ಹೊಸ ಟ್ಯಾಟೋ ಮೂಲಕ ನಿತೀಶ್ ರೆಡ್ಡಿ ಸಂದೇಶ..!

ಟೀಮ್​ ಇಂಡಿಯನ್​ ಕ್ರಿಕೆಟರ್​​ಗಳಿಗೂ ಟ್ಯಾಟೂಗಳಿಗೂ ಒಂದು ರೀತಿ ವಿಶೇಷ ನಂಟಿದೆ. ವಿರಾಟ್​ ಕೊಹ್ಲಿ, ಕೆ.ಎಲ್. ರಾಹುಲ್​, ಹಾರ್ದಿಕ್​ ಪಾಂಡ್ಯ, ಸೂರ್ಯಕುಮಾರ್, ಶ್ರೇಯಸ್ ಅಯ್ಯರ್​, ರಿಂಕು ಸಿಂಗ್​, ಹೀಗೆ ಟ್ಯಾಟೂ ಪ್ರಿಯರ ದಂಡೇ ಇದೆ. ಟ್ಯಾಟೊ ಕ್ರೇಜ್​ ಹೊಂದಿರುವ ಕ್ರಿಕೆಟಿಗರು, ತಮ್ಮ ಕೈಗಳ ಮೇಲೆ, ದೇಹದ ಮೇಲೆ ವಿಶೇಷವಾದ ಹಚ್ಚೆ ಹಾಕಿಸಿಕೊಂಡಿದ್ದಿದೆ. ಈ ಪೈಕಿ ನಿತಿಶ್ ಕುಮಾರ್ ರೆಡ್ಡಿಯೂ ಒಬ್ಬರು.

ನಿತೀಶ್ ರೆಡ್ಡಿಗೆ ಟ್ಯಾಟೋ ಕ್ರೇಜ್​ ಇದೆ ಅನ್ನೋದು ಓಪನ್ ಸಿಕ್ರೇಟ್. ಆದ್ರೆ, ಇಂಜುರಿಯಿಂದ ಚೇರಿಸಿಕೊಳ್ಳುತ್ತಿರುವ ನಿತೀಶ್​ ರೆಡ್ಡಿ, ಎರಡು ಹೊಸ ಟ್ಯಾಟೋಗಳನ್ನು ಹಾಕಿಸಿಕೊಂಡಿದ್ದಾರೆ. ಪಕ್ಕೆಲುಬಿನ ಮೇಲೆ ಫಿನಿಕ್ಸ್​ ಹಕ್ಕಿಯ ಟ್ಯಾಟೋ ಹಾಕಿಸಿಕೊಂಡಿರುವ ನಿತೀಶ್ ರೆಡ್ಡಿ, ಬೆನ್ನ ಹಿಂದೆ ಕತ್ತಿಯ ಜೊತೆಗೆ ಹಕ್ಕಿಯ ರೆಕ್ಕೆಯ ಟ್ಯಾಟೋ ಹಾಕಿಸಿಕೊಂಡಿದ್ದಾರೆ. ಇದು ಕ್ರೇಜ್​ಗಾಗಿ ಮಾತ್ರವೇ ಹಾಕಿಸಿಕೊಂಡ ಟ್ಯಾಟೂಗಳು ಇವಲ್ಲ. ಟ್ಯಾಟೋಗಳ ಹಿಂದೆ ಒಂದು ಸಂದೇಶ ಇದೆ.

ಫಿನಿಕ್ಸ್​, ಕತ್ತಿ & ರೆಕ್ಕೆ ಟ್ಯಾಟೋ ಹಿಂದಿದೆ ವಿಶೇಷ ಅರ್ಥ..!

