ಅಮೆರಿಕದ ಕಣ್ಣಲ್ಲಿ ಭಾರತ-ಪಾಕಿಸ್ತಾನ ಮಾತ್ರ? ಯುಎಸ್‌ ಸಂಭಾಳಿಸುವ ಜವಾಬ್ದಾರಿ ಯಾರದ್ದು?

ವಾಷಿಂಗ್ಟನ್‌ ಡಿಸಿ : ಅಮೆರಿಕವನ್ನು ವಿಶ್ವದ ದೊಡ್ಡಣ್ಣ ಅಂತಾರೆ. ತನ್ನ ಅಗಾಧ ಆರ್ಥಿಕ ಮತ್ತು ಸಾಮರಿಕ ಶಕ್ತಿಯಿಂದ ಅಮೆರಿಕ ಈ ಪದವಿಯನ್ನು ಗಳಿಸಿಕೊಂಡಿದೆ. ಹಾಗಂತ ಅಮೆರಿಕ ಅಮೆರಿಕವನ್ನು ನೋಡಿಕೊಳ್ಳುವುದನ್ನು ಮರೆತರೆ, ಈ ದೊಡ್ಡಣ್ಣನ ಪದವಿ ಬಹಳ ದಿನ ಇರಲಾರದು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಡಳಿತ ಬಹುಶಃ ಇಂತದ್ದೊಂದು ತಪ್ಪು ಮಾಡುತ್ತಿದೆ. ಅಮೆರಿಕದ ಬಗ್ಗೆ ಕೊಡಬೇಕಾದ ಗಮನ ಕೊಡದಿರುವುದು ಮತ್ತು ವಿಶ್ವದ ಇತರ ಭಾಗಗಳಲ್ಲಿ ಆಗುತ್ತಿರುವ ಬೆಳವಣಿಗೆಗಳ ಮೇಲೆ ಬೇಡದ ಗಮನ ಕೊಡುತ್ತಿರುವುದು ಟ್ರಂಪ್‌ ಆಡಳಿತ್‌ ನೀತಿಯಾಗಿದೆ.

ಇದಕ್ಕೆ ಪುಷ್ಠಿ ಎಂಬಂತೆ, “ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿಯನ್ನು ಅಮೆರಿಕ ಪ್ರತಿದಿನವೂ ಮೇಲ್ವಿಚಾರಣೆ ಮಾಡುತ್ತದೆ” ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ. ಈ ಮೂಲಕ ಟ್ರಂಪ್‌ ಆಡಳಿತಕ್ಕೆ ಅಮೆರಿಕಕ್ಕಿಂತ ಭಾರತ ಮತ್ತು
ಪಾಕಿಸ್ತಾನವೇ ಮುಖ್ಯ ಎಂಬುದು ಸಾಬೀತಾಗಿದೆ. ಡೊನಾಲ್ಡ್‌ ಟ್ರಂಪ್‌ ಮತ್ತೆ ಕದನ ವಿರಾಮ ಒಪ್ಪಂದದ ಕ್ರೆಡಿಟ್‌ ಪಡೆಯಲು ಪ್ರಯತ್ನಿಸುತ್ತಿರುವುದು ಸಾಬೀತಾಗಿದೆ.

ರೂಬಿಯೊ ಹೇಳಿದ್ದೇನು? : ಎನ್‌ಬಿಸಿ ನ್ಯೂಸ್‌ನೊಂದಿಗೆ ಮಾತನಾಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, “ಏಷ್ಯಾದ ಎರಡು ನೆರೆಹೊರೆ ರಾಷ್ಟ್ರಗಳ ನಡುವಿನ ಪರಮಾಣು ಉಲ್ಬಣವನ್ನು ತಪ್ಪಿಸಲು, ಅಮೆರಿಕ ನಿತ್ಯವೂ ಕೆಲಸ ಮಾಡುತ್ತದೆ. ಕದನ ವಿರಾಮ ಒಪ್ಪಂದಗಳನ್ನು ನಿರ್ವಹಿಸುವುದು ಒಂದು ಸವಾಲಾಗಿರುವುದರಿಂದ, ಅವು ಬೇಗನೆ ಮುರಿದು ಬೀಳಬಹುದು. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ಮತ್ತೆ ಸಂಘರ್ಷದ ದಾರಿ ಹಿಡಿಬಾರದು ಎಂಬ ಉದ್ದೇಶದಿಂದ, ಅಮೆರಿಕ ನಿತ್ಯವೂ ಈ ಎರಡೂ ದೇಶಗಳ ಚಟುವಟಿಕೆಗಳ ಮೇಲೆ ಕಣ್ಣಟ್ಟಿದೆ” ಎಂದು ಹೇಳಿದ್ಧಾರೆ.

