ಕಾಂಗ್ರೆಸ್​-RJD ವೇದಿಕೆಯಲ್ಲಿ ನನ್ನ ತಾಯಿನ ನಿಂದಿಸಿದರು.. ಪ್ರಧಾನಿ ಹೇಳಿಕೆ ..

ಆರ್​ಜೆಡಿ ಹಾಗೂ ಕಾಂಗ್ರೆಸ್​ ವೇದಿಕೆಯಿಂದ ನನ್ನ ತಾಯಿಯನ್ನು ನಿಂದಿಸಲಾಯಿತು. ಇದು ಕೇವಲ ನನ್ನ ತಾಯಿ ಮಾತ್ರವಲ್ಲ, ಇಡೀ ದೇಶದ ತಾಯಂದಿರನ್ನು ಅಪಮಾನ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಅವರು ಆರೋಪ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರು ಬಿಹಾರ ರಾಜ್ಯ ಜೀವಿಕ್​ ನಿಧಿ ಸಾಖ್ ಸಹಕಾರಿ ಸಂಘ ಲಿಮಿಟೆಡ್​ ಉದ್ಘಾಟನೆ ಮಾಡಿದರು. ಬಳಿಕ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನನ್ನ ತಾಯಿ ದೇಶ ಸೇವೆ ಮಾಡು ಎಂದು ಆಶೀರ್ವಾದ ಮಾಡಿದ್ದಾಳೆ. ಪ್ರತಿ ತಾಯಿ ತನ್ನ ಮಗ, ತನ್ನ ಸೇವೆ ಮಾಡಲಿ ಎಂದು ಬಯಸುತ್ತಾಳೆ. ಅದರಂತೆ ದೇಶದ ತಾಯಂದಿರ ಸೇವೆ ಮಾಡು ಎಂದು ನನ್ನ ತಾಯಿ ಕಿವಿ ಮಾತು ಹೇಳಿದ್ದಳು. ಈಗ ನನ್ನ ತಾಯಿ ನನ್ನ ಜೊತೆ ಇಲ್ಲ, ನಮ್ಮನ್ನು ಬಿಟ್ಟು ಹೋಗಿದ್ದಾರೆ. ಆದರೆ ಆರ್​​ಜೆಡಿ-ಕಾಂಗ್ರೆಸ್​ ವೇದಿಕೆಯಲ್ಲಿ ನನ್ನ ತಾಯಿಯನ್ನು ನಿಂದಿಸಲಾಯಿತು. ಇದು ತುಂಬಾ ಕಷ್ಟ, ದುಃಖ ಕೊಡುತ್ತದೆ ಎಂದು ಹೇಳಿದ್ದಾರೆ.

 

ತಾಯಿ ಎಂದರೆ ನಮ್ಮ ಸಂಸಾರ, ಪ್ರಪಂಚ. ತಾಯಿ ನಮ್ಮ ಸ್ವಾಭಿಮಾನಿ, ಆತ್ಮಗೌರವ ಆಗಿರುತ್ತಾಳೆ. ಸಮೃದ್ಧವಾದ ಸಂಸ್ಕೃತಿ ಹೊಂದಿರುವ ಬಿಹಾರದಲ್ಲಿ ಕೆಲವು ದಿನಗಳ ಹಿಂದೆ ನಡೆದಂತಹದ್ದನ್ನು ನಾನು ಯಾವಾತ್ತು ಕೂಡ ಕಲ್ಪನೆ ಕೂಡ ಮಾಡಿರಲಿಲ್ಲ. ಬಿಹಾರದ ಯಾವೊಬ್ಬ ತಾಯಿ, ತಂಗಿಯರಿಗೆ, ದೇಶದ ಜನರಿಗೆ ಈ ಕಲ್ಪನೆ ಬಂದಿರಲಿಲ್ಲ. ಆದರೆ ಬಿಹಾರದಲ್ಲಿ ಆರ್​​ಜೆಡಿ- ಕಾಂಗ್ರೆಸ್​ ವತಿಯಿಂದ ನನ್ನ ತಾಯಿಯನ್ನು ನಿಂದಿಸಲಾಯಿತು ಎಂದು ಪ್ರಧಾನಿ ಮೋದಿಯವರು ಆರೋಪ ಮಾಡಿದ್ದಾರೆ.

