಯ ಸೆಪ್ಟೆಂಬರ್ 9ಕ್ಕೆ ಬಳ್ಳಾರಿ ಜೈಲಿಗೆ ಶಿಫ್ಟ್ ಆಗ್ತಾರಾ ಅಥವಾ ಇಲ್ವಾ ಅನ್ನೋ ತೀರ್ಪು ಹೊರಬೀಳಲಿದೆ.. ಆವತ್ತೇ ಜೈಲಲ್ಲಿ ಸವಲತ್ತು ನೀಡುವ ಕುರಿತು ಕೋರ್ಟ್​ ತೀರ್ಪು ನೀಡುವ ಸಾಧ್ಯತೆ ಇದೆ, ಅದೇನೇ ಇರಲಿ, ಬಣ್ಣದ ಲೋಕದಲ್ಲಿ ಕೋಟ್ಯಂತರ ಅಭಿಮಾನಿಗಳ ದಾಸನ ಪರಿಸ್ಥಿತಿ ಮಾತ್ರ​​​ ಮಾಡಿದ್ದುಣ್ಣೋ ಮಹರಾಯ ಎನ್ನುವಂತಾಗಿದೆ.

Related Posts

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 3 ದಶಕಗಳೇ ಕಳೆದಿವೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ವಿವಾದ ಮಾತ್ರ ನಟಿ ಬಿಂದಿಯಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ನಡುವೆ ದೊಡ್ಡ…

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ವಿಜಯಪುರ ಜಿಲ್ಲೆಯ ಭೀಮಾ ನದಿ ತೀರದಲ್ಲಿ ಮತ್ತೆ ನೆತ್ತರ ಹರಿದಿದ್ದು, ಭೀಕರ ಸಾಮೂಹಿಕ ಹತ್ಯಾಕಾಂಡ ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದೆ. ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಐವರು ಹಾಗೂ ಅವರ ಸ್ನೇಹಿತ ಸೇರಿದಂತೆ ಒಟ್ಟು ಆರು ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡು…

You Missed

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

3 ದಶಕಗಳ ಬಳಿಕ  ನಟಿ ಬಿಂದ್ಯಾ  ಕ್ಷಮೆ ಕೇಳಿದ್ದೇಕೆ?

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಭೀಮಾ ನದಿ ತೀರದಲ್ಲಿ  ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!