ಬೆಟ್ಟದಪುರ: ಮೇವನ್ನು ಆರಿಸಿಕೊಂಡು ಹೋಗುತ್ತಿದ್ದ ಹಸುವೊಂದು ಆಕಸ್ಮಿಕ ವಾಗಿ ಬಾವಿಗೆ ಬಿದ್ದು ಒದ್ದಾಡಿದ ಘಟನೆ ಶನಿವಾರ ಸಂಜೆ ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳಸೋಗೆ ಗ್ರಾಮದ ಬಳಿ ಸಂಭವಿಸಿದೆ. ಕಾವೇರಿ ನದಿ ತೀರದಿಂದ 150 ಕೆರೆಗೆ ಳಿಗೆ ನೀರು ತುಂಬಿಸುವ ಕಾವೇರಿ ನೀರಾ ವರಿ ನಿಗಮದ ಏತ ನೀರಾವರಿಯ ಯಂತ್ರ ಗಾರದ ಪಕ್ಕ ಘಟನೆ ನಡೆದಿದ್ದು, ಮೇವು ಹುಡುಕಿಕೊಂಡು ಬಂದ ಹಸು ಆಯತಪ್ಪಿ ಬಾವಿಗೆ ಬಿದ್ದು ಒದ್ದಾಡುತ್ತಿತ್ತು. ಸುದ್ದಿ ತಿಳಿದ ಕುಶಾಲನಗರ ಅಗ್ನಿಶಾ ಮಕ ದಳದ ಠಾಣಾಧಿಕಾರಿ ರಂಜಿತ್ ಹಾಗೂ ಸಿಬ್ಬಂದಿಗಳು ಹಗ್ಗ ಕಟ್ಟಿ ಕ್ರೇನ್
ಮುಖಾಂತರ ಮೇಲೆತ್ತಿ ರಕ್ಷಣೆ ಮಾಡಿ ಹಸು ಮಾಲಿಕ ಚಂದ್ರು ಅವರಿಗೆ ಒಪ್ಪಿಸಿದರು.
ಗ್ರಾಮ ಪಂಚಾಯತಿ ಸದಸ್ಯ ಮುತ್ತಿನ ಮುಳಸೋಗೆ ಶಿವಕುಮಾರ್ ಮಾತನಾಡಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಸು ವನ್ನು ಕೈನ್ ಯಂತ್ರದ ಮೂಲಕ ಮೇಲೆತ್ತಿ ರಕ್ಷಣೆ ಮಾಡಿ ಮನವೀಯತೆ ಮೆರೆದಿದ್ದಾರೆ ಸಂಬಂ ಧಪಟ್ಟ ಇಲಾಖೆ ಅಧಿಕಾರಿಗಳು ಅದರ ಸುತ್ತ ರಕ್ಷಣಾ ಕವಚ ಅಳವಡಿಸಬೇಕು ಎಂದರು. ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಪ್ರವೀಣ್, ವಸಂತ್, ಪ್ರೇಮಾನಂದ್, ಸಂದೀಪ್, ಶಶಿ ಭಾಗವಹಿಸಿದ್ದರು.





