ministers Archives - Good News 24x7 https://www.goodnews24x7.com/tag/ministers/ Kannada Tue, 28 Apr 2026 10:45:14 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg ministers Archives - Good News 24x7 https://www.goodnews24x7.com/tag/ministers/ 32 32 ರಾಜ್ಯ ರಾಜಕಾರಣದಲ್ಲಿ ‘ಹಸ್ತ’ ಕದನ ತೀವ್ರ: ಸಿದ್ದು-ಡಿಕೆಶಿ ಬಣಗಳ ನಡುವೆ ತಂತ್ರ-ಪ್ರತಿತಂತ್ರಗಳ ಮೇಲಾಟ. https://www.goodnews24x7.com/hand-to-hand-battle-in-state-politics-sidhu-dkshi-factions-are-exchanging-tactics-and-counter-tactics/ Tue, 28 Apr 2026 10:45:14 +0000 https://www.goodnews24x7.com/?p=9462 ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿ ಹಂಚಿಕೆಯ ವಿವಾದ ಮತ್ತೆ ತಾರಕಕ್ಕೇರಿದೆ. ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಸಮೀಪಿಸುತ್ತಿದ್ದಂತೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕುರಿತಾದ ಚರ್ಚೆಗಳು ಬಿರುಸಾಗಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಬಣಗಳ ನಡುವಿನ ರಾಜಕೀಯ ಬಡಿದಾಟ ತೀವ್ರಗೊಂಡಿದೆ.…

The post ರಾಜ್ಯ ರಾಜಕಾರಣದಲ್ಲಿ ‘ಹಸ್ತ’ ಕದನ ತೀವ್ರ: ಸಿದ್ದು-ಡಿಕೆಶಿ ಬಣಗಳ ನಡುವೆ ತಂತ್ರ-ಪ್ರತಿತಂತ್ರಗಳ ಮೇಲಾಟ. appeared first on Good News 24x7.

]]>

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿ ಹಂಚಿಕೆಯ ವಿವಾದ ಮತ್ತೆ ತಾರಕಕ್ಕೇರಿದೆ. ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಸಮೀಪಿಸುತ್ತಿದ್ದಂತೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕುರಿತಾದ ಚರ್ಚೆಗಳು ಬಿರುಸಾಗಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಬಣಗಳ ನಡುವಿನ ರಾಜಕೀಯ ಬಡಿದಾಟ ತೀವ್ರಗೊಂಡಿದೆ.

ಡಿಕೆಶಿ ದೆಹಲಿ ದಂಡಯಾತ್ರೆ – ಸಿಎಂ ಗದ್ದುಗೆಗೆ ಕಸರತ್ತು:
ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿ.ಕೆ. ಶಿವಕುಮಾರ್ ಈಗಾಗಲೇ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದಾರೆ. ಪಂಚರಾಜ್ಯಗಳ ಚುನಾವಣಾ ಫಲಿತಾಂಶಕ್ಕೂ ಮುನ್ನವೇ ರಾಜ್ಯದ ನಾಯಕತ್ವ ಬದಲಾವಣೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವಂತೆ ಅವರು ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಮೇ ಮೊದಲ ಅಥವಾ ಎರಡನೇ ವಾರದಲ್ಲಿ ಈ ಪ್ರಕ್ರಿಯೆಗೆ ಚಾಲನೆ ಸಿಗುವ ಸಾಧ್ಯತೆ ಇದೆ ಎಂದು ಅವರ ಆಪ್ತ ವಲಯಗಳು ಸುಳಿವು ನೀಡಿವೆ.

ಅಹಿಂದ ಅಸ್ತ್ರದೊಂದಿಗೆ ಸಿದ್ದರಾಮಯ್ಯ ಬಣದ ಸಡ್ಡು:
ಮತ್ತೊಂದೆಡೆ, ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಬಣ ‘ಅಹಿಂದ’ ಅಸ್ತ್ರವನ್ನು ಪ್ರಯೋಗಿಸಿದೆ. ರಾಜ್ಯಾದ್ಯಂತ ಅಹಿಂದ ಸಮಾವೇಶಗಳನ್ನು ನಡೆಸುವ ಮೂಲಕ ತನ್ನ ನಾಯಕತ್ವವನ್ನು ಬಲಪಡಿಸಲು ಸಿಎಂ ಮುಂದಾಗಿದ್ದಾರೆ. 2028ರ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಸಿದ್ದರಾಮಯ್ಯ ಅವರೇ ನಾಯಕರಾಗಿ ಮುಂದುವರಿಯುವುದು ಅನಿವಾರ್ಯ ಎಂಬ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸುವ ತಂತ್ರ ಇದಾಗಿದೆ.

ಸಂಪುಟ ಪುನರ್‌ರಚನೆಯೇ? ನಾಯಕತ್ವ ಬದಲಾವಣೆಯೇ?:
ಸದ್ಯದ ರಾಜಕೀಯ ವಲಯದಲ್ಲಿ ಎರಡು ಸಾಧ್ಯತೆಗಳ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ:

ಸಂಪುಟ ಪುನರ್‌ರಚನೆ: ಇದು ನಡೆದರೆ ಸಿದ್ದರಾಮಯ್ಯ ಅವರ ಸ್ಥಾನ ಸುಭದ್ರವಾಗಲಿದೆ.

ನಾಯಕತ್ವ ಬದಲಾವಣೆ: ಇದು ಸಂಭವಿಸಿದರೆ ಹೊಸ ಮುಖ್ಯಮಂತ್ರಿಯ ನೇತೃತ್ವದಲ್ಲಿ ಹೊಸ ಸಂಪುಟ ರಚನೆಯಾಗಲಿದೆ.

