ವಂದೇ ಭಾರತ್ ಟ್ರೈನ್ ಪ್ರಯಾಣಿಕರಿಗೆ ಗುಡ್ ನ್ಯೂಸ್!

ವಂದೇ ಭಾರತ್ ಟ್ರೇನ್ ಗಳು ನಿಮ್ಮ ರೈಲ್ವೇ ನಿಲ್ದಾಣಕ್ಕೆ ಬರುವ 15 ನಿಮಿಷ ಮುಂಚೆ ವಂದೇ ಭಾರತ್ ಟ್ರೇನ್ ಟಿಕೆಟ್ ಬುಕ್ ಮಾಡಬಹುದು. ದಕ್ಷಿಣ ರೈಲ್ವೇಯ 8 ವಂದೇ ಭಾರತ್ ಟ್ರೇನ್ ಗಳಲ್ಲಿ ಈ ಸೌಲಭ್ಯವನ್ನು ಪ್ರಯಾಣಿಕರಿಗೆ ನೀಡಲಾಗಿದೆ.

ಇನ್ನೂ ಮುಂದೆ ನೀವು ವಂದೇ ಭಾರತ್ ಟ್ರೇನ್ ನಲ್ಲಿ ಸಂಚಾರ ಮಾಡಲು ಒಂದು ತಿಂಗಳು, 15 ದಿನ ಮುಂಚಿತವಾಗಿ ಟಿಕೆಟ್ ಬುಕ್ ಮಾಡುವ ಅಗತ್ಯವಿಲ್ಲ. ಟ್ರೇನ್ ನಿಮ್ಮ ರೈಲ್ವೇ ನಿಲ್ದಾಣಕ್ಕೆ ಬರುವ 15 ನಿಮಿಷ ಮುಂಚಿತವಾಗಿ ಟ್ರೇನ್ ಟಿಕೆಟ್ ಬುಕ್ ಮಾಡಬಹುದು.
ದಕ್ಷಿಣ ರೈಲ್ವೇಯ ಆಯ್ದ ಎಂಟು ವಂದೇ ಭಾರತ್ ಟ್ರೇನ್ ಗಳಿಗೆ ಈ ಸೌಲಭ್ಯವನ್ನು ರೈಲ್ವೇ ಇಲಾಖೆ ನೀಡಿದೆ. ಈ ಮೊದಲು, ವಂದೇ ಭಾರತ್ ಟ್ರೇನ್ ತನ್ನ ಮೊದಲು ರೈಲ್ವೇ ಸ್ಟೇಷನ್ ನಿಂದ ಹೊರಟ ಬಳಿಕ ಆ ಮಾರ್ಗದ ಸ್ಟೇಷನ್ ಗಳಲ್ಲಿ ವಂದೇ ಭಾರತ್ ಟ್ರೇನ್ ನಲ್ಲಿ ಟಿಕೆಟ್ ಬುಕ್ ಮಾಡಲು ಅವಕಾಶವೇ ಇರಲಿಲ್ಲ.

https://www.youtube.com/live/qagANuO90ZQ?si=-N-KgicfDBPGbD3K JDS ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಹಿರಿಯೂರು

ಆದರೇ, ಈಗ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ ಅನ್ನು ಅಪ್ ಡೇಟ್ ಮಾಡಿರುವುದರಿಂದ ಖಾಲಿ ಇರುವ ಸೀಟುಗಳನ್ನು, ವಂದೇ ಭಾರತ್ ಟ್ರೇನ್ , ತಮ್ಮ ನಿಲ್ದಾಣಕ್ಕೆ ಬರುವ 15 ನಿಮಿಷಗಳ ಮುಂಚೆ ಕೂಡ ಬುಕ್ ಮಾಡಲು ಅವಕಾಶ ಕೊಡಲಾಗಿದೆ. ವಂದೇ ಭಾರತ್ ಟ್ರೇನ್ ಸಂಚರಿಸುವ ಮಾರ್ಗದ ಯಾವುದೇ ಸ್ಟೇಷನ್ ನಿಂದ ಬೇಕಾದರೂ ಹೊರಡಲು 15 ನಿಮಿಷಗಳ ಮುಂಚೆ ಟ್ರೇನ್ ಟಿಕೆಟ್ ಬುಕ್ ಮಾಡಿ ಟ್ರೇನ್ ನಲ್ಲಿ ಸಂಚಾರ ಮಾಡಬಹುದು.
ಯಾವ್ಯಾವ ವಂದೇ ಭಾರತ್ ಟ್ರೇನ್ ಗಳಲ್ಲಿ ಈ ಸೌಲಭ್ಯ ಇದೆ?
ದಕ್ಷಿಣ ರೈಲ್ವೇಯು ಸದ್ಯಕ್ಕೆ ಎಂಟು ವಂದೇ ಭಾರತ್ ಟ್ರೇನ್ ಗಳಲ್ಲಿ 15 ನಿಮಿಷ ಮುಂಚಿತವಾಗಿ ಟಿಕೆಟ್ ಬುಕ್ ಮಾಡಲು ಅವಕಾಶ ಕೊಟ್ಟಿದೆ. ಆ ವಂದೇ ಭಾರತ್ ಟ್ರೇನ್ ಗಳು ಯಾವ್ಯಾವು? ಯಾವ್ಯಾವ ಮಾರ್ಗದಲ್ಲಿ ವಂದೇ ಭಾರತ್ ಟ್ರೇನ್ ಗಳು ಸಂಚಾರ ಮಾಡುತ್ತಾವೆ ಅನ್ನೋ ವಿವರ ಇಲ್ಲಿದೆ ಓದಿ.

20631- ಮಂಗಳೂರು ಸೆಂಟ್ರಲ್- ತಿರುವನಂತಪುರ ಸೆಂಟ್ರಲ್
20632- ತಿರುವನಂತಪುರ ಸೆಂಟ್ರಲ್- ಮಂಗಳೂರು ಸೆಂಟ್ರಲ್
20646-ಮಂಗಳೂರು ಸೆಂಟ್ರಲ್- ಮಡಗಾಂವ್
20642-ಕೊಯಮತ್ತೂರು- ಬೆಂಗಳೂರು ಕಂಟೋನ್ ಮೆಂಟ್
20671-ಮಧುರೈ- ಬೆಂಗಳೂರು ಕಂಟೋನ್ ಮೆಂಟ್
20627-ಚೆನ್ನೈ ಎಗ್ಮೋರ್–ನಾಗರಕೋಯೀಲ್
20628- ನಾಗರಕೋಯೀಲ್- ಚೆನ್ನೈ ಎಗ್ಮೋರ್
20677–ಡಾ.ಎಂಜಿಆರ್‌ ಚೆನ್ನೈ ಸೆಂಟ್ರಲ್–ವಿಜಯವಾಡ

