ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್; ರಿಚಾರ್ಜ್‌ನಲ್ಲಿ ದೊಡ್ಡ ಬದಲಾವಣೆ!

 

ಟೆಲಿಕಾಂ ಕಂಪನಿಗಳ ಏಕಸ್ವಾಮ್ಯಕ್ಕೆ ಬ್ರೇಕ್ ಹಾಕಿರುವ ಟ್ರಾಯ್, ಇನ್ನು ಮುಂದೆ ಪ್ರತಿಯೊಂದು ವ್ಯಾಲಿಡಿಟಿಯಲ್ಲೂ ಕೇವಲ ಕಾಲ್ ಮತ್ತು ಎಸ್‌ಎಂಎಸ್ ಪ್ಯಾಕ್‌ಗಳನ್ನು ನೀಡಲೇಬೇಕು ಎಂದು ಸೂಚಿಸಿದೆ. ಇದರಿಂದ ಸಾಮಾನ್ಯ ಗ್ರಾಹಕರಿಗೆ ಭಾರಿ ಲಾಭವಾಗಲಿದೆ.

 

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಮಂಗಳವಾರ ಟೆಲಿಕಾಂ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ದಾರಿ ಮಾಡಿಕೊಡುವ ಹೊಸ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಇತ್ತೀಚಿನ ವರ್ಷಗಳಲ್ಲಿ ಮೊಬೈಲ್ ರೀಚಾರ್ಜ್ ಪ್ಲಾನ್‌ಗಳು ಹೆಚ್ಚು ಡೇಟಾ ಆಧಾರಿತವಾಗುತ್ತಿದ್ದು, ಕರೆ ಮತ್ತು ಎಸ್ಎಂಎಸ್ ಮಾತ್ರ ಬೇಕಾದ ಗ್ರಾಹಕರು ಕೂಡ ಅನಿವಾರ್ಯವಾಗಿ ಇಂಟರ್ನೆಟ್ ಸೇವೆಗಳಿಗಾಗಿ ಹೆಚ್ಚುವರಿ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ಟ್ರಾಯ್ ಹೊಸ ನಿಯಮಗಳನ್ನು ತರಲು ಮುಂದಾಗಿದೆ.

ಈ ಪ್ರಸ್ತಾವನೆಯ ಪ್ರಕಾರ, ಟೆಲಿಕಾಂ ಕಂಪನಿಗಳು ಧ್ವನಿ ಕರೆ ಮತ್ತು ಎಸ್ಎಂಎಸ್ ಸೇವೆಗಳಿಗೆ ಮಾತ್ರ ಸಂಬಂಧಿಸಿದ ಕಡಿಮೆ ಬೆಲೆಯ ವಿಶೇಷ ಸುಂಕದ ವೋಚರ್‌ಗಳನ್ನು ಕಡ್ಡಾಯವಾಗಿ ಪರಿಚಯಿಸಬೇಕು. ಮುಖ್ಯವಾಗಿ, ಇವುಗಳಲ್ಲಿ ಡೇಟಾ ಸೌಲಭ್ಯ ಇರಬಾರದು. ಜೊತೆಗೆ, ಈ ಯೋಜನೆಗಳ ಬೆಲೆಗಳು ಡೇಟಾ ಹೊಂದಿರುವ ಪ್ರಸ್ತುತ ಪ್ಲಾನ್‌ಗಳಿಗಿಂತ ಸ್ಪಷ್ಟವಾಗಿ ಕಡಿಮೆ ಇರಬೇಕು ಎಂಬುದನ್ನು TRAI ಕಡ್ಡಿ ತುಂಡರಿಸಿದಂತೆ ಹೇಳಿದೆ.

