ಮೊಬೈಲ್‌ ಬಿಡಿ, ಗಿಡ ನೆಡಿ – ನಿಮ್ಮ ಓಲೈಕೆಯಲ್ಲೊಂದು ಕಾಡು ಬೆಳೆಸೋಣ.

ಇಂದಿನ ದಿನಗಳಲ್ಲಿ ಹಿರಿಯರೂ, ಮಕ್ಕಳೂ ,ಎಲ್ಲರೂ ಡಿಜಿಟಲ್ ಸಾಧನಗಳ ಸೆಳೆಯುವ ಬಲೆಗೆ ಸಿಕ್ಕಿಹಾಕಿಕೊಂಡಿದ್ದಾರೆ. “ಒಂದೆರಡು ನಿಮಿಷ” ಎಂದೇ ಮೊಬೈಲ್ ಕೈಗೆತ್ತಿಕೊಳ್ಳುವದರಿಂದ, ಗಂಟೆಗಳ ಕಾಲ ಸಮಯ ವ್ಯರ್ಥವಾಗುವುದು ಸಾಮಾನ್ಯ. ಈ ಡಿಜಿಟಲ್ ವ್ಯಸನದಿಂದ ಮುಕ್ತಿಯಾಗಲು ಹಲವಾರು ಉಪಾಯಗಳು ಇದ್ದರೂ, ಫಲಿತಾಂಶ ಕಡಿಮೆಯೇ ಇರುತ್ತದೆ.

ಆದರೆ ‘Forest: Stay Focused’ ಎಂಬ ಆ್ಯಪ್‌ ಇದರ ಬದಲಿ ಪರಿಹಾರವಾಗಬಹುದು. ಇದರ ಮೂಲಕ ನೀವು ಮೊಬೈಲ್‌ನಿಂದ ದೂರವಿರುವಷ್ಟು ಸಮಯ ನಿಗದಿಪಡಿಸಬಹುದು.

ಆ್ಯಪ್ ಹೇಗೆ ಕೆಲಸ ಮಾಡುತ್ತದೆ?

  • ನೀವು ಮೊಬೈಲ್ ಉಪಯೋಗಿಸದೆ ಇರಬೇಕಾದ ಸಮಯವನ್ನು ಆಯ್ಕೆಮಾಡಿ, ಆ ಸಮಯದಲ್ಲಿ ಒಂದು ಡಿಜಿಟಲ್ ಮರವನ್ನು ನೆಡಲಾಗುತ್ತದೆ.
  • ನೀವು ಮೊಬೈಲ್ ಉಪಯೋಗಿಸಿದರೆ, ಆ ಗಿಡ ನಶಿಸುತ್ತೆ.
  • ನೀವು ಮೊಬೈಲ್ ಸ್ಪರ್ಶವಿಲ್ಲದೇ ನಿರ್ದಿಷ್ಟ ಸಮಯವನ್ನೂ ಪೂರೈಸಿದರೆ, ಆ ಮರ ಬೆಳೆಯುತ್ತದೆ.
  • ಮರಗಳನ್ನು ಬೆಳೆಯಿಸುತ್ತಾ ಹೋದಂತೆ, ನಿಮ್ಮ ‘ವರ್ಚುವಲ್ ಕಾಡು’ ಹರಡುತ್ತ ಹೋಗುತ್ತದೆ.

ಇದರ ವಿಶೇಷತೆ ಏನು?

ಹೆಚ್ಚು ಮರಗಳನ್ನು ಬೆಳೆಸಿದಂತೆ ಕಾಯಿನ್‌ಗಳು ಸಿಗುತ್ತವೆ. ಈ ಕಾಯಿನ್‌ಗಳನ್ನು ನಿಜವಾದ ಮರಗಳನ್ನು ನೆಡುವ ಪರಿಸರ ಪ್ರಾಜೆಕ್ಟ್‌ಗಳಿಗೆ ದಾನವಾಗಿ ಬಳಸಿ, ನಿಜಕ್ಕೂ ಗಿಡ ನೆಡುವ ಅವಕಾಶ ದೊರೆಯುತ್ತದೆ.

ಫಲಿತಾಂಶ?

  • ಮೊಬೈಲ್ ವ್ಯಸನ ಕಡಿಮೆಯಾಗುತ್ತದೆ
  • ಗಮನ ವೃದ್ಧಿಯಾಗುತ್ತದೆ
  • ಪರಿಸರದ ರಕ್ಷಣೆಗೆ ಸಹಭಾಗಿಯಾಗುವ ಸಂತೋಷವೂ ಸಿಗುತ್ತದೆ

ಡಿಜಿಟಲ್ ಜಗತ್ತಿನಲ್ಲಿ ಕಾಲ ಕಳೆಯುವುದರ ಬದಲು, ಮರ ಬೆಳೆಯಿಸಿ, ಸಮಯವನ್ನು ಅರ್ಥಪೂರ್ಣವಾಗಿ ಕಳೆಯೋಣ.

Related Posts

ಬಂಡೀಪುರ, ನಾಗರಹೊಳೆ ಸಫಾರಿ ಪುನರಾರಂಭ ​​

ವನ್ಯಜೀವಿ ಪ್ರಿಯರಿಗೆ ಬಿಗ್ ನ್ಯೂಸ್ ಸಿಕ್ಕಿದ್ದು, ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ತಾಂತ್ರಿಕ ಸಮಿತಿಯ ವರದಿ ಆಧರಿಸಿ ಪೂರ್ಣ ಪ್ರಮಾಣದ ಜಂಗಲ್ ಸಫಾರಿ ಪುನರಾರಂಭಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ನೀಡಿದೆ. ಮಾನವ ಮತ್ತು ವನ್ಯಜೀವಿ ಸಂಘರ್ಷದ ಕಾರಣದಿಂದಾಗಿ…

ಏಕಾಏಕಿ ಚಿರತೆ ದಾಳಿ, ಆದಿವಾಸಿ ಮಹಿಳೆ ಬದುಕಿದ್ದೇ ಪವಾಡ!

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಹಾಡಿಯಲ್ಲಿ ಚಿರತೆ ಏಕಾಏಕಿ ದಾಳಿ ನಡೆಸಿದ್ದು ಕುರಿ ಮೇಯಿಸುತ್ತಿದ್ದ ಆದಿವಾಸಿ ಮಹಿಳೆ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಜೂನ್​​ 24,ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕಾಡು ಪ್ರಾಣಿಗಳ ಉಪಟಳ ಮಿತಿ ಮೀರಿದ್ದು, ಕಾಡಂಚಿನ ಗ್ರಾಮಗಳ ಜನರ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!