ದೇವರಿಗೂ ಮಿಗಿಲು ಅಮ್ಮನ ಮಡಿಲು ….

ಜೀವನದಲ್ಲಿ ಅಮ್ಮ ಎಂಬ ಎರಡಕ್ಷರ ಜೊತೆಗಿರಲು, ಕಷ್ಟ ಎಂಬ ಎರಡಕ್ಷರ ಕಾಣುವುದಿಲ್ಲ. ನವಮಾಸ ಗರ್ಭದಲ್ಲಿ ಹೊತ್ತು, ಜನ್ಮ ನೀಡಿದ ಅವಳು ಜನ್ಮ ಮಾಸುವವರೆಗೂ ಪ್ರೀತಿಯನ್ನು ಬಿಟ್ಟು ಇನ್ನೇನನ್ನೂ ನೀಡಲಾರಳು. ಮಕ್ಕಳು ತಪ್ಪು ಮಾಡಿದಾಗ ಕೋಪವೇ ಅವಳ ಬೆತ್ತ, ನಮಗೆ ನೋವಾದಾಗ ಅವಳು ಕಣ್ಣೀರಾಕುವಳು ಅದುವೇ ಅವಳ ಮುಗ್ಧತೆಯ ಪ್ರೀತಿ. ಶಿಸ್ತು ,ಬದುಕಿನ ಅರ್ಥ ತಿಳಿಸುವ ವೈಖರಿಯಲ್ಲಿಯೇ ಗುರುವಾದವಳು. ನಗುವೆಂಬ ಅಮೂಲ್ಯವಾದ ಆಭರಣ ತೊಟ್ಟವಳು ಅಮ್ಮ. ನಮ್ಮ ಏಳಿಗೆಗಾಗಿ ಕಾಣದ ದೇವರಿಗೆ ಹರಕೆ ಹೊತ್ತು, ಸದಾ ಸುಖವಿರಲಿ ಮಕ್ಕಳ ಬಾಳಿನಲ್ಲಿ ಎಂದು ಬೇಡಿದವಳು ನನ್ನಮ್ಮ. ಹೊಲ-ಗದ್ದೆಗಳಲ್ಲಿ, ಬಿಸಿಲು, ಮಳೆ,ಚಳಿ,ಗಾಳಿ ಎನ್ನದೇ ದೇಹದಂಡಿಸಿ ದುಡಿದು ಮಕ್ಕಳಿಗಾಗಿ ಒಂದಿಷ್ಟು ಹಣ ಕೂಡಿಡುವಳು. ಆ ಹಣದಿಂದ ಮಕ್ಕಳ ಜೀವನ ಹಸನಾಗುವುದನ್ನು ನೋಡುವುದೇ ಅವಳ ಜೀವನದ ಮುಖ್ಯ ಗುರಿ. ನಮಗಾಗಿ ಗುಡಿ-ಗೋಪುರ ಸುತ್ತುವ ಅವಳೇ ಕಣ್ಣಿಗೆ ಕಾಣುವ, ಮುಕ್ಕೋಟಿ ದೇವರನ್ನು ಮೀರಿಸುವ ಮಮತೆಯ ಸಿರಿ ಅಮ್ಮ. ಆಕೆಯ ಕಾಲಿನ ಧೂಳು ಸಹ ನನ್ನಣೆಗೆ ಸಿಂಧೂರವೇ ಸರಿ..

ಈ ಸುಂದರ ಜೀವನ ನೀಡಿದ್ದಕ್ಕೆ ಧನ್ಯವಾದಗಳು ಅಮ್ಮ…. ಎಂದಿಗೂ ನಿನ್ನ ಮಡಿಲಿನಲ್ಲಿ ಪುಟ್ಟ ಮಗು ನಾನು…. ದೇವರಿಗೂ ಸವಾಲಾಕುವೆ ನಿನ್ನ ಪ್ರೀತಿ ಪಡೆದ ನಾನು ಜಗತ್ತಿನ ಶ್ರೀಮಂತೆ ಎಂದು…..ಅಮ್ಮ; ಇದು ಖಂಡಿತ ಒಂದು ಶಬ್ದವಲ್ಲ. ಬದಲಿಗೆ ಅದೊಂದು ಭಾವನೆ. ಸಂತೋಷ, ಸುಖ, ದುಃಖ, ನೋವು, ನಲಿವು ಹೀಗೆ ಎಲ್ಲದಕ್ಕೆ ಅಮ್ಮನೇ ಆಧಾರ. ಆಕೆಯೇ ನಮ್ಮ ಮೊದಲ ನುಡಿ. ಜಗತ್ತಿನಲ್ಲಿ ಅಮ್ಮ ಅನ್ನುವ ಶಬ್ದಕ್ಕಿಂತ ತೂಕದ ಇನ್ನೊಂದು ಶಬ್ದ-ಭಾವನೆ ಇರಲಿಕ್ಕಿಲ್ಲ.ಪ್ರತಿ ವ್ಯಕ್ತಿಯ ಬದುಕಿನಲ್ಲಿ ಅಮ್ಮನ ಮನೆಯಷ್ಟು ಆಪ್ತ ಮನೆ ಇನ್ನೊಂದು ಸಿಗಲಾರದು. ಅಮ್ಮನ ಮಡಿಲು ನೀಡುವ ಸುಖವನ್ನು ಜಗತ್ತಿನ ಯಾವುದೇ ವಸ್ತು ನೀಡಲಾರದು.

ಅಮ್ಮನಿಗೆ ಸರಿ ಸಾಟಿ ಅಮ್ಮನೇ. ಅದಕ್ಕಾಗಿಯೇ ಅಮ್ಮನನ್ನು ನಮ್ಮಲ್ಲಿ ಮಾತೃ ದೇವತೆ ಎಂದೇ ಪೂಜಿಸುತ್ತಾರೆ. ಅಮ್ಮ ಅನ್ನುವುದು ಒಂದು ವ್ಯಕ್ತಿ ಅಲ್ಲ; ಅಮ್ಮ ಅನ್ನುವುದು ಕೇವಲ ಎರಡು ಪದಗಳಲ್ಲ; ಬದಲಿಗೆ ಅಮ್ಮ ಎಂದರೆ ಒಂದು ಸುಂದರ ಭಾವನೆ. ಅಮ್ಮ ಎಂದರೆ ಏನು? ಅದು ಶ್ರೀ ಕೃಷ್ಣ ಪರಮಾತ್ಮನ ವಿಶ್ವರೂಪದಂತೆ.ಅಲ್ಲಿ ಎಲ್ಲವೂ ಇದೆ; ಎಲ್ಲೆಡೆಯೂ ಇರುವುದು ಅಮ್ಮನೇ.ಇಂತಹ ಅಮ್ಮನ ಋಣ ನೆನಪಿಸಿಕೊಳ್ಳಲೊಂದು ಅಮ್ಮಂದಿರ ದಿನ. ಪ್ರಪಂಚದೆಲ್ಲೆಡೆ ಇರುವ ಎಲ್ಲಾ ತಾಯಂದಿರಿಗೂ ವಿಶ್ವ ತಾಯಂದಿರ ದಿನದ ಶುಭಾಶಯಗಳು.

 

Related Posts

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಕ್ರೀಡೆ ಅಂದಾಗ ಅಲ್ಲಿ ಎದುರಾಳಿಗಳ ವಿರುದ್ಧ ಗೆಲ್ಲಲೇಬೇಕು ಎನ್ನುವ ಹಠ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಮ್ಯಾರಾಥಾನ್‌ನಲ್ಲಿ ಸೋಲು-ಗೆಲುವುಗಿಂತಲೂ ಮಾನವೀಯತೆ ಮುಖ್ಯ ಅನ್ನೋದನ್ನು ಇಬ್ಬರು ಯುವ ಕ್ರೀಡಾಪಟುಗಳು ತೋರಿಸಿಕೊಟ್ಟಿದ್ದಾರೆ‌. ತಮ್ಮ ವೈಯಕ್ತಿಕ ದಾಖಲೆಯನ್ನು ಬದಿಗಿಟ್ಟು ಸಂಕಷ್ಟದಲ್ಲಿದ್ದ ಸಹ ಕ್ರೀಡಾಪಟುವಿಗೆ ಸಹಾಯ ಮಾಡುವ…

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 25 ರಿಂದ 28 ರೂಪಾಯಿಗಳಷ್ಟು ಹೆಚ್ಚಾಗಲಿದೆ ಎಂಬ ವದಂತಿಗಳು ಹರಡಿವೆ. ಆದರೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವರದಿಗಳನ್ನು ಅಧಿಕೃತವಾಗಿ…

You Missed

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು