ರೋಹಿತ್​ ಶರ್ಮಾನ ಹೊರಕಳಿಸೋಕೆ ಬಿಸಿಸಿಐ ಹೊಸ ದಾಳ ..!

ಕ್ಯಾಪ್ಟನ್​ ರೋಹಿತ್​ ಶರ್ಮಾನ ಹೊರ ಕಳಿಸೋಕೆ ಬಿಸಿಸಿಐ ಶತಪ್ರಯತ್ನ ಮಾಡ್ತಿದೆ. ರೋಹಿತ್​ ಶರ್ಮಾ ನಾನು ವಿಶ್ವಕಪ್​ ಆಡಿಯೇ ರಿಟೈರ್​ ಆಗೋದು ಎಂದು ಪಟ್ಟು ಹಿಡಿದಿದ್ದಾರೆ. ಸೀನಿಯರ್​​​ ಆಟಗಾರರ ಕೈಬಿಟ್ಟು ಭವಿಷ್ಯದ ತಂಡ ಕಟ್ಟೋ ಪ್ರಯತ್ನ ಜೋರಾಗೆ ನಡೀತಿದೆ. ಸಪೋರ್ಟ್​ ಸ್ಟಾಫ್​ ವಿಚಾರದಲ್ಲೂ ಅಷ್ಟೇ. ಕಳೆದೊಂದು ವರ್ಷದಲ್ಲಿ ಹಲವು ಬದಲಾವಣೆಯಾಗಿದೆ. ಸ್ಟ್ರೆಂಥ್​ ಅಂಡ್ ಕಂಡಿಷನಿಂಗ್​ ಕೋಚ್​ ಬದಲಾವಣೆಯಾಗಿದೆ. ಸುದೀರ್ಘ ಕಾಲ ತಂಡದೊಂದಿಗಿದ್ದ ಸೋಹಮ್​​ ದೇಸಾಯಿಗೆ ಗುಡ್​ ಬೈ ಹೇಳಿರೋ ಬಿಸಿಸಿಐ, ಎಡ್ರೈನ್​ ಲೆ ರೌಕ್ಸ್​​ಗೆ ಮಣೆ ಹಾಕಿದೆ.

ಹೊಸ ಸ್ಟ್ರೆಂಥ್​ ಅಂಡ್ ಕಂಡಿಷನಿಂಗ್​ ಕೋಚ್​ಗೆ ಮಣೆ ಹಾಕಿರೋದು ಮಾತ್ರವಲ್ಲ. ಫಿಟ್​ನೆಸ್​ ಮಾನದಂಡವನ್ನೂ ಬದಲಾಯಿಸಲು ಬಿಸಿಸಿಐ ಮುಂದಾಗಿದೆ. ಈ ಹಿಂದಿದ್ದ ಯೋ ಯೋ ಟೆಸ್ಟ್​ಗೆ ಗೇಟ್​ಪಾಸ್​ ನೀಡಲು ಮುಂದಾಗಿರೋ ಬಾಸ್​​ಗಳು ಬ್ರೊನ್ಕೊ ಟೆಸ್ಟ್​ ಪರಿಚರಿಯಿಸೋಕೆ ಮುಂದಾಗಿದ್ದಾರೆ. ಆಟಗಾರರ ಫಿಟ್ನೆಸ್ ಲೆವೆಲ್​ ಮತ್ತಷ್ಟು ಹೆಚ್ಚಿಸುವ ದೃಷ್ಟಿಯಿಂದ ಈ ಮಹತ್ವದ ನಿರ್ಧಾರವನ್ನ ಬಿಸಿಸಿಐ ಮಾಡಿದೆ ಅನ್ನೋದು ಮೇಲ್ನೋಟಕ್ಕೆ ಕಾಣ್ತಿರೋ ಸತ್ಯ. ಇದ್ರ ಹಿಂದೆ ಬೇರೆಯದ್ದೇ ಲೆಕ್ಕಾಚಾರವಿದೆ.

ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ನಿವೃತ್ತಿಯ ವಿಚಾರ ಕ್ರಿಕೆಟ್​ ವಲಯದಲ್ಲಿ ತೀವ್ರ ಚರ್ಚೆಯಲ್ಲಿದೆ. 2027ರ ವಿಶ್ವಕಪ್​ ಟಾರ್ಗೆಟ್​ ಮಾಡಿರೋ ಬಿಸಿಸಿಐ ಬಾಸ್​​ಗಳು ಕೊಹ್ಲಿ, ರೋಹಿತ್​​ನ ಕೈ ಬಿಟ್ಟು ಯುವ ತಂಡ ಕಟ್ಟೋ ಲೆಕ್ಕಾಚಾರದಲ್ಲಿದ್ದಾರೆ. ಬಿಸಿಸಿಐಗೆ ಸೆಡ್ಡು ಹೊಡೆದಿರೋ ರೋಹಿತ್​​, ನಾವು ವಿಶ್ವಕಪ್​​ ಆಡಿಯೇ ನಿವೃತ್ತಿ ಹೇಳೋದು ಎಂಬ ಸಂದೇಶ ರವಾನೆ ಮಾಡ್ತಿದ್ದಾರೆ. ಫಾರ್ಮ್​ ಅಂಡ್ ಫಿಟ್​ನೆಸ್​​ ಎರಡರಲ್ಲೂ ಕೊಹ್ಲಿ ಟಾಪ್​​​ನಲ್ಲಿದ್ದಾರೆ. ರೋಹಿತ್​ ಶರ್ಮಾ ಫಾರ್ಮ್​ ಚನ್ನಾಗಿದೆ. ಆದ್ರೆ ಫಿಟ್​ನೆಸ್​​ ಸಮಸ್ಯೆಯಿದೆ. ಈ ಫಿಟ್​​​ನೆಸ್​ ವೀಕ್​ನೆಸ್​​ ಅನ್ನೇ ಲಾಕ್​ ಮಾಡೋಕೆ ಬಿಸಿಸಿಐ ಹೊರಟಿದೆ.

ಬ್ರೊನ್ಕೊ ಟೆಸ್ಟ್​​​ ಪಾಸ್​ ಆಗೋದು ಕಷ್ಟ
ರಗ್ಬಿ ಹಾಗೂ ಫುಟ್ಬಾಲ್​ ತಂಡಗಳ ಸೆಲೆಕ್ಷನ್​ಗೆ ಈ ಬ್ರೊನ್ಕೊ ಟೆಸ್ಟ್​ ಮಾನದಂಡವಾಗಿದೆ. ಈ ಹಿಂದಿದ್ದ ಯೋ ಯೋ ಟೆಸ್ಟ್​ಗಿಂತ ಇದು ಕಠಿಣವಾದ ಪರೀಕ್ಷೆ. ಈ ಟೆಸ್ಟ್​ನಲ್ಲಿ 20 ಮೀಟರ್, 40 ಮೀಟರ್​, 60 ಮೀಟರ್​​​ ರನ್ನಿಂಗ್​ ಇರಲಿದೆ. ಶಟಲ್ ಮಾದರಿಯಲ್ಲಿ ಟೆಸ್ಟ್​ ನಡೆಯಲಿದ್ದು, 1 ಸೆಟ್ ಪೂರ್ಣಗೊಳಿಸಲು 240 ಮೀಟರ್ ದೂರ ಓಡಬೇಕು. ಹೀಗೆ 5 ಬಾರಿ ಆಟಗಾರ ಬ್ರೇಕ್​ ಇಲ್ಲದೇ ರನ್ನಿಂಗ್ ಮಾಡಬೇಕು. 1200 ಮೀಟರ್ ದೂರವನ್ನ 6 ನಿಮಿಷದೊಳಗೆ ಆಟಗಾರ ಪೂರ್ಣಗೊಳಿಸಬೇಕಾಗಿರುತ್ತೆ. ಈ ಕಠಿಣ ಪರೀಕ್ಷೆಯನ್ನ ಫಿಟ್​ನೆಸ್​ ಸಮಸ್ಯೆ ಎದುರಿಸ್ತಿರೋ 36 ವರ್ಷದ ರೋಹಿತ್​ ಗೆಲ್ಲೋದು ಕಷ್ಟ.

