ಮಾಲಗತ್ತಿ ದಶಬಲ ಟ್ರಸ್ಟ್ ವತಿಯಿಂದ ‘ಕಾವ್ಯ ಡಮರುಗ’ 2025ರ ರಾಜ್ಯ ಮಟ್ಟದ ಕವಿಗೋಷ್ಠಿ.

ಮೈಸೂರು : ಮಾಲಗತ್ತಿ ದಶಬಲ ಟ್ರಸ್ಟ್ ರೈಟರ್ಸ್ ಅಕಾಡೆಮಿ ವತಿಯಿಂದ ಮಾನಸ ಗಂಗೋತ್ರಿ ಯ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ಕಾವ್ಯ ಡಮರುಗ 2025 ರಾಜ್ಯ ಮಟ್ಟದ ಕವಿಗೋಷ್ಠಿ ಹಾಗೂ ಕವನ ಸಂಕಲನಾ ಮತ್ತು ಕಂಡ ಕಾವ್ಯ ಬಿಡುಗಡೆ ಸಮಾರಂಭವನ್ನು ಇಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ. ಶ್ರೀ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ಸಮಾರಂಭದ ಉದ್ಘಾಟನೆಯನ್ನು ಬೆಂಗಳೂರು ಐಪಿಎಸ್ ಅಧಿಕಾರಿ ಹಾಗೂ ಖ್ಯಾತ ಸಾಹಿತಿಗಳಾದ ಡಾ. ಧರಣಿ ದೇವಿ ಮಾಲಗತ್ತಿಯವರು ನೆರವೇರಿಸಿದರು.
ಕಾರ್ಯಕ್ರಮದ ಕುರಿತು ಪ್ರಾಥಮಿಕ ನುಡಿಯನ ಡಾ. ನೀ.ಗೂ. ರಮೇಶ್ ನೀಡಿದರು . ಅಧ್ಯಕ್ಷತೆಯನ್ನು ಮೈಸೂರು ದಶಬಲ ಟ್ರಸ್ಟ್ ನ ಉಪಾಧ್ಯಕ್ಷರಾದ ಡಾ. ಡಿಕೆ ರಾಜೇಂದ್ರ ಅವರು ವಹಿಸಿಕೊಂಡಿದ್ದರು. ಹೆಸರಾಂತ ವಿಮರ್ಶಕರಾದ ಡಾ. ಆಶಾದೇವಿ ಎಂಎಸ್ ರವರು ಕಂಡ ಕಾವ್ಯದ ಬಿಡುಗಡೆ ಹಾಗೂ ಯವ್ವ ತಾಯವ್ವ ಮಾತೆಯ ಮಹಾಗೀತೆ ಪುಸ್ತಕಗಳನ್ನ ಬಿಡುಗಡೆಗೊಳಿಸಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಡಾಕ್ಟರ್ ಇನ್ ಕೆ ಲೋಲಾಕ್ಷಿ ಹಾಗು ಡಾ. ಅರವಿಂದ ಮಾಲಗತ್ತಿ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಕಾವ್ಯ ಡಮರುಗ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಬೆಂಗಳೂರಿನ ಪ್ರಖ್ಯಾತ ಕವಿಗಳಾದ ಬಿ. ಆರ್. ಲಕ್ಷ್ಮಣರಾವ್ ನೆರವೇರಿಸಿದರು.
ಕವಿಮಾತು: ಸೋಸಲೆ ಗಂಗಾಧರ್, ಮೈಸೂರು

