
ಇದೇ ಸಂದರ್ಭದಲ್ಲಿ ನಾಗದಾಳಿ, ಅಲೋವೆರಾ, ದೊಡ್ಡಪತ್ರೆ, ಒಂದೆಲಗ, ನಿಂಬೆ, ಶ್ರೀತುಳಸಿ, ಕೃಷ್ಣ ತುಳಸಿ, ಹಲಸು ಬಿಳಿದಾಸವಾಳ ಗಿಡಗಳನ್ನು ನೆಡುವ ಮೂಲಕ ವಿದ್ಯಾರ್ಥಿಗಳಿಗೆ ಗ್ರಾಮ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಯಿತು.

ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಪರಿಸರ ಉಳಿಸುವ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿವರ್ಷ ಜೂನ್ 5ಕ್ಕೆ ವಿಶ್ವ ಪರಿಸರ ದಿನವನ್ನು ನಮ್ಮ ಅಧ್ಯಯನ ಸಂಸ್ಥೆಯಲ್ಲಿ ಆಚರಿಸಲಾಗ್ತದೆ ಎಂದು ನಿರ್ದೇಶಕರಾದ ಡಾಕ್ಟರ್ ಎನ್ ಕೆ ಲೋಲಾಕ್ಷಿ ತಿಳಿಸಿದರು.ಈ ವೇಳೆ ಕಾಲೇಜಿನ ಅಧ್ಯಾಪಕ ವರ್ಗ, ಅಧ್ಯಾಪಕೇತರ ವರ್ಗ, ಕಚೇರಿ ಸಿಬ್ಬಂದಿಗಳು ವಿದ್ಯಾರ್ಥಿಗಳು ಹಾಜರಿದ್ದರು.