ಮೇ ತಿಂಗಳ ‘ರಾಜಕೀಯ ಕ್ರಾಂತಿ’:
ಒಂದೆಡೆ ಮೇ 9 ರಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವದ ಮೂಲಕ ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ. ಇದಕ್ಕೆ ಸಡ್ಡು ಹೊಡೆಯಲು ಕಾಂಗ್ರೆಸ್‌ನ ಅಹಿಂದ ಬಣ ಸಮಾವೇಶಗಳ ಯೋಜನೆಯನ್ನು ಹಮ್ಮಿಕೊಂಡಿದೆ. ಆದರೆ ಈ ಸಮಾವೇಶಗಳಿಗೆ ಹೈಕಮಾಂಡ್ ಇನ್ನೂ ಅಧಿಕೃತ ಹಸಿರು ನಿಶಾನೆ ನೀಡಿಲ್ಲ.

ಒಟ್ಟಾರೆಯಾಗಿ, ಮೇ ತಿಂಗಳಿನಲ್ಲಿ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಅಥವಾ ‘ರಾಜಕೀಯ ಕ್ರಾಂತಿ’ ಸಂಭವಿಸುವ ಸಾಧ್ಯತೆಗಳಿದ್ದು, ಹೈಕಮಾಂಡ್ ಯಾರ ಪರವಾಗಿ ನಿಲ್ಲಲಿದೆ ಎಂಬುದು ಕುತೂಹಲ ಮೂಡಿಸಿದೆ.

The post ರಾಜ್ಯ ರಾಜಕಾರಣದಲ್ಲಿ ‘ಹಸ್ತ’ ಕದನ ತೀವ್ರ: ಸಿದ್ದು-ಡಿಕೆಶಿ ಬಣಗಳ ನಡುವೆ ತಂತ್ರ-ಪ್ರತಿತಂತ್ರಗಳ ಮೇಲಾಟ. appeared first on Good News 24x7.

]]>
ಬಡವರ ಒಕ್ಕಲೆಬ್ಬಿಸುವಿಕೆಗೆ ಆಕ್ರೋಶ: ಕೆಡಿಪಿ ಸಭೆಯಲ್ಲೇ ಕಣ್ಣೀರಿಟ್ಟ ಉಪಸಭಾಪತಿ ರುದ್ರಪ್ಪ ಲಮಾಣಿ! https://www.goodnews24x7.com/outrage-over-the-uprooting-of-the-poor-deputy-speaker-rudrappa-lamani-shed-tears-in-the-kdp-meeting-itself/ Sat, 11 Apr 2026 10:36:56 +0000 https://www.goodnews24x7.com/?p=9205 ಹಾವೇರಿ: ಅರಣ್ಯ ಇಲಾಖೆಯು ಅರಣ್ಯ ಭೂಮಿ ಒತ್ತುವರಿ ನೆಪದಲ್ಲಿ ದಶಕಗಳಿಂದ ವಾಸವಿದ್ದ ಬಡವರ ಮೇಲೆ ಎಫ್‌ಐಆರ್ ದಾಖಲಿಸಿ, ಒಕ್ಕಲೆಬ್ಬಿಸುತ್ತಿರುವುದನ್ನು ವಿರೋಧಿಸಿ ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಅವರು ಸಾರ್ವಜನಿಕ ಸಭೆಯಲ್ಲೇ ಕಣ್ಣೀರು ಹಾಕಿದ್ದಾರೆ. ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ನಡೆದ ಜಿಲ್ಲಾ…

The post ಬಡವರ ಒಕ್ಕಲೆಬ್ಬಿಸುವಿಕೆಗೆ ಆಕ್ರೋಶ: ಕೆಡಿಪಿ ಸಭೆಯಲ್ಲೇ ಕಣ್ಣೀರಿಟ್ಟ ಉಪಸಭಾಪತಿ ರುದ್ರಪ್ಪ ಲಮಾಣಿ! appeared first on Good News 24x7.

]]>

ಹಾವೇರಿ: ಅರಣ್ಯ ಇಲಾಖೆಯು ಅರಣ್ಯ ಭೂಮಿ ಒತ್ತುವರಿ ನೆಪದಲ್ಲಿ ದಶಕಗಳಿಂದ ವಾಸವಿದ್ದ ಬಡವರ ಮೇಲೆ ಎಫ್‌ಐಆರ್ ದಾಖಲಿಸಿ, ಒಕ್ಕಲೆಬ್ಬಿಸುತ್ತಿರುವುದನ್ನು ವಿರೋಧಿಸಿ ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಅವರು ಸಾರ್ವಜನಿಕ ಸಭೆಯಲ್ಲೇ ಕಣ್ಣೀರು ಹಾಕಿದ್ದಾರೆ. ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ (KDP) ಸಭೆಯಲ್ಲಿ ಈ ಭಾವನಾತ್ಮಕ ಘಟನೆ ನಡೆದಿದೆ.

ನೋವು ತೋಡಿಕೊಂಡ ಉಪಸಭಾಪತಿ:
ಸ್ವಾತಂತ್ರ್ಯ ಪೂರ್ವದಿಂದಲೂ ಅರಣ್ಯ ಪ್ರದೇಶದ ಅಂಚಿನಲ್ಲಿರುವ ಗ್ರಾಮಸ್ಥರ ಮೇಲೆ ಅರಣ್ಯ ಇಲಾಖೆ ಈಗ ಎಫ್‌ಐಆರ್ ದಾಖಲಿಸುತ್ತಿರುವುದಕ್ಕೆ ರುದ್ರಪ್ಪ ಲಮಾಣಿ ತೀವ್ರ ಬೇಸರ ವ್ಯಕ್ತಪಡಿಸಿದರು. “ನಾನು ಕಲಿತ ಶಾಲೆಯೇ ಅರಣ್ಯ ವ್ಯಾಪ್ತಿಯಲ್ಲಿದೆ ಎಂದು ಪ್ರಕರಣ ದಾಖಲಿಸಿದರೆ ಹೇಗೆ? 75 ವರ್ಷಗಳಿಂದ ವಾಸವಿದ್ದವರನ್ನು ಒಕ್ಕಲೆಬ್ಬಿಸಿದರೆ ಸಾವಿರಾರು ಬಡವರು ಎಲ್ಲಿಗೆ ಹೋಗಬೇಕು? ನಮ್ಮನ್ನು ನಂಬಿದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗದಿದ್ದರೆ ನಮ್ಮ ಅಧಿಕಾರಕ್ಕೆ ಏನು ಬೆಲೆ?” ಎಂದು ಭಾವೋದ್ವೇಗಕ್ಕೊಳಗಾಗಿ ಕಣ್ಣೀರು ಸುರಿಸಿದರು.