ದೇಶದಲ್ಲಿ ವಂದೇ ಭಾರತ್ ಟ್ರೇನ್ ಗಳ ಜನಪ್ರಿಯತೆ ಹೆಚ್ಚಾಗುತ್ತಿದೆ. ಸಾಮಾನ್ಯ ಟ್ರೇನ್ ಗಳಿಗಿಂತ ಹೆಚ್ಚು ಕಂಫರ್ಟ್, ಕ್ಲೀನ್ ನೆಸ್, ಸ್ಪೀಡ್, ಲಕ್ಷುರಿ ಪ್ರಯಾಣಕ್ಕಾಗಿ ಜನರು ವಂದೇ ಭಾರತ್ ಟ್ರೇನ್ ಗಳಲ್ಲಿ ಸಂಚಾರವನ್ನು ಇಷ್ಟಪಡುತ್ತಿದ್ದಾರೆ. ಹೀಗಾಗಿ ವಂದೇ ಭಾರತ್ ಟ್ರೇನ್ ಗಳ ಸೀಟುಗಳನ್ನು ಸಂಪೂರ್ಣವಾಗಿ ಪ್ರಯಾಣಿಕರಿಗೆ ಬಳಸಿಕೊಳ್ಳುವ ಉದ್ದೇಶದಿಂದ ಕೊನೆಯ 15 ನಿಮಿಷದವರೆಗೂ ಟಿಕೆಟ್ ಬುಕ್ ಮಾಡಲು ಈಗ ಅವಕಾಶ ಕೊಡಲಾಗಿದೆ. ಜೊತೆಗೆ ಸಡನ್ನಾಗಿ ಪ್ರಯಾಣ ಮಾಡಲು ರೈಲ್ವೇ ಸ್ಟೇಷನ್ ಗೆ ಬರುವವರಿಗೂ ಕೊನೆಯ 15 ನಿಮಿಷಗಳಲ್ಲಿ ಟ್ರೇನ್ ಟಿಕೆಟ್ ತಗೊಂಡು ವಂದ್ ಭಾರತ್ ಟ್ರೇನ್ ನಲ್ಲಿ ಸಂಚಾರ ಮಾಡಬಹುದು. ರೈಲ್ವೇಯ ಪ್ರಯಾಣಿಕರ ಅನುಕೂಲಕ್ಕಾಗಿ ತನ್ನ ಬುಕ್ಕಿಂಗ್ ಸಿಸ್ಟಮ್ ಅನ್ನು ಪ್ಲೆಕ್ಸಿಬಲ್ ಆಗುವಂತೆ ಮಾಡಿದೆ.
ಹಾಗಂತ ವಂದೇ ಭಾರತ್ ಟ್ರೇನ್ ಗಳು ಪ್ರಯಾಣಿಕರಿಲ್ಲದೇ ಖಾಲಿ ಓಡುತ್ತಿಲ್ಲ. ವಂದೇ ಭಾರತ್ ಟ್ರೇನ್ ಗಳೆಲ್ಲಾ ಪ್ರಯಾಣಿಕರಿಂದ ಶೇ.100 ಕ್ಕೂ ಹೆಚ್ಚು ಫುಲ್ ಆಗಿವೆ. 2024-25 ರಲ್ಲಿ ವಂದೇ ಭಾರತ್ ಟ್ರೇನ್ ಗಳು ಶೇ.102 ರಷ್ಟು ಪ್ರಯಾಣಿಕರಿಂದ ಭರ್ತಿ ಆಗಿವೆ. 2025-26 ರಲ್ಲಿ ಶೇ.105 ರಷ್ಟು ಪ್ರಯಾಣಿಕರಿಂದ ಸೀಟುಗಳು ಭರ್ತಿಯಾಗಿವೆ ಎಂದು ಕೇಂದ್ರದ ರೈಲ್ವೇ ಖಾತೆ ಸಚಿವ ಅಶ್ವಿನ್ ವೈಷ್ಣವ್ ಮಾಹಿತಿ ನೀಡಿದ್ದರು.

Related Posts

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 25 ರಿಂದ 28 ರೂಪಾಯಿಗಳಷ್ಟು ಹೆಚ್ಚಾಗಲಿದೆ ಎಂಬ ವದಂತಿಗಳು ಹರಡಿವೆ. ಆದರೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವರದಿಗಳನ್ನು ಅಧಿಕೃತವಾಗಿ…

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ಕರ್ನಾಟಕದ ತಮ್ಮ ಹುಟ್ಟೂರಿನಲ್ಲಿ ಇಂದಿಗೂ ಜಾತಿ ಪದ್ಧತಿ ಜೀವಂತವಾಗಿದ್ದು, ಊರಿನ ದೇವಸ್ಥಾನಕ್ಕೆ ತಮಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, 12 ವರ್ಷದವರಿದ್ದಾಗ ಹೋಟೆಲೊಂದರಲ್ಲಿ ಊಟ ಮಾಡಿದ ನಂತರ ಹಣ ನೀಡಿದರೂ ಸಹ, ಕೆಳಜಾತಿಯವರೆಂಬ ಕಾರಣಕ್ಕೆ ತಟ್ಟೆಯನ್ನು…

You Missed

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು