ಪೃಥ್ವಿ ಶಾ ಬಾಳಿಗೆ 3ನೇ ಗರ್ಲ್​ಫ್ರೆಂಡ್​​ ಎಂಟ್ರಿ..ನಿಧಿ ತಪಾಡಿಯಾ ಹೋದ್ಲು.. ಹೊಸ ಹುಡುಗಿ ಬಂದ್ಲು

ಟೀಮ್​ ಇಂಡಿಯಾಗೆ ಸಿಕ್ಕ ಅಪರೂಪದ ಟ್ಯಾಲೆಂಟೆಡ್​ ಕ್ರಿಕೆಟರ್​. ಭಾರತದ ಪರ ಡೆಬ್ಯೂ ಪಂದ್ಯದಲ್ಲೇ ಶತಕ ಸಿಡಿಸಿ ಟೀಮ್ ಇಂಡಿಯಾದ ಭವಿಷ್ಯ ಎನಿಸಿಕೊಂಡ ಆಟಗಾರ. ಈತನ ಆಟ ನೋಡಿದ ದಿಗ್ಗಜರು, ಮರಿ ಸಚಿನ್, ಸೆಹ್ವಾಗ್ ಎಂದೇ ಗುಣಗಾನ ಮಾಡಿದ್ರು. 18ನೇ ವಯಸ್ಸಿನಲ್ಲೇ ಇಂಟರ್​ನ್ಯಾಷನಲ್ ಕ್ರಿಕೆಟ್​​ಗೆ ಗ್ರ್ಯಾಂಡ್​​ ಎಂಟ್ರಿ ನೀಡಿದ ಫೈರಿ ಓಪನರ್​ ಅಷ್ಟೇ ವೇಗವಾಗಿ ಮರೆಯಾಗಿ ಹೋದ್ರು. ಸ್ವಯಂಕೃತ ಅಪರಾಧಗಳು ಕರಿಯರ್​ಗೆ​ ಕೊಳ್ಳಿ ಇಟ್ವು.

ನಾನು ಕ್ರಿಕೆಟ್​​ಗಿಂತ ಬೇರೆಯದ್ದಕ್ಕೆ ಹೆಚ್ಚು ನಾನು ಟೈಮ್​ ನೀಡ್ತಿದ್ದೆ. ನನ್ನ ಕರಿಯರ್​ ಹಳ್ಳ ಹಿಡಿಯೋಕೆ ಇದು ಮುಖ್ಯ ಕಾರಣ ಎಂದಿದ್ದ ಪೃಥ್ವಿ ಶಾ ಇದೀಗ ಮತ್ತೆ ಅದೇ ದಾರಿಯಲ್ಲಿ ಸಾಗ್ತಿದ್ದಂತೆ ಕಾಣ್ತಿದ್ದಾರೆ. ಕ್ರಿಕೆಟ್​​​ ಕರಿಯರ್​​ಗೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಪೃಥ್ವಿ ಶಾ ಲವ್​ನಲ್ಲಿ ಬಿದ್ದ ಸುದ್ದಿ ಹೊರಬಿದ್ದಿತ್ತು. ನಟಿ ಪ್ರಾಚಿ ಸಿಂಗ್​ ಜೊತೆಗೆ ಪೃಥ್ವಿಯ ಹೆಸರು ಸಖತ್​ ಸೌಂಡ್​ ಮಾಡಿತ್ತು. ಅಷ್ಟೇ ವೇಗವಾಗಿ ಇಬ್ಬರ ಬ್ರೇಕ್​ ಅಪ್​ ಆಗಿತ್ತು.

 

ಪ್ರಾಚಿ ಸಿಂಗ್​ ಬಳಿಕ ಬಾಲಿವುಡ್​ ನಟಿ ನಿಧಿ ತಪಾಡಿಯಾ ಜೊತೆಗೆ ಪೃಥ್ವಿ ಹೆಸರು ಥಳುಕು ಹಾಕಿಕೊಂಡಿತ್ತು. ಇಬ್ಬರ ನಡೆಗಳೂ ಕೂಡ ಲವ್​ ಗಾಸಿಪ್​ಗೆ ಮತ್ತಷ್ಟು ಪುಷ್ಠಿ ನೀಡಿದ್ವು. 2023ರ ಐಫಾ ಅವಾರ್ಡ್​ ಫಂಕ್ಷನ್​ ವೇಳೆ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ರು. ಅದಾಗಿ ಕೆಲವೇ ದಿನಕ್ಕೆ ಈ ಲವ್​ ಕಹಾನಿಯೂ ಮುರಿದು ಬಿದ್ದ ಸುದ್ದಿ ಹೊರಬಿದ್ದಿತ್ತು.

ನಿಧಿ ತಪಾಡಿಯಾ ದೂರಾದ ಬಳಿಕ ಪೃಥ್ವಿ ಲೈಫ್​ಗೆ ಹೊಸ ಗೆಳತಿಯ ಎಂಟ್ರಿಯಾಗಿದೆ. ಆಕೆಯ ಹೆಸರೇ ಆಕೃತಿ ಅಗರ್​ವಾಲ್​. ಪೃಥ್ವಿ ಶಾ ಹಾಗೂ ಆಕೃತಿ ಅಗರ್​​ವಾಲ್​ ಇಬ್ಬರ ನಡುವೆ ಸಂಮ್​​ಥಿಂಗ್​-ಸಂಮ್​​ಥಿಂಗ್​ ಹ್ಯಾಪನಿಂಗ್​ ಅನ್ನೋ ಗಾಸಿಪ್​ ಬಹಳ ಹಿಂದಿನಿಂದ ಇತ್ತು. ಆ ಗಾಸಿಪ್​ಗೆ ಪುಷ್ಟಿ ಸಿಕ್ಕಿದೆ. ಪೃಥ್ವಿ ಶಾ- ಆಕೃತಿ ಅಗರ್​ವಾಲ್​ ಇಬ್ಬರೂ ಒಟ್ಟಾಗಿ ಗಣೇಶನ ಹಬ್ಬವನ್ನ ಆಚರಿಸಿದ್ದಾರೆ. ಹಬ್ಬದ ಸಂಭ್ರಮದ ಫೋಟೋಗಳನ್ನ ಆಕೃತ್ತಿ ತಮ್ಮ ಇನ್ಸ್​​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಆಕೃತಿ ಅಗರ್​ವಾಲ್​ ಫೋಟೋಗಳನ್ನ ಹಂಚಿಕೊಂಡಿದ್ದೆ ತಡ ಫ್ಯಾನ್ಸ್​​ ಕಮೆಂಟ್​ಗಳ ಸುರಿಮಳೆ ಸುರಿಸಿದ್ದಾರೆ. ಕೆಲವರು ಲವ್​ ಬಗ್ಗೆ ಮಾತನಾಡಿದ್ರೆ, ಇನ್ನು ಕೆಲವರು ಪೃಥ್ವಿಗೆ ಇನ್ನೂ ಬುದ್ಧಿ ಬಂದಿಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರಿಯರ್​ ಮೇಲೆ ಗಮನವಹಿಸಿ ರೈಟ್​​ ಟ್ರ್ಯಾಕ್​ಗೆ ಮರಳೋಕೆ ಇನ್ನೂ ಅವಕಾಶ ಇದೆ. ಅದಕ್ಕೆ ಏನ್​ ಮಾಡಬೇಕೋ ಅದನ್ನ ಬಿಟ್ಟು ಉಳಿದಿರೋದ್ರ ಮೇಲೆ ಹೆಚ್ಚು ಗಮನವಹಿಸ್ತಿದ್ದೀರಾ ಎಂದು ಕಿಡಿಕಾರಿದ್ದಾರೆ.

 

ಒಟ್ಟಿನಲ್ಲಿ ಪೃಥ್ವಿ ಷಾ ಬದುಕಿಗೆ ಹೊಸ ಗೆಳತಿಯ ಎಂಟ್ರಿಯಾಗಿದೆ. ಹೊಸ ಗೆಳತಿಯರ ಎಂಟ್ರಿಯ ಬಳಿಕ ಹಲವು ಕ್ರಿಕೆಟರ್​ಗಳ ಕರಿಯರ್​ ಬದಲಾದ ಉದಾಹರಣೆಗಳಿವೆ. ಹೀಗಾಗಿ ಈ ಆಕೃತಿ ಅಗರ್​ವಾಲ್​ ಪೃಥ್ವಿ ಜೀವನಕ್ಕೆ ಅದೃಷ್ಟ ದೇವತೆಯಾಗ್ತಾರಾ? ಹಳಿ ತಪ್ಪಿರೋ ಪೃಥ್ವಿಯ ಕರಿಯರ್​​ನ ಸರಿದಾರಿಗೆ ತರಲು ಪ್ರಯತ್ನಿಸ್ತಾರಾ? ಕಾದು ನೋಡೋಣ.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

  ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ ! ಆದಿಚುಂಚನಗಿರಿ ಮಠದ ಶಿಕ್ಷಣ ಟ್ರಸ್ಟ್‌ಗೆ ಸೇರಿದ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆರು ಎಕರೆ ಭೂಮಿ ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!