ಆಹ್ವಾನಿತ ಕವಿಗಳ ಪಟ್ಟಿ

  1. ಧಾರಿಣಿ ಮಾಯಾ, ಬೆಂಗಳೂರು
  2. ಜಯಪ್ಪ ಹೊನ್ನಾಳಿ
  3. ಡಾ. ಮೈಸೂರು ಉಮೇಶ್
  4. ಡಿ. ಬಿ. ಢಂಗ, ಧಾರವಾಡ
  5. ಮೀನಾ ಮೈಸೂರು
  6. ರೇಚಂಬಳ್ಳಿ ದುಂಡಮಾದಯ್ಯ, ಚಾಮರಾಜನಗರ
  7. ಪ್ರಶಾಂತ್ ಬೆಳತೂರು, ಮೈಸೂರು
  8. ವಾಸಂತಿ ಸಾಲ್ಮನಿ, ವಿಜಯನಗರ
  9. ರಹಮತ್ ಉನ್ನೀಸಾ, ಚಿತ್ರದುರ್ಗ
  10. ಭಾರತಿ ಮೂಲಿಮನಿ, ವಿಜಯನಗರ
  11. ಡಾ. ದೊಡ್ಡಗೌಡ ಬಿ. ಸಿ, ಹಾಸನ
  12. ಅಭಿಷೇಕ್ ವೈ.ಎಸ್. ಮೈಸೂರು
  13. ಸುಜ್ಜಲೂರು ಮಹದೇವಸ್ವಾಮಿ, ಮೈಸೂರು
  14. ಗಂಗಾಧರ್ ಬನ್ನಿಹಟ್ಟಿ, ಶಿವಮೊಗ್ಡಾ.
  15. ದಕ್ಷ ಮಾಲಗತ್ತಿ, ಮಂಗಳೂರು
  16. ಸೌಮ್ಯಶ್ರೀ ನಿಕ್ಕಂ, ದಾವಣಗೆರೆ
  17. ತೋಟದಮೋನ ಕೃಷ್ಣಮೂರ್ತಿ, ತುಮಕೂರು
  18. ಶಂಭುಲಿಂಗ ಎಂ, ಮಂಡ್ಯ
  19. ಸುಮಂಗಲಾ ರವಿ ಚಕ್ರಸಾಲಿ, ದಕ್ಷಿಣಕನ್ನಡ
  20. ಗುಡ್ಡಪ್ಪ ಎನ್ ಚಟ್ರಮ್ಮನವರ, ಹಾವೇರಿ
  21. ನಳಿನಿ ಬಾಲಸುಬ್ರಮಣ್ಯ, ಶಿವಮೊಗ್ಗ
  22. ಸತೀಶ್ ಗರಣಿ, ಬೆಂಗಳೂರು
  23. ರಜಿತಾ ಕಾರ್ಯಪ್ಪ, ಕೊಡಗು
  24. ಡಾ. ಮಂಜುನಾಥ ಅರ್ಕಸಾಲಿ, ಗದಗ
  25. ಶಾಲಿನಿ ಎಂ ಗೌಡ, ಚಿಕ್ಕಮಗಳೂರು
  26. ಚನ್ನಪ್ಪ ಎಸ್ ಬಾಗ್ಲಿ, ಯಾದಗಿರಿ
  27. ಧನಂಜಯ ಮೆಂಗಸಂದ್ರ, ಚಿತ್ರದುರ್ಗ
  28. ಸುಭಾಷ್ ಹೇಮಣ್ಣ ಚವ್ಹಾಣ, ಹುಬ್ಬಳ್ಳಿ
  29. ಹನುಮೇಶ ಹೆಚ್. ಬಿ, ಕೊಪ್ಪಳ
  30. ಶಿವಲೀಲಾ ಅರ್ಜುನ ಕೋರವಾರ, ವಿಜಯಪುರ
  31. ಕೃಷ್ಣ ಜಿ, ಉಡುಪಿ

ರೈಟರ್ಸ್ ಅಕಾಡೆಮಿಯು ತನ್ನ ಸಂಸ್ಥೆಯ ಕುರಿತಾಗಿ ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭದಲ್ಲಿ ಮಾಲಗತ್ತಿ ಎಂಬ ಹೆಸರು ಇಂದು ಒಬ್ಬ ವ್ಯಕ್ತಿಯ ಹೆಸರೋ ಮನೆತನದ ಹೆಸರೋ ಆಗಿ ಉಳಿದಿಲ್ಲ. ಬದಲಿಗೆ ಅದೊಂದು ಮಾದರಿಯಾಗಿ ರೂಪುಗೊಂಡಿದೆ. ‘ಮಾಲಗತ್ತಿ’ ಎಂಬುದು ಒಂದು ಸಾಹಿತ್ಯಕ ಮಾದರಿ, ಆಡಳಿತದ ಮಾದರಿ, ಕಾರ್ಯದಕ್ಷತೆಯ ಮಾದರಿ, ಸ್ವಾಭಿಮಾನದ ಮಾದರಿ, ಪ್ರಗತಿಪರ ಆಲೋಚನೆಯ ಮಾದರಿ. ಅದನ್ನು ಆ ಕುಟುಂಬದ ಕುಡಿಗಳು ಸಾಬೀತು ಮಾಡಿದ್ದಾರೆ. ಅವರೆಲ್ಲರೂ ಅಷ್ಟಕ್ಕೇ ತೃಪ್ತರಾಗದೆ ತಮ್ಮ ಇಡೀ ಕುಟುಂಬ ಸಮಾಜದಿಂದ ಪಡೆದುಕೊಂಡಿರುವುದನ್ನು ಸಾಧ್ಯವಾದಷ್ಟು ಸಮಾಜಕ್ಕೆ ಹಿಂತಿರುಗಿಸಲು ಮುಂದಾಗಿದ್ದಾರೆ. ಅದರ ಫಲವಾಗಿ ಹುಟ್ಟಿಕೊಂಡಿದ್ದು ‘ಮಾಲಗತ್ತಿ ದಶಬಲ ಟ್ರಸ್ಟ್’, ಅವರ ಸಮಾನ ಮನಸ್ಕ ಸ್ನೇಹಿತರು, ವಿದ್ಯಾರ್ಥಿಗಳ ಜೊತೆಗೂಡಿ ಕಟ್ಟಿಕೊಂಡ ಸಂಸ್ಥೆ ಇದು. ಮೈಸೂರು ಇದರ ಕೇಂದ್ರಸ್ಥಾನವಾದರೂ ಇದರ ಕಾರ್ಯವ್ಯಾಪ್ತಿ ಇಡೀ ರಾಜ್ಯ. ಇದರ ಒಂದು ಅಂಗ ಸಂಸ್ಥೆ ‘ರೈಟರ್ಸ್ ಅಕಾಡೆಮಿ’. ಇದು ಸಂಪೂರ್ಣವಾಗಿ ಸಾಹಿತ್ಯಕ ಚಟುವಟಿಕೆಗಳಿಗೆ ಮೀಸಲಾದ ಸಂಸ್ಥೆ.

