ಕಾಂಗ್ರೆಸ್​-RJD ವೇದಿಕೆಯಲ್ಲಿ ನನ್ನ ತಾಯಿನ ನಿಂದಿಸಿದರು.. ಪ್ರಧಾನಿ ಹೇಳಿಕೆ ..

ಆರ್​ಜೆಡಿ ಹಾಗೂ ಕಾಂಗ್ರೆಸ್​ ವೇದಿಕೆಯಿಂದ ನನ್ನ ತಾಯಿಯನ್ನು ನಿಂದಿಸಲಾಯಿತು. ಇದು ಕೇವಲ ನನ್ನ ತಾಯಿ ಮಾತ್ರವಲ್ಲ, ಇಡೀ ದೇಶದ ತಾಯಂದಿರನ್ನು ಅಪಮಾನ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಅವರು ಆರೋಪ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರು ಬಿಹಾರ ರಾಜ್ಯ ಜೀವಿಕ್​ ನಿಧಿ ಸಾಖ್ ಸಹಕಾರಿ ಸಂಘ ಲಿಮಿಟೆಡ್​ ಉದ್ಘಾಟನೆ ಮಾಡಿದರು. ಬಳಿಕ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನನ್ನ ತಾಯಿ ದೇಶ ಸೇವೆ ಮಾಡು ಎಂದು ಆಶೀರ್ವಾದ ಮಾಡಿದ್ದಾಳೆ. ಪ್ರತಿ ತಾಯಿ ತನ್ನ ಮಗ, ತನ್ನ ಸೇವೆ ಮಾಡಲಿ ಎಂದು ಬಯಸುತ್ತಾಳೆ. ಅದರಂತೆ ದೇಶದ ತಾಯಂದಿರ ಸೇವೆ ಮಾಡು ಎಂದು ನನ್ನ ತಾಯಿ ಕಿವಿ ಮಾತು ಹೇಳಿದ್ದಳು. ಈಗ ನನ್ನ ತಾಯಿ ನನ್ನ ಜೊತೆ ಇಲ್ಲ, ನಮ್ಮನ್ನು ಬಿಟ್ಟು ಹೋಗಿದ್ದಾರೆ. ಆದರೆ ಆರ್​​ಜೆಡಿ-ಕಾಂಗ್ರೆಸ್​ ವೇದಿಕೆಯಲ್ಲಿ ನನ್ನ ತಾಯಿಯನ್ನು ನಿಂದಿಸಲಾಯಿತು. ಇದು ತುಂಬಾ ಕಷ್ಟ, ದುಃಖ ಕೊಡುತ್ತದೆ ಎಂದು ಹೇಳಿದ್ದಾರೆ.

 

ತಾಯಿ ಎಂದರೆ ನಮ್ಮ ಸಂಸಾರ, ಪ್ರಪಂಚ. ತಾಯಿ ನಮ್ಮ ಸ್ವಾಭಿಮಾನಿ, ಆತ್ಮಗೌರವ ಆಗಿರುತ್ತಾಳೆ. ಸಮೃದ್ಧವಾದ ಸಂಸ್ಕೃತಿ ಹೊಂದಿರುವ ಬಿಹಾರದಲ್ಲಿ ಕೆಲವು ದಿನಗಳ ಹಿಂದೆ ನಡೆದಂತಹದ್ದನ್ನು ನಾನು ಯಾವಾತ್ತು ಕೂಡ ಕಲ್ಪನೆ ಕೂಡ ಮಾಡಿರಲಿಲ್ಲ. ಬಿಹಾರದ ಯಾವೊಬ್ಬ ತಾಯಿ, ತಂಗಿಯರಿಗೆ, ದೇಶದ ಜನರಿಗೆ ಈ ಕಲ್ಪನೆ ಬಂದಿರಲಿಲ್ಲ. ಆದರೆ ಬಿಹಾರದಲ್ಲಿ ಆರ್​​ಜೆಡಿ- ಕಾಂಗ್ರೆಸ್​ ವತಿಯಿಂದ ನನ್ನ ತಾಯಿಯನ್ನು ನಿಂದಿಸಲಾಯಿತು ಎಂದು ಪ್ರಧಾನಿ ಮೋದಿಯವರು ಆರೋಪ ಮಾಡಿದ್ದಾರೆ.

ಈ ನಿಂದನೆ ಕೇವಲ ನನ್ನ ತಾಯಿಯನ್ನು ಅಪಮಾನ ಮಾಡಿದಂತೆ ಅಲ್ಲ. ಇಡೀ ದೇಶದ ತಾಯಿ, ಅಕ್ಕ, ತಂಗಿ, ಮಗಳಿಗೆ ಮಾಡಿದಂತ ಅಪಮಾನ ಆಗಿದೆ. ಕಾಂಗ್ರೆಸ್​-ಆರ್​​ಜೆಡಿ ಹೇಳಿದ್ದು ಬಿಹಾರದ ಪತ್ರಿ ಮಹಿಳೆಯರಿಗೆ, ಪುರುಷರಿಗೆ ಬೇಸರ ಆಗಿದೆ. ನಾನು ನಿಮ್ಮ ಮಗನಿದ್ದೇನೆ. ಇಷ್ಟೊಂದು ತಾಯಂದಿರ, ಸಹೋದರಿಯರ ನಮ್ಮ ಮುಂದೆ ಇದ್ದಾರೆ. ಇವತ್ತು ನನ್ನ ಮನಸನ್ನು, ನನ್ನ ದುಃಖವನ್ನು ನಿಮ್ಮ ಮುಂದೆ ಹೇಳಿದ್ದೇನೆ. ಇದಕ್ಕೆ ತಾಯಂದಿರ ಆಶೀರ್ವಾದ ಬೇಕು ಅಂತ ಪ್ರಧಾನಿ ಮೋದಿ ಹೇಳಿದ್ದಾರೆ.

Related Posts

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಭಾರತದ ಉಕ್ಕಿನ ಉತ್ಪಾದನಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲೊಂದು ನಿರ್ಮಾಣವಾಗಿದೆ. ಸಮುದ್ರ ಹಾಗೂ ಕಡಲಾಚೆಯ ಬೃಹತ್ ಇಂಜಿನಿಯರಿಂಗ್ ಯೋಜನೆಗಳಲ್ಲಿ ಬಳಸಲಾಗುವ ಅತ್ಯಂತ ಹೆಚ್ಚಿನ ಸಾಮರ್ಥ್ಯದ ವೆಲ್ಡೆಡ್ ಪೈಪ್‌ಗಳನ್ನು (EQ70 ಗ್ರೇಡ್) ಉತ್ಪಾದಿಸಿದ ವಿಶ್ವದ ಮೊದಲ ಸ್ಟೀಲ್ ಕಂಪನಿ ಎಂಬ ಹೆಗ್ಗಳಿಕೆಗೆ ‘ಆರ್ಸೆಲರ್ ಮಿತ್ತಲ್…

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!

ಬೆಂಗಳೂರು/ದೆಹಲಿ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದು, ದೆಹಲಿಯಲ್ಲಿ ನಡೆದ ಹೈಕಮಾಂಡ್ ಸಭೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಮಂಗಳವಾರ (ಮೇ 26) ನಡೆದ ಎಐಸಿಸಿ ಉನ್ನತ ಮಟ್ಟದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಗೌರವಯುತವಾಗಿ ನಿರ್ಗಮಿಸಲು 15…

You Missed

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

3 ದಶಕಗಳ ಬಳಿಕ  ನಟಿ ಬಿಂದ್ಯಾ  ಕ್ಷಮೆ ಕೇಳಿದ್ದೇಕೆ?

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಭೀಮಾ ನದಿ ತೀರದಲ್ಲಿ  ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!