ಪ್ರಾಣಿ ಪಕ್ಷಿಗಳಿಗೂ ಬದುಕುವ ಹಕ್ಕಿದೆ :ವಿಕ್ರಂ ಅಯ್ಯಂಗಾರ್
ಮೈಸೂರು ನಗರದ ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ
ತೀವ್ರ ಬೇಸಿಗೆ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ನಂದಿ ಹತ್ತಿರ ಕೋತಿಗಳಿಗೆ ದಾಹ ನೇಗಿಸಲು ನೀರಿನ ತೊಟ್ಟಿ ಅಳವಡಿಸಿ ಸ್ಥಳೀಯ ವ್ಯಾಪಾರಸ್ಥರಿಗೆ ಪ್ರತಿನಿತ್ಯ ನೀರಿನ ತೊಟ್ಟಿಗೆ ನೀರನ್ನು ಹಾಕುವಂತೆ ಮನವಿ ಜಾಗೃತಿ ಮೂಡಿಸಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಎಲ್ಲಾ ಜೀವಿಗಳಿಗೂ ಮನುಷ್ಯರಂತೆ ಭಾವನೆಗಳಿವೆ.
ಅವುಗಳ ಕ್ರಿಯೆ ಪ್ರತಿಕ್ರಿಯೆಯನ್ನು ಸೂಕ್ಷ್ಮತೆಯಿಂದ ಹರಿಯುವ ಮನಸ್ಸು ಇಂದಿನ ಪೀಳಿಗೆಗೆ ಅವಶ್ಯಕತೆ, ಪರಿಸರದಲ್ಲಿ ಪ್ರಾಣಿ ಪಕ್ಷಿಗಳಿಗೂ ಬದುಕುವ ಹಕ್ಕಿದೆ ಪ್ರಾಣಿ ಪಕ್ಷಿಗಳ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಮನುಷ್ಯರ ಆಧ್ಯ ಕರ್ತವ್ಯವಾಗಿದೆ ಆದರೆ ಮೊಬೈಲ್ ತರಂಗಗಳಿಂದ ಹಾಗೂ ಪರಿಸರ ಅರಣ್ಯ ನಾಶದಿಂದ ಪಕ್ಷಿಗಳೇ ಮಾಯವಾಗಿರುವುದು
ದುರಂತದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು
ಇದೇ ಸಂದರ್ಭದಲ್ಲಿ ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್,ನಜರ್ಬಾದ್ ನಟರಾಜ್,
ಕಡಕೋಳ ಗ್ರಾಮ ಪಂಚಾಯಿತಿ ಆರೋಗ್ಯ ಅಧಿಕಾರಿ ಮಂಜುನಾಥ್,ಕನಕ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ರವಿಚಂದ್ರ,
ಲೋಕೇಶ್ ,ನಿತೇಶ್,ಕಡಕೋಳ ಶಿವು,ಎಸ್ ಎನ್ ರಾಜೇಶ್ ಹರೀಶ್ ನಾಯ್ಡು ಹಾಗೂ ಇನ್ನಿತರರು ಹಾಜರಿದ್ದರು





