residents Archives - Good News 24x7 https://www.goodnews24x7.com/tag/residents/ Kannada Fri, 29 Aug 2025 10:57:53 +0000 en-US hourly 1 https://wordpress.org/?v=6.9.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg residents Archives - Good News 24x7 https://www.goodnews24x7.com/tag/residents/ 32 32 ವಿರಾಟ್ ನಿವೃತ್ತಿಯ ಬಳಿಕ ಕೋಟಿ ಕೋಟಿ ಲಾಸ್…..ಬಿಸಿಸಿಐನ ಮುಂದಿನ ನಡೆ ಏನು..? https://www.goodnews24x7.com/crores-of-crores-of-losses-after-virats-retirement/ Fri, 29 Aug 2025 10:57:53 +0000 https://www.goodnews24x7.com/?p=6968 ಟೀಂ ಇಂಡಿಯಾದ ಈ ಸಮಸ್ಯೆಗೆ ಪರಿಹಾರ ವಿರಾಟ್ ಕೊಹ್ಲಿ ಒಬ್ಬರೇ.. ಅದು ಏನು ಗೊತ್ತಾ..? ವಿರಾಟ್​​ ಕೊಹ್ಲಿ ಒನ್​ ಡೇ ಫಾರ್ಮೆಟ್​​ಗೂ ಗುಡ್​ ಬೈ ಹೇಳ್ತಾರೆ ಅನ್ನೋ ಸುದ್ದಿಯ ನಡುವೆ ಹೊಸ ಸೂಪರ್​ ಸ್ಟಾರ್​ನ ಹುಟ್ಟು ಹಾಕೋ ಯತ್ನ ಶುರುವಾಗಿದೆ. ಬಿಸಿಸಿಐ…

The post ವಿರಾಟ್ ನಿವೃತ್ತಿಯ ಬಳಿಕ ಕೋಟಿ ಕೋಟಿ ಲಾಸ್…..ಬಿಸಿಸಿಐನ ಮುಂದಿನ ನಡೆ ಏನು..? appeared first on Good News 24x7.

]]>

ಟೀಂ ಇಂಡಿಯಾದ ಈ ಸಮಸ್ಯೆಗೆ ಪರಿಹಾರ ವಿರಾಟ್ ಕೊಹ್ಲಿ ಒಬ್ಬರೇ.. ಅದು ಏನು ಗೊತ್ತಾ..?
ವಿರಾಟ್​​ ಕೊಹ್ಲಿ ಒನ್​ ಡೇ ಫಾರ್ಮೆಟ್​​ಗೂ ಗುಡ್​ ಬೈ ಹೇಳ್ತಾರೆ ಅನ್ನೋ ಸುದ್ದಿಯ ನಡುವೆ ಹೊಸ ಸೂಪರ್​ ಸ್ಟಾರ್​ನ ಹುಟ್ಟು ಹಾಕೋ ಯತ್ನ ಶುರುವಾಗಿದೆ. ಬಿಸಿಸಿಐ ಬಾಸ್​​ಗಳು, ಕೆಲ ಬಿಗ್ಗೆಸ್ಟ್​​ ಬ್ರ್ಯಾಂಡ್​​ಗಳು ಇದೀಗ ಯುವರಾಜನ ಹಿಂದೆ ಬಿದ್ದಿದೆ. ಕಿಂಗ್​ ಕೊಹ್ಲಿ ಪಟ್ಟ ತ್ಯಜಿಸೋಕೆ ಕೌಂಟ್​​ಡೌನ್​ ಶುರುವಾಗಿರೋ ಸಮಯದಲ್ಲಿ ಪ್ರಿನ್ಸ್​​ ಶುಭ್​ಮನ್​ಗೆ ಪಟ್ಟಾಭಿಷೇಕ ನಡೀತಿದೆ.

ಕ್ರಿಕೆಟ್​​ ಲೋಕದ ಸುಲ್ತಾನ ವಿರಾಟ್​ ಕೊಹ್ಲಿ ನಿಧಾನವಾಗಿ ಕ್ರಿಕೆಟ್​ನಿಂದ ದೂರಾಗ್ತಿದ್ದಾರೆ. ಟೆಸ್ಟ್​​, ಟಿ20ಗೆ ಗುಡ್​ ಬೈ ಹೇಳಿರೋ ಕೊಹ್ಲಿ, ಇದೀಗ ಒನ್​ ಡೇ ಫಾರ್ಮೆಟ್​ಗೂ ನಿವೃತ್ತಿ ಘೋಷಿಸ್ತಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಕೊಹ್ಲಿಯ ವಿದಾಯದ ಸುದ್ದಿ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಬೇಸರ ತರಿಸಿದೆ. ನೆಚ್ಚಿನ ಸೂಪರ್​​ ಸ್ಟಾರ್​​ ಇನ್ಮೇಲೆ ಐಪಿಎಲ್​ಗೆ ಮಾತ್ರ ಸೀಮಿತವಾಗಿ ಬಿಡುತ್ತಾ? ಮುಂದಿನ ವಿಶ್ವಕಪ್​​ನಲ್ಲಿ ಕೊಹ್ಲಿ ಆಡಲ್ವಾ? ಎಂಬ ಬೇಸರದ ಪ್ರಶ್ನೆಗಳು ಫ್ಯಾನ್ಸ್​ ಮನದಲ್ಲಿವೆ.

ಬಿಸಿಸಿಐಗೆ ಕೊಹ್ಲಿ ನಿವೃತ್ತಿಯದ್ದೇ ದೊಡ್ಡ ಟೆನ್ಶನ್​
ಒಂದೆಡೆ ಬಿಸಿಸಿಐ ಬಾಸ್​ಗಳು ವಿರಾಟ್​ ಕೊಹ್ಲಿಯನ್ನ ಸೈಡ್​​ಲೈನ್​ ಮಾಡೋ ಸಿದ್ಧತೆ ಮಾಡ್ತಿದ್ದಾರೆ. ಇನ್ನೊಂದೆಡೆ ಇದೇ ಬಿಸಿಸಿಐ ಬಾಸ್​​ಗಳಿಗೆ ಕೊಹ್ಲಿ ಹೋದ್ರೆ ಮುಂದೆ ಏನಪ್ಪಾ​ ಗತಿ ಎಂಬ ಚಿಂತೆಯೂ ಕಾಡ್ತಿದೆ. ಬಿಸಿಸಿಐ ವಲಯದಲ್ಲಿ ಮಾತ್ರವಲ್ಲ. ಜಾಹೀರಾತು ಲೋಕಕ್ಕೂ ಕ್ರಿಕೆಟ್​ನಿಂದ ಕಿಂಗ್​ ದೂರ ಸರೀತಾರೆ ಎಂಬ ಸುದ್ದಿಯನ್ನ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಕಿಂಗ್​ ಕೊಹ್ಲಿ ಕ್ರಿಕೆಟ್​ ಲೋಕವನ್ನ ಮಾತ್ರ ಆಡಿರಲಿಲ್ಲ. ಜಾಹೀರಾತು ಲೋಕಕ್ಕೂ ವಿರಾಟ್​ ಸುಲ್ತಾನನಾಗಿದ್ರು.

ಪ್ರಿನ್ಸ್​​ಗೆ ಡಿಮ್ಯಾಂಡಪ್ಪೋ.. ಡಿಮ್ಯಾಂಡ್​​
ವಿರಾಟ್​​ ಕೊಹ್ಲಿ ದೂರ ಸರೀತಿದಾರೆ ಎಂದ ಬೆನ್ನಲ್ಲೇ ಜಾಹೀರಾತು ಲೋಕ ಹಾಗೂ ಬಿಸಿಸಿಐ ನೆಕ್ಸ್ಟ್​ ಸೂಪರ್​ ಸ್ಟಾರ್​​ನ ಹುಟ್ಟುಹಾಕೋ ಪ್ರಯತ್ನ ಆರಂಭಿಸಿದೆ. ಕೊಹ್ಲಿ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಯುವರಾಜ ಶುಭ್​ಮನ್​ ಗಿಲ್​ಗೆ ಪಟ್ಟಾಭಿಷೇಕ ಮಾಡೋ ಯತ್ನಗಳು ನಡೀತಿವೆ. ಟೆಸ್ಟ್​ ನಾಯಕತ್ವ ನೀಡಿರೋ ಬಿಸಿಸಿಐ ಬಾಸ್​ಗಳು, ಏಕದಿನ, ಟಿ20ಯ ಕ್ಯಾಪ್ಟನ್ಸಿಯನ್ನೂ ನೀಡಿ ಗಿಲ್​ನ ಪವರ್​ಫುಲ್​ ಮಾಡೋ ಯತ್ನಕ್ಕೆ ಕೈ ಹಾಕಿದ್ದಾರೆ. ಅತ್ತ ಜಾಹೀರಾತು ಲೋಕ ಕೂಡ ಅಷ್ಟೇ ಗಿಲ್​ ಹಿಂದೆ ಬಿದ್ದಿದೆ.

ಬೆಂಝ್​​​ ಶೂಟ್​ನಲ್ಲಿ ಮಿರಮಿರ ಮಿಂಚಿದ ಗಿಲ್​
ಇಂಗ್ಲೆಂಡ್​ ಪ್ರವಾಸ ಮುಗಿಸಿ ಭಾರತಕ್ಕೆ ವಾಪಾಸ್ಸಾಗಿರೋ ಗಿಲ್, 2 ದಿನದ ಹಿಂದೆ ದೆಹಲಿಯಲ್ಲಿ ಮರ್ಸಿಡೀಸ್​​ ಬೆಂಝ್​​​​ನ ಇವೆಂಟ್​ನಲ್ಲಿ ಭಾಗಿಯಾಗಿದ್ರು. ಬೆಂಝ್​​​ ಪ್ರಮೋಶನ್ ಇವೆಂಟ್​​ನಲ್ಲಿ​ ಅಕ್ಷರಶಃ ಮಿರಮಿರ ಮಿಂಚಿದ್ರು.

ಮೊನ್ನೆಯ ಇವೆಂಟ್​ ನೋಡಿದವರಿಗೆಲ್ಲಾ ನೆನಪಾಗಿದ್ದು ಕೊಹ್ಲಿ. ಈ ಹಿಂದೆ ವಿರಾಟ್​ ಕೊಹ್ಲಿ ಬೆಂಜ್​​ನ ಅಂಬಾಸಿಡರ್ ಆಗಿದ್ರು. ಕೊಹ್ಲಿ ಕ್ರಿಕೆಟ್​​ನಿಂದ ದೂರಾಗ್ತಿದ್ದಾರೆ ಎಂದ ಬೆನ್ನಲ್ಲೇ ಬೆಂಜ್​ ಗಿಲ್​ ಹಿಂದೆ ಬಿದ್ದಿದೆ.

ಕೊಹ್ಲಿ ಬಳಿಕ ಗಿಲ್​ಗೆ ಗಾಳ ಹಾಕಿದ MRF
MRF ಸ್ಟಿಕರ್​ ಅಂಟಿಸಿದ ಬ್ಯಾಟ್​ ಹಿಡಿದವರೆಲ್ಲಾ ಕ್ರಿಕೆಟ್​ ಲೋಕವನ್ನ ಆಳಿದವರೆ ಸಚಿನ್​ ತೆಂಡುಲ್ಕರ್​, ಎಬಿ ಡಿವಿಲಿಯರ್ಸ್​​, ಬ್ರಯನ್​ ಲಾರಾ, ಸ್ಟೀವ್​ ವಾ. ಈಗ ವಿರಾಟ್​ ಕೊಹ್ಲಿ ಎಲ್ರೂ ದಿಗ್ಗಜರೇ. ಇದೀಗ ಕೊಹ್ಲಿ ಬಳಿಕ ಶುಭ್​ಮನ್​ ಗಿಲ್​ಗೆ ಎಮ್​ಆರ್​​ಎಫ್​ ಗಾಳ ಹಾಕಿದೆ.

ಒಂದರ್ಥದಲ್ಲಿ ಕೊಹ್ಲಿ ಬಳಿಕ ಗಿಲ್​ನ ನೆಕ್ಸ್ಟ್​ ಸೂಪರ್​ ಸ್ಟಾರ್​ ಮಾಡೋ ಯತ್ನಕ್ಕೆ ಮೊದಲು ಕೈ ಹಾಕಿದ್ದೇ MRF. ಆಗಿನ್ನೂ ಬಿಸಿಸಿಐ ವಲಯದಲ್ಲಿ ಗಿಲ್​​ಗೆ ಟೆಸ್ಟ್​ ನಾಯಕತ್ವ ಕಟ್ಟೋ ಚರ್ಚೆ ನಡೀತಿತ್ತು. ಆಗಲೇ ಗಿಲ್​ಗೆ ಗಾಳ ಹಾಕಿ ಎಮ್​​ಆರ್​ಎಫ್​ ಅಗ್ರಿಮೆಂಟ್​ ಮಾಡಿಕೊಳ್ತು. ಅದೇನು ಅದೃಷ್ಟವೋ ಏನೋ ಗೊತ್ತಿಲ್ಲ. MRF ಬ್ಯಾಟ್​​ ಕೈ ಬಂದ ಮೊದಲ ಸರಣಿಯಲ್ಲಿ ಗಿಲ್​ ಮೋಡಿ ಮಾಡಿದ್ರು.

ಆನ್​​ ಫೀಲ್ಡ್​ನಲ್ಲಿ ಕೊಹ್ಲಿ ಅಬ್ಬರಿಸ್ತಿದ್ದ ಕೊಹ್ಲಿ ಫ್ಯಾನ್ಸ್​ಗೆ ಜಬರ್ದಸ್ತ್​​​ ಎಂಟರ್​​ಟೈನ್​ಮೆಂಟ್​ ನೀಡುತ್ತಿದ್ದರು. ತಮ್ಮ ಅಮೋಘ ಆಟದಿಂದ ಟೀಮ್​ ಇಂಡಿಯಾದ ಮ್ಯಾಚ್​ ವಿನ್ನರ್​ ಅನಿಸಿದ್ರು. ಬಿಸಿಸಿಐ ಪಾಲಿಗೆ ಅಷ್ಟೇ ಆದಾಯದ ಮೂಲವಾಗಿದ್ರು. ಜಾಹೀರಾತುದಾರರಿಗಂತೂ ನೆಚ್ಚಿನ ಡಾರ್ಲಿಂಗ್​ ಆಗಿದ್ರು. ಇದೀಗ ಕೊಹ್ಲಿ ಕ್ರಿಕೆಟ್​ನಿಂದ ದೂರಾಗ್ತಿರೋದು ಬಿಸಿಸಿಐ ಗಳಿಕೆಗೆ, ಕೆಲ ಬ್ರ್ಯಾಂಡ್​​ಗಳ ಆದಾಯಕ್ಕೆ ಹೊಡೆತ ಕೊಟ್ಟಿದೆ. ಹೀಗಾಗಿ ಇವರೆಲ್ಲರ ಕಣ್ಣು ಗಿಲ್​ ಮೇಲೆ ಬಿದ್ದಿದೆ. ಈ ಹಿಂದೆ ಸಚಿನ್​ ಸ್ಥಾನವನ್ನ ಕೊಹ್ಲಿ ತುಂಬಿದಂತೆ, ಕೊಹ್ಲಿ ಸ್ಥಾನವನ್ನ ಗಿಲ್​ ತುಂಬ್ತಾರಾ? ಕಾದು ನೋಡೋಣ.

The post ವಿರಾಟ್ ನಿವೃತ್ತಿಯ ಬಳಿಕ ಕೋಟಿ ಕೋಟಿ ಲಾಸ್…..ಬಿಸಿಸಿಐನ ಮುಂದಿನ ನಡೆ ಏನು..? appeared first on Good News 24x7.

]]>
ಬಿಬಿಎಂಪಿಯಿಂದ ಸಿಲಿಕಾನ್ ಸಿಟಿಯ ಜನಕ್ಕೆ ಭೀತಿ…! https://www.goodnews24x7.com/bbmp-threatens-silicon-city-residents/ Fri, 29 Aug 2025 09:44:15 +0000 https://www.goodnews24x7.com/?p=6962   ಜನಪರ ಅಂತ ಬಿಬಿಎಂಪಿ ಮಾಡೋ ಕೆಲಸ ನೆಟ್ಟಗೆ ಮಾಡಿದ್ರೆ ಸಿಲಿಕಾನ್ ಸಿಟಿಯ ಜನಕ್ಕೂ ಅನುಕೂಲ ಆಗ್ತಿತ್ತು. ಆದರೆ ಪಾಲಿಕೆಯ ಅರ್ಧಂಬರ್ಧ ಕಾಮಗಾರಿ ಜನಸಾಮಾನ್ಯರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರ್ತಿದೆ. ಮತ್ತೇ ಡೆಂಘೀ ಆತಂಕ ಹೆಚ್ಚಾಗಿದೆ. ಜನಪರ ಅಂತ ಬಿಬಿಎಂಪಿ…

The post ಬಿಬಿಎಂಪಿಯಿಂದ ಸಿಲಿಕಾನ್ ಸಿಟಿಯ ಜನಕ್ಕೆ ಭೀತಿ…! appeared first on Good News 24x7.

]]>

 

ಜನಪರ ಅಂತ ಬಿಬಿಎಂಪಿ ಮಾಡೋ ಕೆಲಸ ನೆಟ್ಟಗೆ ಮಾಡಿದ್ರೆ ಸಿಲಿಕಾನ್ ಸಿಟಿಯ ಜನಕ್ಕೂ ಅನುಕೂಲ ಆಗ್ತಿತ್ತು. ಆದರೆ ಪಾಲಿಕೆಯ ಅರ್ಧಂಬರ್ಧ ಕಾಮಗಾರಿ ಜನಸಾಮಾನ್ಯರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರ್ತಿದೆ. ಮತ್ತೇ ಡೆಂಘೀ ಆತಂಕ ಹೆಚ್ಚಾಗಿದೆ.

ಜನಪರ ಅಂತ ಬಿಬಿಎಂಪಿ ಮಾಡೋ ಕೆಲಸ ನೆಟ್ಟಗೆ ಮಾಡಿದ್ರೆ ಸಿಲಿಕಾನ್ ಸಿಟಿಯ ಜನಕ್ಕೂ ಅನುಕೂಲ ಆಗ್ತಿತ್ತು. ಆದರೆ ಪಾಲಿಕೆಯ ಅರ್ಧಂಬರ್ಧ ಕಾಮಗಾರಿ ಜನಸಾಮಾನ್ಯರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರ್ತಿದೆ. ಮತ್ತೇ ಡೆಂಘೀ ಆತಂಕ ಹೆಚ್ಚಾಗಿದೆ.

