ಯಾಕೆ ಅಂತ ಹೇಳಿದ್ರೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿಯ ಎರಡು ಬಣಗಳಲ್ಲೂ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ ಅಷ್ಟೇ ಅಲ್ಲದೆ ಇವರಿಗೆ ಮಂತ್ರಿ ಸ್ಥಾನ ಸಿಕ್ಕರೆ ನಾಯಕ ಸಮುದಾಯದ ಸಂಪೂರ್ಣ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿದಂತಾಗುತ್ತದೆ. ಹೆಚ್ಡಿ ಕೋಟೆಯಲ್ಲಿ 2ನೇ ಬಾರಿ ಗೆದ್ದು ಶಾಸಕರಾಗಿರುವ ಅನಿಲ್ ಚಿಕ್ಕಮಾದು ಅವರಿಗೆ ಮಂತ್ರಿ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ದೊರೆಯಲ್ಲಿದೆ.

ಹೈಲೈಟ್
- ಸಂಪುಟ ಪುನರಚನೆ ವೇಳೆ ಅನಿಲ್ ಚಿಕ್ಕಮಾದುಗೆ ಸಿಗುತ್ತಾ ಮಂತ್ರಿ ಸ್ಥಾನ ?
- ಮೈಸೂರು ಭಾಗಕ್ಕೆ ಮತ್ತೊಂದು ಮಂತ್ರಿ ಸ್ಥಾನ ನೀಡ್ತಾರಾ ?
- ಹೆಚ್ ಡಿ ಕೋಟೆ ಕಾಂಗ್ರೆಸ್ ಶಾಸಕ ಮಂತ್ರಿಯಾಗ್ತಾರಾ ?
ಎಸ್ಟಿ ಸಮುದಾಯಕ್ಕೆ ಸೇರಿರುವ ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು. ಎಸ್ಟಿ ಸಮುದಾಯಕ್ಕೆ ಸೇರಿರುವ ‘ಕೈ’ ಶಾಸಕ ರಾಜಣ್ಣ ವಜಾದಿಂದ ಅನಿಲ್ ಚಿಕ್ಕಮಾದು ಮಂತ್ರಿ ಸ್ಥಾನ ನೀಡುವ ಸಾಧ್ಯತೆ ಇದೆ . ನಾಯಕ ಸಮುದಾಯದ ಬೆಂಬಲ ಪಡೆಯುವ ಸಲುವಾಗಿ , ಡ್ಯಾಮೇಜ್ ಕಂಟ್ರೋಲ್ ಮಾಡೋಕೆ ಅನಿಲ್ ಚಿಕ್ಕಮಾದುಗೆ ಸಚಿವ ಸ್ಥಾನ ನೀಡುತ್ತಾ ಕಾಂಗ್ರೆಸ್ ಅಂತ ಕಾದುನೋಡಬೇಕಿದೆ.
ಹೆಚ್ಡಿ ಕೋಟೆಯಲ್ಲಿ 2ನೇ ಬಾರಿ ಗೆದ್ದು ಶಾಸಕರಾಗಿರುವ ಅನಿಲ್ , ಸಿಎಂ ಸಿದ್ದರಾಮಯ್ಯ ಡಿಕೆಶಿ ಎರಡೂ ಬಣದ ಜತೆ ಉತ್ತಮ ಬಾಂಧವ್ಯ ಇದೆ. ಅನಿಲ್ ಚಿಕ್ಕಮಾದು ನಾಯಕ ಸಮುದಾಯದ ಮಂತ್ರಿಯಾಗಿದ್ದಾರೆ. ಮೈಸೂರು-ಚಾಮರಾಜನಗರ ಭಾಗದಲ್ಲಿನಾಯಕ ಸಮುದಾಯ ಹೆಚ್ಚಾಗಿದೆ.ಹಾಗಾಗಿ ನಾಯಕ ಸಮುದಾಯದ ಬೆಂಬಲ ಪಡೆಯಲು ಅನಿಲ್ ಚಿಕ್ಕಮಾದುಗೆ ಮಂತ್ರಿ ಸ್ಥಾನ ಕೊಡೋ ನಿರ್ಧಾರ ಮಾಡುತ್ತಾ ಕಾಂಗ್ರೆಸ್ ಅಂತ ಕಾದು ನೋಡಬೇಕಿದೆ.