‘ರೋಹಿತ್​ ಶರ್ಮಾಗೆ ಇದು ಕಷ್ಟ’
2027 ವಿಶ್ವಕಪ್​ನಿಂದ ವಿರಾಟ್​​ ಕೊಹ್ಲಿಯನ್ನ ಹೊರಗಿಡೋದು ಕಷ್ಟ. ಆದ್ರೆ ರೋಹಿತ್​ ವಿಚಾರದಲ್ಲಿ ಅನುಮಾನವಿದೆ. ನಾನು ಭಾರತೀಯ ಕ್ರಿಕೆಟ್​ನ ಸೂಕ್ಷ್ಮವಾಗಿ ಗಮನಿಸುತ್ತೆನೆ. ಕೆಲ ದಿನಗಳ ಹಿಂದೆ ಬ್ರೊನ್ಕೊ ಟೆಸ್ಟ್​​ ಪರಿಚಯಿಸಲಾಗಿದೆ. ಇದು ರೋಹಿತ್​ ಶರ್ಮಾ ಅಂತಾ ಆಟಗಾರರಿಗೆ ಇದು ಕಷ್ಟ. ರೋಹಿತ್​ ಅವರ ಭವಿಷ್ಯದ ಪ್ಲಾನ್​ನಲ್ಲಿ ಇಲ್ಲ. ಹೀಗಾಗಿಯೇ ಹೊಸ ಟೆಸ್ಟ್​ ಪರಿಚಯಿಸಲಾಗಿದೆ.

ಒಟ್ಟಿನಲ್ಲಿ ಬಿಸಿಸಿಐ ಹೊಸದಾಗಿ ಜಾರಿಗೆ ತರಲು ಮುಂದಾಗಿರೋ ಬ್ರೊನ್ಕೊ ಟೆಸ್ಟ್​ ರೋಹಿತ್​ ಶರ್ಮಾ ಕರಿಯರ್​​ನ ಮತ್ತಷ್ಟು ಅತಂತ್ರಕ್ಕೆ ಸಿಲುಕಿಸಿದೆ. ಈ ಕಠಿಣ ಟೆಸ್ಟ್​ ಗೆದ್ದು ರೋಹಿತ್​ ಶರ್ಮಾ ಟೀಮ್​ ಇಂಡಿಯಾದಲ್ಲಿ ಸ್ಥಾನ ಉಳಿಸಿಕೊಳ್ತಾರಾ? ವಿಶ್ವಕಪ್​ ಆಡೋ ಕನಸು ನನಸು ಮಾಡಿಕೊಳ್ತಾರಾ? ಕಾದು ನೋಡೋಣ.

Related Posts

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಕ್ರೀಡೆ ಅಂದಾಗ ಅಲ್ಲಿ ಎದುರಾಳಿಗಳ ವಿರುದ್ಧ ಗೆಲ್ಲಲೇಬೇಕು ಎನ್ನುವ ಹಠ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಮ್ಯಾರಾಥಾನ್‌ನಲ್ಲಿ ಸೋಲು-ಗೆಲುವುಗಿಂತಲೂ ಮಾನವೀಯತೆ ಮುಖ್ಯ ಅನ್ನೋದನ್ನು ಇಬ್ಬರು ಯುವ ಕ್ರೀಡಾಪಟುಗಳು ತೋರಿಸಿಕೊಟ್ಟಿದ್ದಾರೆ‌. ತಮ್ಮ ವೈಯಕ್ತಿಕ ದಾಖಲೆಯನ್ನು ಬದಿಗಿಟ್ಟು ಸಂಕಷ್ಟದಲ್ಲಿದ್ದ ಸಹ ಕ್ರೀಡಾಪಟುವಿಗೆ ಸಹಾಯ ಮಾಡುವ…

ಸ್ಟಾರ್ ಅಥ್ಲೀಟ್ ಮೊದಲಿಂದಲೂ RCB ಅಭಿಮಾನಿ….

ವಿಶ್ವದ ಅತಿ ವೇಗದ ಅಥ್ಲೀಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿ ಬಳಗಕ್ಕೆ ಸೇರಿದ್ದಾರೆ. RCB ಜೆರ್ಸಿ ಧರಿಸಿ ಫೋಟೋ ಪೋಸ್ಟ್ ಮಾಡಿ, ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಇದರಿಂದ ವಿಶ್ವಾದ್ಯಂತ ಇರುವ RCB ಫ್ಯಾನ್ಸ್ ಸಂತಸಗೊಂಡಿದ್ದು, ಫ್ರಾಂಚೈಸಿಯ ಜನಪ್ರಿಯತೆ ಮತ್ತಷ್ಟು ಹೆಚ್ಚಿಸಿದೆ. ಕೇವಲ…

You Missed

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು