ಪೃಥ್ವಿ ಶಾ ಬಾಳಿಗೆ 3ನೇ ಗರ್ಲ್​ಫ್ರೆಂಡ್​​ ಎಂಟ್ರಿ..ನಿಧಿ ತಪಾಡಿಯಾ ಹೋದ್ಲು.. ಹೊಸ ಹುಡುಗಿ ಬಂದ್ಲು

ಟೀಮ್​ ಇಂಡಿಯಾಗೆ ಸಿಕ್ಕ ಅಪರೂಪದ ಟ್ಯಾಲೆಂಟೆಡ್​ ಕ್ರಿಕೆಟರ್​. ಭಾರತದ ಪರ ಡೆಬ್ಯೂ ಪಂದ್ಯದಲ್ಲೇ ಶತಕ ಸಿಡಿಸಿ ಟೀಮ್ ಇಂಡಿಯಾದ ಭವಿಷ್ಯ ಎನಿಸಿಕೊಂಡ ಆಟಗಾರ. ಈತನ ಆಟ ನೋಡಿದ ದಿಗ್ಗಜರು, ಮರಿ ಸಚಿನ್, ಸೆಹ್ವಾಗ್ ಎಂದೇ ಗುಣಗಾನ ಮಾಡಿದ್ರು. 18ನೇ ವಯಸ್ಸಿನಲ್ಲೇ ಇಂಟರ್​ನ್ಯಾಷನಲ್ ಕ್ರಿಕೆಟ್​​ಗೆ ಗ್ರ್ಯಾಂಡ್​​ ಎಂಟ್ರಿ ನೀಡಿದ ಫೈರಿ ಓಪನರ್​ ಅಷ್ಟೇ ವೇಗವಾಗಿ ಮರೆಯಾಗಿ ಹೋದ್ರು. ಸ್ವಯಂಕೃತ ಅಪರಾಧಗಳು ಕರಿಯರ್​ಗೆ​ ಕೊಳ್ಳಿ ಇಟ್ವು.

ನಾನು ಕ್ರಿಕೆಟ್​​ಗಿಂತ ಬೇರೆಯದ್ದಕ್ಕೆ ಹೆಚ್ಚು ನಾನು ಟೈಮ್​ ನೀಡ್ತಿದ್ದೆ. ನನ್ನ ಕರಿಯರ್​ ಹಳ್ಳ ಹಿಡಿಯೋಕೆ ಇದು ಮುಖ್ಯ ಕಾರಣ ಎಂದಿದ್ದ ಪೃಥ್ವಿ ಶಾ ಇದೀಗ ಮತ್ತೆ ಅದೇ ದಾರಿಯಲ್ಲಿ ಸಾಗ್ತಿದ್ದಂತೆ ಕಾಣ್ತಿದ್ದಾರೆ. ಕ್ರಿಕೆಟ್​​​ ಕರಿಯರ್​​ಗೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಪೃಥ್ವಿ ಶಾ ಲವ್​ನಲ್ಲಿ ಬಿದ್ದ ಸುದ್ದಿ ಹೊರಬಿದ್ದಿತ್ತು. ನಟಿ ಪ್ರಾಚಿ ಸಿಂಗ್​ ಜೊತೆಗೆ ಪೃಥ್ವಿಯ ಹೆಸರು ಸಖತ್​ ಸೌಂಡ್​ ಮಾಡಿತ್ತು. ಅಷ್ಟೇ ವೇಗವಾಗಿ ಇಬ್ಬರ ಬ್ರೇಕ್​ ಅಪ್​ ಆಗಿತ್ತು.

 

ಪ್ರಾಚಿ ಸಿಂಗ್​ ಬಳಿಕ ಬಾಲಿವುಡ್​ ನಟಿ ನಿಧಿ ತಪಾಡಿಯಾ ಜೊತೆಗೆ ಪೃಥ್ವಿ ಹೆಸರು ಥಳುಕು ಹಾಕಿಕೊಂಡಿತ್ತು. ಇಬ್ಬರ ನಡೆಗಳೂ ಕೂಡ ಲವ್​ ಗಾಸಿಪ್​ಗೆ ಮತ್ತಷ್ಟು ಪುಷ್ಠಿ ನೀಡಿದ್ವು. 2023ರ ಐಫಾ ಅವಾರ್ಡ್​ ಫಂಕ್ಷನ್​ ವೇಳೆ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ರು. ಅದಾಗಿ ಕೆಲವೇ ದಿನಕ್ಕೆ ಈ ಲವ್​ ಕಹಾನಿಯೂ ಮುರಿದು ಬಿದ್ದ ಸುದ್ದಿ ಹೊರಬಿದ್ದಿತ್ತು.