“ಕದನ ವಿರಾಮದ ಒಂದು ಮುಖ್ಯ ತೊಡಕು ಎಂದರೆ ಅವುಗಳನ್ನು ಕಾಯ್ದುಕೊಳ್ಳುವುದು. ಅದು ತುಂಬಾ ಕಷ್ಟದ ಕೆಲಸವಾಗಿದ್ದು, ಪ್ರತಿದಿನ
ಪಾಕಿಸ್ತಾನ ಮತ್ತು ಭಾರತದ ನಡುವೆ ಏನು ನಡೆಯುತ್ತಿದೆ ಎಂಬುದನ್ನು ಗಮನಿಸುವ ಮೂಲಕ, ಈ ಕಷ್ಟದ ಜವಾಬ್ದಾರಿಯನ್ನು ಅಮೆರಿಕ ನಿರ್ವಹಿಸುತ್ತಿದೆ” ಎಂದು ಮಾರ್ಕೊ ರೂಬಿಯೊ ಹೇಳಿದ್ದಾರೆ.

ರಷ್ಯಾ-ಉಕ್ರೇನ್‌ ಕದನ ವಿರಾಮ: ಇನ್ನು ಅಲಾಸ್ಕಾ ಸಭೆಯಲ್ಲಿ ರಷ್ಯಾ-ಉಕ್ರೇನ್‌ ಕದನ ವಿರಾಮ ಒಪ್ಪಂದ ಜಾರಿ ಸಾಧ್ಯವಾಗದ ಬಗ್ಗೆ ಮಾತನಾಡಿದ ಮಾರ್ಕೊ ರೂಬಿಯೊ, “ಕದನ ವಿರಾಮ ಒಪ್ಪಂದ ಜಾರಿಯಾಗಬೇಕಾದರೆ ಎರಡೂ ಕಡೆಯವರು ಗುಂಡು ಹಾರಿಸುವುದನ್ನು ನಿಲ್ಲಿಸಬೇಕು. ಆದರೆ ರಷ್ಯಾ ಆ ಕೆಲಸವನ್ನು ಮಾಡುತ್ತಿಲ್ಲ” ಎಂದು ಮಾರ್ಕೊ ರೂಬಿಯೊ ಹೇಳಿದ್ದಾರೆ.

ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು “ಜಾಗತಿಕ ಶಾಂತಿಯ ಧೂತ” ಎಂದು ಕರೆದಿರುವ ಮಾರ್ಕೊ ರೂಬಿಯೊ, ಶಾಂತಿಯ ಸಾಧನೆಯನ್ನು ತಮ್ಮ ಆಡಳಿತದ ಆದ್ಯತೆಯನ್ನಾಗಿ ಮಾಡಿಕೊಂಡ ಅಧ್ಯಕ್ಷರನ್ನು ಹೊಂದಿರುವುದಕ್ಕೆ, ಅಮೆರಿಕನ್ನರು ತಮ್ಮನ್ನು ಅದೃಷ್ಟವಂತರು ಎಂದು ಕರೆದುಕೊಳ್ಳಬೇಕು” ಎಂದು ಮಾರ್ಕೊ ರೂಬಿಯೊ ಅಭಿಪ್ರಾಯಪಟ್ಟಿದ್ದಾರೆ.

“ಭಾರತ-ಪಾಕಿಸ್ತಾನ, ಕಾಂಬೋಡಿಯಾ-ಥೈಲ್ಯಾಂಡ್‌, ರುವಾಂಡಾ-ಡಿಆರ್‌ಸಿ, ಹೀಗೆ ಜಗತ್ತಿನಲ್ಲಿ ಎಲ್ಲೆಲ್ಲಿ ಶಾಂತಿ ಸ್ಥಾಪನೆಗೆ ಅವಕಾಶ ಸಿಕ್ಕಿದೆಯೋ, ಅಲ್ಲಲ್ಲಿ ಡೊನಾಲ್ಡ್‌ ಟ್ರಂಪ್‌ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ” ಎಂದು ಮಾರ್ಕೊ ರೂಬಿಯೊ ಬಹುಪರಾಕ್‌ ಹಾಕಿದ್ದಾರೆ.

ಭಾರತದ ಸ್ಪಷ್ಟ ನಿರಾಕರಣೆ: ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದದಲ್ಲಿ ಅಮೆರಿಕದ ಪಾತ್ರವನ್ನು ಸ್ಪಷ್ಟವಾಗಿ ನಿರಾಕರಿಸಿರುವ ಭಾರತ, ಉಭಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಕದನ ವಿರಾಮ ಒಪ್ಪಂದ ಏರ್ಪಟ್ಟಿದೆ” ಎಂದು ಸ್ಪಷ್ಟಪಡಿಸಿದೆ. ಭಾರತದ ಈ ನಿಲುವಿನಿಂದ ಸಿಟ್ಟಾಗಿರುವ ಡೊನಾಲ್ಡ್‌ ಟ್ರಂಪ್‌, ಭಾರತದ ಸರಕುಗಳ ಮೇಲೆ ಶೇ. 50ರಷ್ಟು ಸುಂಕ ಹೇರಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

  ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ ! ಆದಿಚುಂಚನಗಿರಿ ಮಠದ ಶಿಕ್ಷಣ ಟ್ರಸ್ಟ್‌ಗೆ ಸೇರಿದ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆರು ಎಕರೆ ಭೂಮಿ ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!