ಕೇಂದ್ರ ಹಾಗೂ ಸುಪ್ರೀಂ ಕೋರ್ಟ್ ವಿರುದ್ಧ ಅಸಮಾಧಾನ:
ಹಾವೇರಿಯ ಗುತ್ತಲ ತಾಂಡಾ ಮತ್ತು ಕರೂರು ಗ್ರಾಮ ಸೇರಿದಂತೆ ರಾಜ್ಯದ ಸುಮಾರು 22 ಗ್ರಾಮಗಳ ಜನರು ಇದೇ ರೀತಿಯ ಸಂಕಷ್ಟ ಎದುರಿಸುತ್ತಿದ್ದಾರೆ. “ಕಳೆದ ಐದು ವರ್ಷಗಳಿಂದ ನಾನು ಈ ಬಗ್ಗೆ ಕೇಂದ್ರ ಸಚಿವರು, ಸಂಸದರು ಮತ್ತು ಮಾಜಿ ರಾಷ್ಟ್ರಪತಿಗಳಿಗೂ ಮನವಿ ಮಾಡಿದ್ದೇನೆ. ಅಧಿಕಾರಿಗಳು ಮತ್ತು ನ್ಯಾಯಾಲಯಗಳು ಕಚೇರಿಯಲ್ಲಿ ಕುಳಿತು ಆದೇಶ ನೀಡುತ್ತವೆ, ಆದರೆ ಬಡವರ ಸ್ಥಿತಿಯನ್ನು ಯಾರು ನೋಡುತ್ತಾರೆ?” ಎಂದು ಅವರು ಆಕ್ರೋಶ ಹೊರಹಾಕಿದರು.

ಪರಿಹಾರಕ್ಕೆ ಒತ್ತಾಯ:
ಬಡವರಿಗೆ ನ್ಯಾಯ ಒದಗಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಅವರು ಸಂಸದರಿಗೆ ಮನವಿ ಮಾಡಿದರು. ಬಡವರಿಗೆ ತಕ್ಷಣವೇ ಹಕ್ಕುಪತ್ರ ನೀಡಬೇಕು ಮತ್ತು ಅರಣ್ಯ ಇಲಾಖೆಯ ಕಿರುಕುಳವನ್ನು ತಪ್ಪಿಸಬೇಕು. ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಮಾನವೀಯ ನೆಲೆಯಲ್ಲಿ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಡೆಪ್ಯುಟಿ ಸ್ಪೀಕರ್ ಒತ್ತಾಯಿಸಿದ್ದಾರೆ.

The post ಬಡವರ ಒಕ್ಕಲೆಬ್ಬಿಸುವಿಕೆಗೆ ಆಕ್ರೋಶ: ಕೆಡಿಪಿ ಸಭೆಯಲ್ಲೇ ಕಣ್ಣೀರಿಟ್ಟ ಉಪಸಭಾಪತಿ ರುದ್ರಪ್ಪ ಲಮಾಣಿ! appeared first on Good News 24x7.

]]>
ಕಾಡು ಹಂದಿ, ಕರಡಿಗಳ ಹಾವಳಿಯಿಂದ ಬೆಳೆ ನಾಶ, ಮುಗಿಲುಗೇರಿದ ರೈತರ ಅರಣ್ಯ ರೋಧನೆ, ಆಲಿಸದ ಅರಣ್ಯ ಇಲಾಖೆ https://www.goodnews24x7.com/crop-destruction-due-to-wild-boars-and-bears-farmers-protest-over-forest-loss-forest-department-not-listening/ Sat, 06 Sep 2025 05:34:47 +0000 https://www.goodnews24x7.com/?p=7397 ಹರವದಿ: ವಿಜಯನಗರ ಜಿಲ್ಲೆ ಕೂಡ್ಲಿಗಿ ರೈತ ದೇಶದ ಬೆನ್ನೆಲುಬು ನಿಜವಾದರೂ , ಕೆಲ ಇಲಾಖೆಗಳು ಮಾತ್ರ ರೈತರ ಹಿತ ಕಾಪಾಡುವಲ್ಲಿ. ಸಂಬಂಧಿಸಿದಂತೆ ಅರಣ್ಯ ಇಲಾಖೆ ಸೇರಿದಂತೆ ವಿವಿದ ಇಲಾಖೆಗಳು , ನಿರ್ಲಕ್ಷ್ಯ ಧೋರಣೆ ತಾಳಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ತಾಲೂಕಿನ…

The post ಕಾಡು ಹಂದಿ, ಕರಡಿಗಳ ಹಾವಳಿಯಿಂದ ಬೆಳೆ ನಾಶ, ಮುಗಿಲುಗೇರಿದ ರೈತರ ಅರಣ್ಯ ರೋಧನೆ, ಆಲಿಸದ ಅರಣ್ಯ ಇಲಾಖೆ appeared first on Good News 24x7.