ಪ್ರಸ್ತುತ ರೈಟರ್ಸ್ ಅಕಾಡೆಮಿಯು 2025ನೇ ಸಾಲಿನಲ್ಲಿ ತನ್ನ ಚೊಚ್ಚಲ ‘ಕಾವ್ಯ ಢಮರುಗ’ ಎಂಬ ರಾಜ್ಯಮಟ್ಟದ ಕವಿಗೋಷ್ಠಿ ಮತ್ತು ಕವನ ಸಂಕಲನ ಪ್ರಕಟಣೆ ಮಾಡುತ್ತಿದೆ. ಈ ಕವಿಗೋಷ್ಠಿಗೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಿಂದ ಕವಿಗಳು ಭಾಗಿಯಾಗುತ್ತಿರುವುದು ಅದ್ಭುತ ಬೆಳವಣಿಗೆ. ಹಾಗೂ ‘ಕಾವ್ಯ ಢಮರುಗ’ಕ್ಕೆ ಕವಿತೆ ಕಳುಹಿಸಿದ ಎಲ್ಲರಿಗೂ ಕವಿಗೋಷ್ಠಿಯಲ್ಲಿ ಅವಕಾಶ ಕಲ್ಪಿಸುವ ಸಾಧ್ಯತೆ ಇಲ್ಲದ ಕಾರಣ ಆಯ್ದ ಉತ್ತಮ ಕವಿತೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ನಿರ್ಧಾರಕ್ಕೆ ರೈಟರ್ಸ್ ಅಕಾಡೆಮಿ ಬಂದಿದೆ. ಪ್ರತೀ ವರ್ಷ ಜರುಗಲಿರುವ ಈ ರಾಜ್ಯಮಟ್ಟದ ಕವಿಗೋಷ್ಠಿ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ‘ಕಾವ್ಯ ಢಮರುಗ’. ಎಂದು ಕರೆಯಲಾಗಿದೆ. ಈ ಢಮರುಗದ ದನಿ ಕರುನಾಡಿನಾದ್ಯಂತ ಮೊಳಗಲು ನಿಮ್ಮೆಲ್ಲರ ಸಹಕಾರವಿರಲಿ ಎಂದು ರೈಟರ್ಸ್ ಅಕಾಡೆಮಿ ಮೈಸೂರು ತಿಳಿಸಿದೆ.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

  ಒಡಿಶಾದ ಶಿಕ್ಷಾ ಓ ಅನುಸಂಧಾನ ವಿಶ್ವವಿದ್ಯಾಲಯವು ಕರ್ನಾಟಕದ ಹೆಮ್ಮೆಯ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಸನ್ಮಾನಿಸಿದೆ. ನ್ಯಾಯಾಂಗ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆ, ನ್ಯಾಯದ ಪರವಾದ ಬದ್ಧತೆ, ವಿದ್ವತ್ತು ಹಾಗೂ ಮಾನವೀಯ ಮೌಲ್ಯಗಳ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!