ಮಾರ್ಚ್ 3 ,ರಂದು ಖಗ್ರಾಸ ಚಂದ್ರಗ್ರಹಣ !

ಪ್ರಸಕ್ತ ವರ್ಷ2026ದ ಮೊದಲ ಖಗ್ರಾಸ ಚಂದ್ರಗ್ರಹಣ ಮಾ. 3ರಂದು ಸಂಭವಿ ಸಲಿದೆ. ವಿಶ್ವಾವಸು ನಾಮ ಸಂವತ್ಸರದ ಫಾಲ್ಗುಣ ಮಾಸದ ಹುಣ್ಣಿಮೆಯ ದಿನವಾದ ಮಂಗಳವಾರ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುತ್ತದೆ. ಪುಬ್ಬಾ ನಕ್ಷತ್ರ, ಸಿಂಹ ರಾಶಿಯಲ್ಲಿ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ಹೀಗಾಗಿ ಈ ಗ್ರಹಣವು ಮಘಾ ನಕ್ಷತ್ರ, ಪುಬ್ಬ, ಉತ್ತರ, ಭರಣಿ ಮತ್ತು ಪೂರ್ವಾಷಾಢ ನಕ್ಷತ್ರದವರಿಗೆ ಹಾಗೂ ಸಿಂಹ ರಾಶಿ, ಕನ್ಯಾ, ಮಕರ, ವೃಷಭ ರಾಶಿಯವರೆಗೆ ಸ್ವಲ್ಪ ಅನಿಷ್ಟ ಕಾರಿಯಾಗಲಿದೆ. ಇದಕ್ಕೆ ಪರಿಹಾರವೂ ಇದೆ ಎಂದು ದೈವಜ್ಞಕೆ.ಎನ್. ಸೋಮಯಾಜಿ ತಿಳಿಸಿದರು.

ಗ್ರಹಣದ ಸ್ಪರ್ಶ ಕಾಲ ಮಧ್ಯಾಹ್ನ 3.20ಕ್ಕೆಸಂಭವಿಸಲಿದೆ. ಗ್ರಹಣದ ಮಧ್ಯಕಾಲ ಸಂಜೆ 5.04ಕ್ಕೆ, ಉನ್ನಿಲನ ಕಾಲ ಸಂಜೆ 5.3 5.33ಕ್ಕೆ. ಮೋಕ್ಷಕಾಲವು ಸಂಜೆ 6.47ಕ್ಕೆ ಆಗಲಿದೆ. ಈ ಗ್ರಹಣ ಶುಚಿ ಕಾಲದಲ್ಲಿ ಊಟೋಪಚಾರ, ನಿದ್ದೆ ನಿಷಿದ್ಧವಾದುದು. ಗ್ರಹಣ ಕಾಲಕ್ಕೆ ಕನಿಷ್ಠ 6 ಗಂಟೆಗಳ ಮುಂಚೆ ಆಹಾರ ಸೇವಿಸಬೇಕು. ಮೋಕ್ಷಕಾಲದ ನಂತರ ಸ್ನಾನಾದಿ ರ್ಭೂತರಾಗಿ ದೇವತಾ ಧ್ಯಾನದೊಂದಿಗೆ ನಿತ್ಯ ಜೀವನಕ್ಕೆ ಮರಳುವುದು.ಗ್ರಹಣ ದೋಷ ಪರಿಹಾರಕ್ಕಾಗಿ ಅಕ್ಕಿ, ದೋಷ ಪರಿಹಾರಕ್ಕೆ ಏನು ದಾನ?: ಹುರುಳಿ ಮತ್ತು ಬೆಳ್ಳಿ ಲೋಹ ಸಹಿತವಾಗಿ ವಸ್ತ್ರದಾನ ಮಾಡಬೇಕು. ಜತೆಗೆ ಗ್ರಹಣ ಕಾಲದಲ್ಲಿನಾನಾ ದೇವತಾಧ್ಯಾನ, ತರ್ಪಣ,ಜಪ ಮಾಡಬೇಕು. ದಾನಗಳು ಮತ್ತು ದೇವರ ಧ್ಯಾನದಿಂದ ಅನಿಷ್ಟಗಳು ಶುಭಫಲ ಪ್ರಾಪ್ತಿ ಪರಿಹಾರವಾಗಿ ಯಾಗುತ್ತದೆ. ಗ್ರಹಣದ ವೇಳೆ ಆಹಾರ ಸೇವನೆ ಮತ್ತು ಪ್ರಕೃತಿ ಕರೆಗೆ ವಯೋವೃದ್ಧರು, ರೋಗಿಗಳು, ಗರ್ಭಿಣಿಯರು, ರಜಸ್ವಲೆ (ಋತುಮತಿ) ಯಾದವರು ಮತ್ತು ಚಿಕ್ಕ ಮಕ್ಕಳಿಗೆ ವಿನಾಯಿತಿಯಿದೆ ಸೋಮಯಾಜಿ ನುಡಿದರು.

ಬೇಯಿಸಿದ ಆಹಾರಕ್ಕೆ ದರ್ಬೆಅನ್ವಯವಲ್ಲ: ತುಪ್ಪ, ಹಾಲು, ಮೊಸರು,
ಉಪ್ಪಿನಕಾಯಿ, ಕುಡಿಯುವ ನೀರಿನ ಪಾತ್ರೆ ಮತ್ತು ನೀರಿನ ಟ್ಯಾಂಕ್ ಇತ್ಯಾದಿಗಳಿಗೆ ದರ್ಬೆಯನ್ನು ಇಡು ವುದರಿಂದ ಗ್ರಹಣದ ಮೈಲಿಗೆ ತಗಲು ವುದಿಲ್ಲ. ಈ ನಿಯಮ ಬೇಯಿಸಿದ ಮತ್ತು ಕರಿದ ಪದಾರ್ಥಗಳಿಗೆ ಅನ್ವಯಿಸುವುದಿಲ್ಲ ಎಂದು ಸೋಮಯಾಜಿ ತಿಳಿಸಿದರು.

Related Posts

ಹೊಸ ಸರ್ಕಾರ ಬಂದರೂ ಬದಲಾಗದ ಬೆಂಗಳೂರಿನ ಸ್ಥಿತಿ!

ಬೆಂಗಳೂರಿನ ಬಿಎಂಟಿಸಿ ಬಸ್‌ಗಳ ಕೊರತೆ ಹಾಗೂ ಪ್ರಯಾಣಿಕರ ನಿತ್ಯದ ಪರದಾಟದ ಕುರಿತು ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಐಟಿ ನಗರಿಯಲ್ಲಿ ಹೊಸ ಸರ್ಕಾರ ಮತ್ತು ಹೊಸ ಸಾರಿಗೆ ಸಚಿವರು ಬಂದರೂ ಪರಿಸ್ಥಿತಿ ಬದಲಾಗಿಲ್ಲ, ಬಸ್‌ಗಾಗಿ…

ನಾಡಪ್ರಭು ಕೆಂಪೇಗೌಡರ ಜನ್ಮದಿನದ ಶುಭಾಶಯಗಳು!

ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿರುವ ಎಲ್ಲರೂ ಗೌರವ ಭಾವದಿಂದ ಸ್ಮರಿಸಬೇಕಾದ ದಿನ; ಆಡಳಿತಗಾರರು ಕೃತಜ್ಞತೆಯಿಂದ ನೆನಪಿಸಿಕೊಳ್ಳಬೇಕಾದ ದಿನ. ಏಕೆಂದರೆ, ಬೆಂಗಳೂರಿನಂಥ ಮಹಾಮಹಿಮ ನಗರಕ್ಕೆ ತಳಪಾಯ ಹಾಕಿದ ನಾಡಪ್ರಭುಗಳ 513ನೇ ಜನ್ಮದಿನವಿದು. ಇದನ್ನು ಸರ್ಕಾರವೇ ವಿಜೃಂಭಣೆಯಿಂದ ಆಚರಿಸುತ್ತಿದ್ದು, ‘ಬೆಂಗಳೂರಿನ ಜನಕ’ರನ್ನು ಸ್ಮರಿಸುತ್ತಿದೆ. ಈ ಮೂಲಕ,…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!