]]>

ಹರವದಿ: ವಿಜಯನಗರ ಜಿಲ್ಲೆ ಕೂಡ್ಲಿಗಿ ರೈತ ದೇಶದ ಬೆನ್ನೆಲುಬು ನಿಜವಾದರೂ , ಕೆಲ ಇಲಾಖೆಗಳು ಮಾತ್ರ ರೈತರ ಹಿತ ಕಾಪಾಡುವಲ್ಲಿ. ಸಂಬಂಧಿಸಿದಂತೆ ಅರಣ್ಯ ಇಲಾಖೆ ಸೇರಿದಂತೆ ವಿವಿದ ಇಲಾಖೆಗಳು , ನಿರ್ಲಕ್ಷ್ಯ ಧೋರಣೆ ತಾಳಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ತಾಲೂಕಿನ ಹರವದಿ ಕಕ್ಕುಪ್ಪಿ ಜರ್ಮಲಿ ಗ್ರಾಮಗಳು , ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು. ಹೊಲಗಳಿಗೆ ಕರಡಿ ಹಂದಿಗಳ ಹಾವಳಿ ಮಿತಿ ಮೀರಿದ್ದು , ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಗತ್ಯ ಕ್ರಮ ಜರುಗಿಸುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರಡಿಗಳು ಕಾಡು ಹಂದಿಗಳು ಹೊಲದಲ್ಲಿನ ಮೆಕ್ಕೇಜೋಳ , ಹಾಗೂ ಜೋಳದ ಫಸಲನ್ನು ತಿಂದು ಹಾಳು ಮಾಡಿದ್ದು. ಹತ್ತಾರು ವರ್ಷಗಳಿಂದಲೂ ಇದು ಪ್ರತಿಭಾರಿಯೂ ಜರುಗುತ್ತಿದೆ , ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸುವಂತೆ. ಅಗತ್ಯ ಕ್ರಮಗಳನ್ನು ಜರುಗಿಸುವಂತೆ , ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ದೂರಿದ್ದಾರೆ. ಕಾಡು ಹಂದಿ ಕರಡಿಗಳಿಂದ ದಾಳಿಯಿಂದ ಅಪಾರ ಪ್ರಮಾಣಸ ಬೆಳೆ ನಾಶ: ಕಾಡು ಹಂದಿಗಳು ಕರಡಿಗಳು ರೈತರ ಹೊಲಗಳಿಗೆ ನುಗ್ಗಿ, ಕಟಾವು ಹಂತದಲ್ಲಿದ್ದ ಮೆಕ್ಕೆಜೋಳ, ಜೋಳ, ರಾಗಿ ಸೇರಿದಂತೆ ವಿವಿಧ ಬೆಳೆಗಳನ್ನು ನಾಶಪಡಿಸಿ ಅಪಾರ ಪ್ರಮಾಣದ ನಷ್ಟಕ್ಕೆ ಕಾರಣವಾಗುತ್ತಿವೆ. ಈ ಸಂಬಂಧಿಸಿದಂತೆ ಈಗಾಗಾಲೆ ಅರವದಿ ಗ್ರಾಮದ ರೈತರು , ಕೂಡ್ಲಿಗಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಮತ್ತು ತಮಗಾದ ಬೆಳೆ ನಷ್ಟ ತುಂಬಿ ಕಡಬೇಕು , ಅದಕ್ಕಾಗಿ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಕರಡಿಗಳು ಕೆಲವೊಮ್ಮೆ ಹಾಡು ಹಗಲುನಲ್ಲಿಯೇ ಹೊಲದಲ್ಲಿ ಕಾರ್ಯನಿರತ , ರೈತರ ಮೇಲೆ ದಾಳಿ ಮಾಡಿ ಮಾರಣಾಂತಿಕ ಗಾಯಗೋಳಿಸಿರುವ ಹಲವು ನಿದರ್ಶನಗಳಿವೆ. ರಾತ್ರಿ ಸಮಯದಲ್ಲಿ
ಕಾಡು ಹಂದಿಗಳ ಹಾಗೂ ಕರಡಿ ಅತಿಕ್ರಮಣ ಮಿತಿ ಮೀರಿದ್ದು , ಕರಡಿಗಳು ಕಾಡು ಹಂದಿಗಳು ಕಾಡು ಪ್ರದೇಶಗಳಿಂದ ಹೊರಬಂದು ರೈತರ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತವೆ.
ಕಟಾವು ಸಮೀಪಿಸುತ್ತಿದ್ದಂತೆ ಕಾಡು ಹಂದಿಗಳು ದಾಳಿ ಮಾಡಿ, ಮೆಕ್ಕೆಜೋಳ, ಜೋಳ ಮತ್ತು ರಾಗಿ ಮುಂತಾದ ಬೆಳೆಗಳನ್ನು ತಿಂದು ಹಾಕಿ, ಬೆಳೆಯನ್ನು ಬೇಕ‍ಾ ಬಿಟ್ಟಿಯಾಗಿ ತುಳಿದು ನಾಶಪಡಿಸುತ್ತಿವೆ. ಮತ್ತು
ಕರಡಿ ಹಂದಿ ದಾಳಿಗಳಿಂದ ಪ್ರತಿ ರೈತರಿಗೆ ಸಾವಿರಾರು ರೂಪಾಯಿಗಳ ನಷ್ಟ ಸಂಭವಿಸುತ್ತಿದ್ದು , ನೊಂದ ರೈತರುಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಲಕ್ಷಾಂತರ ರೂ ಬೆಲೆಯ ಬೆಳೆ ನಾಶ- ತಾಲೂಕಿನ ಹರವದಿ ಗ್ರಾಮದಲ್ಲಿ ಸುಮಾರು ಐವತ್ತು ರೈತರ ಹೊಲಗಳಿಗೆ , ಕರಡಿ ಕಾಡು ಹಂದಿ ಲಗ್ಗೆ ಹಾಕಿ ನಾಶಪಡಿಸಿವೆ ಎಂದು ರೈತರು ಮಾಹಿತಿ ನೀಡಿದ್ದಾರೆ. ಓರ್ವ ರೈತನ ಹೊಲವು ಮೂರು ಎಕರೆ ಯಿಂದ ಐದು ಎಕರೆ ಹೊಲದಷ್ಟು , ಅಂದರೆ ಓರ್ವ ರೈತನ ಹೊಲದಲ್ಲಿನ ಐದು ಕ್ವಿಂಟಾಲ್ ನಿಂದ ಹತ್ತು ಕ್ವಿಂಟಾಲ್ ನಷ್ಟು ಫಲ ನಷ್ಟವಾಗಿದ್ದು. ಅರವದಿ ಗ್ರಾಮದ ಸಮಸ್ತ ರೈತರ ಒಟ್ಟು ಬೆಳೆ ನಷ್ಟ , ಹತ್ತಾರು ಲಕ್ಷ ರೂಗಳಷ್ಟು ಬೆಳೆ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ನಷ್ಟಕ್ಕೊಳಗಾಗಿರುವ ಗ್ರಾಮದ ರೈತರು ಅರಣ್ಯ ಇಲಾಖೆಗೆ ಅಗತ್ಯ ದ‍ಾಖಲುಗಳ ಸಮೇತ ಪರಿಹಾರಕ್ಕಾಗಿ ,ನಷ್ಟದ ಕುರಿತು ಮಾಹಿತಿ ನೀಡಿದ್ದಾರೆ , ಮತ್ತು ಸೂಕ್ತ ಪರಿಹಾರ ನೀಡುವಂತೆ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹರವದಿ ಗ್ರಾಮ , ಜರ್ಮಲಿ ಗ್ರ‍‍ಾಮ , ಕಕುಪ್ಪಿ ಗ್ರ‍ಾಮಗಳು ಸೇರಿದಂತೆ , ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡು ಹಂದಿ ಕರಡಿಗಳು ಒಳಗೊಂಡಂತೆ ಇತರೆ ಕಾಡು ಪ್ರಾಣಿಗಳ ಹಾವಳಿ ಮಿತಿಮೀರಿದೆ ಎಂದು ಗ್ರಾಮಗಳ ಗ್ರ‍ಾಮಸ್ಥರು ದೂರಿದ್ದಾರೆ. ತಾವು ಕಷ್ಟಪಟ್ಟು ಬೆಳೆದ ಬೆಳೆಯನ್ನು ನಾಶಪಡಿಸುತ್ತಿವೆ , ಅವು ರ‍ಾತ್ರೊರಾತ್ರಿ ಹೊಲಕ್ಕೆ ನುಗ್ಗಿ ಬೇಳ ನಾಶ ಮಾಡುತ್ತಿದ್ದು , ಇದರಿಂದಾಗಿ ರೈತರು ಅಪಾರ ಪ್ರಮ‍ಾಣದಲ್ಲಿ ನಷ್ಟಕ್ಕೆ ಈಡಾಗುತ್ತಿರುವುದಾಗಿ ರೈತರು ಅಳಲು ತೋಡಿಕೊಂಡಿದ್ದಾರೆ. ಅರಣ್ಯ ಇಲಾಖೆಯ ವೈಫಲ್ಯ- ರೈತರ ಆಕ್ರೋಶ ಆರೋಪ- ಕಾಡು ಪ್ರಾಣಿಗಳ ಹಾವಳಿ ಪ್ರಕರಣಗಳು ಹತ್ತು ಹಲವಾರು ವರ್ಷಗಳಿಂದಲೂ , ಪ್ರತಿ ವರ್ಷವೂ ಜರುಗುತ್ತಿರುವ ದುರಂತವಾಗಿದ್ದು. ಪ್ರತಿ ಭಾರೀವೂ ಇಲಾಖೆಗೆ ಕ್ರಮ ಕೈಗೊಳ್ಳುವಂತೆ , ಹಾಗೂ ಸೂಕ್ತ ಪರಿಹಾರ ನೀಡುವಂತೆ ಮಾಡುತ್ತೇವೆ. ಆದರೆ ಏನೂ ಪ್ರಯೋಜನವಾಗುತ್ತಿಲ್ಲ ಮನವಿಯನ್ನು ಡಸ್ಟ್ ಬಿನ್ ಗೆ ಹಾಕಿ ಸಾಗಹಾಕಲಾಗುತ್ತಿದೆ , ಅಪಾರ ನಷ್ಟ ಅನುಭವಿಸಿದವರಿಗೆ. ಇಲಾಖೆಯಿಂದ ಅರೆಕಾಸಿನ ಬಿಡಿಗಾಸಿನ ಪರಿಹಾರ ನೀಡಲಾಗುತ್ತಿದ್ದು , ರಕ್ಷಣೆಗೆ ಯಾವುದೇ ಒಂದು ಕ್ರಮವನ್ನು ಜರುಗಿಸುತ್ತಿಲ್ಲ. ಸರ್ಕಾರದಿಂದ ಹಾಗೂ ಅರಣ್ಯ ಇಲಾಖೆಯಿಂದ ಕಾಡು ಪ್ರಾಣಿಗಳ ಹಾವಳಿ ನಿಂಯತ್ರಿಸಲು , ಹತ್ತು ಹಲವು ಯೋಜನೆಗಳಿದ್ದು ಅದಾವುದನ್ನು ಇಲ್ಲಿ ಜಾರಿ ತರಲಾಗುತ್ತಿಲ್ಲ. ಬದಲಿಗೆ ಭರವಸೆಗಳ ಮಹಾಪೂರ ಹರಿಸಿ ರೈತರ ಮೂಗಿಗೆ ತುಪ್ಪ ಸವರಿದಂತೆ , ಅಲ್ಪ ಪ್ರಮಾಣದ ಪರಿಹಾರ ನೀಡಿ , ಮೂಗಿಗೆ ತುಪ್ಪ ಸವರಿ ಕೈ ತೊಳೆದು ಕೊಳ್ಳೋ ಪರಿಪಾಟಲನ್ನು ಅರಣ್ಯ ಇಲಾಖೆ ರೂಡಿಸಿಕೊಳ್ಳಲಾಗಿದೆ. ಹೀಗಾಗಿ ತಮ್ಮ ರೋಧನ ಅಕ್ಷರಸಃ ಅರಣ್ಯ ರೋಧನವಾಗಿದ್ದು , ಸಂಬಂಧಿಸಿದಂತೆ ಇಾಲಾಖೆಯ ಉನ್ನತಾಧಿಕಾರಿಗಳು ಸ್ಥಳ ಪರಿಶೀಲಿಸಬೇಕು. ಜಿಲ್ಲಾಧಿಕಾರಿಗಳು ಸಚಿವರು ಶಾಸಕರು ಖುದ್ದು , ಪರಿಶೀಲಿಸಿ ನಂತರವಷ್ಟೇ ಸರ್ಕಾರದ ಮಟ್ಟದಲ್ಲಿ ಗಂಭೀರವಾಗಿ ಚರ್ಚೆ ನಡೆಸಿ ದಿಟ್ಟ ನಿರ್ಣಯಗಳನ್ನು ಕೈಗೊಳ್ಳಬೇಕಿದೆ. ಕಾಡು ಪ್ರಾಣಿಗಳು ಜಮೀನುಗಳಿಗೆ ಲಗ್ಗೆ ಇಡುವುದನ್ನು ತಪ್ಪಿಸಲು , ಅರಣ್ಯ ಇಲಾಖೆಯಿಂದ ಖಾಯಂ ಸೂಕ್ತ ಪರಿಹಾರ ಕ್ರಮಗಳನ್ನು ಶೀಘ್ರವೇ ಕೈಗೊಳ್ಳುವಂತೆ. ಹರವದಿ ಗ್ರಾಮ , ಕಕ್ಕುಪ್ಪಿ ಗ್ರಾಮ , ಜರ್ಮಲಿ ಗ್ರಾಮಗಳ ರೈತರು , ಹಾಗೂ ವನ್ಯ ಪ್ರಾಣಿಗಳ ಬಾಧಿತ ತಾಲೂಕಿನ ಎಲ್ಲಾ ಗ್ರಾಮಗಳ ರೈತರು ಗ್ರಾಮಸ್ಥರು ಈ ಮೂಲಕ ಒತ್ತಾಯಿಸಿದ್ದಾರೆ. ಪರಿಹಾರ : ದುಪ್ಪಟ್ಟು ಹೆಚ್ಚಿಸಿ , ಅರ್ಜಿ ಸಲ್ಲಿಸುವ ವಿಧ‍ಾನ ಸರಳ ಗೊಳಿಸಿ- ಪರಿಹಾರ ಧನವು ಅವೈಜ್ಞಾನಿಕ ಮಾನದಂಡದಿಂದ ಕೂಡಿದ್ದು , ಪರಿಹಾರದ ಮಾನದಂಡ ದ್ವಿಗುಣಗೊಲಕಿಸಿ ಪರಿಹಾರ ಹೆಚ್ಚಿಸಬೇಕು. ಮತ್ತು ಪರಿ ಹಾರ ಹಣಕ್ಕಾಗಿ ಸಲ್ಲಿಸಬೇಕ‍ಾಗಿರುವ ವಿಧ‍‍ಾನವು , ತುಂಬಾ ಜಠಿಲಾಗಿದ್ದು ಸರಳವಾಗಿಸಬೇಕಿದೆ. ಪರಿಹಾರ ಧನ ಶೀಘ್ರವಾಗಿ ನೇರವಾಗಿ ನಷ್ಟ ಹೊಂದಿರುವ ರೈತನ ಖಾತೆಗೆ , ಜಮಾ ಆಗುವಂತೆ ಅಗತ್ಯ ಕ್ರಮ ಜರುಗಿಸಬೇಕೆಂದು. ಕೂಡ್ಲಿಗಿ ತಾಲೂಕಿನ ಸಮಸ್ತ ರೈತರು , ರೈತ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

