4 ವರ್ಷದ ಬಳಿಕ ಕಮ್​ಬ್ಯಾಕ್ ಮಾಡ್ತಾರಾ ABD?

 

ಹೋಗುತ್ವೆ. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಡಿವಿಲಿಯರ್ಸ್​ ಡೆಡ್ಲಿ ಬ್ಯಾಟಿಂಗ್​​​ನಾ, ಕ್ರಿಕೆಟ್ ಫ್ಯಾನ್ಸ್ ಮರೆಯೋಕೆ ಸಾಧ್ಯನೆ ಇಲ್ಲ.

ಆರ್​ಸಿಬಿಯ ರಿಯಲ್ ಟ್ರಬಲ್ ಶೂಟರ್ ಆಗಿದ್ದ ಎಬಿ ಡಿವಿಲಿಯರ್ಸ್​, ಸಿಂಗಲ್ ಶೇರ್​ನಂತೆ ಘರ್ಜಿಸುತ್ತಾ ಮ್ಯಾಚ್ ಗೆಲ್ಲಿಸುತ್ತಿದ್ದ ವೀರ. ಈ ಡೆಡ್ಲಿ ಬ್ಯಾಟರ್ ಕ್ರಿಕೆಟ್ ಮೈದಾನದಿಂದ ದೂರ ಸರಿದು ವರ್ಷಗಳೇ ಉರುಳಿವೆ. ಆದ್ರೀಗ ಇದೇ ಎಬಿ ಡಿವಿಲಿಯರ್ಸ್​, ಅಭಿಮಾನಿಗಳಲ್ಲಿ ಹೊಸ ಭರವಸೆ ಹುಟ್ಟಿಹಾಕಿದ್ದಾರೆ. ಒಂದೇ ಒಂದು ಮಾತಿನಿಂದ ಆರ್​ಸಿಬಿಗೆ ಮರಳುವ ಕನಸು ಬಿಚ್ಚಿಟ್ಟಿದ್ದಾರೆ.

ಭವಿಷ್ಯದಲ್ಲಿ ನಾನು ಬೇರೆ ಯಾವುದಾದರೂ ಪಾತ್ರದಲ್ಲಿ ಐಪಿಎಲ್‌ಗೆ ಸೇರಬಹುದು. ಆದರೆ ಒಬ್ಬ ವೃತ್ತಿಪರ ಆಟಗಾರನಾಗಿ ಇಡೀ ಸೀಸನ್ ಆಡುವುದು ಸ್ವಲ್ಪ ಕಷ್ಟ. ಆ ದಿನಗಳು ಮುಗಿದು ಹೋಗಿವೆ ಎಂದು ಭಾವಿಸುತ್ತೇನೆ. ನನ್ನ ಹೃದಯ ಆರ್‌ಸಿಬಿ ಜೊತೆಗಿದೆ. ಯಾವಾಗಲೂ ಇರುತ್ತದೆ. ಆದ್ದರಿಂದ ಫ್ರಾಂಚೈಸಿ ನನಗೆ ಒಂದು ಪಾತ್ರ ಇದೆ ಎಂದು ಭಾವಿಸಿದರೆ, ಇದಕ್ಕೆ ಪೂರಕವಾಗಿ ಸಮಯ ಕೂಡಿ ಬಂದರೆ ನಾನು ಖಂಡಿತವಾಗಿಯೂ ಆರ್‌ಸಿಬಿಯಲ್ಲಿ ಇರುತ್ತೇನೆ.

ಎಬಿ ಡಿವಿಲಿಯರ್ಸ್, ಮಾಜಿ ಕ್ರಿಕೆಟರ್​

ಐಪಿಎಲ್​ ಆರಂಭದಲ್ಲಿ ಐಪಿಎಲ್​​ಗೆ ಎಂಟ್ರಿ ನೀಡಿದ್ದ ಡಿವಿಲಿಯರ್ಸ್​, ಡೆಲ್ಲಿ ಡೇರ್ ಡೆವಿಲ್ಸ್​ ತಂಡದ ಪರ ಆಡಿದ್ದರು. ಆದ್ರೆ, ಈ ಬಳಿಕ ಆರ್​ಸಿಬಿಗೆ ಎಂಟ್ರಿ ನೀಡಿದ ಎಬಿಡಿಗೆ ಬೆಂಗಳೂರೇ 2ನೇ ತವರಾಗಿತ್ತು. 2011ರಲ್ಲಿ ಆರ್​ಸಿಬಿ ಪಾಲಿನ ಆಪತ್ಬಾಂಧವನಾಗಿ ಬಂದ ಎಬಿ ಡಿವಿಲಿಯರ್ಸ್​, ಬರೋಬ್ಬರಿ 11 ವರ್ಷಗಳ ಕಾಲ ರೆಡ್ ಆರ್ಮಿಯ ರಿಯಲ್ ಮ್ಯಾಚ್ ವಿನ್ನರ್ & ಗೇಮ್ ಚೇಂಜರ್ ಆಗಿದ್ದರು. ಆದ್ರೆ, 2021ರಲ್ಲಿ ಎಲ್ಲಾ ಮಾದರಿಯಿಂದ ದೂರ ಸರಿದಿದ್ದ ಎಬಿಡಿ, ಈಗ ಮತ್ತೆ ಆರ್​ಸಿಬಿಗೆ ಕಮ್​ಬ್ಯಾಕ್ ಮಾಡುವ ಆಸೆ ಬಿಚ್ಚಿಟ್ಟಿದ್ದಾರೆ. ಆದ್ರೆ, ಆಟಗಾರನಾಗಿ ಅಲ್ಲ.