ಇದು ಯಾಕೆ ಅಗತ್ಯವಾಯಿತು ಎನ್ನುವುದಕ್ಕೆ ಟ್ರಾಯ್ ನೀಡಿರುವ ಸ್ಪಷ್ಟನೆ ಗಮನಾರ್ಹವಾಗಿದೆ. ಹಿಂದಿನ ನಿರ್ದೇಶನಗಳ ಅನ್ವಯ ಕೆಲ ಕಂಪನಿಗಳು ಕಾಲ್ ಮತ್ತು ಎಸ್ಎಂಎಸ್ ಮಾತ್ರ ಪ್ಯಾಕ್‌ಗಳನ್ನು ಪರಿಚಯಿಸಿದ್ದರೂ, ಅವುಗಳ ಬೆಲೆಗಳು ಹೆಚ್ಚು ಕಡಿಮೆಯಾಗಿರಲಿಲ್ಲ. ಅಂದರೆ, ಡೇಟಾ ಸೌಲಭ್ಯವನ್ನು ತೆಗೆದರೂ ಗ್ರಾಹಕರಿಗೆ ದೊಡ್ಡ ಮಟ್ಟದ ಉಳಿತಾಯವಾಗಲಿಲ್ಲ. ಇದರಿಂದ ಗ್ರಾಹಕರಿಗೆ ಯಾವುದೇ ಪ್ರಯೋಜನವಾಗದೆ, ಕಂಪನಿಗಳ ಲಾಭ ಮಾತ್ರ ಮುಂದುವರಿದಿತ್ತು ಎಂದು ಟ್ರಾಯ್ ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆಯಲ್ಲಿ, “ಟೆಲಿಕಾಂ ಗ್ರಾಹಕ ರಕ್ಷಣೆ ನಿಯಮಗಳು, 2026” ಎಂಬ ಕರಡು ನಿಯಮವನ್ನು TRAI ಹೊರತಂದಿದೆ. ಈ ನಿಯಮದ ಅಡಿಯಲ್ಲಿ, ಪ್ರತಿಯೊಂದು ಟೆಲಿಕಾಂ ಸೇವಾ ಪೂರೈಕೆದಾರರು ಕನಿಷ್ಠ ಒಂದು ಕಾಲ್ ಮತ್ತು ಎಸ್ಎಂಎಸ್ ಮಾತ್ರ ಯೋಜನೆಯನ್ನು ನೀಡುವುದು ಕಡ್ಡಾಯವಾಗುತ್ತದೆ. ಇನ್ನೊಂದು ಪ್ರಮುಖ ಅಂಶವೆಂದರೆ, ಈ ಯೋಜನೆಗಳು ಕೇವಲ ದೀರ್ಘಾವಧಿಯದ್ದಾಗಿರದೆ, ಕಡಿಮೆ ಮಾನ್ಯತೆಯ ಆಯ್ಕೆಯಲ್ಲಿಯೂ ಲಭ್ಯವಾಗಬೇಕು ಎನ್ನುವುದಾಗಿದೆ.

TRAI ಈ ಕ್ರಮದಿಂದ ಎರಡು ಪ್ರಮುಖ ಗುರಿಗಳನ್ನು ಸಾಧಿಸಲು ಬಯಸುತ್ತಿದೆ. ಮೊದಲನೆಯದಾಗಿ, ಗ್ರಾಹಕರಿಗೆ ಆಯ್ಕೆಯ ಸ್ವಾತಂತ್ರ್ಯ ನೀಡುವುದು. ಅಂದರೆ, ಯಾರಿಗೆ ಡೇಟಾ ಅಗತ್ಯವಿಲ್ಲವೋ ಅವರು ಕೇವಲ ಕರೆ ಮತ್ತು SMS ಸೇವೆಗಳಿಗಾಗಿ ಕಡಿಮೆ ಬೆಲೆಗೆ ಯೋಜನೆಗಳನ್ನು ಆರಿಸಿಕೊಳ್ಳಬಹುದು.
TRAI ಈ ಕ್ರಮದಿಂದ ಎರಡು ಪ್ರಮುಖ ಗುರಿಗಳನ್ನು ಸಾಧಿಸಲು ಬಯಸುತ್ತಿದೆ. ಮೊದಲನೆಯದಾಗಿ, ಗ್ರಾಹಕರಿಗೆ ಆಯ್ಕೆಯ ಸ್ವಾತಂತ್ರ್ಯ ನೀಡುವುದು. ಅಂದರೆ, ಯಾರಿಗೆ ಡೇಟಾ ಅಗತ್ಯವಿಲ್ಲವೋ ಅವರು ಕೇವಲ ಕರೆ ಮತ್ತು SMS ಸೇವೆಗಳಿಗಾಗಿ ಕಡಿಮೆ ಬೆಲೆಗೆ ಯೋಜನೆಗಳನ್ನು ಆರಿಸಿಕೊಳ್ಳಬಹುದು.

ಟ್ರಾಯ್ ಹೇಳುವಂತೆ, ಈ ತಿದ್ದುಪಡಿ ಪಾರದರ್ಶಕತೆಯನ್ನು ಹೆಚ್ಚಿಸುವುದರ ಜೊತೆಗೆ ಟೆಲಿಕಾಂ ಮಾರುಕಟ್ಟೆಯಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುತ್ತದೆ. ಕಂಪನಿಗಳು ಗ್ರಾಹಕರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ರೀತಿಯ ಯೋಜನೆಗಳನ್ನು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.
ಟ್ರಾಯ್ ಹೇಳುವಂತೆ, ಈ ತಿದ್ದುಪಡಿ ಪಾರದರ್ಶಕತೆಯನ್ನು ಹೆಚ್ಚಿಸುವುದರ ಜೊತೆಗೆ ಟೆಲಿಕಾಂ ಮಾರುಕಟ್ಟೆಯಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುತ್ತ

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 13 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಸತತ 12 ಸೀಸನ್‌ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಮೊದಲ ಸೀಸನ್ ನೆನಪುಗಳು ಯಾವಾಗಲೂ ಅತ್ಯಂತ ಪ್ರಿಯವಾದವು. ಈ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!