The post ಕಾಡು ಹಂದಿ, ಕರಡಿಗಳ ಹಾವಳಿಯಿಂದ ಬೆಳೆ ನಾಶ, ಮುಗಿಲುಗೇರಿದ ರೈತರ ಅರಣ್ಯ ರೋಧನೆ, ಆಲಿಸದ ಅರಣ್ಯ ಇಲಾಖೆ appeared first on Good News 24x7.

]]>
ದೆಹಲಿಗೆ ಜು.25 ರಂದು ಪ್ರವಾಸ ಕೈಗೊಂಡು ಸಿಎಂ ಮತ್ತು ಡಿಸಿಎಂ. https://www.goodnews24x7.com/cm-and-dcm-to-visit-delhi-on-july-25/ Mon, 21 Jul 2025 09:21:15 +0000 https://www.goodnews24x7.com/?p=5168 ಬೆಂಗಳೂರು : ಇತ್ತೀಚೆಗೆ ದೆಹಲಿಗೆ ಪ್ರವಾಸ ಕೈಗೊಂಡು ಕೇಂದ್ರ ಸಚಿವರ ಭೇಟಿಯಾಗಿ ರಾಜ್ಯದ ಯೋಜನೆಗಳ ಬಗ್ಗೆ ಚರ್ಚಿಸಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಇದೀಗ ಜುಲೈ 25ಕ್ಕೆ ಮತ್ತೆ ದೆಹಲಿಗೆ ತೆರಳುತ್ತಿದ್ದಾರೆ. ಜುಲೈ 25ರಂದು ದೆಹಲಿಗೆ ತೆರಳಲಿರುವ ಸಿಎಂ…

The post ದೆಹಲಿಗೆ ಜು.25 ರಂದು ಪ್ರವಾಸ ಕೈಗೊಂಡು ಸಿಎಂ ಮತ್ತು ಡಿಸಿಎಂ. appeared first on Good News 24x7.

