ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್; ರಿಚಾರ್ಜ್‌ನಲ್ಲಿ ದೊಡ್ಡ ಬದಲಾವಣೆ!

 

ಟೆಲಿಕಾಂ ಕಂಪನಿಗಳ ಏಕಸ್ವಾಮ್ಯಕ್ಕೆ ಬ್ರೇಕ್ ಹಾಕಿರುವ ಟ್ರಾಯ್, ಇನ್ನು ಮುಂದೆ ಪ್ರತಿಯೊಂದು ವ್ಯಾಲಿಡಿಟಿಯಲ್ಲೂ ಕೇವಲ ಕಾಲ್ ಮತ್ತು ಎಸ್‌ಎಂಎಸ್ ಪ್ಯಾಕ್‌ಗಳನ್ನು ನೀಡಲೇಬೇಕು ಎಂದು ಸೂಚಿಸಿದೆ. ಇದರಿಂದ ಸಾಮಾನ್ಯ ಗ್ರಾಹಕರಿಗೆ ಭಾರಿ ಲಾಭವಾಗಲಿದೆ.

 

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಮಂಗಳವಾರ ಟೆಲಿಕಾಂ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ದಾರಿ ಮಾಡಿಕೊಡುವ ಹೊಸ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಇತ್ತೀಚಿನ ವರ್ಷಗಳಲ್ಲಿ ಮೊಬೈಲ್ ರೀಚಾರ್ಜ್ ಪ್ಲಾನ್‌ಗಳು ಹೆಚ್ಚು ಡೇಟಾ ಆಧಾರಿತವಾಗುತ್ತಿದ್ದು, ಕರೆ ಮತ್ತು ಎಸ್ಎಂಎಸ್ ಮಾತ್ರ ಬೇಕಾದ ಗ್ರಾಹಕರು ಕೂಡ ಅನಿವಾರ್ಯವಾಗಿ ಇಂಟರ್ನೆಟ್ ಸೇವೆಗಳಿಗಾಗಿ ಹೆಚ್ಚುವರಿ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ಟ್ರಾಯ್ ಹೊಸ ನಿಯಮಗಳನ್ನು ತರಲು ಮುಂದಾಗಿದೆ.

ಈ ಪ್ರಸ್ತಾವನೆಯ ಪ್ರಕಾರ, ಟೆಲಿಕಾಂ ಕಂಪನಿಗಳು ಧ್ವನಿ ಕರೆ ಮತ್ತು ಎಸ್ಎಂಎಸ್ ಸೇವೆಗಳಿಗೆ ಮಾತ್ರ ಸಂಬಂಧಿಸಿದ ಕಡಿಮೆ ಬೆಲೆಯ ವಿಶೇಷ ಸುಂಕದ ವೋಚರ್‌ಗಳನ್ನು ಕಡ್ಡಾಯವಾಗಿ ಪರಿಚಯಿಸಬೇಕು. ಮುಖ್ಯವಾಗಿ, ಇವುಗಳಲ್ಲಿ ಡೇಟಾ ಸೌಲಭ್ಯ ಇರಬಾರದು. ಜೊತೆಗೆ, ಈ ಯೋಜನೆಗಳ ಬೆಲೆಗಳು ಡೇಟಾ ಹೊಂದಿರುವ ಪ್ರಸ್ತುತ ಪ್ಲಾನ್‌ಗಳಿಗಿಂತ ಸ್ಪಷ್ಟವಾಗಿ ಕಡಿಮೆ ಇರಬೇಕು ಎಂಬುದನ್ನು TRAI ಕಡ್ಡಿ ತುಂಡರಿಸಿದಂತೆ ಹೇಳಿದೆ.

ಇದು ಯಾಕೆ ಅಗತ್ಯವಾಯಿತು ಎನ್ನುವುದಕ್ಕೆ ಟ್ರಾಯ್ ನೀಡಿರುವ ಸ್ಪಷ್ಟನೆ ಗಮನಾರ್ಹವಾಗಿದೆ. ಹಿಂದಿನ ನಿರ್ದೇಶನಗಳ ಅನ್ವಯ ಕೆಲ ಕಂಪನಿಗಳು ಕಾಲ್ ಮತ್ತು ಎಸ್ಎಂಎಸ್ ಮಾತ್ರ ಪ್ಯಾಕ್‌ಗಳನ್ನು ಪರಿಚಯಿಸಿದ್ದರೂ, ಅವುಗಳ ಬೆಲೆಗಳು ಹೆಚ್ಚು ಕಡಿಮೆಯಾಗಿರಲಿಲ್ಲ. ಅಂದರೆ, ಡೇಟಾ ಸೌಲಭ್ಯವನ್ನು ತೆಗೆದರೂ ಗ್ರಾಹಕರಿಗೆ ದೊಡ್ಡ ಮಟ್ಟದ ಉಳಿತಾಯವಾಗಲಿಲ್ಲ. ಇದರಿಂದ ಗ್ರಾಹಕರಿಗೆ ಯಾವುದೇ ಪ್ರಯೋಜನವಾಗದೆ, ಕಂಪನಿಗಳ ಲಾಭ ಮಾತ್ರ ಮುಂದುವರಿದಿತ್ತು ಎಂದು ಟ್ರಾಯ್ ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆಯಲ್ಲಿ, “ಟೆಲಿಕಾಂ ಗ್ರಾಹಕ ರಕ್ಷಣೆ ನಿಯಮಗಳು, 2026” ಎಂಬ ಕರಡು ನಿಯಮವನ್ನು TRAI ಹೊರತಂದಿದೆ. ಈ ನಿಯಮದ ಅಡಿಯಲ್ಲಿ, ಪ್ರತಿಯೊಂದು ಟೆಲಿಕಾಂ ಸೇವಾ ಪೂರೈಕೆದಾರರು ಕನಿಷ್ಠ ಒಂದು ಕಾಲ್ ಮತ್ತು ಎಸ್ಎಂಎಸ್ ಮಾತ್ರ ಯೋಜನೆಯನ್ನು ನೀಡುವುದು ಕಡ್ಡಾಯವಾಗುತ್ತದೆ. ಇನ್ನೊಂದು ಪ್ರಮುಖ ಅಂಶವೆಂದರೆ, ಈ ಯೋಜನೆಗಳು ಕೇವಲ ದೀರ್ಘಾವಧಿಯದ್ದಾಗಿರದೆ, ಕಡಿಮೆ ಮಾನ್ಯತೆಯ ಆಯ್ಕೆಯಲ್ಲಿಯೂ ಲಭ್ಯವಾಗಬೇಕು ಎನ್ನುವುದಾಗಿದೆ.

TRAI ಈ ಕ್ರಮದಿಂದ ಎರಡು ಪ್ರಮುಖ ಗುರಿಗಳನ್ನು ಸಾಧಿಸಲು ಬಯಸುತ್ತಿದೆ. ಮೊದಲನೆಯದಾಗಿ, ಗ್ರಾಹಕರಿಗೆ ಆಯ್ಕೆಯ ಸ್ವಾತಂತ್ರ್ಯ ನೀಡುವುದು. ಅಂದರೆ, ಯಾರಿಗೆ ಡೇಟಾ ಅಗತ್ಯವಿಲ್ಲವೋ ಅವರು ಕೇವಲ ಕರೆ ಮತ್ತು SMS ಸೇವೆಗಳಿಗಾಗಿ ಕಡಿಮೆ ಬೆಲೆಗೆ ಯೋಜನೆಗಳನ್ನು ಆರಿಸಿಕೊಳ್ಳಬಹುದು.
TRAI ಈ ಕ್ರಮದಿಂದ ಎರಡು ಪ್ರಮುಖ ಗುರಿಗಳನ್ನು ಸಾಧಿಸಲು ಬಯಸುತ್ತಿದೆ. ಮೊದಲನೆಯದಾಗಿ, ಗ್ರಾಹಕರಿಗೆ ಆಯ್ಕೆಯ ಸ್ವಾತಂತ್ರ್ಯ ನೀಡುವುದು. ಅಂದರೆ, ಯಾರಿಗೆ ಡೇಟಾ ಅಗತ್ಯವಿಲ್ಲವೋ ಅವರು ಕೇವಲ ಕರೆ ಮತ್ತು SMS ಸೇವೆಗಳಿಗಾಗಿ ಕಡಿಮೆ ಬೆಲೆಗೆ ಯೋಜನೆಗಳನ್ನು ಆರಿಸಿಕೊಳ್ಳಬಹುದು.

ಟ್ರಾಯ್ ಹೇಳುವಂತೆ, ಈ ತಿದ್ದುಪಡಿ ಪಾರದರ್ಶಕತೆಯನ್ನು ಹೆಚ್ಚಿಸುವುದರ ಜೊತೆಗೆ ಟೆಲಿಕಾಂ ಮಾರುಕಟ್ಟೆಯಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುತ್ತದೆ. ಕಂಪನಿಗಳು ಗ್ರಾಹಕರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ರೀತಿಯ ಯೋಜನೆಗಳನ್ನು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.
ಟ್ರಾಯ್ ಹೇಳುವಂತೆ, ಈ ತಿದ್ದುಪಡಿ ಪಾರದರ್ಶಕತೆಯನ್ನು ಹೆಚ್ಚಿಸುವುದರ ಜೊತೆಗೆ ಟೆಲಿಕಾಂ ಮಾರುಕಟ್ಟೆಯಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುತ್ತ

Related Posts

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

  ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮಅವರು ಉಸಿರಾಟದ ಸಮಸ್ಯೆಯಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರಾಜಕೀಯವಾಗಿ ಸದಾ ಬ್ಯುಸಿಯಾಗಿದ್ದ ದೇವೇಗೌಡರ ಸಂಸಾರದ ಬೆನ್ನೆಲುಬಾಗಿದ್ದ ಗಟ್ಟಿಗಿತ್ತಿ ಇಹಲೋಕ ತ್ಯಜಿಸಿದ್ದಾರೆ. ಕೆಲ ವರ್ಷಗಳಿಂದಲೂ ಉಸಿರಾಟ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಇವರ ಆರೋಗ್ಯದಲ್ಲಿ…

KRS ಒಳಹರಿವಿನಲ್ಲಿ ಭಾರೀ ಇಳಿಕೆ: ರೈತರು ಮತ್ತು ಬೆಂಗಳೂರಿಗರಲ್ಲಿ ಹೆಚ್ಚಿದ ಆತಂಕ!

ಜಲಾನಯನ ಪ್ರದೇಶದಲ್ಲಿ ವರುಣನ ಅಬ್ಬರ ಕಡಿಮೆಯಾಗುತ್ತಿದ್ದಂತೆಯೇ, ಮಂಡ್ಯ ಜಿಲ್ಲೆಯ ಜೀವನಾಡಿಯಾದ ಕೆ.ಆರ್.ಎಸ್ (KRS) ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ಇದು ಕೇವಲ ಕೃಷಿಯನ್ನೇ ನಂಬಿದ ಅನ್ನದಾತರ ನಿದ್ದೆಗೆಡಿಸಿರುವುದು ಮಾತ್ರವಲ್ಲದೆ, ಕಾವೇರಿ ನೀರನ್ನೇ ಅವಲಂಬಿಸಿರುವ ಸಿಲಿಕಾನ್ ಸಿಟಿ ಬೆಂಗಳೂರಿಗೂ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!