ಫಿನಿಕ್ಸ್​… ಇದು ಜನಪ್ರಿಯ ಪೌರಾಣಿಕ ಹಕ್ಕಿ. ಸತ್ತ ನಂತರವೂ ತನ್ನ ಬೂದಿಯಿಂದಲೇ ಮತ್ತೆ ಹುಟ್ಟಿ ಬರುವುದಕ್ಕೆ ಈ ಹಕ್ಕಿ ಹೆಸರುವಾಸಿ. ಸವಾಲುಗಳನ್ನ ಮೆಟ್ಟಿನಿಲ್ಲುವ ಸಾಮರ್ಥ್ಯ, ಹೋರಾಟದ ಪ್ರತಿರೂಪವೇ ಈ ಹಕ್ಕಿ ಅನ್ನೋದ್ರಲ್ಲಿ ಡೌಟೇ ಇಲ್ಲ. ಸುರ್ಯೋದಯದ ಸಂಕೇತವೂ ಆಗಿದೆ. ಸದ್ಯ ಇಂಜುರಿಯಾಗಿರುವ ನಿತಿಶ್, ಫಿನಿಕ್ಸ್​ ಟ್ಯಾಟೋ ಮೂಲಕ ನೀಡಿರುವ ಸಂದೇಶವೇ ಟೀಮ್ ಇಂಡಿಯಾ ಕಮ್​ಬ್ಯಾಕ್​.

ನಿತೀಶ್ ರೆಡ್ಡಿ ಮೈ ಮೇಲೆ ಮತ್ತೆರೆಡು ಟ್ಯಾಟೋಗಳಿವೆ. ಈ ಪೈಕಿ ಒಂದು ಬಲಗೈ ತೋಳಿನ ಮೇಲ್ಭಾಗದಲ್ಲಿ ಘರ್ಜಿಸ್ತಿರುವ ಹುಲಿ ಇದೆ. ಕೆಳ ಭಾಗದಲ್ಲಿ ಯೋಧನ ಚಿತ್ರವಿದೆ. ಅಷ್ಟೇ ಅಲ್ಲ.! ಈ ಹಚ್ಚೆಯ ಪ್ರಾಮುಖ್ಯತೆ, ಈ ಟ್ಯಾಟೋಗಳು ಪ್ರಭಾವ ಬೀರಿದ ಅಂಶಗಳ ಬಗ್ಗೆ ಸ್ವತಃ ನಿತಿಶ್ ರೆಡ್ಡಿಯೇ ಉಲ್ಲೇಖಿಸಿದ್ದಿದೆ.

 

Related Posts

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

  ಒಡಿಶಾದ ಶಿಕ್ಷಾ ಓ ಅನುಸಂಧಾನ ವಿಶ್ವವಿದ್ಯಾಲಯವು ಕರ್ನಾಟಕದ ಹೆಮ್ಮೆಯ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಸನ್ಮಾನಿಸಿದೆ. ನ್ಯಾಯಾಂಗ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆ, ನ್ಯಾಯದ ಪರವಾದ ಬದ್ಧತೆ, ವಿದ್ವತ್ತು ಹಾಗೂ ಮಾನವೀಯ ಮೌಲ್ಯಗಳ…

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

  ಒಡಿಶಾದ ಪುರಿಯಲ್ಲಿ ಭವ್ಯ ಜಗನ್ನಾಥ ರಥಯಾತ್ರೆ ಇಂದಿನಿಂದ ಆರಂಭಗೊಂಡಿದೆ. ಲಕ್ಷಾಂತರ ಭಕ್ತರು ‘ಜಯ ಜಗನ್ನಾಥ’ ಘೋಷಗಳೊಂದಿಗೆ ಈ ಮಹಾ ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ಜಗನ್ನಾಥ ಸ್ವಾಮಿ, ಬಲಭದ್ರ ಮತ್ತು ಸುಭದ್ರಾ ದೇವಿ ದೇವಾಲಯದಿಂದ ಹೊರಬಂದು ಭಕ್ತರಿಗೆ ದರ್ಶನ ನೀಡುತ್ತಾರೆ. ಹೊಸ ರಥಗಳ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!