]]>

ಬೆಂಗಳೂರು : ಇತ್ತೀಚೆಗೆ ದೆಹಲಿಗೆ ಪ್ರವಾಸ ಕೈಗೊಂಡು ಕೇಂದ್ರ ಸಚಿವರ ಭೇಟಿಯಾಗಿ ರಾಜ್ಯದ ಯೋಜನೆಗಳ ಬಗ್ಗೆ ಚರ್ಚಿಸಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಇದೀಗ ಜುಲೈ 25ಕ್ಕೆ ಮತ್ತೆ ದೆಹಲಿಗೆ ತೆರಳುತ್ತಿದ್ದಾರೆ.

ಜುಲೈ 25ರಂದು ದೆಹಲಿಗೆ ತೆರಳಲಿರುವ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಿಲಾಗುತ್ತದೆ.
ಈ ಕುರಿತು ಪ್ರತಿಕ್ರಿಯೆ ನೀಢಿರುವ ಡಿಸಿಎಂ ಡಿಕೆ ಶಿವಕುಮಾರ್, ಜುಲೈ 25ರಂದು ನಾನು ಮತ್ತು ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗುತ್ತಿದ್ದೇವೆ ಅಷ್ಟು ಮಾತ್ರ ನನಗೆ ಗೊತ್ತು ಮಿಕ್ಕಿದ್ದು ಅಧಿವೇಶನ ನಡೆಯುತ್ತಿದೆ ಎಂದರು.

ಬಿಬಿಎಂಪಿ ವಿಭಜನೆ ವಿರೋಧಿಸಿ ಪಿಐಎಲ್ ಸಲ್ಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಅವರ ಹಕ್ಕನ್ನು ನಾನು ಮೊಟಕುಗೊಳಿಸಲು ಆಗುತ್ತಾ? ಕೋರ್ಟ್ ನಲ್ಲಿ ಅವರು ಪ್ರಶ್ನಿಸಬಹುದು . ಕೋರ್ಟಿಗೆ ಹೋಗಬಹುದು ಅದು ತಪ್ಪಲ್ಲ ಅವರು ಪಿಐಎಲ್ ಹಾಕುವುದನ್ನು ಬೇಡ ಅನ್ನೋಕಾಗುತ್ತಾ? ಎಂದು ಪ್ರಶ್ನಿಸಿದರು.

The post ದೆಹಲಿಗೆ ಜು.25 ರಂದು ಪ್ರವಾಸ ಕೈಗೊಂಡು ಸಿಎಂ ಮತ್ತು ಡಿಸಿಎಂ. appeared first on Good News 24x7.

]]>
ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಬಸವರಾಜ್ ಹೊರಟ್ಟಿ. https://www.goodnews24x7.com/%e0%b2%b0%e0%b2%be%e0%b2%9c%e0%b3%80%e0%b2%a8%e0%b2%be%e0%b2%ae%e0%b3%86-%e0%b2%a8%e0%b2%bf%e0%b2%b0%e0%b3%8d%e0%b2%a7%e0%b2%be%e0%b2%b0%e0%b2%a6%e0%b2%bf%e0%b2%82%e0%b2%a6-%e0%b2%b9%e0%b2%bf%e0%b2%82/ Tue, 25 Mar 2025 11:04:52 +0000 https://www.goodnews24x7.com/?p=2881 ಹುಬ್ಬಳ್ಳಿ :- ಇವತ್ತಿನ ರಾಜಕಾರಣಿಗಳನ್ನು ಸದನದಲ್ಲಿ ಸಂಭಾಳಿಸಲು ಸಾಧ್ಯವಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಅವರು ಅಸಮಾಧಾನ ಹೊರಹಾಕಿದ್ದರು. ಅಲ್ಲದೇ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಬಹಿರಂಗವಾಗಿಯೇ ಹೇಳಿದ್ದರು. ಆದರೆ, ಇದೀಗ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ…

The post ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಬಸವರಾಜ್ ಹೊರಟ್ಟಿ. appeared first on Good News 24x7.

]]>

ಹುಬ್ಬಳ್ಳಿ :- ಇವತ್ತಿನ ರಾಜಕಾರಣಿಗಳನ್ನು ಸದನದಲ್ಲಿ ಸಂಭಾಳಿಸಲು ಸಾಧ್ಯವಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಅವರು ಅಸಮಾಧಾನ ಹೊರಹಾಕಿದ್ದರು. ಅಲ್ಲದೇ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಬಹಿರಂಗವಾಗಿಯೇ ಹೇಳಿದ್ದರು. ಆದರೆ, ಇದೀಗ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಹೊರಟ್ಟಿ, ರಾಜೀನಾಮೆ ಸುದ್ದಿ ಹರಿದಾಡಿದ ಬಳಿಕ ರಾಜ್ಯಪಾಲರು, ಮಂತ್ರಿಗಳು, ಸಾಹಿತಿಗಳು ಮಾತನಾಡಿದ್ದಾರೆ. 27ನೇ ತಾರೀಕು ಕೂತು ಮಾತನಾಡಿ ತೀರ್ಮಾನ ಮಾಡೋಣ ಅಂದಿದ್ದಾರೆ . ಹೀಗಾಗಿ ಅದನ್ನ(ರಾಜೀನಾಮೆ) ಅಲ್ಲಿಗೆ ಕೈ ಬಿಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಅನ್ ಸೈನಡ್ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಜ್ಯಪಾಲರು, ಮಂತ್ರಿಗಳು, ಸಾಹಿತಿಗಳು ಮಾತನಾಡಿದ್ದಾರೆ . 27ನೇ ತಾರೀಕು ಕೂತು ಮಾತನಾಡಿ ತೀರ್ಮಾನ ಮಾಡೋಣ ಅಂದಿದ್ದಾರೆ . ಹೀಗಾಗಿ ಅದನ್ನ ಅಲ್ಲಿಗೆ ಕೈ ಬಿಟ್ಟಿದ್ದೇನೆ. ಬೆಂಗಳೂರಲ್ಲಿ ಸಭೆ ಮಾಡೋದಾಗಿ ಅಂದು ಕೊಂಡಿದ್ದೇವೆ. ಎಲ್ಲರೂ ಸಹ ನೀವೇ ರಾಜೀನಾಮೆ ಕೊಡಬೇಡಿ ಎಂದು ಹೇಳುತ್ತಿದ್ದಾರೆ. ನಾನು ಮಾಡಿದ ತೀರ್ಮಾನಕ್ಕೆ ವಿರೋಧ ಬಂತು . ನಮ್ಮ ಶಾಸನ ಸಭೆ ಸದಸ್ಯರು ನೋಡೋಣ ರಾಜೀನಾಮೆ ಬೇಡ ಎಂದಿದ್ದಾರೆ. ಪುಟ್ಟಣ್ಣ ಕರೆ ಮಾಡಿ ರಾಜೀನಾಮೆ ವಿಷಯದಲ್ಲಿ ಮುಂದುವರಿಬೇಡಿ ಅಂದ್ರು. ಸಾರ್ವಜನಿಕ ವಲಯದಲ್ಲಿ ನನಗೆ ಇಷ್ಟೊಂದು ಗೌರವ ಕೊಡುತ್ತಿರುವುದಕ್ಕೆ ನಾನು ರಾಜೀನಾಮೆಯಿಂದ ಹಿಂದೆ ಸರಿದಿದ್ದೇನೆ ಎಂದು ಬಸವರಾಜ್ ಹೊರಟ್ಟಿ ಹೇಳಿದರು.