11 ವರ್ಷ ಆರ್​ಸಿಬಿ ಪರ ಆಡಿರುವ ಎಬಿ ಡಿವಿಲಿಯರ್ಸ್​, ಮತ್ತೆ ಆರ್​ಸಿಬಿ ಗ್ಯಾಂಗ್ ಸೇರುವ ಇಚ್ಚೆ ಹೊಂದಿದ್ದಾರೆ. ಆದ್ರೆ, ಬ್ಯಾಟ್ಸ್​ಮನ್​ ಆಗಿ ಅಲ್ಲ. ಹೊಸ ರೋಲ್​ನಲ್ಲಿ ಅನ್ನೋದು ಸ್ವತಃ ಡಿವಿಲಿಯರ್ಸ್ ಹೇಳಿಕೊಂಡಿದ್ದಾರೆ. ಆರ್​ಸಿಬಿ ಯಶಸ್ಸಿನ ಭಾಗವಾಗುವ ಹೆಬ್ಬಯಕೆ ಹೊಂದಿರುವ ಡಿವಿಲಿಯರ್ಸ್​, ಬ್ಯಾಕ್ ಎಂಡ್​​ನಲ್ಲಿ ಕೆಲಸ ಮಾಡುವ ಹಿಂಟ್​ ಸಹ ನೀಡಿದ್ದಾರೆ. ಹೀಗಾಗಿ ಯಾವ ರೋಲ್​​ನಲ್ಲಿ ಮಿಸ್ಟರ್ 360 ಕಾಣಿಸಿಕೊಳ್ತಾರೆ ಎಂಬ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಆರ್​ಸಿಬಿ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಎಬಿ ಡಿವಿಲಿಯರ್ಸ್​, ರೆಡ್ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವ ಕನಸು ಹೊಂದಿದ್ದಾರೆ ನಿಜ. ಆದ್ರೆ, ಆ ಕನಸು ಸಾಕಾರಗೊಳ್ಳಬೇಕಾದ್ರೆ, ಅದಕ್ಕೆ ಸಮಯ, ಸಂದರ್ಭ ಕೂಡಿ ಬರಬೇಕಿದೆ. ಇದಕ್ಕೆ ಮತ್ತಷ್ಟು ದಿನಗಳು ಕಾಯಬೇಕಿದೆ. ಆದ್ರೆ, ಎಬಿ ಡಿವಿಲಿಯರ್ಸ್ ಭವಿಷ್ಯದಲ್ಲಿ​ ಆರ್​ಸಿಬಿ ಸೇರೋದಂತೂ ಸತ್ಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ

Related Posts

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸತತ 6 ಬಾರಿ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ನಾಡಹಬ್ಬಕ್ಕೆ ಸಾಕ್ಷಿಯಾಗಿದ್ದ ದಸರಾ ಗಜಪಡೆಯ ದಿಗ್ಗಜ ಅಭಿಮನ್ಯು, 2026ರ ಮೈಸೂರು ದಸರಾದಲ್ಲಿ ನಿಶಾನೆ ಆನೆಯಾಗಿ ಹೆಜ್ಜೆ ಹಾಕಲು ಸಜ್ಜಾಗಿದ್ದಾನೆ. 60 ವರ್ಷ ವಯೋಮಿತಿ ಪೂರೈಸಿದ ಹಿನ್ನೆಲೆಯಲ್ಲಿ ಈ ಹಿಂದೆ ಆನೆಗೆ ನಿವೃತ್ತಿ…

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

‘ಟಾಕ್ಸಿಕ್‌’ ಸಿನಿಮಾದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಅಭಿನಯ ಹಾಗೂ ವಿಭಿನ್ನ ಆವತಾರಕ್ಕೆ ಸ್ಯಾಂಡಲ್‌ವುಡ್‌ ಮಂದಿ ಫಿದಾ ಆಗಿದ್ದು, ಇದೀಗ ಕಿಚ್ಚ ಸುದೀಪ್‌ ಪುತ್ರಿ, ಗಾಯಕಿ ಸಾನ್ವಿ ಸುದೀಪ್‌ ಕೂಡ ಯಶ್ ಅವರ ಪರ್ಫಾರ್ಮೆನ್ಸ್ ಅನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ಟಾಕ್ಸಿಕ್: ಎ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!