ಈ ನಿಂದನೆ ಕೇವಲ ನನ್ನ ತಾಯಿಯನ್ನು ಅಪಮಾನ ಮಾಡಿದಂತೆ ಅಲ್ಲ. ಇಡೀ ದೇಶದ ತಾಯಿ, ಅಕ್ಕ, ತಂಗಿ, ಮಗಳಿಗೆ ಮಾಡಿದಂತ ಅಪಮಾನ ಆಗಿದೆ. ಕಾಂಗ್ರೆಸ್​-ಆರ್​​ಜೆಡಿ ಹೇಳಿದ್ದು ಬಿಹಾರದ ಪತ್ರಿ ಮಹಿಳೆಯರಿಗೆ, ಪುರುಷರಿಗೆ ಬೇಸರ ಆಗಿದೆ. ನಾನು ನಿಮ್ಮ ಮಗನಿದ್ದೇನೆ. ಇಷ್ಟೊಂದು ತಾಯಂದಿರ, ಸಹೋದರಿಯರ ನಮ್ಮ ಮುಂದೆ ಇದ್ದಾರೆ. ಇವತ್ತು ನನ್ನ ಮನಸನ್ನು, ನನ್ನ ದುಃಖವನ್ನು ನಿಮ್ಮ ಮುಂದೆ ಹೇಳಿದ್ದೇನೆ. ಇದಕ್ಕೆ ತಾಯಂದಿರ ಆಶೀರ್ವಾದ ಬೇಕು ಅಂತ ಪ್ರಧಾನಿ ಮೋದಿ ಹೇಳಿದ್ದಾರೆ.

Related Posts

ಅ*ತ್ಯಾಚಾ*ರಿಗಳಿಗೆ ಕಠಿಣ ಶಿಕ್ಷೆ ವಿಧಿಸಿ: ರೇಖಾ ಶ್ರೀನಿವಾಸ್

ಮೈಸೂರು: ಅ*ತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿದ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್. ಪಶ್ಚಿಮ ಬಂಗಾಳದ ಬಾರುಪುರ್ ಮತ್ತುರಾಜಸ್ಥಾನದ ಶ್ರೀ ಗಂಗಾ ನಗರದಲ್ಲಿ ಅ*ಪ್ರಾಪ್ತ ಮೇಲೆ ನಡೆದ ಅ*ತ್ಯಾಚಾ*ರ ಘಟನೆಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿವೆ. ಪ್ರಪಂಚವನ್ನೇ ಅರಿಯದ…

ಮೈಸೂರು ಮಹಾನಗರ ಪಾಲಿಕೆಗೆ ಹೊಸ ಆಯುಕ್ತರ ನೇಮಕ

ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಪ್ರಮುಖ ಮರುಜೀವ ನೀಡಿದ್ದು, ರಾಜ್ಯದ ಹಿರಿಯ ಅಧಿಕಾರಿಗಳ ವರ್ಗಾವಣೆ ಹಾಗೂ ನಿಯೋಜನೆಗೆ ದಿಢೀರ್ ಆದೇಶ ಹೊರಡಿಸಿದೆ. ಸರ್ಕಾರದ ಆಡಳಿತಾತ್ಮಕ ಹಿತದೃಷ್ಟಿಯಿಂದ ನಡೆದಿರುವ ಈ ಪ್ರಕ್ರಿಯೆಯಲ್ಲಿ, ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಮುಖ ಆಡಳಿತಾತ್ಮಕ ಬದಲಾವಣೆ ತರಲಾಗಿದೆ. ಮೈಸೂರು…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!