ಇದನ್ನೂ ಓದಿ:ಪತ್ರಿಕಾ ವಿತರಕರು-ಏಜೆಂಟರು ಪತ್ರಿಕೋದ್ಯಮದ ಬೆನ್ನುಮೂಳೆ: ಕೆ.ವಿ.ಪ್ರಭಾಕರ್

ಬಿಬಿಎಂಪಿ ಸ್ಟಾರ್ಮ್ ವಾಟರ್ ಡಿಪಾರ್ಟ್ಮೆಂಟ್ ಸಿಬ್ಬಂದಿ ಯಡವಟ್ಟಿಗೆ ಶಿವಾಜಿನಗರದ ಭಾರತಿ ನಗರ ವಾರ್ಡ್​ನ ಆರ್ಮ್ ಸ್ಟ್ರಾಂಗ್ ರಸ್ತೆ ಜನ ನರಕಯಾತನೆ ಅನುಭವಿಸ್ತಿದ್ದಾರೆ. ಮೋರಿ ನೀರು ಸರಾಗವಾಗಿ ಹರಿದು ಹೋಗಬೇಕು ಅಂತ ಬಿಬಿಎಂಪಿ ಮೋರಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುದಾಗಿತ್ತು. ಆದ್ರೆ, 1 ತಿಂಗಳ ಹಿಂದೆ ಆರಂಭವಾಗಿರುವ ಕಾಮಗಾರಿಯಲ್ಲಿ, ಈವರೆಗೂ ಮೋರಿ ಸ್ಲ್ಯಾಬ್ ತೆಗೆದಿದೆಯಾದ್ರೂ ಅದನ್ನು ಮತ್ತೆ ಮುಚ್ಚುವ ಕೆಲಸ ಮಾತ್ರ ಮಾಡಿಲ್ಲ. ಸುಮಾರು 100 ಮನೆ ಹಾಗೂ ಆಸ್ಪತ್ರೆಯ ಮುಂಭಾಗ ಮೋರಿಯ ಸ್ಲ್ಯಾಬ್ ಓಪನ್ ಆಗಿದ್ದು, ನಿವಾಸಿಗಳಲ್ಲಿ ಡೆಂಘೀ ಭೀತಿ ಎದುರಾಗಿದೆ. ಈಗಾಗಲೇ 10 ಪ್ರಕರಣಗಳು ದಾಖಲಾಗಿವೆ.

 

ಭಾರತಿ ನಗರ ವಾರ್ಡ್​ ನಿವಾಸಿಗಳ ಈ ಆರೋಪಕ್ಕೆ ಹಾರಿಕೆಯ ಉತ್ತರ ಕೊಟ್ಟ ಬಿಬಿಎಂಪಿ, ಸ್ಲ್ಯಾಬ್ ಮುಚ್ಚುತ್ತೇವೆ ಎಂದಿದೆ. ಒಟ್ನಲ್ಲಿ, ನಿನ್ನೆಯಷ್ಟೇ ನಿಮ್ಮ ಗುಂಡಿಗೆ ನೀವೇ ಜವಾಬ್ದಾರರು ಎಂದಿದ್ದ ಬಿಬಿಎಂಪಿ, ಈಗ ಮೋರಿಯ ಸ್ಲ್ಯಾಬ್ ಮುಚ್ಚದೆ ತಾನು ಮಾಡಿದ ಯಡವಟ್ಟಿಗೆ ಸಮರ್ಥನೆ ಕೊಡೋ ಪ್ರಯತ್ನ ಮಾಡ್ತಿದೆ. ಇದನ್ನೆಲ್ಲಾ ಪಕ್ಕಕ್ಕಿಟ್ಟು ಆದಷ್ಟು ಬೇಗ ತೆರೆದ ಸ್ಲ್ಯಾಬ್ ಮುಚ್ಚಿ ಜನರ ಆರೋಗ್ಯ ಕಾಪಾಡಬೇಕಿದೆ

The post ಬಿಬಿಎಂಪಿಯಿಂದ ಸಿಲಿಕಾನ್ ಸಿಟಿಯ ಜನಕ್ಕೆ ಭೀತಿ…! appeared first on Good News 24x7.

]]>