ಮುಂದಿನ 25 ವರ್ಷಗಳ ಕಾಲಕ್ಕೆ ಸೂಕ್ತವಾಗುವಂತೆ ಮೈಸೂರಿನ ಅಭಿವೃದ್ಧಿ ನಾಥೇಶ್ವರ ಇನ್ಟಿಟ್ಯೂಟ್ ಫಾರ್ ಮ್ಯಾನೇಜ್ ಮೆಂಟ್ ಡೆವಲಪ್ ಮೆಂಟ್ ಸಂಸ್ಥೆ ಹಾಗೂ ಇತರ ಸಂಘ ಸಂಸ್ಥೆಗಳ ವತಿಯಿಂದ ಮಾ.13 ರಿಂದ 15ರವರೆಗೆ ‘ವಿಶನ್ ಮೈಸೂರು-2050* ಕಾರ್ಯಕ್ರಮವನ್ನು ಸಿದ್ದಾರ್ಥನಗರ ದಲ್ಲಿರುವ ಸಂಸ್ಥೆಯಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿ ಗಳು, ಕಾರ್ಪೋರೇಟ್ ಮತ್ತು ಇಂಡಸ್ಟ್ರಿಗಳ ನಾಯಕರು, ಎನ್ಜಿಒಗಳು ಹಾಗೂ ಸಾರ್ವಜನಿಕರು ಭಾಗವಹಿ ಸಬಹುದು ಹೆಚ್ಚಿನ 0821-2429722,2420490 ಸಂಪರ್ಕಿಸಬಹುದು ,ಎಸ್ಡಿಎಂ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ ಮೆಂಟ್ ಡೆವಲಪ್ ಮೆಂಟ್ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಗೌರಿ ಎಸ್.ಜೋಶಿ ತಿಳಿಸಿದ್ದಾರೆ.
ವಿಷನ್ ಮೈಸೂರು-2050ಕ್ಕೆ ವೀರೇಂದ್ರ ಹೆಗ್ಗಡೆ ರಾಯಭಾರಿಮೈಸೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ’ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ ಮೆಂಟ್ ಡೆವಲಪ್ಮೆಂಟ್ ಕಾಲೇಜಿನ ವತಿಯಿಂದ ಮೈಸೂರು ನಗರ ಮುಂದಿನ 25 ವರ್ಷ ದಲ್ಲಿ ಹೇಗಿರಬೇಕು ಎಂಬುದರ ಬಗ್ಗೆ ಚರ್ಚಿಸಲು ರೂಪಿಸಿರುವ ‘ವಿಷನ್ ಮೈಸೂರು-2050’ಗೆ ಶ್ರೀಧರ್ಮಸ್ಥಳದ ಧರ್ಮಾಧಿಕಾರಿ, ಎಸ್ಡಿಎಂ ಎಜ್ಜು ಕೇಷನಲ್ ಟ್ರಸ್ಟ್ ಅಧ್ಯಕ್ಷರಾದ ಡಾ.ವೀರೇಂದ್ರಹೆಗ್ಗಡೆ ರಾಯಭಾರಿಯಾಗಿದ್ದಾರೆ.





