ಬೆಂಗಳೂರಿನ ತನ್ನ ಸ್ನೇಹಿತೆಯೊಂದಿಗೆ ಸೇರಿ ಮುದ್ದಾಗಿ ಕನ್ನಡ ಪದ್ಯ ಹಾಡಿದ ರಷ್ಯಾದ ಹುಡುಗಿ.

ಕರ್ನಾಟಕದಲ್ಲಿದ್ದು ಕನ್ನಡ ಮಾತನಾಡದೇ ಇರುವವರ ಮಧ್ಯೆ ರಷ್ಯಾದ ಪುಟ್ಟ ಹುಡುಗಿ ಕನ್ನಡ ಪದ್ಯವನ್ನು ಲೀಲಾಜಾಲವಾಗಿ ಹೇಳಿ ಎಲ್ಲರ ಮೆಚ್ಚುಗೆ ಪಡೆದಿದ್ದಾಳೆ. ಕರ್ನಾಟಕದವರಿಗಿಂತ ವಿದೇಶಿಗರಿಗೆ ಕನ್ನಡದ ಮೇಲೆ ಹೆಚ್ಚು ಅಭಿಮಾನ ಇದೆ ಎಂಬುದು ಕೆಲವೊಂದು ವಿಡಿಯೋಗಳ ಮೂಲಕ ಸಾಬೀತು ಆಗುತ್ತಿದೆ. ಕನ್ನಡ ಅಭಿಮಾನಕ್ಕೆ ಹಾಗೂ ಭಾಷೆಯನ್ನು ಕಲಿಯಬೇಕು ಎಂಬ ಹಂಬಲ ವಿದೇಶಿಗರಿಗೆ ಇದೆ ಎಂಬುದನ್ನು ಈ ವಿಡಿಯೋ ಹೇಳುತ್ತದೆ. ಇದೀಗ ರಷ್ಯಾದ ಪುಟ್ಟ ಹುಡುಗಿ ಬೆಂಗಳೂರಿನ ತನ್ನ ಸ್ನೇಹಿತೆ ಜತೆ ಸೇರಿ ಮುದ್ದಾಗಿ ಕನ್ನಡದ ಕವಿತೆಯನ್ನು ಮುದ್ದಾಗಿ ಹಾಡಿದ್ದಾಳೆ. ಈ ಕುರಿತಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗ್ತಾ ಇದೆ.

ಭಾರತಕ್ಕೆ ಬಂದ ಅದೆಷ್ಟೋ ವಿದೇಶಿಗರು ಭಾರತದ ಸಂಸ್ಕೃತಿ, ಆಚಾರ ವಿಚಾರಗಳನ್ನು ಅನುಸರಿಸಿಕೊಂಡು ಹೋಗುವುದರ ಜತೆಗೆ ಭಾಷೆಗಳನ್ನು ಕಲಿಯುತ್ತಾರೆ. ಕರ್ನಾಟಕದಲ್ಲೂ ಇಂತಹ ಘಟನೆಗಳಿಗೆ ಸಂಬಂಧಪಟ್ಟ ವಿಡಿಯೋ ವೈರಲ್ ಆಗಿದೆ. ಕನ್ನಡ ಹಾಡುಗಳನ್ನು ಹಾಡುವುದು, ಕನ್ನಡ ಮಾತನಾಡುವುದು, ಅದನ್ನು ಕಲಿಯುವ ಆಸಕ್ತಿ ತೋರಿಸುವುದು ಹೀಗೆ ಅನೇಕ ವಿಚಾರಗಳು ವೈರಲ್ ಆಗುತ್ತಲೇ ಇರುತ್ತದೆ. ಇದೀಗ ವಿಡಿಯೋವೊಂದು ಭಾರೀ ವೈರಲ್ ಆಗಿದ್ದು, ಕನ್ನಡಿಗರ ಮನಸ್ಸು ಈ ವಿಡಿಯೋ ಗೆದ್ದಿದೆ.
ಬೆಂಗಳೂರಿನಲ್ಲಿ ರಷ್ಯಾದ ಹುಡುಗಿ ಹಾಗೂ ಆಕೆಯ ಭಾರತೀಯ ಸ್ನೇಹಿತ ಜತೆಗೆ ಸೈಕಲ್ ಓಡಿಸುತ್ತ, ಕನ್ನಡ ಕವಿತೆಯನ್ನು ಹಾಡಿದ್ದಾಳೆ. ಇದೀಗ ಕನ್ನಡಿಗರ ಹೃದಯಕ್ಕೆ ಮುಟ್ಟಿದೆ. ಈ ರಷ್ಯಾದ ಹುಡುಗಿಯ ತಾಯಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಕನ್ನಡ ಪದ್ಯಕ್ಕೆ ಮೀಸಲಾಗಿರದೇ, ಅವರ ಅಂತರ್-ಸಾಂಸ್ಕೃತಿಕ ಸ್ನೇಹ ಮತ್ತು ಭಾಷಾ ಬಾಂಧವ್ಯದ ಬಗ್ಗೆ ಹೇಳಿದೆ.

 

ಈ ವಿಡಿಯೋದಲ್ಲಿ ರಷ್ಯಾದ ಹುಡುಗಿಯ ತಾಯಿ ಹೇಳಿರುವಂತೆ, ಇವರಿಬ್ಬರೂ ಮೂರು ವರ್ಷಗಳಿಂದ ಸಹಪಾಠಿಗಳು ಮತ್ತು ಆಪ್ತ ಸ್ನೇಹಿತರಾಗಿದ್ದಾರೆ. ಸೈಕಲ್ನಲ್ಲಿ ಆಟವಾಡುತ್ತ, ಕನ್ನಡದ ಖ್ಯಾತ ಪದ್ಯ “ಬಣ್ಣದ ಹಕ್ಕಿ” ಎಂಬ ಹಾಡನ್ನು ಇಬ್ಬರು ಒಟ್ಟಿಗೆ ಹಾಡಿದ್ದಾರೆ. ಮಕ್ಕಳ ಕನ್ನಡ ಹಾಡನ್ನು ಕೇಳಿ ನಮಗೆ ಖುಷಿಯಾಗಿದೆ ಎಂದು ಈ ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋದ ಜತೆಗೆ ಇನ್‌ಸ್ಟಾಗ್ರಾಮ್‌ನಲ್ಲಿ 2022ರಲ್ಲಿ ಹಂಚಿಕೊಂಡ ಫೋಟೋ ಕೂಡ ವೈರಲ್ ಆಗಿದೆ. ರಷ್ಯಾದ ಕುಟುಂಬ ಭಾರತಕ್ಕೆ ಸ್ಥಳಾಂತರಗೊಂಡಾಗಿನಿಂದ ಇವರಿಬ್ಬರ ಸ್ನೇಹ ಬೆಳೆದುಕೊಂಡಿದೆ ಎಂದು ಹೇಳಿದ್ದಾರೆ.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

  ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ ! ಆದಿಚುಂಚನಗಿರಿ ಮಠದ ಶಿಕ್ಷಣ ಟ್ರಸ್ಟ್‌ಗೆ ಸೇರಿದ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆರು ಎಕರೆ ಭೂಮಿ ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!