ನಿಧಿ ತಪಾಡಿಯಾ ದೂರಾದ ಬಳಿಕ ಪೃಥ್ವಿ ಲೈಫ್​ಗೆ ಹೊಸ ಗೆಳತಿಯ ಎಂಟ್ರಿಯಾಗಿದೆ. ಆಕೆಯ ಹೆಸರೇ ಆಕೃತಿ ಅಗರ್​ವಾಲ್​. ಪೃಥ್ವಿ ಶಾ ಹಾಗೂ ಆಕೃತಿ ಅಗರ್​​ವಾಲ್​ ಇಬ್ಬರ ನಡುವೆ ಸಂಮ್​​ಥಿಂಗ್​-ಸಂಮ್​​ಥಿಂಗ್​ ಹ್ಯಾಪನಿಂಗ್​ ಅನ್ನೋ ಗಾಸಿಪ್​ ಬಹಳ ಹಿಂದಿನಿಂದ ಇತ್ತು. ಆ ಗಾಸಿಪ್​ಗೆ ಪುಷ್ಟಿ ಸಿಕ್ಕಿದೆ. ಪೃಥ್ವಿ ಶಾ- ಆಕೃತಿ ಅಗರ್​ವಾಲ್​ ಇಬ್ಬರೂ ಒಟ್ಟಾಗಿ ಗಣೇಶನ ಹಬ್ಬವನ್ನ ಆಚರಿಸಿದ್ದಾರೆ. ಹಬ್ಬದ ಸಂಭ್ರಮದ ಫೋಟೋಗಳನ್ನ ಆಕೃತ್ತಿ ತಮ್ಮ ಇನ್ಸ್​​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಆಕೃತಿ ಅಗರ್​ವಾಲ್​ ಫೋಟೋಗಳನ್ನ ಹಂಚಿಕೊಂಡಿದ್ದೆ ತಡ ಫ್ಯಾನ್ಸ್​​ ಕಮೆಂಟ್​ಗಳ ಸುರಿಮಳೆ ಸುರಿಸಿದ್ದಾರೆ. ಕೆಲವರು ಲವ್​ ಬಗ್ಗೆ ಮಾತನಾಡಿದ್ರೆ, ಇನ್ನು ಕೆಲವರು ಪೃಥ್ವಿಗೆ ಇನ್ನೂ ಬುದ್ಧಿ ಬಂದಿಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರಿಯರ್​ ಮೇಲೆ ಗಮನವಹಿಸಿ ರೈಟ್​​ ಟ್ರ್ಯಾಕ್​ಗೆ ಮರಳೋಕೆ ಇನ್ನೂ ಅವಕಾಶ ಇದೆ. ಅದಕ್ಕೆ ಏನ್​ ಮಾಡಬೇಕೋ ಅದನ್ನ ಬಿಟ್ಟು ಉಳಿದಿರೋದ್ರ ಮೇಲೆ ಹೆಚ್ಚು ಗಮನವಹಿಸ್ತಿದ್ದೀರಾ ಎಂದು ಕಿಡಿಕಾರಿದ್ದಾರೆ.

 

ಒಟ್ಟಿನಲ್ಲಿ ಪೃಥ್ವಿ ಷಾ ಬದುಕಿಗೆ ಹೊಸ ಗೆಳತಿಯ ಎಂಟ್ರಿಯಾಗಿದೆ. ಹೊಸ ಗೆಳತಿಯರ ಎಂಟ್ರಿಯ ಬಳಿಕ ಹಲವು ಕ್ರಿಕೆಟರ್​ಗಳ ಕರಿಯರ್​ ಬದಲಾದ ಉದಾಹರಣೆಗಳಿವೆ. ಹೀಗಾಗಿ ಈ ಆಕೃತಿ ಅಗರ್​ವಾಲ್​ ಪೃಥ್ವಿ ಜೀವನಕ್ಕೆ ಅದೃಷ್ಟ ದೇವತೆಯಾಗ್ತಾರಾ? ಹಳಿ ತಪ್ಪಿರೋ ಪೃಥ್ವಿಯ ಕರಿಯರ್​​ನ ಸರಿದಾರಿಗೆ ತರಲು ಪ್ರಯತ್ನಿಸ್ತಾರಾ? ಕಾದು ನೋಡೋಣ.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!