ಈ ಹಿಂದೆ ಇಂತಹ ಘಟನೆ ಆಗಿಲ್ಲ. ಮಾರ್ಚ್ 19, 20, 21ಕ್ಕೆ ಸದನ ಮುಂದುವರೆಸಲಾಗದಂತೆ ಆಯ್ತು. ಬಜೆಟ್ ಮೇಲೆ ಸಿಎಂ ಉತ್ತರ ಕೊಟ್ಟ ನಂತರ ಹನಿಟ್ರ್ಯಾಪ್ ಉತ್ತರ ಕೊಡಿಸುತ್ತೇನೆ ಎಂದು ಹೇಳಿದ್ದೆ. ತಪ್ಪಿಗಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಹ ಹೇಳಿದ್ದರು. ಆದರೂ ಅದೇ ಗದ್ದಲದಲ್ಲಿ ಬಿಲ್ ಕೂಡ ಪಾಸ್ ಆಯ್ತು. ಚರ್ಚೆ ಆಗದೆ ಈ ರೀತಿ ಗದ್ದಲದಲ್ಲಿ ಬಿಲ್ ಪಾಸ್ ಆಗಬಾರದು. ಅದು ಜನರಿಗೆ ಮೋಸ ಮಾಡಿದಂತೆ. ನಾನು ಅಲ್ಲಿ ಇದ್ರು ಕೂಡ ಈ ರೀತಿ ಮಾಡಿದ್ರು . ಹೀಗಾಗಿ ಮನಸ್ಸಿಗೆ ಬೇಜಾರ್ ಆಯ್ತು ಎಂದು ಬೇಸರ ಹೊರಹಾಕಿದರು.
ಹಲವು ನಾಯಕರು ರಾಜೀನಾಮೆ ಕೊಡುವುದರಿಂದ ಎಲ್ಲಾ ಬಗೆ ಹರಿಯುವುದಿಲ್ಲ ಅಂದ್ರು. ಹೀಗಾಗಿ ರಾಜೀನಾಮೆ ನೀಡಬಾರದು ಎಂದು ಈಗಾಗಲೇ ತೀರ್ಮಾನ ಮಾಡಿದ್ದೇನೆ. 27ರ ನಂತರ ಎಲ್ಲಾ 75 ಸದಸ್ಯರಿಗೆ ಪತ್ರ ಕಳುಹಿಸುತ್ತೇನೆ. ಯಾರು ನನ್ನ ಮಾತು ಮೀರಲ್ಲ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗಿನ ದಿನಮಾನಗಳಲ್ಲಿ ಒಣ ಪ್ರತಿಷ್ಠೆನೇ ಜಾಸ್ತಿ ಆಗಿದೆ. ಜನರ ಅಭಿವೃದ್ಧಿ ಬಗ್ಗೆ ಯಾವ ಚರ್ಚೆ ಕೂಡ ಆಗಿಲ್ಲ . ಹನಿಟ್ರ್ಯಾಪ್ ಬಗ್ಗೆ ಮುಖ್ಯಮಂತ್ರಿ ಕ್ರಮ ಕೈಗೊಳ್ಳುತ್ತೇವೆ ಅಂದ್ರೆ ಮುಗಿದೋಯ್ತು. ಮುಂದಿನ ಅಧಿವೇಶನಕ್ಕೆ ಸದನ ಉತ್ತಮಗೊಳಿಸುವ ಕೆಲಸ ಮಾಡುತ್ತೇವೆ. ಈ ಘಟನೆ ಆಗಿದ್ದು ಒಳ್ಳೆದಾಯ್ತು, ಸುಧಾರಣೆಗೆ ಒಂದು ದಾರಿ ಆದಂತಾಗಿದೆ. ನಾನು ಸ್ವಲ್ಪ ಭಾವುಕನಾಗೋದು ಸಹಜವಾಗಿ ಕಣ್ಣಲ್ಲಿ ನೀರು ಬರುತ್ತೆ. ವ್ಯವಸ್ಥೆ ಸರಿ ಪಡಿಸಲು ಏನಾದರೂ ಮಾಡಬೇಕು . ಜನರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

The post ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಬಸವರಾಜ್ ಹೊರಟ್ಟಿ. appeared first on Good News 24x7.

]]>